ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೆಳ್ಳಂಬೆಳಗ್ಗೆ ಆಟೋ ಹಾಗೂ ರಾಪಿಡೋ ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಆಟೋ ಚಾಲಕ ಸಾವು ಕಂಡಿರುವ ಘಟನೆ ವರದಿಯಾಗಿದೆ. ಆಟೋದೊಳಗಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಮೃತ ಆಟೋ ಚಾಲಕನನ್ನು ಮಂಡ್ಲಿಯ ನಿವಾಸಿ ವಾಲ್ವ ಎಂದು ಗುರುತಿಸಲಾಗಿದೆ.
ವಿವರ : ವಿನೋಬನಗರ ಮಾತೃಭೂಮಿ ಆಟೋ ನಿಲ್ದಾಣದ ಬಳಿ ಎಪಿಎಂಸಿ ಹೋಗುವ ಸರ್ಕಲ್ ಬಿಎಸ್ ವೈ ಮನೆ ಬಳಿ ಡಿಕ್ಕಿ ತಪ್ಪಿಸಲು ಆಟೋ ಸಡನ್ ತಿರುಗಿಸಲು ಹೋಗಿ ಡ್ರೈವರ್ ಆಟೋ ಕೆಳಗೆ ಬಿದ್ದು ತಲೆಯ ಮೇಲೆ ಆಟೋ ಬಿದ್ದಿದ್ದರಿಂದ ಸಾವು ಕಂಡಿದ್ದಾರೆ ಎಂದು ಸ್ಥಳೀಯರ ಹೇಳಿಕೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post