ಉಪನ್ಯಾಸಕರಿಲ್ಲದೆ ಪದವಿ ವಿದ್ಯಾರ್ಥಿಗಳಿಗೆ ತೊಂದರೆ ಆಗಿದ್ದು, ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿರುವ ಕುವೆಂಪು ವಿಶ್ವವಿದ್ಯಾಲಯದ ಬೇಜವಬ್ದಾರಿತನದ ಬಗ್ಗೆ ಪೀಪಲ್ಸ್ ಲಾಯರ್ಸ್ ಗಿಲ್ಡ್ ಶಿವಮೊಗ್ಗ ಖಂಡನೆ ವ್ಯಕ್ತಪಡಿಸಿದೆ.
ಈಗ 2022-23ನೇ ಸಾಲಿನ ಶೈಕ್ಷಣಿಕ ಅವಧಿ ಮುಗಿದು 2023-2024ನೇ ಸಾಲಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆದು ಅವರಿಗೆ ಸೆಫ್ಟಂಬರ್ 19ರಿಂದ ತರಗತಿಗಳು ಆರಂಭವಾಗಿವೆ. ಇವರಿಗೆ ಉಪನ್ಯಾಸ ಮಾಡಬೇಕಾಗಿದ್ದ ಖಾಯಂ ಅಧ್ಯಾಪಕರು ಮೌಲ್ಯಮಾಪನ ಕಾರ್ಯಕ್ಕೆ ಹೋಗಿ ಅಕ್ಟೊಂಬರ್ 20ಕ್ಕೆ ಬಂದಿರುತ್ತಾರೆ. ಅಂದರೆ ಇಲ್ಲಿವರೆಗೆ ಒಂದು ತಿಂಗಳು ಈ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ನಡೆದಿಲ್ಲ. ಇದರ ನಡುವೆ ಬಂದ ಹಬ್ಬದ ರಜೆಗಳು ಬೇರೆ, ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಲ್ಲಿವರಿಗೆ ಒಟ್ಟು 40 ದಿನಗಳಷ್ಟು ಪೂರ್ಣವಾಗಿ ತರಗತಿಗಳು ನಡೆದಿರುವುದಿಲ್ಲ.
3ನೇ ಸೆಮ್ ಮತ್ತು 5ನೇ ಸೆಮ್ ವಿದ್ಯಾರ್ಥಿಗಳಿಗೆ ಸೆಪ್ಟಂಬರ್ 5ಕ್ಕೆ ತರಗತಿಗಳು ಆರಂಭವಾಗಿವೆ ಆದರೆ ಇಲ್ಲಿವರೆಗೆ ಅವರಿಗೂ ಸಹ ಉಪನ್ಯಾಸ ನಡೆದಿರುವುದಿಲ್ಲ. ನಿಯಾಮವಳಿಯಂತೆ 8 ವಾರಕ್ಕೆ ಕಿರು ಪರೀಕ್ಷೆ ನಡೆಯಬೇಕು. ಖಾಸಗಿ ಮತ್ತು ಸರ್ಕಾರಿ ಕಾಲೇಜುಗಳು ನವಂಬರ್ 15ರಿಂದ ಕಿರು ಪರೀಕ್ಷೆ ಆಯೋಜಿಸುತ್ತಿವೆ. ಆದರೆ ಉಪನ್ಯಾಸಕರು ಇಲ್ಲಾ ಪಾಠ ಪ್ರವಚನಗಳು ಸಹ ನಡೆದಿಲ್ಲ.
2023-2024 ರ ಶೈಕ್ಷಣಿಕ ಸಾಲಿಗೆ ಆಕ್ಟೊಂಬರ್ 27ಕ್ಕೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಪಡೆಯಲಾಗಿದೆ. ಅರ್ಜಿಗಳನ್ನು ಪಡೆದು ಒಂದು ವಾರದ ಕಳೆದರು ಸಂದರ್ಶನ ನಡೆಸಿ ನೇಮಕ ಮಾಡಿಕೊಳ್ಳಲು ವಿ.ವಿ ಮುಂದಾಗುತ್ತಿಲ್ಲಾ ಕುಲಪತಿಗಳ ನೇಮಕವಂತು ಆಗಿಲ್ಲಾ ಹಂಗಾಮಿ ಇರುವವರು ಮತ್ತು ಹಂಗಾಮಿ ರಿಜಿಸ್ಟರ್ ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ದುರಂತ.
Also read: ರಾಷ್ಟ್ರೀಯ ಏರೋಬಿಕ್ಸ್ ಚಾಂಪಿಯನ್ಶಿಪ್: ಜೈನ್ ಪಬ್ಲಿಕ್ ವಿದ್ಯಾರ್ಥಿಗಳಿಗೆ ಚಿನ್ನದ ಪದಕ
ಸರ್ಕಾರ ಕೂಡಲೇ ಮದ್ಯ ಪ್ರವೇಶಿಸಬೇಕು. ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲು ವಿವಿಗೆ ನಿರ್ದೇಶನ ನೀಡಬೇಕು. ಬಡ ಮತ್ತು ಮಧ್ಯಮವರ್ಗದ ವಿದ್ಯಾರ್ಥಿಗಳು ಕುವಿವಿ ಮತ್ತು ಸಹ್ಯಾದ್ರಿ ಕಾಲೇಜಿನ ಮೇಲಿಟ್ಟ ನಂಬಿಕೆಗೆ ಧಕ್ಕೆ ಬರುವಂತೆ ಆಗಿದೆ. ಸರ್ಕಾರ ಈ ಬಗ್ಗೆ ಕೂಡಲೇ ಗಮನಹರಿಸಬೇಕೆಂದು ಪೀಪಲ್ಸ್ ಲಾಯರ್ಸ್ ಗಿಲ್ಡ್ನ ವಕೀಲರಾದ ಕೆ.ಪಿ. ಶ್ರೀಪಾಲ ಮತ್ತು ವಿಜಯ್ ಕುಮಾರ್ ಒತ್ತಾಯಿಸಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















