ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ PM Narendra Modi ಆಗಮನಕ್ಕಾಗಿ ಕ್ಷಣಗಣನೆ ಆರಂಭವಾಗಿದ್ದು, ಲಕ್ಷಾಂತರ ಮೋದಿ ಪ್ರೇಮಿಗಳು ಅವರನ್ನು ನೋಡಲು ತವಕಿಸುತ್ತಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಹೇಳಿದರು.
ಅವರು ಇಂದು ಮೋದಿ ಬರುವ ಹಿನ್ನಲೆಯಲಿ ಅಲ್ಲಮಪ್ರಭು ಮೈದಾನದಲ್ಲ್ಲಿ ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿ ಸುದ್ಧಿಗಾರರೊಂದಿಗೆ ಮಾತನಾಡಿದರು.
ಮೋದಿಯವರು ಮಾ.18ರಂದು ಮಧ್ಯಾಹ್ನ ಸರಿಯಾಗಿ 1.15ಕ್ಕೆ ವೇದಿಕೆಗೆ ಆಗಮಿಸುವರು ಸುಮಾರು 2 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಸ್ವಹಿಚ್ಛೆಯಿಂದ ಮೋದಿ ನೋಡುವವರ ಸಂಖ್ಯೆಯೇ ಹೆಚ್ಚಾಗಿದೆ. ಎಲ್ಲಾ ಸಿದ್ಧತೆಗಳು ಈಗ ಪೂರ್ಣವಾಗಿವೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ನಾಯಕರು ರಾಜ್ಯದ ಪ್ರಮುಖ ನಾಯಕರು ಕಾರ್ಯಕರ್ತರು ಉಪಸ್ಥಿತರಿರುತ್ತಾರೆ.
Also read: ನೀತಿ ಸಂಹಿತೆ ಜಾರಿ | ಸೋಷಿಯಲ್ ಮೀಡಿಯಾದಲ್ಲಿ ನೀವು ಈ ತಪ್ಪು ಮಾಡಿದ್ರೆ ಕೇಸ್ ಗ್ಯಾರೆಂಟಿ
ಸಾರ್ವಜನಿಕರು ಮಧ್ಯಾಹ್ನ 12.30ರೊಳಗೆ ವೇದಿಕೆಗೆ ಬರಬೇಕು. ಹೊರ ಜಿಲ್ಲೆಗಳಿಂದ ಬರುವವರಿಗೆ ಅಲ್ಲಿಲ್ಲಿ ವಾಹನದ ನಿಲ್ದಾಣಗಳನ್ನು ಮಾಡಲಾಗಿದೆ. ಬಿ.ಹೆಚ್.ರಸ್ತೆಯ ಸೈನ್ಸ್ ಮೈದಾನ, ಬೊಮ್ಮನಕಟ್ಟೆಯ ಖಾಲಿ ಇರುವ ಮೈದಾನದಲ್ಲಿ ಎಪಿಎಂಸಿ ಯಾರ್ಡ್ ಹೀಗೆ ವಿವಿಧ ಭಾಗಗಳಲ್ಲಿ ವಾಹನಗಳನ್ನು ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಮತ್ತಷ್ಟು ವಿವರಗಳನ್ನು ಪೊಲೀಸ್ ಇಲಾಖೆ ನೀಡಲಿದೆ ಎಂದರು.
ನೀತಿ ಸಂಹಿತೆ ಈ ದಿನವೇ ಪ್ರಕಟವಾಗುವ ಸಾಧ್ಯತೆ ಇದೆ. ಚುನಾವಣಾ ಪ್ರಚಾರ ಸಮಾರಂಭ ಕೂಡ ನಿಯಮದ ಅಡಿಯಲ್ಲಿಯೇ ನಡೆಸಲಾಗುವುದು ಎಂದ ಅವರು, ವಿಶ್ವನಾಯಕ ಮೋದಿಯವರು ಶಿವಮೊಗ್ಗಕ್ಕೆ ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಈಶ್ವರಪ್ಪನವರ ಕುರಿತಂತೆ ಪ್ರಶ್ನೆ ಕೇಳುತ್ತಿದ್ದಂತೆಯೇ ಸಂಸದ ರಾಘವೇಂದ್ರ ಅವರು ಆ ಬಗ್ಗೆ ಏನು ಮಾತನಾಡದೆ ನಾವು ಈಗ ಸಂಪೂರ್ಣವಾಗಿ ಮೋದಿಯ ನಿರೀಕ್ಷೆಯಲ್ಲಿದ್ದೇವೆ. ಕುದುರೆಗೆ ಕಣ್ಣು ಪಟ್ಟಿ ಕಟ್ಟಿದ್ದಂತೆ ಇದ್ದೇವೆ. ನಮ್ಮ ದೃಷ್ಠಿ ಮೋದಿಯ ಕಡೆಗೆ ಇದೇಯೇ ವಿನಃ ಬೇರೆ ಏನು ಅಲ್ಲ ಎಂದಷ್ಟೇ ಹೇಳಿದರು.
ಮತ್ತೆ ಅದೇ ಪ್ರಶ್ನೆಯನ್ನೇ ಕೇಳಿದಾಗ ಮೈಕ್ನ್ನು ಶಾಸಕ ಎಸ್.ಎನ್. ಚೆನ್ನಬಸಪ್ಪನವರ ಕಡೆ ನೀಡಿದರು. ಶಾಸಕರು ಅದನ್ನು ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಅವರ ಕೈಯಿಗೆ ಕೊಟ್ಟರು. ಮೇಘರಾಜ್ ಮೈಕ್ಹಿಡಿದು ಎಲ್ಲಾರಿಗೂ ಧನ್ಯವಾದ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಘುಪತಿಭಟ್, ರುದ್ರೇಗೌಡರು, ಎಸ್.ಎನ್. ಚೆನ್ನಬಸಪ್ಪ, ಹರತಾಳು ಹಾಲಪ್ಪ, ಡಿ.ಎಸ್.ಅರುಣ್, ಗಿರೀಶ್ ಪಟೇಲ್ ಆರ್.ಕೆ.ಸಿದ್ರಮಣ್ಣಾ, ಕೆ.ಜಿ.ಕುಮಾರಸ್ವಾಮಿ, ಅಶೋಕ್ನಾಯ್ಕ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post