ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೊಲೆ ಪ್ರಕರಣ ಸೇರಿದಂತೆ 12 ಕೇಸುಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ರೌಡಿಶೀಟರ್ನನ್ನು ಬಂಧಿಸಲು ತೆರಳಿದ್ದ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ ಹಿನ್ನೆಲೆ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ಇಂದು ಭದ್ರಾವತಿಯಲ್ಲಿ ನಡೆದಿದೆ.
ಶಾಹಿದ್ ಗಾಯಗೊಂಡ ಆರೋಪಿ. ಈತ ಈ ಹಿಂದೆ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ. ಹಾಗೂ ಕೊಲೆ ಯತ್ನದ ಪ್ರಕರಣದ ಸಂಬಂಧ ಪೊಲೀಸರಿಗೆ ಬೇಕಾಗಿದ್ದ. ಈತನ ಇರುವಿಕೆ ಅರಿತು ಬಂಧಿಸಲು ಪೇಪರ್ ಟೌನ್ ಎಸ್ಚೈ ನಾಗಮ್ಮ ಮತ್ತು ಸಿಬ್ಬಂದಿ ನಾಗರಾಜ ತೆರಳಿದ್ದರು. ಈ ವೇಳೆ ಕಾನಸ್ಟೇಬಲ್ ನಾಗರಾಜ ಮೇಲೆ ದಾಳಿ ನಡೆಸಿ ಎಸ್ ಐಗೂ ಹಲ್ಲೆ ನಡೆಸಲು ಮುಂದಾದಾಗ ಪೊಲೀಸರು ಗುಂಡು ಹಾರಿಸಿದರೆಂದು ಎಸ್ ಪಿ ಮಿಥುನ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post