ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಳೆ ಜೈಲು #Old Jail ಜಾಗಕ್ಕೆ “ಅಲ್ಲಮ ಪ್ರಭು ಬಯಲು” ಎಂಬ ನಾಮಫಲಕವನ್ನು ಅಳವಡಿಸಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ನಗರದ ಕೇಂದ್ರ ಭಾಗದಲ್ಲಿರುವ ಹಳೆ ಜೈಲಿನ ಜಾಗವನ್ನು ಸಾರ್ವಜನಿಕ ಬಳಕೆಗಾಗಿ ಅಭಿವೃದ್ಧಿಪಡಿಸುತ್ತಿರುವುದು ಸ್ವಾಗತದ ವಿಚಾರ ಆದರೆ ಈ ಜಾಗಕ್ಕೆ ಈಗಾಗಲೇ ಅಲ್ಲಮಪ್ರಭು ಬಯಲು ಎಂದು ನಾಮಕರಣ ಮಾಡಲು ಸರ್ಕಾರ ನಿರ್ಧರಿಸಿದೆ. ಅಧಿಕೃತ ಆದೇಶವು ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಲ್ಲಿಗೆ ಬಂದಾಗ ಇದನ್ನು ಘೋಷಣೆ ಮಾಡಿದ್ದರೂ ಕೂಡ ಅಧಿಕೃತ ಆದೇಶ ಬಿದ್ದು, ಒಂದು ವರ್ಷವಾದರೂ ಕೂಡ ಅಲ್ಲಮಪ್ರಭು ಹೆಸರಿನ ನಾಮಫಲಕ ಹಾಕಿಲ್ಲ ಎಂದು ಮನವಿದಾರರು ದೂರಿದರು.
Also read: ಶಿವಮೊಗ್ಗ | ಮುರುಳಿ, ಶಶಿರಾಜ್ ಗೆ ಕುವೆಂಪು ವಿವಿ ಪಿಹೆಚ್’ಡಿ ಪ್ರದಾನ
ಹಾಗಾಗಿ ಸರ್ಕಾರದ ಆದೇಶಕ್ಕೆ ಅರ್ಥವಿಲ್ಲದಂತಾಗಿದೆ. ಜನರು ಬೇರೆ ಬೇರೆ ಹೆಸರುಗಳಿಂದ ಈ ಜಾಗವನ್ನು ಕರೆಯುವಂತಾಗಿದೆ. ಇದು ಅಲ್ಲಮಪ್ರಭುಗೆ ಮಾಡಿದ ಅವಮಾನವು ಆಗಿದೆ. ಆದ್ದರಿಂದ ಜಿಲ್ಲಾಡಳಿತ ತಕ್ಷಣ ಈ ಜಾಗಕ್ಕೆ ಅಲ್ಲಮಪ್ರಭು ಹೆಸರಿನ ನಾಮಫಲಕ ಅಳವಡಿಸಬೇಕು. ಇಲ್ಲದಿದ್ದರೆ ಮಹಾಸಭಾದಿಂದಲೇ ನಾಮಫಲಕ ಹಾಕುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಘಟಕದ ಅಧ್ಯಕ್ಷ ರುದ್ರಮುನಿ ಸಜ್ಜನ್, ಪ್ರಮುಖರಾದ ಅನಿತಾ ರವಿಶಂಕರ್, ಸಂತೋಷ್ ಬಳ್ಳಕೆರೆ ಮಲ್ಲಿಕಾರ್ಜುನ್ ಕಾನೂರ್, ಜಿ.ಬೆನಕಪ್ಪ, ಚಂದ್ರಪ್ಪ, ಕೆ.ಆರ್.ಸೋಮನಾಥ್, ಚಂದ್ರಪ್ಪ ಶೆಟ್ಟಿ, ಚಂದ್ರಶೇಖರ್ ಕಲಗಿಹಾಳ್, ಪಾರ್ವತಮ್ಮ, ಸುರೇಖಾ ಪಾಲಾಕ್ಷಪ್ಪ, ಪುಷ್ಪ ಹಾಲಪ್ಪ, ಮೋಹನ್, ಡಿ.ಬಿ.ಚಂದ್ರಕುಮಾರ್, ಎಂ.ಎಸ್.ಸುರೇಶ್ ಮೊದಲಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post