ಬಿಜೆಪಿ ಸರ್ಕಾರ ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಜಾರಿಗೆ ತಂದಿದ್ದ ವಿಶೇಷ ಯೋಜನೆ ಶಿಶುಪಾಲನಾ ಕೇಂದ್ರವನ್ನು Childcare Center ಈಗಿನ ಸರ್ಕಾರ ರದ್ದು ಮಾಡಿರುವುದು ಕಾರ್ಮಿಕರಿಗೆ ಮಾಡಿದ ದ್ರೋಹವಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ MLA Chennabasappa ಹೇಳಿದರು.
ಶೈಕ್ಷಣಿಕ ವರ್ಷ ಇನ್ನೂ 5 ತಿಂಗಳು ಇರುವಾಗಲೇ ಮಧ್ಯದಲ್ಲಿಯೇ ಈ ರೀತಿ ಕೇಂದ್ರಗಳನ್ನು ರದ್ದುಮಾಡಿದರೆ ಆ ಮಕ್ಕಳು ಎಲ್ಲಿಗೆ ಹೋಗಬೇಕು ಮಧ್ಯಾಹ್ನದ ಊಟದ ಗತಿಯೇನು? ಪಾಠ ಮಾಡುವ ಶಿಕ್ಷಕರ ಗತಿಯೇನು? ಇದು ಮಕ್ಕಳಿಗೆ ಮಾಡಿದ ದ್ರೋಹವಲ್ಲದೆ ಮತ್ತೇನು ಎಂದು ಪ್ರಶ್ನೆ ಮಾಡಿದರು.
Also read: ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ರೂ. 21 ಹೆಚ್ಚಳ
ಬೋಗಸ್ ಕಾರ್ಡ್ಗಳು ಇವೇ ಎಂಬ ಕಾರಣಕ್ಕಾಗಿ ಈ ಯೋಜನೆಯನ್ನು ರದ್ದು ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಯಾರಿಗೆ ಈ ಶಿಕ್ಷೆ ಅಕ್ಷರಶಃ ಮಕ್ಕಳನ್ನು ಬೀದಿಗೆ ತಳ್ಳಲಾಗಿದೆ ಇದು ದ್ವೇಷದ ರಾಜಕಾರಣಯಾಗಿದೆ. ಕಾರ್ಮಿಕ ಇಲಾಖೆ ಸಚಿವರು ಈ ಬಗ್ಗೆ ಉಡಾಫೆ ಉತ್ತರ ಕೊಡುತ್ತಾರೆ. ಅಧಿಕಾರಿಗಳೇನು ಅನುಕಂಪ ಇದೆ. ಆದರೆ ಮಂತ್ರಿಗಳಿಗೆ ಏಕೆ ಇಲ್ಲ. ತಕ್ಷಣವೇ ಮುಖ್ಯಮಂತ್ರಿಗಳು ಮಧ್ಯ ಪ್ರವೇಶ ಮಾಡಬೇಕು. ರದ್ದು ಮಾಡಿರುವ ಈ ಯೋಜನೆಯನ್ನು ಮತ್ತೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ನಾನು ಸದನದ ಗಮನ ತರುತ್ತೇನೆ. ಸ್ಟಾರ್ ಪ್ರಶ್ನೆಯ ಮೂಲಕ ಕೇಳಿದರೆ ಅವಕಾಶ ಸಿಗದೇ ಇರಬಹುದು ಎಂಬ ಕಾರಣಕ್ಕಾಗಿ ಗಮನ ಸೆಳೆಯುವ ಸೂಚನೆಯ ಪ್ರಶ್ನೆಯನ್ನು ಮಾಡುತ್ತೇನೆ. ಇದಕ್ಕಾಗಿ ಈಗಾಗಲೇ ಸಿದ್ಧತೆ ಮಾಡಿಕೊಂಡುತ್ತೇನೆ ಇದು ಬಹುಮುಖ್ಯ ವಿಷಯವಾಗಿದೆ ಎಂದರು.
ಕಟ್ಟಡ ಮತ್ತು ಇತರೆ ಕಾರ್ಮಿಕರ ಮಕ್ಕಳಿಗಾಗಿ ಬಿಜೆಪಿ ಸರ್ಕಾರ ನೀಡುತ್ತಿದ್ದ ಶೈಕ್ಷಣಿಕ ಧನವನ್ನು ಕೂಡ ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ. ನರ್ಸರಿಯಿಂದ ಹಿಡಿದು ಬಿ.ಹೆಚ್.ಡಿ.ತನಕ ವ್ಯಾಸಂಗ ಮಾಡುವ ಮಕ್ಕಳಿಗೆ ಶೈಕ್ಷಣಿಕ ಸಹಾಯ ಧನ ನೀಡುತ್ತಿತ್ತು. ಈಗ ಕಾಂಗ್ರೆಸ್ ಸರ್ಕಾರ ಅದನ್ನು ಕಡಿಮೆಗೊಳಿಸಿದೆ ಮತ್ತು ಕೆಲವೊಂದು ರದ್ದು ಮಾಡಿದೆ ಇದು ನ್ಯಾಯವಲ್ಲ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















