Sunday, July 6, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಆನಂದ ಕಂದ

ಪರಂಪರ ಬೀಜರಕ್ಷಾ

November 21, 2024
in ಆನಂದ ಕಂದ
0 0
0
Share on facebookShare on TwitterWhatsapp
Read - 2 minutes

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-14  |
ಒಂದು ದಟ್ಟವಾದ ಕಾಡು. ಅಲ್ಲಿ ಒಂದು ಹಣ್ಣಿನ ಮರ, ಮುಳ್ಳು ಮರಗಳ ಮಧ್ಯದಲ್ಲಿ ಮರೆಯಾಗಿ ಯಾರಿಗೂ ಕಾಣದ ಹಾಗೆ ಇತ್ತು. ಆದರೆ ಆಶ್ರಯಿಸಿ ಬಂದವರನ್ನು ಎಂದೂ ದೂರ ಮಾಡುತ್ತಿರಲಿಲ್ಲ. ‘ಆದರೆ ಸುತ್ತ ಹಬ್ಬಿದ್ದ ಮುಳ್ಳುಗಳ ಕಾರಣದಿಂದ ಯಾರೂ ಬಳಿ ಬರುತ್ತಿರಲಿಲ್ಲ.

ನಾನು ಹುಟ್ಟಿದ್ದು ಪ್ರಕೃತಿಯಿಂದ ಎಂದರೆ ಅವಳಿಗೆ ಬೇಡವಾಗಿ ಇರುವುದಿಲ್ಲ. ಇಂದಲ್ಲ ನಾಳೆ ನನ್ನನ್ನು ಯಾರಾದರು ಬಳಸುತ್ತಾರೆ ಎಂಬ ನಂಬುಗೆಯಿಂದ ಜೀವನ ನಡೆಸುತ್ತಿತ್ತು.

ಅದು ತನ್ನ ಹಿಂದಿನ ನೆನಪಿಗೆ ಹೋಯಿತು. ಬಿಸಿಲಿನಿಂದ ತಾಪ ಹೆಚ್ಚಾದಾಗ ತನ್ನ ನೆರಳನ್ನು ಆಶ್ರಯಿಸಿ ಬಂದಿದ್ದ, ತನ್ನ ಕೊಂಬೆಯನ್ನು ಆಶ್ರಯಿಸಿ ಅಲ್ಲೇ ಹುಟ್ಟಿ ಬೆಳೆದಿರುವ ಅನೇಕ ಪ್ರಾಣಿ, ಪಕ್ಷಿಗಳು, ಅವುಗಳ ಜೀವನ, ಕಾಡಿನಲ್ಲಿದ್ದ ತನ್ನದೇ ಜಾತಿಯ ಮರಗಳ ನಡುವೆ ನಡೆಯುತ್ತಿದ್ದ ಸಂವಹನ, ನಂತರ ಕಾಡಿನಲ್ಲಿ ಬೇರೆ ಮುಳ್ಳು ಮರಗಳ ಆಗಮನ, ತನ್ನ ಜಾತಿಯ ಮರಗಳ ನಾಶ ಇವೆಲ್ಲವನ್ನು ನೆನೆದು ದುಃಖಿಸಿತು. ತಾನು ಉದುರಿಸಿದ ಬೀಜ ಬೆಳೆಯಲು ಅಸಾಧ್ಯ ಎಂದು ತಿಳಿದರೂ ಅದು ಒಂದಿಷ್ಟು ಬೀಜಗಳನ್ನು ಉದುರಿಸಿತು. ಆ ಮರದಲ್ಲೇ ಹುಟ್ಟಿ-ಬೆಳೆದಿದ್ದ ಒಂದು ಪಕ್ಷಿ ಆ ಮರದ ಬೀಜಗಳ ದುಃಸ್ಥಿತಿಯನ್ನು ಕಂಡು ಮರುಕಪಟ್ಟಿತು. ತಾನು ಆ ಮರದ ಕೊಂಬೆಗಳಲ್ಲಿ ಆಡಿ ಬೆಳೆದಿದ್ದನ್ನು ನೆನಪಿಸಿಕೊಂಡಿತು. ತನಗೆ ಆಶ್ರಯ ಕೊಟ್ಟ ಮರಕ್ಕೆ ನೆರವಾಗಲು ನಿರ್ಧರಿಸಿತು. ತನ್ನ ಎಲ್ಲಾ ಮಿತ್ರ ಪಕ್ಷಿಗಳಿಂದ ಕೂಡಿ ಆ ಬೀಜಗಳನ್ನು ಪಕ್ಕದ ಕಾಡಿಗೆ ಒಯ್ಯಿತು.
ಸೂಕ್ತ ಜಾಗಗಳಲ್ಲಿ ಆ ಮರದ ಬೀಜಗಳನ್ನು ಉದುರಿಸುತ್ತಾ ಬಂದವು. ಪ್ರತಿದಿನ ಅಲ್ಲಿದ್ದ ಒಂದು ಕೆರೆಯಲ್ಲಿ ತಮ್ಮ ತಮ್ಮ ಮೈ ಒದ್ದೆ ಮಾಡಿಕೊಂಡು ತಾವು ಬೀಜಗಳನ್ನು ಉದುರಿಸಿದ್ದ ಜಾಗದಲ್ಲಿ ತಮ್ಮ ಮೈ ಜಾಡಿಸಿಕೊಳ್ಳುತ್ತಿದ್ದವು. ಕಾಲ ಕ್ರಮೇಣ ಆ ಬೀಜಗಳು ಚಿಗುರೊಡೆದವು. ಬೆಳೆದು ಗಿಡದಿಂದ ಮರವಾಗುವವರೆಗೂ ಆ ಪಕ್ಷಿಯ ಸಂಪೂರ್ಣ ಕುಲ ಈ ಮರಗಳಿಗೆ ಸಹಾಯ ಮಾಡುತ್ತಲೇ ಬಂದವು. ಮರಗಳು ಆ ಪಕ್ಷಿಗಳಿಗೆ ಎಂದೂ ಕೃತಜ್ಞವಾಗಿ ಇದ್ದವು. ಅಷ್ಟೇ ಅಲ್ಲದೆ ಆ ಮರಗಳು ಎಲ್ಲರಿಗೂ ತಮ್ಮ ತಮ್ಮ ಹಣ್ಣುಗಳನ್ನು ನೀಡುತ್ತಿದ್ದವು. ಇದರಿಂದ ಆ ಪಕ್ಷಿಗಳು ಬಹಳ ಸಂತೋಷ ಪಟ್ಟವು.

ಇದು ನನಗೆ ಗೋಚರವಾದ ಕಥೆ. ಇದರಲ್ಲಿರುವ ಆ ಮರ ನಮ್ಮ ಪರಂಪರೆ. ಕಲೆಗಳು ಅದರ ಬೀಜ, ಆಧುನಿಕತೆ ಎಂಬ ಮುಳ್ಳಿನ ಮರಗಳಿಂದ ಪರಂಪರೆಯ ಇರುವು ಮರೆತು ಹೋಗುತ್ತಿದೆ. ಪಕ್ಷಿಗಳು ಆ ಮರದ ಬೀಜಗಳನ್ನು ರಕ್ಷಿಸಿದ ಹಾಗೆ ಆ ಕಲೆಗಳನ್ನು ರಕ್ಷಿಸಲು ನಾವೆಲ್ಲರೂ ಸಂಘಟಿತರಾಗಿ ಪ್ರಯತ್ನಿಸಬೇಕು.
ಹರಿ-ಗುರು ಕಾರುಣ್ಯ, ಸಂಸ್ಕೃತಿ, ಸಂಸ್ಕಾರವೆಂಬ ಕೆರೆಯ ನೀರನ್ನು ಒದಗಿಸೋಣ. ಹೇಗೆ ಹಕ್ಕಿಗಳು ಆ ಮರದ ಸಂಕಷ್ಟವನ್ನು ಉಪೇಕ್ಷೆ ಮಾಡಲಿಲ್ಲವೋ, ತಮ್ಮ ಒಗ್ಗಟ್ಟಿನ ಸಮಾನ ಪ್ರಯತ್ನದಿಂದ ಮರ ಬೆಳೆಸಿದವೋ.. ಹಾಗೆಯೇ ನಮ್ಮ ಪರಂಪರೆಯನ್ನು, ಪರಂಪರಾಗತ ಕಲೆಗಳನ್ನು, ನಾವು ಒಗ್ಗಟ್ಟಿನಿಂದ ರಕ್ಷಿಸಬೇಕು, ಕಿತ್ತೊಗೆಯಲಾಗದ ಆಧುನಿಕತೆ ಎಂಬ ಮುಳ್ಳನ್ನು ನಮ್ಮ ಪರಂಪರೆಯೆಂಬ ವೃಕ್ಷಕ್ಕೆ ಸಂರಕ್ಷಣೆಯ ಬೇಲಿಯಂತೆ ಪೂರಕವಾಗಿಸಲು ಪ್ರಯತ್ನಿಸೋಣ. ಅದಕ್ಕಾಗಿ ನಾವೆಲ್ಲಾ ಆ ಹಕ್ಕಿಗಳಂತೆ ಒಗ್ಗೂಡಿ ಕ್ರಿಯಾಶೀಲರಾಗಿ ಸತತವಾಗಿ ಪರಿಶ್ರಮಿಸೋಣ. ಪರಂಪರೆಯ ಬೀಜಗಳನ್ನು ರಕ್ಷಿಸಿ, ಬೆಳೆಸಲು ಪಕ್ಷಿ ಪ್ರಯತ್ನ (ಅವಿರತ ಪ್ರಯತ್ನ) ಮಾಡೋಣ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2024/04/VID-20240426-WA0008.mp4

Kalahamsa Infotech private limited

Tags: AnandakandaBENGALURUKannada News WebsiteLatest News KannadaMagadiPurnapramathi SchoolPurnapramati Gurukulaಆನಂದಕಂದಕಾಡುಕಾರುಣ್ಯಪರಂಪರೆಬೀಜಮರಲೇಖನ ಮಾಲಿಕೆ
Previous Post

ಮಾಜಿ ಗೃಹ ಸಚಿವ ಆರಗ ಜಾನೇಂದ್ರರಿಗೆ ಗ್ಲೋಬಲ್ ಆಚಿವರ್ಸ್ ಪ್ರಶಸ್ತಿ | ನ. 22ರಂದು ಪ್ರದಾನ

Next Post

ಶಿವಮೊಗ್ಗ | ಕರ್ನಾಟಕ ಸಂಘದಲ್ಲಿ ನಾಳೆ-ನಾಡಿದ್ದು ಛಾಯಾಚಿತ್ರ-ನಾಣ್ಯ ಪ್ರದರ್ಶನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಶಿವಮೊಗ್ಗ | ಕರ್ನಾಟಕ ಸಂಘದಲ್ಲಿ ನಾಳೆ-ನಾಡಿದ್ದು ಛಾಯಾಚಿತ್ರ-ನಾಣ್ಯ ಪ್ರದರ್ಶನ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಶಿವಮೊಗ್ಗ | ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಎಎಸ್’ಐ ವಿಧಿವಶ

July 6, 2025

ಶಿವಮೊಗ್ಗ | ಬಂಗಾರಪ್ಪ ಬಡಾವಣೆಯಲ್ಲಿ ಹಿಂದೂ ದೇವರ ವಿಗ್ರಹ ಧ್ವಂಸ ಪ್ರಕರಣ | ಆರೋಪಿ ಅರೆಸ್ಟ್!

July 6, 2025

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

July 5, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಶಿವಮೊಗ್ಗ | ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಎಎಸ್’ಐ ವಿಧಿವಶ

July 6, 2025

ಶಿವಮೊಗ್ಗ | ಬಂಗಾರಪ್ಪ ಬಡಾವಣೆಯಲ್ಲಿ ಹಿಂದೂ ದೇವರ ವಿಗ್ರಹ ಧ್ವಂಸ ಪ್ರಕರಣ | ಆರೋಪಿ ಅರೆಸ್ಟ್!

July 6, 2025

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!