ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಳೆದ ಏಳು ದಶಕಗಳಿಂದ ಸರ್ಕಾರ ಮಂಗನ ಕಾಯಿಲೆಗೆ (ಕೆಎಫ್’ಡಿ) KFD ಸರಿಯಾದ ಓಷಧಿ ಕಂಡು ಹಿಡಿಯದೇ ಅದೆಷ್ಟೋ ಮಲೆನಾಡು ಕರಾವಳಿಯ ಬಡ ಜನರು ಸಾವನ್ನಪ್ಪಿದ್ದಾರೆ. ಕೊರೋನಗಿಂತ Corona ಮಾರಕವಾದ ಈ ಕಾಯಿಲೆಗೆ ಇನ್ನೂ ಓಷಧಿ ಕಂಡು ಹಿಡಿಯದೆ ಇರುವುದು ನಮ್ಮನ್ನ ಆಳುವ ಸರ್ಕಾರಗಳಿಗೆ ಸಾಮನ್ಯ ಜನರ ಮೇಲಿರುವ ಅಸಡ್ಡೆ ಎತ್ತಿ ತೋರುತ್ತದೆ ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟದ ರಾಜ್ಯ ಪ್ರದಾನ ಸಂಚಾಲಕ ಅನಿಲ್ ಹೊಸಕೊಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊನ್ನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅರಮನೆ ಕೊಪ್ಪ ಗ್ರಾಮದ ಯುವತಿ ಮಂಗನ ಕಾಯಿಲೆಯಿಂದ ಮೃತ ಪಟ್ಟಿರುವ ಕುರಿತು ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

Also read: ಪಾಕಿಸ್ಥಾನದಲ್ಲಿದ್ದಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಫೀಸ್
ರಾಷ್ಟ್ರ ಹಾಗೂ ರಾಜ್ಯ ನಾಯಕರುಗಳು ಮಸೀದಿ, ಮಠ, ಮಂದಿರ, ಚರ್ಚ್’ಗಳಿಗೆ ಭೇಟಿ ನೀಡುವ ಬದಲು ಇಂತಹ ಹಳ್ಳಿಗಳಿಗೆ ಭೇಟಿ ನೀಡಿ ಪರಿಹಾರಕ್ಕೆ ಪ್ರಯತ್ನಿಸಬೇಕು ಇದೆ ಧರ್ಮ ಎಂದರು.

ಈ ಕಾಯಿಲೆ ಚಿಕ್ಕಮಗಳೂರು ಉಡುಪಿ ಹಳ್ಳಿ ಬಾಗಗಳಲ್ಲಿ ಹರಡದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಮಲೆನಾಡು ಕರಾವಳಿ ಬಾಗದ ಕೃಷಿಕರು ಕಾಡು ಪ್ರಾಣಿ, ಮಂಗಗಳ ಹಾವಳಿಯಿಂದ ಬೇಸತ್ತಿದ್ದಾರೆ. ಇದರ ನಡುವೆ ಈ ಕಾಯಿಲೆ ಬೇರೆ ಜನ ಭಯದಿಂದ ಬದುಕುವ ಸ್ಥಿತಿ ಬಂದಿದೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post