ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಚಿಕ್ಕಲ್ ರಸ್ತೆಯಲ್ಲಿ ಮಲ್ಲೇಶ್(35) ಎಂಬ ವ್ಯಕ್ತಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಇಲ್ಲಿನ ವೈನ್ ಶಾಪ್ ಬಳಿಯ ಚಾನಲ್ ಏರಿಯಾ ಸನಿಹದಲ್ಲಿ ಮಲ್ಲೇಶ್ ಬೈಕಿನಲ್ಲಿ ಬರುವ ವೇಳೆ ಹಿಂಬದಿಯಿಂದ ಬಂದ ಮೂವರು ದುಷ್ಕರ್ಮಿಗಳು ಡಿಕ್ಕಿ ಹೊಡೆಸಿದ್ದಾರೆ.
ಈ ವೇಳೆ ಮಲ್ಲೇಶನನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಖಚಿತ ಮಾಹಿತಿ ತಿಳಿದುಬರಬೇಕಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಹುಡುಗಿಯ ವಿಚಾರದಲ್ಲಿ ಮಲ್ಲೇಶನನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದ್ದು, ತನಿಖೆಯಿಂದ ಸತ್ಯಾಂಶ ಹೊರಬೀಳಬೇಕಿದೆ.
Also read: ಜನರ ಕೈಲಿ ಭಿಕ್ಷಾಪಾತ್ರೆಯಿದ್ದರೆ ಕಾಂಗ್ರೆಸ್ ವೋಟಿನ ಜೋಳಿಗೆ ಭರ್ತಿ: ಎಚ್’ಡಿಕೆ ಟಾಂಗ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post