ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ |
ನಿರೀಕ್ಷೆಗೂ ಮೀರಿ ಮಿತಿಮೀರಿದ ಭಕ್ತರು ಆಗಮಿಸಿರುವ ಹಿನ್ನೆಲೆಯಲ್ಲಿ ರಾಮದೇವರ ದರ್ಶನ ಪಡೆಯಲು ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಲಾಗಿದೆ.
ನಿನ್ನೆ ಪ್ರಾಣಪ್ರತಿಷ್ಠಾಪನೆ ಆದ ಹಿನ್ನೆಲೆಯಲ್ಲಿ ಇಂದಿನಿಂದ ಸಾರ್ವಜನಿಕರಿಗೆ ರಾಮಲಲ್ಲಾನ Ramalalla ದರ್ಶನಕ್ಕೆ ತೆರೆಯಲಾಗಿತ್ತು. ನಸುಕಿನ 3 ಗಂಟೆಯಿಂದಲೇ ಸಾವಿರಾರು ಮಂದಿ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿದ್ದರು.

Also read: ರಾಮನ ದರ್ಶನಕ್ಕೆ ತುಂಬಿ ತುಳುಕುತ್ತಿದೆ ಅಯೋಧ್ಯೆ | ಎಲ್ಲೆಲ್ಲೂ ಜನಸಮೂಹ
ಮೊದಲೇ ಹೇಳಿದಂತೆ, ದೇವಾಲಯವು ಸಾರ್ವಜನಿಕರಿಗಾಗಿ ಇಂದು ತೆರೆದಿರುವುದರಿಂದ ಗಂಟೆಗಟ್ಟಲೆ ಸರದಿಯಲ್ಲಿ ಕಾಯುತ್ತಿದ್ದ ಭಕ್ತರ ಭಾರೀ ನೂಕು ನುಗ್ಗುವಿಕೆಯಿಂದಾಗಿ ಅಯೋಧ್ಯೆ ರಾಮಮಂದಿರ ಪ್ರವೇಶವನ್ನು ಮುಚ್ಚಲಾಗಿದೆ.

ಪರಿಸ್ಥಿತಿ ನೋಡಿಕೊಂಡು ಮಧ್ಯಾಹ್ನ 2 ಅಥವಾ 3 ಗಂಟೆಗೆಯ ವೇಳೆಗೆ ಮತ್ತೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post