ಶನಿವಾರ ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದಲ್ಲಿ National Pharmacy College ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
Also read: 4860 ಕೋಟಿ ರೂ. ಬೆಳೆ ಪರಿಹಾರಕ್ಕಾಗಿ ಕೇಂದ್ರಕ್ಕೆ ಒತ್ತಾಯ: ಸಿಎಂ ಸಿದ್ದರಾಮಯ್ಯ
ಕಾಲೇಜಿನ ಅವಿನಾಭಾವ ಸಂದರ್ಭ ನೆನೆದಾಗ ನಮಗೆ ರೋಮಾಂಚನವಾಗುತ್ತದೆ. ಇನ್ನಷ್ಟು ರೋಮಾಂಚಿತವೆಂದರೆ ನಮ್ಮ ಬಾಲ್ಯದ ದಿನ. ಅಂತಹ ವಿಶೇಷ ಸಂದರ್ಭ ನೆನೆದು ಹಿರಿಯ ವಿದ್ಯಾರ್ಥಿಗಳು ಹೇಳುವ ಒಳ್ಳೆಯ ಮಾತುಗಳೇ ಸಂಸ್ಥೆಯ ಉನ್ನತಿಗೆ ನಿಜವಾದ ಪೂರಕ ಶಕ್ತಿ ಎಂದು ಹೇಳಿದರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಹಿರಿಯ ವಿದ್ಯಾರ್ಥಿಗಳ ಸಂಘದ ವಿಶೇಷವೆಂದರೆ ಅಲ್ಲಿ ವಯಸ್ಸಿನ ಅಂತರವಿರುವುದಿಲ್ಲ, ಸ್ನೇಹ ಸಂಬಂಧಗಳಿಗೆ ಹೆಚ್ಚಿನ ಆದ್ಯತೆಯಿರುತ್ತದೆ. ಹಿರಿಯ ವಿದ್ಯಾರ್ಥಿಗಳಿಗೆ ನಾಲ್ಕು ಗೊಡೆಯ ನಡುವಿನ ಅನುಭವವಿರುತ್ತದೆ, ಜೊತೆಯಲ್ಲಿ ಹೊರಜಗತ್ತಿನ ಅನುಭವವಿರುತ್ತದೆ. ಇಂತಹ ಅನುಭವಗಳಿಂದ ನಾವು ಓದಿದ ವಿದ್ಯಾಸಂಸ್ಥೆಗಳಲ್ಲಿ ಏನೆಲ್ಲಾ ಮಾರ್ಪಾಟುಗಳನ್ನು ಮಾಡಬಹುದು ಎಂದು ಆಲೋಚಿಸುವಂತೆ ಮನವಿ ಮಾಡಿದರು.
Discussion about this post