No Result
View All Result
66% of Indians Face Health & Wellness Scams: McAfee Report Raises Alarm
English Articles

66% of Indians Face Health & Wellness Scams: McAfee Report Raises Alarm

by ಕಲ್ಪ ನ್ಯೂಸ್
June 25, 2026
0

Kalpa Media House  |  New Delhi | A new report by McAfee has revealed a sharp rise in health and...

Read moreDetails
Indian Railway Fine Hike

Jan Vishwas Act 2026: Revised Railway Penalty Rules Likely from July 1

June 23, 2026
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
MODEL DEMOCRACY AT KRCS

Model Democracy At KRCS | Student Council Election Concluded Successfully

June 22, 2026
Naija Hegde’s Inspiring Rise to Success

From Coast to Glory: Naija Hegde’s Inspiring Rise to Success

June 21, 2026
  • Advertise With Us
  • Grievances
  • About Us
  • Contact Us
Friday, June 26, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ದೈವಿ ಚಿಂತನೆಯ ಕ್ರಿಯಾತ್ಮಕ ಸಾಂಸ್ಕೃತಿಕ ನೃತ್ಯ ಪ್ರಸ್ತುತಿ ಶ್ಲಾಘನೀಯ: ಶ್ರೀ ಸುಗುಣೇಂದ್ರ ತೀರ್ಥರು

ಬೆಂಗಳೂರಿನ ಶ್ರೀ ಗಣೇಶ ನೃತ್ಯಾಲಯ ತಂಡದಿಂದ ಉಡುಪಿ, ಅನೆಗುಡ್ಡೆ , ಕೊಲ್ಲೂರಿನಲ್ಲಿ ನೃತ್ಯ ಪ್ರದರ್ಶನ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 7, 2024
in Special Articles
0
ದೈವಿ ಚಿಂತನೆಯ ಕ್ರಿಯಾತ್ಮಕ ಸಾಂಸ್ಕೃತಿಕ ನೃತ್ಯ ಪ್ರಸ್ತುತಿ ಶ್ಲಾಘನೀಯ: ಶ್ರೀ ಸುಗುಣೇಂದ್ರ ತೀರ್ಥರು
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಆಧುನಿಕತೆಯ ಭರಾಟೆಯಲ್ಲಿ ನಶಿಸಿ ಹೋಗುತ್ತಿರುವ ಕಲಾ ಮಾಧ್ಯಮದಲ್ಲಿ ಭಾರತೀಯ ಸಂಸ್ಕೃತಿಯ ದೈವಿ ಚಿಂತನೆಯನ್ನು ಕ್ರಿಯಾತ್ಮಕವಾಗಿ ನೀಡುತ್ತಿರುವುದು ಶ್ಲಾಘನೀಯ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು #Shri Sugunendra Thirtharu ತಿಳಿಸಿದರು.

ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಹ್ವಾನದ ಮೇರೆಗೆ ಜೂನ್ 1ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಜೆ ಈ ನೃತ್ಯ ದಂಪತಿಗಳ ನೃತ್ಯ ಪ್ರದರ್ಶನ ಕಾರ್ಯಕ್ರಮ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.
ಬೆಂಗಳೂರಿನ ಅರಿಶಿನಕುಂಟೆಯ ಶ್ರೀ ಗಣೇಶ ನೃತ್ಯಾಲಯ ಸಂಗೀತ ಮತ್ತು ನೃತ್ಯಶಾಲೆಯ ನೃತ್ಯಗುರು ಭಾವನಾ ಗಣೇಶ್ ಮತ್ತು ಎಂ.ಡಿ. ಗಣೇಶ್ ಹಾಗೂ ಶಿಷ್ಯವೃಂದದಿಂದ ಜೂ.1ರಿಂದ 3ರವರೆಗೆ ಕರಾವಳಿಯ ಪುಣ್ಯಕ್ಷೇತ್ರಗಳಲ್ಲಿ ನೃತ್ಯ ಸೇವೆ ನಡೆಸಿಕೊಟ್ಟರು.

ಜೂನ್ 2ರಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಹಾಗೂ ಜೂನ್ 3ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನೃತ್ಯ ಪ್ರದರ್ಶನ ನೀಡಿದರು. ಶ್ರೀಕೃಷ್ಣ ಲೀಲಾ ನೃತ್ಯರೂಪಕದಲ್ಲಿ ಭಗವಾನ್ ಶ್ರೀ ಕೃಷ್ಣನ ಅನೇಕ ಲೀಲಾ ವಿನೋದಗಳಾದ ಬಾಲಕನಾಗಿ, ಯುವಕನಾಗಿ ರಾಸಲೀಲೆ ಹೀಗೆ ವೈವಿದ್ಯಮಯ ವಸ್ತು ವಿಷಯದೊಡನೆ ತಂಡದ ವಿದ್ಯಾರ್ಥಿಗಳು ಭಕ್ತಿಪರವಶತೆಯಿಂದ ಅಮೋಘ ನೃತ್ಯ ಪ್ರದರ್ಶನ ನೀಡಿ ಕಿಕ್ಕಿರಿದು ತುಂಬಿದ್ದ ಸಭಿಕ ಭಕ್ತರ ಮನರಂಜಿಸಿದರು.
ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ , ಶ್ರೀಮಠದ ಸಾಂಸ್ಕೃತಿಕ ಕಾರ್ಯಕ್ರಯಗಳ ಉಸ್ತುವಾರಿಯ ರಮೇಶ್ ಭಟ್, ಸುಗುಣಮಾಲದ ಮಹಿತೋಷ್ ಮೊದಲಾದವರು ಉಪಸ್ಥಿತರಿದ್ದರು.

ಪರಿಚಯ- ಹಿನ್ನೆಲೆ:
ಭಾವನಾ ಗಣೇಶ್ ಮತ್ತು ಶ್ರೀ ಎಂ.ಡಿ. ಗಣೇಶ್ ಭರತನಾಟ್ಯ ನೃತ್ಯ ದಂಪತಿಗಳು. ಪುತ್ರಿ 7 ವರ್ಷದ ಬೇಬಿ ಅಮೂಲ್ಯ ಕೂಡ ನೃತ್ಯಾಭ್ಯಾಸ ಮಾಡುತ್ತಿರುವ ಕಲಾವಿದರ ಕುಟುಂಬ. ಈ ನೃತ್ಯ ದಂಪತಿಗಳು ಅನೇಕ ನೃತ್ಯ ಪ್ರದರ್ಶನಗಳಲ್ಲಿ ಪ್ರಮುಖ ನೃತ್ಯಗಾರರಾಗಿ, ಹಲವು ಹೆಸರಾಂತ ನೃತ್ಯ ತಂಡಗಳಲ್ಲಿ ದೇಶಾದ್ಯಂತ ಆಯೋಜಿಸಲಾದ ಪ್ರತಿಷ್ಠಿತ ವೇದಿಕೆ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.
ಭಾವನಾ ಗಣೇಶ್ ಅವರು ಪ್ರತಿಭಾನ್ವಿತ ಭರತನಾಟ್ಯ ನರ್ತಕಿ, ನೃತ್ಯ ಸಂಯೋಜಕಿ ಹಾಗೂ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಭರತ ನಾಟ್ಯ ಪ್ರದರ್ಶನದ ವೇಳೆ ಸಂಪೂರ್ಣ ತಲ್ಲೀನರಾಗಿ ಶಾಸ್ತ್ರೀಯ ನೃತ್ಯದ ಆಧ್ಯಾತ್ಮಿಕ ಸಾರವನ್ನು ಅನುಭವಿಸುತ್ತ ಪ್ರದರ್ಶನ ನೀಡುವುದು ಇವರ ವಿಶೇಷ ಗುಣವಾಗಿದೆ.

ಪ್ರಸ್ತುತ ಗುರು ಡಾ. ದ್ವಾರಿತ ವಿಶ್ವನಾಥ ಅವರಿಂದ ನೃತ್ಯ ತರಬೇತಿ ಪಡೆಯುತ್ತಿದ್ದಾರೆ. ಗುರು ಶ್ರೀಮತಿ ನಿರುಪಮಾ ರಾಜೇಂದ್ರ ಮತ್ತು ಟಿ.ಡಿ. ರಾಜೇಂದ್ರ ಅವರಿಂದ ವೃತ್ತಿಪರ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಆರಂಭದಲ್ಲಿ ಗುರು ವಿದುಷಿ ಶ್ರೀಮತಿ ಆಶಾ ಹೇಮರಾಜು ಅವರಲ್ಲಿ ತರಬೇತಿ ಪಡೆದಿದ್ದಾರೆ.ಅತ್ಯುತ್ತಮ ಸಂವಹನ ಮತ್ತು ಪರಸ್ಪರ ಕೌಶಲ್ಯಗಳೊಂದಿಗೆ ಬೋಧನೆ ಮತ್ತು ಸಹಯೋಗ, ಭಾರತೀಯ ಸಂಸ್ಕೃತಿ, ಸಂಗೀತ ಮತ್ತು ನೃತ್ಯ-ನಾಟಕ ಸಂಪ್ರದಾಯಗಳ ಆಳವಾದ ಜ್ಞಾನ ಹೊಂದಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ, ಭಾರತಿ ದಾಸನ್ ವಿಶ್ವವಿದ್ಯಾಲಯದಿಂದ ಕಲೈಕಾವೇರಿ ಕಾಲೇಜ್ ಆಫ್ ಫೈನ್ ಆರ್ಟ್ಸ್‌ನಲ್ಲಿ ಭರತನಾಟ್ಯದಲ್ಲಿ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್, KSEEB ಸಂಗೀತ ಮತ್ತು ನೃತ್ಯ ಪರೀಕ್ಷೆಗಳಲ್ಲಿ ಹಿರಿಯ ಶ್ರೇಣಿಯನ್ನು ಪಡೆದಿದ್ದಾರೆ.

Also read: ಯುವಜನತೆಯಲ್ಲಿ ವ್ಯಾಸದಾಸ ಸಾಹಿತ್ಯದ ಅರಿವು ಮೂಡಬೇಕು: ಪೇಜಾವರ ಶ್ರೀಗಳ ಅಭಿಮತ

ಪ್ರಶಸ್ತಿಗಳು ಮತ್ತು ಮನ್ನಣೆ: ಗಾಯನಕ್ಕಾಗಿ ಬಾಲರತ್ನ ಪ್ರಶಸ್ತಿ (10 ನೇ ವಯಸ್ಸಿನಲ್ಲಿ), ನೃತ್ಯ ನಿಪುಣ, ನೃತ್ಯಜ್ಞ ಪ್ರಶಸ್ತಿ, ತಮಿಳುನಾಡಿನ ಮಧುರೈ ಶ್ರೀ ಕಲಾಕೇಂದ್ರದಿಂದ ನಾಟ್ಯ ಗುರು ರತ್ನ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ನೀಡಿದ ಪ್ರದರ್ಶನಗಳು: ಕೇರಳದ ಪೆರಿಂಗೊಟ್ಟುಕರ ದೇವಸ್ಥಾನದಲ್ಲಿ ಏಷ್ಯಾದ 100 ದಿನಗಳ ಸುದೀರ್ಘ ನೃತ್ಯ ಉತ್ಸವ, ತಮಿಳುನಾಡಿನ ಮಧುರೈ ಕಲಾಕೇಂದ್ರ ಆಯೋಜಿಸಿದ ಸ್ಪಾಟ್‌ಲೈಟ್‌ನ 24 ಗಂಟೆಗಳ ವರ್ಲ್ಡ್ ರೆಕಾರ್ಡ್ ಡ್ಯಾನ್ಸ್ ಫೆಸ್ಟಿವಲ್‌ ನಲ್ಲಿ ಭಾಗಿಯಾಗಿದ್ದಾರೆ.ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಅಂತರರಾಷ್ಟ್ರೀಯ ನೃತ್ಯ ಉತ್ಸವ, ಆನೆಗುಂದಿ ಉತ್ಸವ, ಹಂಪಿ ಉತ್ಸವ, ಲಕ್ಕುಂಡಿ ಉತ್ಸವ, ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಅಂತಾರಾಷ್ಟ್ರೀಯ ಜ್ಯೋತಿಷ್ಯ ಸಮ್ಮೇಳನ, ಬೆಂಗಳೂರು, ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಬೆಳಗಾವಿ, ಸಾಧನ ಸಂಗಮ ಟ್ರಸ್ಟ್ ಆಯೋಜಿಸಿದ ಯುಗಲ ನರ್ತನ, ಅಂತಾರಾಷ್ಟ್ರೀಯ ಕ್ರೂಸ್ಡ್ ಡ್ಯಾನ್ಸ್ ಫೆಸ್ಟಿವಲ್ ಮಂಗಳೂರು, ಸಾಮಾಜಿಕ ಸಂಘಟನಾ ವಲಯಗಳಿಂದ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ಬೆಂಗಳೂರು ಇವರಿಂದ ಸಾಯಿ ನೃತ್ಯೋತ್ಸವ, ಜನಪದ ಜಾತ್ರೆ, ಡ್ಯಾನ್ಸ್ ಡ್ರಾಮಾಸ್, ರೂಪಕ ಇನ್ ಸೂರ್ಯ ಆರ್ಟ್ಸ್ ಇಂಟರ್ ನ್ಯಾಷನಲ್ ಬೆಂಗಳೂರು, ಶಿವಲೀಲಾ ನೃತ್ಯ ತಂಡ, ನಾಟ್ಯಾಂಜನ, ದಕ್ಷಿಣ ಭಾರತದಾದ್ಯಂತ ಹಲವಾರು ದೇವಾಲಯಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಎಂ ಡಿ ಗಣೇಶ್:
ಪ್ರತಿಭಾನ್ವಿತ ಭರತನಾಟ್ಯ ಕಲಾವಿದರು, ನೃತ್ಯ ನಿರ್ದೇಶಕ, ಶಿಕ್ಷಕರಾಗಿದ್ದು, ತಮ್ಮದೇ ಶ್ರೀಗಣೇಶ ನೃತ್ಯಾಲಯ ಸಂಗೀತ ಮತ್ತು ನೃತ್ಯ ಶಾಲೆ ನಡೆಸುತ್ತಿದ್ದಾರೆ.
ಗುರು ಡಾ. ದ್ವಾರಿತ ವಿಶ್ವನಾಥ್ ಶಿಷ್ಯರಾಗಿದ್ದು, ಗುರು ಶ್ರೀಮತಿ ನಿರುಪಮಾ ರಾಜೇಂದ್ರ ಮತ್ತು ಶ್ರೀ ಟಿ.ಡಿ.ರಾಜೇಂದ್ರ ಹಾಗೂ ವಿವಿಧ ಹಿರಿಯ ಗುರುಗಳಿಂದ ನೃತ್ಯಾಭ್ಯಾಸ ಮಾಡಿದ್ದಾರೆ. ಕಲಾಕ್ಷಿತಿ – ಲಲಿತಕಲೆಗಳ ಸಂಸ್ಥಾಪಕರಾದ ಗುರು ಡಾ. ಪ್ರೊಫೆಸರ್ ಎಂ.ಆರ್.ಕೃಷ್ಣಮೂರ್ತಿ, ಗುರು ಶ್ರೀಮತಿ ಆಶಾ ಹೇಮರಾಜು ಅವರಿಂದ ಸುಮಾರು 2 ವರ್ಷಗಳ ಕಾಲ ಪ್ರಾಥಮಿಕ ತರಬೇತಿ ಪಡೆದಿದ್ದಾರೆ.

20 ವರ್ಷಗಳಿಗೂ ಹೆಚ್ಚು ಕಾಲ ಭಾರತೀಯ ಶಾಸ್ತ್ರೀಯ ನೃತ್ಯ ಭರತನಾಟ್ಯವನ್ನು ಅಭ್ಯಾಸ ಮಾಡಿದ್ದಾರೆ. ಸಾಂಸ್ಕೃತಿಕ ಕಲಾ ರಂಗಕ್ಕೆ ಕೊಡುಗೆ ನೀಡುವುದನ್ನು ಮುಂದುವರಿಸಲು ಶಾಸ್ತ್ರೀಯ ಭಾರತೀಯ ನೃತ್ಯ ಮತ್ತು ನೃತ್ಯ ಸಂಯೋಜನೆಯಲ್ಲಿ ಕೌಶಲ್ಯಗಳನ್ನು ವೃದ್ಧಿಸಲು ಆಸಕ್ತಿ. ಸಾಂಪ್ರದಾಯಿಕ ಮತ್ತು ಸಮಕಾಲೀನ ನೃತ್ಯ ತುಣುಕುಗಳನ್ನು ಪ್ರತಿನಿಧಿಸುವ ಸ್ಥಳೀಯವಾಗಿ ಮತ್ತು ಅಂತರಾಷ್ಟ್ರೀಯವಾಗಿ 100 ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ವೃತ್ತಿಪರ ಅನುಭವ:ಬಿಜಿಎಸ್ ವರ್ಲ್ಡ್ ಸ್ಕೂಲ್ ನಗರೂರು, ಎನ್‌ಪಿಎಸ್ ಗೊಟ್ಟಿಗೆರೆ, ಕುಮಾರನ್ ಚಿಲ್ಡ್ರನ್ ಹೋಮ್ ಟಿಎಸ್‌ಎಚ್ ಮತ್ತು ಬೆಂಗಳೂರಿನ ದೊಡ್ಡಕಲಸಂದ್ರ ಶಾಖೆಯಂತಹ ಪ್ರತಿಷ್ಠಿತ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಬೆಂಗಳೂರಿನ ಮಾಚೋಹಳ್ಳಿ ಮತ್ತು ರಾಜಾಜಿನಗರ ಶಾಖೆಗಳಲ್ಲಿ ಶ್ರೀ ವಾಣಿ ಶಿಕ್ಷಣ ಕೇಂದ್ರದಲ್ಲಿ ಸುಮಾರು 7 ವರ್ಷ ಸೇವೆ ಸಲ್ಲಿಸಿದ್ದಾರೆ.

ನೃತ್ಯ ಬ್ಯಾಲೆ ಮತ್ತು ಸಹಯೋಗಗಳು: ಕರ್ನಾಟಕ ವೈಭವ ದೇವಿ ವೈಭವ ಗಣೇಶ ವೈಭವ ಮೋಹಿನಿ ಭಸ್ಮಾಸುರ, ಗಿರಿಜಾ ಕಲ್ಯಾಣ ಶ್ರೀನಿವಾಸ ಕಲ್ಯಾಣ ಇತ್ಯಾದಿ ನೃತ್ಯ ನಾಟಕಗಳಲ್ಲಿ ಪ್ರಮುಖ ಪಾತ್ರಗಳು.ಸೂರ್ಯ ಕಲಾವಿದರು ಸೂರ್ಯ ಆರ್ಟ್ಸ್ ಇಂಟರ್‌ನ್ಯಾಶನಲ್, ನಾಟ್ಯಾಂಜನ, ಆಳ್ವಾಸ್ ಮೂಡುಬಿದಿರೆ, ನಾಟ್ಯ ಇನ್‌ಸ್ಟಿಟ್ಯೂಟ್ ಆಫ್ ಕಥಕ್, ಅಭಿನವ ನೃತ್ಯ ಸಂಸ್ಥೆ ಮುಂತಾದ ವಿವಿಧ ತಂಡಗಳೊಂದಿಗೆ ಪ್ರದರ್ಶನ ನೀಡಿದರು.ವಿವಿಧ ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನೃತ್ಯ ಸಂಯೋಜನೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2024/05/Kumadwathi-1.mp4
http://kalpa.news/wp-content/uploads/2024/04/VID-20240426-WA0008.mp4
Tags: Kannada NewsKannada News LiveKannada News OnlineKannada News WebsiteKannada WebsiteLatest New KannadaNews in KannadaNews KannadaShri Sugunendra ThirtharuSpecial Articleವಿಶೇಷ ಲೇಖನಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಯುವಜನತೆಯಲ್ಲಿ ವ್ಯಾಸದಾಸ ಸಾಹಿತ್ಯದ ಅರಿವು ಮೂಡಬೇಕು: ಪೇಜಾವರ ಶ್ರೀಗಳ ಅಭಿಮತ

Next Post

ಕೆ.ಜಿ. ಲಕ್ಷ್ಮಿ ನಾರಾಯಣಪ್ಪ ಅವರಿಗೆ ‘ಕರ್ನಾಟಕ ಭೂಷಣ’ ಪ್ರಶಸ್ತಿ ಪ್ರದಾನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಕೆ.ಜಿ. ಲಕ್ಷ್ಮಿ ನಾರಾಯಣಪ್ಪ ಅವರಿಗೆ ‘ಕರ್ನಾಟಕ ಭೂಷಣ’ ಪ್ರಶಸ್ತಿ ಪ್ರದಾನ

ಕೆ.ಜಿ. ಲಕ್ಷ್ಮಿ ನಾರಾಯಣಪ್ಪ ಅವರಿಗೆ 'ಕರ್ನಾಟಕ ಭೂಷಣ' ಪ್ರಶಸ್ತಿ ಪ್ರದಾನ

Leave a Reply Cancel reply

Your email address will not be published. Required fields are marked *

No Result
View All Result
66% of Indians Face Health & Wellness Scams: McAfee Report Raises Alarm
English Articles

66% of Indians Face Health & Wellness Scams: McAfee Report Raises Alarm

by ಕಲ್ಪ ನ್ಯೂಸ್
June 25, 2026
0

Kalpa Media House  |  New Delhi | A new report by McAfee has revealed a sharp rise in health and...

Read moreDetails
Indian Railway Fine Hike

Jan Vishwas Act 2026: Revised Railway Penalty Rules Likely from July 1

June 23, 2026
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
MODEL DEMOCRACY AT KRCS

Model Democracy At KRCS | Student Council Election Concluded Successfully

June 22, 2026
Naija Hegde’s Inspiring Rise to Success

From Coast to Glory: Naija Hegde’s Inspiring Rise to Success

June 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL