ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ವತಂತ್ರ ಭಾರತ ಕಂಡ ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ Indira Gandhi ಅವರ ಅಂದಿನ ಆಡಳಿತ ಎಂದಿಗೂ ಮಾದರಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಸ್. ತಂಗರಾಜು ಹೇಳಿದ್ದಾರೆ.
ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರ 106ನೆಯ ಜನ್ಮದಿನೋತ್ಸವದ ಅಂಗವಾಗಿ ಕಲ್ಲಹಳ್ಳಿ ಇಂದಿರಾಗಾAಧಿ ವೃತ್ತದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಇಂದಿರಾಗಾಂಧಿ ಸ್ವತಂತ್ರ ಭಾರತ ಕಂಡ ದಿಟ್ಟ ಹಾಗೂ ಉಕ್ಕಿನ ಮಹಿಳೆ. ಅಂದು ತಮ್ಮ ಮುಂದಿದ್ದ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ದೇಶವನ್ನು ಮುನ್ನಡೆಸಿದ ಅವರ ಆಡಳಿತ ಸರ್ವಥಾ ಮಾದರಿಯಾದುದು ಎಂದರು.
Also read: ಆತ್ಮಹತ್ಯಾ ದಾಳಿ ಮೂಲಕ ಪಿಎಂ ಮೋದಿ, ಸಿಎಂ ಯೋಗಿ ಹತ್ಯೆ ಬೆದರಿಕೆ | ಆರೋಪಿ ಬಂಧನ
ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು.
ಅಬ್ಬಲಗೆರೆ ಗ್ರಾಮ ಪಂಚಾಯತ್ ಸದಸ್ಯ ಕೆ. ಹರ್ಷ ಬೋವಿ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯದರ್ಶಿ ಆರ್.ಆರ್. ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್, ದಾದಾಪೀರ್, ಧರ್ಮರಾಜ್, ಸವಿತಾ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post