ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಬಡ್ತಿ ನೀಡಿದೆ.
ಈ ಕುರಿತಂತೆ ಸರ್ಕಾರ ರಾಜ್ಯದಲ್ಲಿ 50ಕ್ಕೂ ಅಧಿಕ ಐಪಿಎಸ್ ಅಧಿಕಾರಿಗಳಿಗೆ ಪ್ರಮೋಷನ್ ನೀಡಿದ್ದು, ಇದರಲ್ಲಿ ಜಿಲ್ಲೆಯ ಇಬ್ಬರು ಅಧಿಕಾರಿಗಳಿಗೂ ಈ ಭಾಗ್ಯ ಲಭಿಸಿದೆ.
ಸಾಗರ ಸನ್ ಡಿವಿಜನ್ ಎಎಸ್’ಪಿ ಆಗಿರುವ ರೋಹನ್ ಜಗದೀಶ್ ಹಾಗೂ ಭದ್ರಾವತಿ ಸಬ್ ಡಿವಿಜನ್ ಎಎಸ್’ಪಿ ಜಿತೇಂದ್ರ ಕುಮಾರ್ ದಯಾಮಾ ಅವರಿಗೆ ಐಪಿಎಸ್ ಸೀನಿಯರ್ ಟೈಮ್ ಸ್ಕೇಲ್ ಅಂದರೆ ಲೆವೆಲ್ 11 ಅಧಿಕಾರಿಗಳಾಗಿ ಬಡ್ತಿ ನೀಡಲಾಗಿದೆ.
ಈ ಪ್ರಮೋಷನ್ ಜ.1ರಿಂದ ಅನ್ವಯವಾಗಲಿದ್ದು, ಮುಂದಿನ ಆದೇಶದವರೆಗೂ ಉನ್ನತೀಕರಿಸಿದ ಇದೇ ಹುದ್ಧೆಯಲ್ಲಿ ಮುಂದುವರೆಯುವಂತೆ ಆದೇಶಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post