ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ವಿಶ್ವದಾದ್ಯಂತ ಜನಸಂಖ್ಯೆಯು ಹೆಚ್ಚಾಗುತ್ತಿದ್ದು ಅಂತರ್ಜಲ ಮೂಲಗಳ ಮೇಲೆ ವ್ಯಾಪಕವಾದ ಒತ್ತಡ ಸೃಷ್ಟಿಯಾಗುತ್ತಿದೆ ಎಂದು ಕೇಂದ್ರೀಯ ಅಂತರ್ಜಲ ಮಂಡಳಿಯ ನೈಋತ್ಯ ವಿಭಾಗದ ನಿರ್ದೇಶಕ ಮತ್ತು ವಿಜ್ಞಾನಿ ಎಚ್ ಪಿ ಜಯಪ್ರಕಾಶ್ ಅಭಿಪ್ರಾಯಪಟ್ಟರು.
ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯದಡಿಯ ಕೇಂದ್ರೀಯ ಅಂತರ್ಜಲ ಮಂಡಳಿಯು ಕುವೆಂಪು ವಿವಿಯ ಭೂವಿಜ್ಞಾನ ವಿಭಾಗಗಳು ಜಂಟಿಯಾಗಿ ವಿವಿಯ ಪ್ರೊ. ಎಸ್.ಪಿ.ಹಿರೇಮಠ ಸಭಾಂಗಣದಲ್ಲಿ, “ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣಾ ಅಭ್ಯಾಸಗಳು” ಎಂಬ ವಿಷಯದ ಕುರಿತು ಹಮ್ಮಿಕೊಂಡಿರುವ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಂತರ್ಜಲ ಸಂಪನ್ಮೂಲಗಳ ಮಹತ್ವ, ಬಳಕೆ ಆಗುತ್ತಿರುವ ಪ್ರಮಾಣ, ಮಿತಿಯಲ್ಲಿ ಬಳಕೆ ಮಾಡಬೇಕಿರುವ ಅವಶ್ಯಕತೆಗಳ, ಅದಕ್ಕಿರುವ ಅವಕಾಶಗಳ ಕುರಿತು ವಿಸ್ತೃತವಾಗಿ ಮಾತನಾಡಿದರು.
Also read: ಶಿಕ್ಷಣ ಸಮಾಜದ ಉದ್ಧಾರಕ್ಕೆ ಬಳಕೆಯಾಗಬೇಕೇ ಹೊರತು ಸಮಾಜ ವಿರೋಧಿ ಕೃತ್ಯಗಳಿಗಲ್ಲ
ಕಾರ್ಯಕ್ರಮದಲ್ಲಿ ಸಿಜಿಡಬ್ಲ್ಯೂಬಿ, ಎಸ್ಡಬ್ಲ್ಯೂಆರ್ ವಿಜ್ಞಾನಿ ಎನ್. ನರಸಿಂಹ ನಾಯ್ಡು, ಕುವೆಂಪು ವಿವಿಯ ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಕುಲಸಚಿವ ಎ.ಎಲ್.ಮಂಜುನಾಥ್ , ಪ್ರೊ. ಅಷ್ಫಕ್ ಅಹಮದ್, ವಿಭಾಗದ ಅಧ್ಯಕ್ಷರಾದ ಡಾ. ಗೋವಿಂದರಾಜು ಮಾತನಾಡಿದರು. ಭೂವಿಜ್ಞಾನ ವಿಭಾಗದ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಉದ್ಘಾಟನೆಯ ನಂತರ ತಾಂತ್ರಿಕ ಗೋಷ್ಠಿಗಳು ನಡೆದವು. ಹೈಡ್ರೋಜಿಯಾಲಜಿಯ ಬೇಸಿಕ್ಸ್ ಬಗ್ಗೆ ಎ. ಶಕ್ತಿವೇಲ್, ಭೂವೈಜ್ಞಾನಿಕ ರಚನೆ ಮತ್ತು ಅಂತರ್ಜಲದ ನಿರೀಕ್ಷೆಗಳು ಕುರಿತು ಪ್ರೊ.ಜಿ.ಚಂದ್ರಕಾಂತ, ಅಂತರ್ಜಲ ಪರಿಶೋಧನೆಯಲ್ಲಿ ಜಿಯೋಫಿಸಿಕಲ್ ತಂತ್ರಗಳ ಕುರಿತು ಎನ್. ನರಸಿಂಹ ನಾಯ್ಡು, ಅಂತರ್ಜಲ ದತ್ತಾಂಶ ಪ್ರಸರಣ ಮತ್ತು ಭೂವಿಜ್ಞಾನದಲ್ಲಿ ವೃತ್ತಿ ಅವಕಾಶಗಳ ಕುರಿತು ತೇಜಸ್ ವೈ ಮಂಕಿಕರ್ ಉಪನ್ಯಾಸಗಳನ್ನು ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post