ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಿಲಿಟರಿ, ಐ.ಟಿ.ಬಿ.ಪಿ. ಸೇವೆಯಿಂದ ನಿವೃತ್ತಿ ಹೊಂದಿ ತಾಲೂಕಿನ ಬೀರನಕೆರೆ ತವರಿಗೆ ಆಗಮಿಸುತ್ತಿರುವ ಯೋಧ ಆರ್. ಕುಮಾರ್ ನಾಯ್ಕ್ ಅವರಿಗೆ ಬೀರನಕೆರೆ ಗ್ರಾಮಸ್ಥರು ಶಿವಮೊಗ್ಗ ನಗರದಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ಬರಮಾಡಿಕೊಂಡರು.
ಇವರು ಇಂಡೋ ಟಿಬಿಟಿಯನ್ ಬಾರ್ಡರ್ ಪೊಲೀಸ್ ನಲ್ಲಿ 21 ವರ್ಷ ಸೇವೆ ಸಲ್ಲಿಸಿ ಜಮ್ಮು ಮತ್ತು ಕಾಶ್ಮೀರದ ಅಮರನಾಥ ಯಾತ್ರಿಕರ ರಕ್ಷಣೆಗೆ ಸೇವೆ ಸಲ್ಲಿಸಿ ತನ್ನ ವಸತಿ ಗೃಹಕ್ಕೆ ಆಗಮಿಸುವಾಗ ಯೋಧರಿದ್ದ ಬಸ್ 700 ಅಡಿ ಆಳಕ್ಕೆ ಬಿದ್ದು ಇಡೀ ದೇಶದಲ್ಲಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ ಅದೃಷ್ಟವಶಾತ್ ತಾಯಿ ಭಾರತಾಂಬೆಯ ಮತ್ತು ನನ್ನ ಹೆತ್ತ ತಾಯಿಯ ಆಶೀರ್ವಾದದಿಂದ ನಾನು ಬದುಕಿ ಬಂದಿದ್ದೆ ಒಂದು ಪವಾಡ. ನಾನು ಆಸ್ಪತ್ರೆಯಲ್ಲಿದ್ದಾಗ ಸ್ವತಃ ಗೃಹ ಮಂತ್ರಿ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಅವರು ಭೇಟಿ ನೀಡಿ ನನಗೆ ಬದುಕುವ ಉತ್ಸಾಹ, ಧೈರ್ಯ ತುಂಬಿದರು ಎಂದು ಅವರು ತಿಳಿಸಿದರು.

ಬೀರನಕೆರೆ ಗ್ರಾಮದ ಮುಖಂಡರಾದ ಬಸವರಾಜ್ ಮಾತನಾಡಿ, ಈ ಯೋಧನ ಮನೆಯ ಮೂರೂ ಜನ ಯುವಕರು ರಾಷ್ಟ್ರ ಸೇವೆ ಮಾಡುತ್ತಿದ್ದು ಇಡೀ ಗ್ರಾಮಕ್ಕೆ ಇವರ ಆಗಮನ ಸಂತೋಷ ತಂದಿದೆ. ಇಡೀ ಗ್ರಾಮದ ಜನರು ಹಬ್ಬದ ವಾತಾವರಣದಲ್ಲಿದ್ದಾರೆ. ಮತ್ತು ಅವರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತಿದ್ದೇವೆ. ಮೆರವಣಿಗೆಯಲ್ಲಿ ಕರೆದುಕೊಂಡು ಹೋಗುತ್ತಿದ್ದೇವೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news















Discussion about this post