ಜಗಜ್ಯೋತಿ ಬಸವಣ್ಣನವರ Basavanna ಭಾವಚಿತ್ರವನ್ನು ವಿರೂಪಗೊಳಿಸಿರುವುದನ್ನು ವಿರೋಧಿಸಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಬಸವಾಭಿಮಾನಿಗಳ ಒಕ್ಕೂಟ ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಇಂತಹ ಮಹಾನ್ ವ್ಯಕ್ತಿಯ ಭಾವಚಿತ್ರ ವಿರೂಪಗೊಳಿಸಿರುವುದು ಖಂಡನೀಯ. ದೇಶ ವಿದೇಶದಲ್ಲಿರುವ ಬಸವ ಭಕ್ತರಿಗೆ ಇದು ಆಘಾತವಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
Also read: ಅ.18ರಂದು ಅತ್ಯಂತ ಸರಳ ರೈತ ದಸರಾ ಆಚರಣೆ: ಸಮಿತಿ ಅಧ್ಯಕ್ಷೆ ಮೆಹಖ್ ಷರೀಫ್
ಮನವಿ ನೀಡುವ ಸಂದರ್ಭದಲ್ಲಿ ಅಖಿಲ ಭಾರತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಎಸ್. ಸಜ್ಜನ್, ಪ್ರಮುಖರಾದ ಹೆಚ್.ಎನ್. ಮಹಾರುದ್ರ, ಪರಮೇಶ್ವರ್, ಬೆನಕಪ್ಪ, ಚಂದ್ರಶೇಖರ್, ತೆಲಗಿಹಾಳ್, ಆರ್.ಎಸ್. ಸ್ವಾಮಿ, ಮಲ್ಲಿಕಾರ್ಜುನ, ಶಿವಶಂಕರ್, ಬಸವನಗೌಡ, ಬೊಮ್ಮಾಯಿ, ಜಗದೀಶ್ ಮತ್ತಿತರರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















