No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Wednesday, April 29, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಚೆನ್ನೈ ಕನ್ನಡ ಬಳಗದ ಜಾನಪದ ಗೀತೆ ಸ್ಪರ್ಧೆ ಎಂದರೆ ಅದೊಂದು ಸಂಭ್ರಮ! ಸಂತಸ!!

ಪ್ರತಿ ಕನ್ನಡಿಗರೂ ಓದಲೇಬೇಕಾದ ಮಾಹಿತಿಯುಕ್ತ ಲೇಖನ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 30, 2023
in Special Articles
0
ಚೆನ್ನೈ ಕನ್ನಡ ಬಳಗದ ಜಾನಪದ ಗೀತೆ ಸ್ಪರ್ಧೆ ಎಂದರೆ ಅದೊಂದು ಸಂಭ್ರಮ! ಸಂತಸ!!
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   | ವಿಶೇಷ ಲೇಖನ |

ಚೆನ್ನೈ ಕನ್ನಡ ಬಳಗ Chennai Kannada Balaga ಜನಪದ ಗೀತೆಗಳ ಗಾಯನ ಸ್ಪರ್ಧೆಯನ್ನು 1968ರಲ್ಲಿ ಆರಂಭಿಸಿದರು. ಮೊದಲ ಕೆಲವು ವರ್ಷಗಳಲ್ಲಿ ಹೆಚ್ಚು ಸ್ಪರ್ಧಾಳುಗಳು ಇರಲಿಲ್ಲ. ಆ ಸಮಯದಲ್ಲಿ ಭಾವ ಗೀತೆಯನ್ನೂ ಹಾಡುತ್ತಿದ್ದರು. ನಂತರ 1972ರಲ್ಲಿ ಆವಡಿ ಕನ್ನಡ ಸಂಘದ ಸದಸ್ಯರು ಪಾಲ್ಗೊಂಡರು. ಆಗ ಜನಪದ ಸಾಹಿತ್ಯದ ಸೊಗಡು ಬಳಗದ ಸದಸ್ಯರಿಗೆ ಅರಿವಾಯಿತು. ನಂತರದ ವರ್ಷಗಳಲ್ಲಿ ಜನಪದ ಸಾಹಿತ್ಯವಿದ್ದ ಹಾಡುಗಳನ್ನು ಮಾತ್ರ ಪರಿಗಣಿಸಲಾಯಿತು. ಆ ದಿನಗಳಲ್ಲಿ ಬಳಗದ ಎಲ್ಲಾ ಕಾರ್ಯಕ್ರಮಗಳು ರಾಯಪೇಟಾ ವುಡ್‌ಲ್ಯಾಂಡ್ಸ್ ಹೋಟೆಲಿನ ಬಯಲು ರಂಗಸ್ಥಳದಲ್ಲಿ ನಡೆಯುತ್ತಿತ್ತು. ಚೆನ್ನೆöÊನ ಬಹುತೇಕ ಎಲ್ಲಾ ಕನ್ನಡ ಸಂಘಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು.

ಈ ಸಂದರ್ಭದಲ್ಲಿ ನಡೆಯುವ ತಿಂಡಿ ಸಂತೆಯು ತುಂಬಾ ಜನಪ್ರಿಯವಾಗಿತ್ತು. ಬಳಗದ ಸದಸ್ಯರು ವಿವಿಧ ಬಗೆಯ ತಿಂಡಿ ತಿನಸುಗಳನ್ನು ಮನೆಯಲ್ಲಿ ತಯಾರಿಸಿ ಅಲ್ಲಿ ಬಂದು ಮಾರುತ್ತಿದ್ದರು. ಕೆಲವರು ಅಲ್ಲೇ ಬಂದು ಬಿಸಿಬಿಸಿಯಾಗಿ ತಯಾರಿಸಿ ತಾಜಾ ತಾಜಾ ತಿಂಡಿಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದರು. ಅದರಿಂದ ಬರುವ ಲಾಭಾಂಶವನ್ನು ಬಳಗಕ್ಕೆ ಕೊಡುತ್ತಿದ್ದರು. ಕಾಫಿ, ಚಹಾ, ಚಕ್ಕುಲಿ, ಸಿಹಿ ತಿಂಡಿಗಳು, ಮೊಸರನ್ನ, ಚಿತ್ರಾನ್ನ, ಪುಳಿಯೋಗರೆ, ರೊಟ್ಟಿ ಇತ್ಯಾದಿ ಆಹಾರ ಪದಾರ್ಥಗಳು ಮಾರಾಟಕ್ಕಿಡುತ್ತಿದ್ದರು. ತೆರೆದ ಸಭಾಂಗಣವಾದ್ದರಿಂದ ಹಾಡುಗಳನ್ನು ಕೇಳಿಕೊಂಡು ತಿಂಡಿಯ ಸವಿಯನ್ನು ಮೆಲ್ಲುತ್ತಿದ್ದರು.
ಜನಪದ ಗೀತೆ ಸ್ಪರ್ಧೆಗೆ ಸರಿಯಾದ ಪೈಪೋಟಿ ಬಂದಿದ್ದು ನೈವೇಲಿ ಕನ್ನಡ ಸಂಘದವರ ಆಗಮನದಿಂದಲೇ ಎಂದು ಹೇಳಬಹುದು. ಸುಮಾರು 1976ರಲ್ಲಿ ನೈವೇಲಿ ಕನ್ನಡ ಸಂಘದಿAದ ಸುಮಾರು 48 ಮಂದಿ ಭಾಗವಹಿಸಿದ್ದರು. ಅವರನ್ನು ಹಾರ್ದಿಕವಾಗಿ ಬರಮಾಡಿಕೊಂಡು ಅತಿಥಿ ಸತ್ಕಾರ ಮಾಡಲಾಗುತ್ತಿತ್ತು. ಅವರಿಗೆ ಊಟವನ್ನು ಬಳಗದ ಸದಸ್ಯರೇ ಅವರವರ ಮನೆಯಿಂದ ತಯಾರಿಸಿ ತರುತ್ತಿದ್ದರು. ಬಳಗದ ಎಲ್ಲ ಸದಸ್ಯರೂ ತಮ್ಮ ತಮ್ಮ ಮನೆಯ ಒಂದು ಕಾರ್ಯಕ್ರಮವೆಂದು ಸಂತೋಷದಿಂದ ಈ ಕೆಲಸಗಳನ್ನು ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಬಳಗದ ಸದಸ್ಯರಿಗೆ ಊಟ ನೀಡಬೇಕೆಂಬ ಸಲಹೆ ನಮ್ಮ ಬಳಗದ ಸದಸ್ಯರಾದ ಶ್ರೀ ಮುಕ್ತೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೆ ಅದಕ್ಕಾಗಿ ರೂ. 25,000/- ಹಣವನ್ನು ನೀಡಿದರು. ಅದರಿಂದಾಗಿ ಮುಂದಿನ ವರ್ಷದಿಂದ ಸ್ಪರ್ಧೆಯ ಎಲ್ಲರಿಗೂ ಭೊಜನದ ವ್ಯವಸ್ಥೆ ಮಾಡಲಾಯಿತು. ಅದಕ್ಕಾಗಿ ಬಳಗವು ಶ್ರೀ ಮುಕ್ತೇಶ್ ಅವರ ಸಹಾಯವನ್ನು ಎಂದಿಗೂ ಮರೆಯಲಾರದು.

ಆರಂಭದಲ್ಲಿ 4 ಗಂಟೆಗೆ ಈ ಕಾರ್ಯಕ್ರಮ ಆರಂಭಿಸಲಾಗುತ್ತಿತ್ತು. ನಂತರ ಸ್ಪರ್ಧಾಳುಗಳ ಸಂಖ್ಯೆ ಹೆಚ್ಚಾದಂತೆ ಬೆಳಗ್ಗೆಯಿಂದಲೇ ಆರಂಭಿಸಲಾಯಿತು. ಕೆಲವೊಮ್ಮೆ 150ಕ್ಕೂ ಹೆಚ್ಚು ಸ್ಪರ್ಧಾಳುಗಳು ಸ್ಫರ್ಧೆಯಲ್ಲಿ ಭಾಗವಹಿಸಿದ್ದೂ ಇದೆ! ಕೆಲವೊಮ್ಮೆ ಮಳೆ ಬಂದು ಸ್ಫರ್ಧೆಯನ್ನು ಹೋಟೆಲಿನಲ್ಲಿದ್ದ ಮೈಸೂರು ಇಂಜಿನಿರ‍್ಸ್ ಅಸೋಸಿಯೇಶನ್‌ನ ಕೊಠಡಿಯಲ್ಲಿ ಮಾಡಬೇಕಾಗಿ ಬಂದಿತ್ತು. ಕೊಠಡಿಯಲ್ಲಿ ಹೆಚ್ಚು ಜನ ಸೇರುವಂತಿರಲಿಲ್ಲ. ಈ ಕಾರಣಕ್ಕಾಗಿ ಬಳಗವು ಕರ್ನಾಟಕ ಸಂಘದ ರಾಮರಾವ್ ಕಲಾಮಂಟಪದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ಆರಂಭಿಸಿದರು.
ಜನಪದ ಗೀತೆಯ ಬೆಳ್ಳಿ ಹಬ್ಬವನ್ನು ಅತಿ ವಿಜೃಂಭಣೆಯಿAದ ಎರಡು ದಿನಗಳ ಕಾಲ ಆಚರಿಸಲಾಯಿತು. ಕರ್ನಾಟಕದಿಂದ ಜನಪದ ತಂಡವನ್ನು ಆಹ್ವಾನಿಸಿ ಜನಪದ ಗೀತೆಯ ಹಾಡುಗಾರಿಕೆ, ಕುಣಿತ, ನೃತ್ಯ, ಡೋಲು ಕುಣಿತ ಇತ್ಯಾದಿಗಳ ಪ್ರದರ್ಶನದಿಂದ ಚೆನ್ನೈ ಕನ್ನಡಿಗರ ಮನಸೂರೆಗೊಂಡಿದ್ದವು.

Also read: ನ.5: ಚೆನ್ನೈ ಕನ್ನಡ ಬಳಗದ ಜಾನಪದ ಗೀತೆ ಸ್ಪರ್ಧೆ ಸುವರ್ಣ ಸಂಭ್ರಮ | ವಿಶೇಷ ಕಾರ್ಯಕ್ರಮ ಆಯೋಜನೆ

ಚೆನ್ನೈನಲ್ಲಿ ತೀರ್ಪುಗಾರರ ಅಭಾವವಿದ್ದರಿಂದ ಮತ್ತು ತೀರ್ಪಿನ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ತೀರ್ಪುಗಾರರನ್ನು ಕರ್ನಾಟಕ ರಾಜ್ಯದ ವಿವಿಧ ಪ್ರದೇಶಗಳಿಂದ ಆರಿಸಿ ಆಹ್ವಾನಿಸಲಾಗುತ್ತಿದೆ. ಇದಕ್ಕೆ ಕರ್ನಾಟಕ ಜನಪದ ಅಕಾಡೆಮಿಯವರು ನಮಗೆ ಇಬ್ಬರು ತೀರ್ಪುಗಾರರನ್ನು ಪ್ರತಿ ವರ್ಷ ಕಳುಹಿಸಿ ಸಹಾಯ ಮಾಡುತ್ತಿದ್ದಾರೆ.
ಕರ್ನಾಟಕ ಸಂಘದ ಸಭಾಂಗಣದಲ್ಲಿ ಸ್ಪರ್ಧೆ ಮಾಡಲಾರಂಭಿಸಿದ್ದರಿAದ ರಂಗ ಮಂದಿರವನ್ನು ಜನಪದದ ಹಿನ್ನೆಲೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ಅಲಂಕಾರ ಮಾಡಲು ಆರಂಭಿಸಿದರು. ರಂಗ ಮಂದಿರವು ಎಲ್ಲಾ ಕಡೆ ಜನಪದಲ್ಲಿ ಬಳಸುವ ವಸ್ತುಗಳನ್ನು ಬಳಸಿ ಶೃಂಗರಿಸಲಾಗುವುದು. ಇದಕ್ಕಾಗಿ ಹತ್ತು ಹದಿನೈದು ದಿನಗಳ ಕಾಲ ಕಂಪ್ಯೂಟರ್‌ನಲ್ಲಿ ಬೇರೆ ಬೇರೆ ವಿನ್ಯಾಸಗಳನ್ನು ಮಾಡಿ ಆರಿಸುತ್ತಾರೆ. ಒಂದೊಂದು ವರ್ಷ ಒಂದೊಂದು ವಿನ್ಯಾಸ. ಇದಕ್ಕಾಗಿ ಬಳಗದ ಮಹಿಳೆಯರು ಹಾಗೂ ಮಹನೀಯರು ರಾತ್ರಿ ಇಡೀ ಕೆಲಸ ಮಾಡುತ್ತಿದ್ದರು.

ಬೆಳಗ್ಗೆ 10 ಗಂಟೆಗೆ ಸ್ಪರ್ಧೆಯು ಆರಂಭಗೊಂಡು ಮಧ್ಯಾಹ್ನ ಭೊಜನ ವಿರಾಮದ ನಂತರ ಮುಂದುವರಿದು ಸಂಜೆ 7 ಗಂಟೆಗೆ ಮುಕ್ತಾಯವಾಗುತ್ತದೆ. ಇದರಲ್ಲಿ ಮಕ್ಕಳು, ಹುಡುಗರು, ಹುಡುಗಿಯರು, ಹೆಂಗಸರು, ಗಂಡಸರು, ಹಿರಿಯ ನಾಗರಿಕರು ಹೀಗೆ ಮಯೋಮಿತಿಗೆ ಅನುಸಾರವಾಗಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗುತ್ತದೆ. ಇದಲ್ಲದೆ ವೃಂದ ಗಾಯನ, ಯುಗಳ ಗೀತೆಯೂ ಇದೆ. ತೀರ್ಪುಗಾರರು ಸ್ಪರ್ಧೆಯ ಬಗ್ಗೆ ಅವರ ಅಭಿಪ್ರಾಯಗಳನ್ನು ತಿಳಿಸುತ್ತಾರೆ. ನಂತರ ಮುಖ್ಯ ಅತಿಥಿಗಳು ಬಹುಮಾನ ವಿತರಿಸುತ್ತಾರೆ. ರಾತ್ರಿ ಭೋಜನದ ವ್ಯವಸ್ಥೆಯನ್ನು ಸಹ ಮಾಡಲಾಗುತ್ತದೆ.

http://kalpa.news/wp-content/uploads/2023/05/VID-20230516-WA0005.mp4

ನೈವೇಲಿ ಕನ್ನಡ ಸಂಘದ ಬಗ್ಗೆ ಹೇಳುವುದಾದರೆ ಅವರಲ್ಲಿರುವ ಸದಸ್ಯರೆಲ್ಲರಿಗೂ ಬಳಗದ ಈ ಸ್ಪರ್ಧೆಯಲ್ಲಿ ಭಾಗವಹಿಸುವುದೆಂದರೆ ಅಷ್ಟೊಂದು ಉತ್ಸಾಹ. ಬೆಳಗ್ಗೆನೇ ಎಲ್ಲರನ್ನು ಒಂದುಗೂಡಿಸಿ ಮೊದಮೊದಲು ಒಂದು ಬಸ್ ತುಂಬಾ ಜನ ಬರುತ್ತಿದ್ದರು. ಬಸ್‌ನಲ್ಲಿ ಬರುವಾಗಲೇ ಹಾಡು ಹಾಡಿಕೊಂಡು ಬರುವುದು ವಾಡಿಕೆ. ಅವರಲ್ಲಿ ಶ್ರೀ ಶಾಂತಪ್ಪ ಎನ್ನುವರು ಬಹಳ ಸೊಗಸಾಗಿ ಜನಪದ ಹಾಡು ಹೇಳುತ್ತಿದ್ದರು. ಮದರಾಸಿನ ಎಲ್ಲಾ ಕನ್ನಡಿಗರು ಅವರ ಹಾಡು ಕೇಳಲು ತುಂಬ ಉತ್ಸಾಹದಿಂದ ಕಾಯುತ್ತಿದ್ದರು. ಇವರು ನೈವೇಲಿಯ ಸಂಘದವರಿಗೆ ಹಾಡು ಹೇಗೆ ಹೇಳಬೇಕೆಂದು ತರಬೇತು ನೀಡುತ್ತಿದ್ದರು. ಅವರ ಶ್ರೀಮತಿಯವರು ಸಹ ತುಂಬಾ ಚೆನ್ನಾಗಿ ಹಾಡುತ್ತಿದ್ದರು. ಈ ಎಲ್ಲ ಕಾರಣಗಳಿಂದಾಗಿ ಸಮಗ್ರ ಪ್ರಶಸ್ತಿಗೆ ನೀಡಲಾಗುವ ಪರ್ಯಾಯ ಫಲಕವು ಬಹುಪಾಲು ನೈವೇಲಿ ಸಂಘದವರ ಪಾಲಾಗುತ್ತಿತ್ತು. ಕನ್ನಡ ಬಳಗಕ್ಕೂ ನೈವೇಲಿ ಸಂಘಕ್ಕೂ ಪ್ರತಿ ವರ್ಷ ಪೈಪೋಟಿ ನಡೆಯುತ್ತಿತ್ತು. ಕೆಲವೊಮ್ಮೆ ಒಂದೆರಡು ಅಂಕಗಳಿAದ ಫಲಕವು ಕೈ ತಪ್ಪಿದ್ದೂ ಇದೆ. ಪೈಪೋಟಿ ಆರೋಗ್ಯಕರವಾಗಿ ಇರುತ್ತದೆಯೇ ಹೊರತು ಯಾವತ್ತೂ ಮನಸ್ತಾಪಕ್ಕೆ ಕಾರಣವಾಗಿಲ್ಲ.
ಸ್ಪರ್ಧೆ ಮುಗಿದ ನಂತರ ಸ್ಪರ್ಧಾಳುಗಳಿಗೆ ಮೊದಲು ಭೋಜನ ನೀಡಿ ನಂತರ ಬಳಗದವರು ಭೋಜನ ಮಾಡುವುದು ಸಂಪ್ರದಾಯ. ಎಲ್ಲರನ್ನು ಸಂತೋಷದಿAದ ಬೀಳ್ಕೊಟ್ಟ ನಂತರ ಬಳಗದ ಸದಸ್ಯರು ಅವರವರ ಮನೆಗಳಿಗೆ ತೆರಳುತ್ತಾರೆ. ನೈವೇಲಿಯ ಸದಸ್ಯರು ಬಸ್ಸಿನಲ್ಲಿ ವಾಪಸ್ಸಾಗುವಾಗುವ ದಾರಿಯುದ್ದಕ್ಕೂ ಅಂದು ಬಹುಮಾನ ಪಡೆದ ಹಾಡುಗಳನ್ನು ಹಾಡುತ್ತಾ ಸಂಭ್ರಮಿಸುತ್ತಾ ದಾರಿ ಸವೆಸುತ್ತಾರೆ.

ಈ ಸ್ಪರ್ಧೆಯಲ್ಲಿ ಕರ್ನಾಟಕ ಸಂಘ, ಟಿ.ನಗರ, ಕನ್ನಡ ಸಂಘ ಅಯನಾವರಂ, ಕನ್ನಡಿಗರ ಕೂಟ, ಬಂಟರ ಸಂಘ, ಮದರಾಸು, ಚೆನ್ನೈ ಹವ್ಯಕ, ಮದರಾಸು ವಿಶ್ವ ವಿದ್ಯಾನಿಲಯ (ಕನ್ನಡ ವಿಭಾಗ), ಕನ್ನಡ ಸಂಘ ಕಲ್ಪಾಕಮ್ ಹಾಗೂ ಕನ್ನಡ ಬಳಗದ ಸದಸ್ಯರು ಭಾಗವಹಿಸುತ್ತಿದ್ದಾರೆ.
ಹೊರನಾಡು, ತಮಿಳುನಾಡಿನಲ್ಲಿದ್ದು ಕೊಂಡು ಸತತವಾಗಿ ನಲವತ್ತೊಂಬತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ಕನ್ನಡ ಜಾನಪದ ಗೀತೆ ಸ್ಪರ್ಧೆ ನಡೆಸಿಕೊಂಡು ಬಂದು ಇಂದು ಸುವರ್ಣ ಸಂಭ್ರಮದಲ್ಲಿ ಮಿಂದೇಳುತ್ತಿದೆ. ಬಹುಶಃ ನಾಡಿನ ಯಾವುದೇ ಸಂಘಟನೆ ಇಂತಹ ಸುದೀರ್ಘ ಅವಧಿಯ ಸ್ಪರ್ಧೆಯನ್ನು ನಡೆಸಿದ ಉದಾಹರಣೆಗಳು ಇರಲಿಕ್ಕಿಲ್ಲ. ಹೀಗಾಗಿ ಇದೊಂದು ಸಾಧನೆಯೇ ಸರಿ.

ಇದು ಕನ್ನಡ ಬಳಗದ ಒಂದು ಹೆಮ್ಮೆಯ ಕಾರ್ಯಕ್ರಮವೆಂದರೆ ತಪ್ಪಾಗಲಾರದು. ಬಳಗದ ಈ ಕಾರ್ಯಕ್ರಮವನ್ನು ನೋಡಿದ ಕರ್ನಾಟಕದಿಂದ ಬಂದ ತೀರ್ಪುಗಾರರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಸ್ಪರ್ಧೆಯು ಕರ್ನಾಟಕದಲ್ಲಿ ಸಹ ಈ ರೀತಿ ಆಯೋಜಿಸುವುದಿಲ್ಲ ಎಂಬುದು ಅವರ ಅಭಿಮತವಾಗಿದೆ. ಇದೊಂದು ಬಳಗದ ಸದಸ್ಯರಿಗೆ ಹಬ್ಬ.

ಈ ಹಬ್ಬಕ್ಕಿಂದು (ನವೆಂಬರ್ 5, 2023) ಸುವರ್ಣ ಮಹೋತ್ಸವ. ಜಾನಪದ ಗೀತೆ ಸ್ಪರ್ಧೆ ಎಂದರೆ ಅದೊಂದು ಸಂಭ್ರಮ.. ಸಂತಸ..

ವಿಶೇಷ ಲೇಖನ: ಎಸ್. ರಾಮಚಂದ್ರ ಭಟ್, ಚೆನ್ನೈ
Kalahamsa Infotech private limited
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Chennai Kannada BalagaKannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaNewsinKannadaNewsKannadaಚೆನ್ನೈ ಕನ್ನಡ ಬಳಗವಿಶೇಷ ಲೇಖನ
Share203Tweet123Send
Previous Post

ನ.5: ಚೆನ್ನೈ ಕನ್ನಡ ಬಳಗದ ಜಾನಪದ ಗೀತೆ ಸ್ಪರ್ಧೆ ಸುವರ್ಣ ಸಂಭ್ರಮ | ವಿಶೇಷ ಕಾರ್ಯಕ್ರಮ ಆಯೋಜನೆ

Next Post

ನ.4ರಂದು ಚೆನ್ನೈನಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ | ಸಾಧಕರಿಗೆ ಸನ್ಮಾನ | ಯಾರೆಲ್ಲಾ ಪಾಲ್ಗೊಳ್ಳಲಿದ್ದಾರೆ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ನ.4ರಂದು ಚೆನ್ನೈನಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ | ಸಾಧಕರಿಗೆ ಸನ್ಮಾನ | ಯಾರೆಲ್ಲಾ ಪಾಲ್ಗೊಳ್ಳಲಿದ್ದಾರೆ?

ನ.4ರಂದು ಚೆನ್ನೈನಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ | ಸಾಧಕರಿಗೆ ಸನ್ಮಾನ | ಯಾರೆಲ್ಲಾ ಪಾಲ್ಗೊಳ್ಳಲಿದ್ದಾರೆ?

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಭೀಕರ ಅಪಘಾತ | ರಂಭಾಪುರಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸಾವು

ಭೀಕರ ಅಪಘಾತ | ರಂಭಾಪುರಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸಾವು

April 29, 2026
ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

ಶ್ರೀ ರವಿಶಂಕರ ಗುರೂಜಿ ಅವರ 70ನೇ ಜನ್ಮೋತ್ಸವ | ಮೇ 5ರಿಂದ `ಆನಂದೋತ್ಸವ’ ಕಾರ್ಯಕ್ರಮ

April 29, 2026
ಪ್ರಕೃತಿ ವಿಕೋಪದಿಂದ ಹಾನಿ, ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡಿ

ಪ್ರಕೃತಿ ವಿಕೋಪದಿಂದ ಹಾನಿ, ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡಿ

April 29, 2026
ಕ್ರೈಸ್ಟ್‌ಕಿಂಗ್ | ದ್ವಿತೀಯ ಪಿಯುಸಿ ಮರುಮೌಲ್ಯಮಾಪನ | ಪ್ರಜ್ವಲ್ ಶೆಟ್ಟಿ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್ 

ಕ್ರೈಸ್ಟ್‌ಕಿಂಗ್ | ದ್ವಿತೀಯ ಪಿಯುಸಿ ಮರುಮೌಲ್ಯಮಾಪನ | ಪ್ರಜ್ವಲ್ ಶೆಟ್ಟಿ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್ 

April 29, 2026
ಹುಲಿಕಲ್ ಘಾಟ್ ರಸ್ತೆ ತಡೆಗೋಡೆ ನಿರ್ಮಾಣ ಮಣ್ಣು ಕುಸಿತ ಪ್ರಕರಣ | ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ: ಎಸ್. ಮಧು ಬಂಗಾರಪ್ಪ

ಹುಲಿಕಲ್ ಘಾಟ್ ರಸ್ತೆ ತಡೆಗೋಡೆ ನಿರ್ಮಾಣ ಮಣ್ಣು ಕುಸಿತ ಪ್ರಕರಣ | ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ: ಎಸ್. ಮಧು ಬಂಗಾರಪ್ಪ

April 29, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL