ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಖ್ಯಮಂತ್ರಿ ಸಿದ್ದರಾಮಯ್ಯ CM Siddaramaiah ಅವರು ಇಂದು ಮಂಡಿಸಿದ ಬಜೆಟ್ ಬೋಗಸ್ ಆಗಿದ್ದು, ಇದಕ್ಕೆ ಯಾವುದೇ ರೀತಿಯ ತಲೆ ಬುಡವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ D S Arun ಕಿಡಿ ಕಾರಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಿದ್ದರಾಮಯ್ಯ ಅವರು ಮಂಡಿಸಿದ ಆಯವ್ಯಯ ಕೇವಲ ಪಾಠ ಪ್ರವಚನದಂತಿತ್ತು. ಮಾನ್ಯ ಮುಖ್ಯಮಂತ್ರಿಗಳ ವೈಫಲ್ಯವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿರುವ ಬಜೆಟ್ ಇದಾಗಿದೆ ಎಂದು ಟೀಕಿಸಿದ್ದಾರೆ.
ಯಾವುದೇ ಹೊಸ ಅಭಿವೃದ್ಧಿ ಯೋಜನೆಗಳ ಘೋಷಣೆ ಇರಲಿಲ್ಲ, ಉಚಿತ ಎಂಬ ಪದವನ್ನೇ ಬಜೆಟ್ ನ ಉದ್ದಕ್ಕೂ ಉಚಿತವಾಗಿ ಬಳಸಿದ್ದನ್ನು ಬಿಟ್ಟರೆ ಬೇರೇನು ಇಲ್ಲ, ಇದೊಂದು ದಿಕ್ಕು ದೆಸೆ ಇಲ್ಲದ ಬಜೆಟ್ ಇದಾಗಿದೆ ಎಂದಿದ್ದಾರೆ.
Also read: ಹಿಂದೂ ದೇಗುಲಗಳ ಕೋಟಿ ಕೋಟಿ ಹಣ ಅಲ್ಪಸಂಖ್ಯಾತರ ಅಭಿವೃದ್ಧಿಗೆ: ತೀವ್ರ ಆರೋಪ, ಆಕ್ಷೇಪ
ಬಜೆಟ್’ನಲ್ಲಿ ಆರ್ಥಿಕ ಭದ್ರತೆ ವಿವಿಧ ವಲಯಗಳ ಪ್ರಗತಿ ಬಗ್ಗೆ ಏನು ಮಾಹಿತಿ ಇರಲಿಲ್ಲ ಜನಸಾಮಾನ್ಯರ ಕಲ್ಯಾಣ ಕಾರ್ಯಗಳ ಬಗ್ಗೆ ಏನು ಪ್ರಸ್ತಾಪ ಮಾಡಲಿಲ್ಲ. ಸಾಮಾನ್ಯ ಜನರ ಆರ್ಥಿಕ ಶಕ್ತಿ ವೃದ್ಧಿಸುವ ಭರವಸೆ ಈ ಬಜೆಟ್ ನಲ್ಲಿ ಕಾಣಲಿಲ್ಲ ಎಂದಿದ್ದಾರೆ.
ಈ ವರ್ಷ ಬರಗಾಲ ಎದುರಿಸುತ್ತಿರುವ ಜನರಿಗೆ ಕನಿಷ್ಠ ಸೌಕರ್ಯಗಳ ಪ್ರಸ್ತಾಪ ಈ ಮುಂಗಡ ಪತ್ರದಲ್ಲಿಲ್ಲ, ರೈತರಿಗೆ ಈ ಬಜೆಟ್’ನಿಂದ ಯಾವುದೇ ಪ್ರಯೋಜನವಾಗುವುದಿಲ್ಲ, ರೈತರನ್ನು ಪರಿಗಣಿಸದ ಬಜೆಟ್ ಎಂದರೆ ತಪ್ಪಾಗಲಾರದು ಎಂದು ಕಿಡಿ ಕಾರಿದ್ದಾರೆ.
ಕೇವಲ ಅಂಕಿ ಅಂಶಗಳ ಪ್ರಸ್ತಾಪ ಆಯಿತು ವಿನಃ ಯಾವುದೇ ಅನುಷ್ಠಾನದ ಕುರಿತಾದ ಸ್ಪಷ್ಟ ಭರವಸೆ ಇಲ್ಲ ಎಂದಿರುವ ಅವರು, ಮಹಿಳೆಯರು, ಮಕ್ಕಳ ಅಭಿವೃದ್ಧಿಯಾಗುವ ಯಾವ ಕಾರ್ಯಕ್ರಮಗಳು ಇಲ್ಲ. ಗ್ಯಾರೆಂಟಿಗಳನ್ನು ಹೊಂದಾಣಿಕೆ ಮಾಡುವುದಕ್ಕೆ ರೂಪಿಸಿರುವ ಬಜೆಟ್ ನಿಂದ ಎಲ್ಲಾ ಇಲಾಖೆಗಳ ಅಭಿವೃದ್ಧಿಗೆ ಕತ್ತರಿ ಹಾಕಿದಂತಾಗಿದೆ ಎಂದಿದ್ದಾರೆ.
ಇದು ಕೇವಲ ಅಂಕಿ ಅಂಶಗಳ ಮಂಡನೆಗೆ ತೆಗೆದುಕೊಂಡ ಕಾಲವಾಯಿತೇ ವಿನಃ ಯಾವುದೇ ನಿರ್ದಿಷ್ಟ ಗುರಿ ಇಲ್ಲ ಎಂಬುದನ್ನು ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಜನರ ಕಷ್ಟಗಳನ್ನು ಅರಿಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post