ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವೈದ್ಯರ ಸಲಹೆ ಇಲ್ಲದೆ ಸ್ವಯಂ ವೈದ್ಯ ಮಾಡಿಕೊಳ್ಳುವ ಅಭ್ಯಾಸ ಮಾಡಿಕೊಳ್ಳುವುದು ಮನುಕುಲಕ್ಕೆ ಅಂಟಿದ ಕಂಟಕ ಎಂದು ಸುಬ್ಬಯ್ಯ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ, ಸಂಶೋಧನಾ ಕೇಂದ್ರದ ಸೂಕ್ಷ್ಮಜೀವಾಣು ವಿಭಾಗದ ಮುಖ್ಯಸ್ಥ ಡಾ. ಅಮೃತ್ ಕಿಶನ್ ಉಪಾಧ್ಯಾಯ ಅಭಿಪ್ರಾಯಪಟ್ಟರು.
ಆಂಟಿ ಮೈಕ್ರೋಬಿಯಲ್ ರೆಸಿಸ್ಟೆನ್ಸ್ ಸಪ್ತಾಹ ಅಂಗವಾಗಿ ಸುಬ್ಬಯ್ಯ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ, ಸಂಶೋಧನಾ ಕೇಂದ್ರದ ಸೂಕ್ಷ್ಮ ಜೀವಾಣು ವಿಭಾಗ ಹಾಗೂ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಸಹಯೋಗದೊಂದಿಗೆ ಮ್ಯಾಕ್ಸ್ ಆಸ್ಪತ್ರೆಯಿಂದ ಗೋಪಿ ವೃತ್ತದವರೆಗೂ ಆಯೋಜಿಸಲಾಗಿದ್ದ ವಾಕ್ ಥಾನ್’ ನಲ್ಲಿ ಅವರು ಮಾತನಾಡಿದರು.
ವೈದ್ಯರ ಸಲಹೆ ಹಾಗೂ ಶಿಫಾರಸು ಇಲ್ಲದೆ ಸ್ವಯಂ ವೈದ್ಯ ಮಾಡಿಕೊಳ್ಳುವ ಅಭ್ಯಾಸ ಮನುಕುಲಕ್ಕೆ ಅಂಟಿದ ಶಾಪವಾಗಿದೆ. ಯಾರು ಸಹ ಇಂತಹ ಕೆಲಸ ಮಾಡಬಾರದು ಎಂದರು.
ಯಾವ ಔಷಧಿಯನ್ನು ಯಾವ ಕೆಮಿಕಲ್ ಉಪಯೋಗಿಸಿ ತಯಾರಿಸಲಾಗುತ್ತದೆ ಎಂಬುದು ಸಾಮಾನ್ಯ ಜನರಿಗೆ ತಿಳಿದಿರುವುದಿಲ್ಲ. ಹೀಗಾಗಿ ತೆಗೆದುಕೊಳ್ಳುವ ಔಷಧಿಯಲ್ಲಿ ಯಾವ ಕೆಮಿಕಲ್ ಯಾವ ರೀತಿಯ ಅಡ್ಡ ಪರಿಣಾಮ ಬೀರುತ್ತದೆ ಎಂಬುದು ತಿಳಿದಿರುವುದಿಲ್ಲ. ಹೀಗಾಗಿ ವೈದ್ಯರ ಸಲಹೆ ಇಲ್ಲದೆ ಇಂಟರ್ನೆಟ್ ನೋಡಿ, ಮೆಡಿಕಲ್ ಶಾಪ್ ಗಳಲ್ಲಿ ಕೇಳಿ ಮಾತ್ರೆ ಹಾಗೂ ಔಷಧಿ ತೆಗೆದುಕೊಳ್ಳುವುದು ಸರಿಯಾದ ಕ್ರಮವಲ್ಲ ಎಂದರು.
ಯಾವುದೇ ಆರೋಗ್ಯ ಸಮಸ್ಯೆಗೆ ವೈದ್ಯರು ಶಿಫಾರಸು ಮಾಡುವ ಆಂಟಿ ಬಯೋಟಿಕ್ ಮಾತ್ರೆಯನ್ನು ಅವರು ಹೇಳಿದ ಪೂರ್ಣ ಕೋರ್ಸ್ ತೆಗೆದುಕೊಳ್ಳಬೇಕು. ಕೋರ್ಸ್ ಅನ್ನು ಅಪೂರ್ಣ ಮಾಡಿದಲ್ಲಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ ಎಂದರು.
ಸ್ವಯಂ ಆಗಿ ಆಂಟಿ ಬಯೋಟಿಕ್,ಗಳನ್ನು ತೆಗೆದುಕೊಳ್ಳುವುದರಿಂದ ಆಗುವ ದುಷ್ಪರಿಣಾಮಗಳ ಕುರಿತಾಗಿ ಜಾಗೃತಿ ಮೂಡಿಸುವ ಸಲುವಾಗಿ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಗೋಪಿ ವೃತ್ತದವರೆಗೂ ವಾಕ್ ಥಾನ್ ಆಯೋಜಿಸಲಾಗಿತ್ತು. ಈ ಕುರಿತಂತೆ ವೈದ್ಯಕೀಯ ಕ್ಷೇತ್ರದಲ್ಲಿರುವವರು ಸಾಮಾಜಿಕ ಜಾಲತಾಣದಲ್ಲೂ ಸಹ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ಅರಿವು ಮೂಡಿಸಲಾಯಿತು.
ಈ ವರ್ಷದ Act Now: Product Our Present Secure Our Future ಎಂಬ ಈ ವರ್ಷದ ಘೋಷ ವಾಕ್ಯದ ಅಡಿಯಲ್ಲಿ ವಾಕ್ ಥಾನ್ ನಡೆಯಿತು.
ತಡಿಕೆಲ ಸುಬ್ಬಯ್ಯ ಪ್ರತಿಷ್ಠಾನದ ಟ್ರಸ್ಟಿಗಳಾದ ಡಾ. ಎಸ್. ನಾಗೇಂದ್ರ, ಡಾ. ಲತಾ ನಾಗೇಂದ್ರ, ಡಾ. ಶ್ರೀನಿವಾಸ, ಡಾ. ವಿನಯ ಶ್ರೀನಿವಾಸ್, ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಡೀನ್ ಡಾ. ವಿನಾಯಕ, ಪ್ರಾಂಶುಪಾಲರಾದ ಡಾ. ಸಿ. ಎಂ. ಸಿದ್ದಲಿಂಗಪ್ಪ, ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಸತೀಶ್, ಡಾ. ರಾಕೇಶ್ ಬಿಸ್ಲಹಳ್ಳಿ, ಸುಬ್ಬಯ್ಯ ವೈದ್ಯಕೀಯ ಸಮೂಹ ಸಂಸ್ಥೆಗಳ ವಿಭಾಗ ಮುಖ್ಯಸ್ಥರು, ವೈದ್ಯಕೀಯ ಸಿಬ್ಬಂದಿ ವರ್ಗ, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















