No Result
View All Result
Indian Railway PM Modi to Inaugurate 4 Modern Railway Stations in Karnataka
English Articles

Indian Railway | PM Modi To Launch 4 Stations In Karnataka

by kalpa News
July 16, 2026
0

Kalpa Media House  |  Bengaluru  | Indian Railways continues its transformative journey with a strong focus on modernization and global...

Read moreDetails
SWR to run special trains for Good Friday, Easter rush

Indian Railway | Danapur and Bengaluru Special Trains Extension

July 16, 2026
Shivamogga's Sri Raghavendra Swamy Mutt Becomes First In South India To Receive Three ISO Certifications

Shivamogga | Raghavendra Swamy Mutt Becomes First In South India To Receives 3 ISO Certification

July 16, 2026
Mysore - Shivamogga - Talguppa Train Indian Railway

Indian Railway | Visakhapatnam– Bengaluru–Visakhapatnam Special Train Extension

July 16, 2026
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 16, 2026
  • Advertise With Us
  • Grievances
  • About Us
  • Contact Us
Friday, July 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಬಿ.ವೈ. ವಿಜಯೇಂದ್ರರ ಈ ತಂತ್ರಗಾರಿಕೆ ದೇಶದಲ್ಲೇ ಮೊದಲಿರಬಹುದು | ಆಯನೂರು ಮಂಜುನಾಥ್ ವ್ಯಂಗ್ಯ

kalpa News by kalpa News
September 10, 2024
in ಶಿವಮೊಗ್ಗ
0
ವಿಐಎಸ್’ಎಲ್, ಎಂಪಿಎಂ ಉಳಿಸಲು ಪ್ರಯತ್ನ: ನಾಳೆ ಸಿಎಂ ಜೊತೆ ಕಾರ್ಮಿಕರ ಮಹತ್ವದ ಮಾತುಕತೆ

File Image

Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |

ತಪ್ಪು ಮಾಡಿರುವುದು ರಾಘವೇಂದ್ರ, #B Y Raghavendra ವಿಜಯೇಂದ್ರ. #B Y Vijayendra ನಾನೇಕೆ ಕ್ಷಮೆ ಕೇಳಲಿ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ #Ayanur Manjunath ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ನಾನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ #B S Yadiyurappa ಪುತ್ರರಾದ ಬಿ.ವೈ. ವಿಜಯೇಂದ್ರ ಹಾಗೂ ಬಿ.ವೈ. ರಾಘವೇಂದ್ರ ಅವರ ಹಗರಣಗಳ ಕುರಿತು, ಆಸ್ತಿಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದೆ. ಆದರೆ, ಬಿ.ಎಸ್. ಯಡಿಯೂರಪ್ಪನವರ ಬಗ್ಗೆ ನಾನೇನು ಮಾತನಾಡಿರಲಿಲ್ಲ. ಆದರೂ ಕೂಡ ಇತ್ತೀಚೆಗೆ ಮಾಜಿ ಸಚಿವ ಹರತಾಳು ಹಾಲಪ್ಪ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ರುದ್ರೇಗೌಡರು ಪತ್ರಿಕಾಗೋಷ್ಠಿ ನಡೆಸಿ ನನ್ನ ಬಗ್ಗೆ ಮಾತನಾಡಿ ಯಡಿಯೂರಪ್ಪನವರ ಬಗ್ಗೆ ಮಾತನಾಡಿದ್ದೀರಿ. ಕ್ಷಮೆ ಕೇಳಬೇಕು ಎಂದಿರುವುದನ್ನು ನೋಡಿದರೆ ನಾನು ಮಾಡಿದ ಆರೋಪಗಳ ಬಗ್ಗೆ ಅವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎನಿಸುತ್ತದೆ ಎಂದರು.
ಅಷ್ಟಕ್ಕೂ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ ಅವರಿಗೆ ತೀರ್ಥಹಳ್ಳಿ ರಸ್ತೆಯಲ್ಲಿರುವ ಸುಮಾರು 5.36 ಎಕರೆ ಜಮೀನು ಎಲ್ಲಿಂದ ಬಂತು? ಅದನ್ನು ಯಾರು ತೆಗೆದುಕೊಂಡಿದ್ದರು. ಕೆಐಎಡಿಬಿಗೆ ಏಕೆ ವರ್ಗಾಯಿಸಿದರು. ಅವರದೇ ಜಮೀನನ್ನು ಕೆಐಎಡಿಬಿಗೆ ವರ್ಗಾಯಿಸಿ ಮತ್ತೆ ಅವರಿಂದಲೇ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ತಂತ್ರಗಾರಿಕೆಯನ್ನು ಮೆಚ್ಚಲೇಬೇಕು. ಬಹುಶಃ ಇದು ದೇಶದಲ್ಲೇ ಪ್ರಥಮವಿರಬಹುದು ಎಂದು ವ್ಯಂಗ್ಯವಾಡಿದರು.

Also read: ಚಿಕ್ಕಮಗಳೂರು | ಜಿಲ್ಲಾಸ್ಪತ್ರೆ ವೈದ್ಯರ ಎಳೆದಾಡಿ, ಚಪ್ಪಲಿಯಲ್ಲಿ ಎಸೆದ ಗಾಯಾಳು ಸಂಬಂಧಿ ತಸ್ಲಿಮಾ

ಹಾಗೆ ನೋಡಿದರೆ ಬಿ.ವೈ. ವಿಜಯೇಂದ್ರ ಅವರು ಈ ಜಮೀನನ್ನು ಸ್ಥಳೀಯ ರೈತನಿಂದ ಕೊಂಡುಕೊಂಡಿಲ್ಲ. ದೂರದ ಗದಗದ ಸಂಗಮೇಶ ಪರಪ್ಪ ಗದಗ ಎಂಬುವರಿಂದ ಕೊಂಡುಕೊಂಡಿದ್ದಾರೆ. ಇವರ್ಯಾರು ಎಂದು ನೋಡಿದಾಗ ಈ ಸಂಗಮೇಶ ಪರಪ್ಪ ಅವರು ಬಿ.ವೈ. ರಾಘವೇಂದ್ರ ಅವರ ಪತ್ನಿಯ ಸಹೋದರ ಎಂದು ತಿಳಿದು ಬರುತ್ತದೆ. ಮುಡಾ ಬಗ್ಗೆ ಮಾತನಾಡುವಾಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಪತ್ನಿಯ ಅಣ್ಣ ಎಂದು ಹೇಳುವ ಇವರು ಈಗ ಇದೇ ಘಟನೆಗೆ ಸಂಬಂಧಿಸಿದಂತೆ ಮಾತನಾಡುತ್ತಾರೆ ಎಂದರು.

ಸಂಗಮೇಶ ಪರಪ್ಪ ಅವರಿಂದ ಕೊಂಡುಕೊಂಡ ಜಮೀನನ್ನು ಕೆಐಎಡಿಬಿಗೆ ವರ್ಗಾಯಿಸಿ ನಂತರ ಅವರಿಂದ ಮತ್ತೆ ಇವರೇ ಪಡೆದುಕೊಳ್ಳುತ್ತಾರೆ ಎಂದರೆ ಇದು ಹಗರಣವಲ್ಲದೇ ಮತ್ತೇನೂ ಅಲ್ಲ. ಈ ವಿಷಯದ ಬಗ್ಗೆ ಮಾತನಾಡುವುದನ್ನು ಬಿಟ್ಟು ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿಯ ಮಹಾನುಭಾವರು ನನ್ನನ್ನು ಕ್ಷಮೆ ಕೇಳುವಂತೆ ಒತ್ತಾಯಿಸಿ ತಪ್ಪನ್ನೇ ಮರೆಸುತ್ತಿದ್ದಾರೆ. ಬಿ.ವೈ. ರಾಘವೇಂದ್ರ ಮತ್ತು ಬಿ.ವೈ. ವಿಜಯೇಂದ್ರ ಅವರ ಈ ಹೊಸ ಸೂತ್ರದ ರಹಸ್ಯ ಬಯಲಾಗಬೇಕಾಗಿದೆ ಎಂದರು.

ಈ ಇಬ್ಬರು ಸಹೋದರರ ಆಸ್ತಿಗಳು ಎಲ್ಲೆಲ್ಲಿವೆ ಎಂದು ಗೊತ್ತಾಗುತ್ತಿದೆ. ಬಸವಾಪುರದಲ್ಲಿ 380 ಎಕರೆಯನ್ನು ಯಾರು ತೆಗೆದುಕೊಂಡರು. ಭದ್ರಾವತಿಯ ಜಂಕ್ಷನ್ ಬಳಿ ಇರುವ ಸುಮಾರು 70 ಎಕರೆ ಜಮೀನು ಯಾವ ಟ್ರಸ್ಟ್ ಹೆಸರಿನಲ್ಲಿದೆ. ಶಿಕಾರಿಪುರದಲ್ಲಿ ಅದೆಷ್ಟು ಆಸ್ತಿಗಳಿವೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಬೇನಾಮಿ ಹೆಸರಿನಲ್ಲಿ ಬಹು ಕೋಟಿ ಬೆಲೆಬಾಳುವ ಎಷ್ಟು ಆಸ್ತಿಗಳಿವೆ. ಅವರು ನಿಜಕ್ಕೂ ಬಹುದೊಡ್ಡ ರಾಜವಂಶಕ್ಕೆ ಸೇರಿದವರು. ನಾನೋ ಸಾಮಾನ್ಯ ಮನುಷ್ಯ. ನನ್ನ ಆರೋಪವನ್ನು ರುದ್ರೇಗೌಡರು ಮತ್ತು ಈ ಹಾಲಪ್ಪನವರು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದರು.

http://kalpa.news/wp-content/uploads/2024/04/VID-20240426-WA0008.mp4

ಹರತಾಳು ಹಾಲಪ್ಪ ಅವರಾಗಲಿ, ರುದ್ರೇಗೌಡರಾಗಲಿ ಬಿ.ಎಸ್. ಯಡಿಯೂರಪ್ಪನವರ ಪರವಾಗಿ ಮಾತನಾಡಿದ್ದು ಇದೇ ಮೊದಲಿರಬೇಕು. ರಾಘವೇಂದ್ರ ಅವರನ್ನು ಸಂಸದರನ್ನಾಗಿ ಮಾಡುವ ಸಂದರ್ಭದಲ್ಲಿ ಇದೇ ಯಡಿಯೂರಪ್ಪನವರು ರುದ್ರೇಗೌಡರಿಗೆ ಸೀಟು ಕೊಡುವ ಭರವಸೆ ನೀಡಿ ಸಿಹಿಯನ್ನೂ ಹಂಚಿದ್ದರು. ಮಗನಿಗೆ ಟಿಕೆಟ್ ಕೊಡುವುದಿಲ್ಲ ಎಂದು ಪ್ರಮಾಣ ಮಾಡಿದ್ದರು. ಆದರೆ ಆಗಿದ್ದೇನು? ಬಹುಶಃ ಇದೆಲ್ಲ ರುದ್ರೇಗೌಡರಿಗೆ ಅರ್ಥವಾಗಬೇಕು ಎಂದರು.

ಕಾಲ ಮಿಂಚಿಲ್ಲ, ಈಗಲೂ ಯಡಿಯೂರಪ್ಪನವರ ಬಗ್ಗೆ ನನಗೆ ಗೌರವವಿದೆ. ಅವರು ನನ್ನ ಬೆಳವಣಿಗೆಯಲ್ಲಿದ್ದಾರೆ. ಆದರೆ ಬೇರು ಮಾತ್ರ ನಾನೇ. ಈಗಲಾದರೂ ಕೆಐಎಡಿಬಿಯಿಂದ ಪಡೆದ ಜಮೀನು ಅವರ ಬೇನಾಮಿ ಹೆಸರಿನಲ್ಲಿರುವ ಆಸ್ತಿ, ಟೋಲ್ ಗೇಟ್ ವಿಷಯ ಮತ್ತು ಮುಖ್ಯವಾಗಿ ಪತ್ರಕರ್ತರ ಹೆಸರಿನಲ್ಲಿ ನಕಲಿ ಪತ್ರಕರ್ತರನ್ನು ಸೃಷ್ಠಿಸಿ ನಿವೇಶನ ಪಡೆದು ಅವುಗಳನ್ನು ತಮ್ಮ ಹೆಸರಿಗೆ ಮಾಡಿಕೊಂಡ ಬಗ್ಗೆಯೂ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್.ಎಂ. ಮಂಜುನಾಥಗೌಡ, ಎಸ್.ಟಿ. ಹಾಲಪ್ಪ, ವೈ.ಹೆಚ್. ನಾಗರಾಜ್, ಜಿ.ಡಿ. ಮಂಜುನಾಥ್, ಚಂದ್ರಭೂಪಾಲ್, ಎಸ್.ಕೆ. ಮರಿಯಪ್ಪ, ಧೀರರಾಜ್, ಯು. ಶಿವಾನಂದ್, ರಾಘವೇಂದ್ರ, ಶಿ.ಜು. ಪಾಶಾ, ನಾಗರಾಜ್, ಹನುಮಂತು, ಲೋಕೇಶ್, ಲಕ್ಷ್ಮಣ್ ಮುಂತಾದವರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

Tags: Ayanur ManjunathB S YadiyurappaB Y RaghavendraKannada_NewsKannada_News_LiveKannada_News_Online ShivamoggaKannada_WebsiteKannadaNewsWebsiteLatestNewsKannadaLocalNewsMalnadNewsNews_in_KannadaNews_KannadaShimogaShivamoggaNewsಆಯನೂರು ಮಂಜುನಾಥ್ಬಿ.ಎಸ್. ಯಡಿಯೂರಪ್ಪಮಲೆನಾಡು_ಸುದ್ಧಿರಾಘವೇಂದ್ರವಿಜಯೇಂದ್ರ. B Y Vijayendraಶಿವಮೊಗ್ಗಶಿವಮೊಗ್ಗ_ನ್ಯೂಸ್
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಚಿಕ್ಕಮಗಳೂರು | ಜಿಲ್ಲಾಸ್ಪತ್ರೆ ವೈದ್ಯರ ಎಳೆದಾಡಿ, ಚಪ್ಪಲಿಯಲ್ಲಿ ಎಸೆದ ಗಾಯಾಳು ಸಂಬಂಧಿ ತಸ್ಲಿಮಾ

Next Post

ಶಿವಮೊಗ್ಗ | ಜಿಲ್ಲಾಧಿಕಾರಿಗಳಿಗೆ ಲಾರಿ ಮಾಲೀಕರ ಒಕ್ಕೂಟದ ಮಹತ್ವದ ಆಗ್ರಹವೇನು?

kalpa News

kalpa News

Next Post
ಶಿವಮೊಗ್ಗ | ಜಿಲ್ಲಾಧಿಕಾರಿಗಳಿಗೆ ಲಾರಿ ಮಾಲೀಕರ ಒಕ್ಕೂಟದ ಮಹತ್ವದ ಆಗ್ರಹವೇನು?

ಶಿವಮೊಗ್ಗ | ಜಿಲ್ಲಾಧಿಕಾರಿಗಳಿಗೆ ಲಾರಿ ಮಾಲೀಕರ ಒಕ್ಕೂಟದ ಮಹತ್ವದ ಆಗ್ರಹವೇನು?

Leave a Reply Cancel reply

Your email address will not be published. Required fields are marked *

No Result
View All Result
Indian Railway PM Modi to Inaugurate 4 Modern Railway Stations in Karnataka
English Articles

Indian Railway | PM Modi To Launch 4 Stations In Karnataka

by kalpa News
July 16, 2026
0

Kalpa Media House  |  Bengaluru  | Indian Railways continues its transformative journey with a strong focus on modernization and global...

Read moreDetails
SWR to run special trains for Good Friday, Easter rush

Indian Railway | Danapur and Bengaluru Special Trains Extension

July 16, 2026
Shivamogga's Sri Raghavendra Swamy Mutt Becomes First In South India To Receive Three ISO Certifications

Shivamogga | Raghavendra Swamy Mutt Becomes First In South India To Receives 3 ISO Certification

July 16, 2026
Mysore - Shivamogga - Talguppa Train Indian Railway

Indian Railway | Visakhapatnam– Bengaluru–Visakhapatnam Special Train Extension

July 16, 2026
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL