ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಗರ ರಸ್ತೆಯ ಮುದ್ದೀನಕೊಪ್ಪದ ಟ್ರೀ ಪಾರ್ಕ್ ನಲ್ಲಿ Tree Park ಆಟವಾಡುತ್ತಿದ್ದ 6 ವರ್ಷದ ಮಗುವಿನ ಮೇಲೆ ಜಿಂಕೆಯ ಪ್ರತಿಮೆ ಬಿದ್ದು ಸಾವು ಕಂಡಿರುವ ಘಟನೆ ದಾರುಣ ನಡೆದಿದೆ.
ಗಾಂಧಿ ಬಜಾರ್ನ ನಿವಾಸಿ ಹರೀಶ್ ಅವರ ಪುತ್ರಿ ಸಮೀಕ್ಷಾ ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಬಾಲಕಿ ಸಹೋದರಿ ಸುನಿಧಿಯೊಂದಿಗೆ ಆಟವಾಡುವಾಗ ಜಿಂಕೆ ಪ್ರತಿಮೆ ಬಾಲಕಿ ಮೇಲೆ ಬಿದ್ದಿದೆ. ಬಳಿಕ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ಅಷ್ಟರಲ್ಲಾಗಲೇ ಬಾಲಕಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಟ್ರೀಪಾರ್ಕ್ ನಲ್ಲಿ ಕಳಪೆ ಕಾಮಗಾರಿಯಾಗಿದ್ದರಿಂದ ಜೋಕಾಲಿ ಎಲ್ಲಾ ಮುರಿದುಬಿದ್ದಿದೆ. ಟಿಕೇಟ್ ಗೆ ಶುಲ್ಕ ಪಡೆದ ಅರಣ್ಯ ಇಲಾಖೆ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Also read: ಮುಗ್ಧತೆ ಎಂದರೆ ರಾಷ್ಟ್ರಪತಿಗಳಿಗೆ ಏಕವಚನ ಬಳಸುವುದಾ? ಸಿಎಂ ಸಿದ್ದರಾಮಯ್ಯಗೆ ಹೆಚ್ಡಿಕೆ ತೀವ್ರ ತರಾಟೆ
ಬಾಲಕಿ ಸಾವಿನ ನೋವಿನ ನಡುವೆಯೂ ತಂದೆ ಸಾರ್ಥಕತೆ ಮೆರೆದಿದ್ದು, ಮಗುವಿನ ಅಂಗಾಂಗವನ್ನು ಸಿಮ್ಸ್ ಗೆ ದಾನಮಾಡುವುದಾಗಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















