ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರತಿ ವರ್ಷ ಆಗಸ್ಟ್ 14ರಂದು ದೇಶದಾದ್ಯಂತ ವಿಭಜನೆಯ ಕರಾಳತೆಯ ಸ್ಮರಣಾ ದಿನವನ್ನು ಆಚರಿಸಲಾಗುತ್ತದೆ. ಇದು ದೇಶ ವಿಭಜನೆಯ ಸಮಯದಲ್ಲಿ ಕೋಟ್ಯಂತರ ಜನರು ಅನುಭವಿಸಿದ ಯಾತನೆ, ನೋವು ಮತ್ತು ವೇದನೆಗಳನ್ನು ನೆನಪಿಸಿಕೊಳ್ಳುವ ದಿನವಾಗಿದ್ದು, ಈ ಕರಾಳ ಇತಿಹಾಸವನ್ನು ಕೆಎಸ್’ಆರ್ ರೈಲು ನಿಲ್ದಾಣದಲ್ಲಿ ಅನಾವರಣಗೊಳಿಸಲಾಯಿತು.
ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ಇಂದು ಕೆಎಸ್’ಆರ್ ಬೆಂಗಳೂರು ರೈಲು ನಿಲ್ದಾಣದ #KSR Bangalore Railway Station ಆವರಣದಲ್ಲಿ ವಿಭಜನೆಯ ಕರಾಳತೆಯ ನೆನಪಿನ ದಿನವನ್ನು ಆಚರಿಸಿತು. ಭಾರತ ವಿಭಜನೆಯ ಸಮಯದಲ್ಲಿ ಯಾತನೆ ಅನುಭವಿಸಿದ ಮತ್ತು ಪ್ರಾಣ ಕಳೆದುಕೊಂಡ ಲಕ್ಷಾಂತರ ಜನರಿಗೆ ಈ ಕಾರ್ಯಕ್ರಮದ ಮೂಲಕ ಗೌರವ ಸಲ್ಲಿಸಲಾಯಿತು.
ಪ್ರತಿ ವರ್ಷ ಆಗಸ್ಟ್ 14ರಂದು ದೇಶದಾದ್ಯಂತ ವಿಭಜನೆಯ ಕರಾಳತೆಯ ಸ್ಮರಣಾ ದಿನವನ್ನು ಆಚರಿಸಲಾಗುತ್ತದೆ. ಇದು ದೇಶ ವಿಭಜನೆಯ ಸಮಯದಲ್ಲಿ ಕೋಟ್ಯಂತರ ಜನರು ಅನುಭವಿಸಿದ ಯಾತನೆ, ನೋವು ಮತ್ತು ವೇದನೆಗಳನ್ನು ನೆನಪಿಸಿಕೊಳ್ಳುವ ದಿನವಾಗಿದೆ. ಇದು ಕಳೆದ ಶತಮಾನದಲ್ಲಿ ಘಟಿಸಿದ ಬಹು ದೊಡ್ಡ ಪ್ರಮಾಣದ ಮಾನವ ಸ್ಥಳಾಂತರ ಮತ್ತು ಅದರಿಂದ ಉಂಟಾದ ಅಪಾರ ಸಾವು-ನೋವುಗಳ ಬಗ್ಗೆ ನೆನಪಿಸುತ್ತದೆ.
ವಿಭಜನೆಯ ಕರಾಳತೆಯ ಸ್ಮರಣಾರ್ಥ ದಿನವು ಸಾಮಾಜಿಕ ವಿಭಜನೆಗಳು, ಅಸಾಮರಸ್ಯಗಳೆಂಬ ವಿಷವನ್ನು ತೊಡೆದುಹಾಕುವ ಮತ್ತು ಏಕತೆ, ಸಾಮಾಜಿಕ ಸಾಮರಸ್ಯ ಮತ್ತು ಮಾನವ ಸಬಲೀಕರಣದ ಮನೋಭಾವವನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ನಮಗೆ ನೆನಪಿಸುತ್ತದೆ.
ಯಶವಂತಪುರ, ಎಸ್’ಎಂವಿಟಿ ಬೆಂಗಳೂರು, ವೈಟ್’ಫೀಲ್ಡ್, ತುಮಕೂರು, ಕೆಂಗೇರಿ, ಬಂಗಾರಪೇಟೆ, ಮಂಡ್ಯ, ಕುಣಿಗಲ್, ಶ್ರವಣಬೆಳಗೊಳ, ಯಲಹಂಕ, ಹಿಂದೂಪುರ, ಹೊಸೂರು ಮತ್ತು ಧರ್ಮಪುರಿ ನಿಲ್ದಾಣಗಳಲ್ಲಿಯೂ ಸಹ ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಸಿಬ್ಬಂದಿಗಳು ದೇಶಭಕ್ತಿ ಗೀತೆಗಳನ್ನು ಹಾಡಿದರು. ನಂತರ ವಿಶೇಷ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ವಿಭಜನೆಯ ಸಮಯದಲ್ಲಿ ಜನರು ಎದುರಿಸಿದ ಅಪಾರ ಕಷ್ಟಗಳು ಮತ್ತು ಭೀಕರತೆಗಳ ಚಿತ್ರಣವನ್ನು ಛಾಯಾಚಿತ್ರ ಪ್ರದರ್ಶನವು ತಿಳಿಸಿಕೊಟ್ಟಿತು.
ಈ ಕಾರ್ಯಕ್ರಮದಲ್ಲಿ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಆಶುತೋಷ್ ಕುಮಾರ್ ಸಿಂಗ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಪರೀಕ್ಷಿತ್ ಮೋಹನ್ಪುರಿಯಾ, ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ವೆಂಕಟೇಶ ನಾಯಕ್, ವಿಭಾಗೀಯ ಪರಿಚಾಲನಾ ವ್ಯವಸ್ಥಾಪಕರಾದ ರಂಗನಾಥ ರೆಡ್ಡಿ, ಇತರ ರೈಲ್ವೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಪ್ರಯಾಣಿಕರು ಭಾಗವಹಿಸಿದ್ದರು.
ಛಾಯಾಚಿತ್ರ ಪ್ರದರ್ಶನಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















