ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾರಾಷ್ಟ್ರದ ನಿವಾಸಿಯೊಬ್ಬರ ಕಾರು ರಿಪೇರಿ ಖರ್ಚಿನ ವಿಮೆಯನ್ನು ತಿರಸ್ಕರಿಸಿದ ರಿಲಯನ್ಸ್ ಜನರಲ್ ಇನ್ಸೂರೆನ್ಸ್ ಕಂಪೆನಿಯು ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿದೆ.
ಏನಿದು ಘಟನೆ?
ಮಹಾರಾಷ್ಟ್ರದ ನಿವಾಸಿ ಜೀವನ್ ವೆಂಕಪ್ಪ ಶೆಟ್ಟಿ ಎನ್ನುವವರ ಕಾರು ಅಪಘಾತಕ್ಕೀಡಾಗಿತ್ತು. ಈ ಕಾರನ್ನು ಶಿವಮೊಗ್ಗದ ಖಾಸಗಿ ಕಂಪೆನಿಯೊಂದರಲ್ಲಿ ರಿಪೇರಿಗೆ ಬಿಡಲಾಗಿತ್ತು. ಇದರೊಂದಿಗೆ ವಾಹನ ಪಾಲಿಸಿಯ ರಿಪೇರಿ ಖರ್ಚಿನ ಮೊತ್ತವನ್ನು ಪಾವತಿಸುವಂತೆ ಕೋರಿಲಾಗಿತ್ತು.
ಆದರೆ ಇನ್ಸೂರೆನ್ಸ್ ಕಂಪನಿಯು ಅರ್ಜಿದಾರರ ಸ್ವ-ನಿರ್ಲಕ್ಷ್ಯತನದಿಂದಾಗಿ ಆದ ಅಪಘಾತವೆಂದು ಸಲ್ಲಬೇಕಾದ ವಿಮಾ ಸೌಲಭ್ಯವನ್ನು ಒದಗಿಸಲು ನಿರಾಕರಿಸಿದ್ದರು.
Also read: ಯುಸಿಸಿಯತ್ತ ಅಸ್ಸಾಂ ಮಹತ್ವದ ಹೆಜ್ಜೆ | ಮುಸ್ಲಿಂ ವಿವಾಹ ಕಾಯ್ದೆ ರದ್ದು | ಇಲ್ಲಿದೆ ಮಾಹಿತಿ
ಇದನ್ನು ಪ್ರಶ್ನಿಸಿ ಜೀವನ್ ಅವರು ಗ್ರಾಹಕರ ಆಯೋಗದ ಮೆಟ್ಟಿಲೇರಿದ್ದರು. ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ, ಅರ್ಜಿದಾರರು ಹಾಜರುಪಡಿಸಿದ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಎದುರುದಾರ ವಿಮಾಕಂಪೆನಿ ನಿರಾಕರಣೆಯು ಸೇವಾನ್ಯೂನ್ಯತೆಯಿಂದ ಕೂಡಿರುತ್ತದೆ ಎಂದು ತೀರ್ಮಾನಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸಿದೆ.
ಆದೇಶದಲ್ಲಿ ಏನಿದೆ?
ಈ ಆದೇಶವಾದ 45 ದಿನಗಳ ಒಳಗಾಗಿ ಅರ್ಜಿದಾರರಿಗೆ ವಾಹನ ರಿಪೇರಿಯ ಖರ್ಚು ರೂ. 80,012 ಕ್ಕೆ ಶೇ.9% ಬಡ್ಡಿ ಸಮೇತ ಪಾವತಿಸಬೇಕು. ಇದರೊಂದಿಗೆ ರೂ.15,000 ಗಳನ್ನು ಮಾನಸಿಕ ಹಾನಿಗೆ ಪರಿಹಾರವಾಗಿ, ರೂ.5,000 ಗಳನ್ನು ವ್ಯಾಜ್ಯದ ಖರ್ಚು ವೆಚ್ಚಗಳ ಬಾಬ್ತು ಪಾವತಿಸಬೇಕು ಎಂದು ಆದೇಶಿಸಲಾಗಿದೆ.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ. ಪಟ್ಟಣಶೆಟ್ಟೆ, ಬಿ.ಡಿ.ಯೋಗಾನಂದ ಭಾಂಡ್ಯ ಅವರ ಪೀಠ ಈ ಆದೇಶಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post