Thursday, November 27, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ರಾಷ್ಟ್ರೀಯ

ಇದು ವಿಶ್ವದಲ್ಲೇ ಪ್ರಥಮ | ನಾರಾಯಣ ಹೆಲ್ತ್’ನಿಂದ ಅತ್ಯಂತ ಕ್ಲಿಷ್ಟಕರ ಸರ್ಜರಿ ಯಶಸ್ವಿ

ತಂದೆಯಿಂದಲೇ ಮಗನಿಗೆ ಮೂತ್ರಪಿಂಡ ದಾನ | ಇಂತಹ ಸರ್ಜರಿಯಲ್ಲಿ ಇತಿಹಾಸ ಬರೆದ ನಾರಾಯಣ ಆರ್‌ಎನ್ ಟಾಗೋರ್ ಹಾಸ್ಪಿಟಲ್

November 27, 2025
in ರಾಷ್ಟ್ರೀಯ
0 0
0
Share on facebookShare on TwitterWhatsapp
Read - 3 minutes

ಅತ್ಯಂತ ಅಪರೂಪದ ‘ಸಿವಿಯರ್ ಫ್ಯಾಕ್ಟರ್ VII ಡಿಫಿಷಿಯೆನ್ಸಿ’ ಹೊಂದಿರುವ ರೋಗಿಗೆ ವಿಶ್ವದಲ್ಲೇ ಮೊದಲ ಬಾರಿಗೆ ಯಶಸ್ವಿಯಾಗಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನಡೆಸಿದ ಮುಕುಂದಪುರದ ನಾರಾಯಣ ಆರ್‌ಎನ್ ಟಾಗೋರ್ ಹಾಸ್ಪಿಟಲ್. ತಂದೆ, ಮಗ ಇಬ್ಬರೂ ಒಂದೇ ಅಪರೂಪದ ಆನುವಂಶಿಕ ತೊಂದರೆ ಹೊಂದಿದ್ದರೂ ತಂದೆಯೇ ತನ್ನ ಮಗನಿಗೆ ಮೂತ್ರಪಿಂಡ ದಾನ ಮಾಡಿದ್ದು, ನಿಜಕ್ಕೂ ಇದೊಂದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದೆ. ವಿಶ್ವದಲ್ಲೇ ಈ ರೀತಿಯ ಮೊದಲ ಶಸ್ತ್ರಚಿಕಿತ್ಸೆಯಾಗಿದೆ.

ಕಲ್ಪ ಮೀಡಿಯಾ ಹೌಸ್  |  ಕೋಲ್ಕತ್ತಾ  |

ಮುಕುಂದಪುರ ನಾರಾಯಣ ಆರ್‌ಎನ್ ಟಾಗೋರ್ ಹಾಸ್ಪಿಟಲ್ ನ ವೈದ್ಯರ ತಂಡವು ಅತ್ಯಂತ ಅಪರೂಪದ ಆನುವಂಶಿಕ ರಕ್ತಸ್ರಾವ ರೋಗವಾದ ‘ಸಿವಿಯರ್ ಫ್ಯಾಕ್ಟರ್ VII ಡಿಫಿಷಿಯೆನ್ಸಿ’ ಇದ್ದ ಭೂತಾನ್‌ನ ಯುವಕನೊಬ್ಬನಿಗೆ ಯಶಸ್ವಿಯಾಗಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನಡೆಸಿ ದಾಖಲೆ ಮಾಡಿದೆ. ಇದೊಂದು ವಿಶ್ವದಲ್ಲೇ ಮೊದಲ ಬಾರಿಗೆ ನಡೆದ ಅತ್ಯಂತ ಅಪರೂಪದ ಶಸ್ತ್ರಚಿಕಿತ್ಸೆಯಾಗಿದೆ.

ಜಗತ್ತಿನಲ್ಲಿ ಕೇವಲ 50 ಲಕ್ಷ ಜನರಲ್ಲಿ ಒಬ್ಬರಿಗೆ ಮಾತ್ರ ಕಾಣಿಸುವ ಅತ್ಯಂತ ವಿರಳ ಸಮಸ್ಯೆಯಿಂದ ಆ ಯುವಕ ಬಳಲುತ್ತಿದ್ದ. ಇದುವರೆಗೆ ಜಗತ್ತಿನಲ್ಲಿ ಯಾವುದೇ ಆಸ್ಪತ್ರೆಯಲ್ಲಿ ಇಂತಹ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರಲಿಲ್ಲ. ಆದರೆ ನಾರಾಯಣ ಹೆಲ್ತ್ #NarayanaHealth ಸಂಸ್ಥೆ ಈ ಮಹಾ ಸಾಧನೆ ಮಾಡಿ ತೋರಿಸಿದ್ದು, ಸಂಕೀರ್ಣ ಮತ್ತು ಅಪಾಯಕಾರಿ ಪ್ರಕರಣಗಳನ್ನು ನಿರ್ವಹಿಸುವಲ್ಲಿ ತಾನು ವಿಶ್ವಮಟ್ಟದ ಪರಿಣತಿ ಹೊಂದಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ರೋಗಿಗೆ ತಂದೆಯ ಹೊರತು ಬೇರೆ ಯಾರೂ ದಾನಿ ಆಗಲು ಸಾಧ್ಯವಿರಲಿಲ್ಲ. ಆದರೆ ತಂದೆಯೂ ಇದೇ ಅಪರೂಪದ ಆನುವಂಶಿಕ ತೊಂದರೆ ಹೊಂದಿದ್ದರು. ಇದರಿಂದ ಈ ಪ್ರಕರಣವು ವೈದ್ಯಕೀಯವಾಗಿ ಮತ್ತು ನೈತಿಕವಾಗಿ ಅತ್ಯಂತ ಸಂಕೀರ್ಣವಾಗಿತ್ತು ಮತ್ತು ಸವಾಲಿನದಾಗಿತ್ತು.

ಬಹುವಿಭಾಗೀಯ ತಂಡದ ದೀರ್ಘ ಚರ್ಚೆ, ಅಪಾಯ ಮೌಲ್ಯಮಾಪನದ ನಂತರ ಅತ್ಯಂತ ನಿಖರತೆಯೊಂದಿಗೆ ಈ ಅಪರೂಪದ #Surgery ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ದಾನಿ ಮತ್ತು ಸ್ವೀಕರಿಸುವವರು ಇಬ್ಬರೂ ಒಂದೇ ಆನುವಂಶಿಕ ತೊಂದರೆ ಹೊಂದಿದ್ದು ನಡೆದ ಜಗತ್ತಿನ ಮೊದಲ ಮೂತ್ರಪಿಂಡ ಕಸಿ #KidneyTransplant ಶಸ್ತ್ರಚಿಕಿತ್ಸೆ ಎಂಬ ಗೌರವಕ್ಕೆ ಈ ಪ್ರಕರಣವು ಪಾತ್ರವಾಗಿದೆ. ವಿಶೇಷವಾಗಿ ವೈದ್ಯಕೀಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸಾಧನೆ ಎಂಬ ದಾಖಲೆ ಬರೆದಿದೆ.
ಈ ಪ್ರಕರಣದ ಸಂಕೀರ್ಣತೆಯ ಕುರಿತು ಮಾತನಾಡಿದ ಮುಕುಂದಪುರದ ನಾರಾಯಣ ಆರ್‌ಎನ್ ಟಾಗೋರ್ ಹಾಸ್ಪಿಟಲ್ ನ ಕನ್ಸಲ್ಟೆಂಟ್ ಮತ್ತು ಚೀಫ್ ನೆಫ್ರಾಲಜಿಸ್ಟ್ (ಮೂತ್ರಪಿಂಡ ಕಸಿ ಯೋಜನೆ) ಡಾ. ದೀಪಕ್ ಶಂಕರ್ ರೇ ಅವರು, “ಈ ಪ್ರಕರಣವು ನಮ್ಮ ವೈದ್ಯಕೀಯ ಸಮನ್ವಯತೆ ಮತ್ತು ಶಸ್ತ್ರಚಿಕಿತ್ಸಾ ಸಾಮರ್ಥ್ಯವನ್ನು ನಿಜವಾಗಿಯೂ ಪರೀಕ್ಷಿಸಿತು. ಚಿಕ್ಕ ರಕ್ತಸ್ರಾವದಿಂದಲೂ ಮರಣ ಹೊಂದಬಹುದಾಗಿದ್ದ ರೋಗಿಗೆ ನಾವು ಮೂತ್ರಪಿಂಡ ಕಸಿ ಮಾಡಬೇಕಾಗಿತ್ತು. ಅರಿವಳಿಕೆಯಿಂದ ಹಿಡಿದು ಹೊಲಿಗೆಯವರೆಗೆ ಪ್ರತಿ ಹಂತವೂ ಬಹಳ ಎಚ್ಚರಿಕೆಯಿಂದ ಮತ್ತು ಬಹಳ ಸಮನ್ವಯತೆಯಿಂದ ನಡೆಯಬೇಕಾಗಿತ್ತು. ಈ ಯಶಸ್ಸು ನಮ್ಮ ಟೀಮ್ ವರ್ಕ್ ಗೆ ಸಿಕ್ಕ ಗೆಲುವಾಗಿದ್ದು, ಅತ್ಯಂತ ಸೂಕ್ಷ್ಮ ಯೋಜನೆ ಮತ್ತು ಕುಟುಂಬದ ಅಚಲ ನಂಬಿಕೆಯ ಫಲಿತಾಂಶವಾಗಿದೆ. ಅತ್ಯಮೂಲ್ಯ ನೆರವನ್ನು ಒದಗಿಸಿ ಈ ಯುವಕನನ್ನು ಬದುಕಿಸಲು ಕಾರಣವಾದ, ಈ ಪ್ರಕರಣದ ಯಶಸ್ಸಿಗೆ ಬಹುಮುಖ್ಯ ಕಾರಣರಾದ ನಮ್ಮ ಬಹುವಿಭಾಗೀಯ ತಂಡದ ವೈದ್ಯರ ಅಪಾರ ಜ್ಞಾನ ಮತ್ತು ಪರಿಶ್ರಮಕ್ಕೆ ನಾವು ಕೃತಜ್ಞರಾಗಿದ್ದೇವೆ. ವಿಶೇಷವಾಗಿ ಶಸ್ತ್ರಚಿಕಿತ್ಸಾ ತಂಡದ ಡಾ. ತರ್ಷಿದ್ ಅಲಿ ಜಹಾಂಗೀರ್ ಮತ್ತು ಅರಿವಳಿಕೆ ತಂಡದ ಡಾ. ತಿತಿಸಾ ಸರ್ಕಾರ್ ಮಿತ್ರಾ ಅವರ ಕೊಡುಗೆಯನ್ನು ಗೌರವಪೂರ್ವಕವಾಗಿ ಸ್ಮರಿಸುತ್ತಿದ್ದೇವೆ” ಎಂದು ಹೇಳಿದರು.

ಈ ಅಪರೂಪದ ರಕ್ತಸ್ರಾವ ತೊಂದರೆಯ ಕುರಿತು ಮಾತನಾಡಿದ ಮುಕುಂದಪುರ ನಾರಾಯಣ ಆರ್‌ಎನ್ ಟಾಗೋರ್ ಹಾಸ್ಪಿಟಲ್ ನ ಹೆಮಟಾಲಜಿ ವಿಭಾಗದ ಕನ್ಸಲ್ಟೆಂಟ್ ಡಾ. ಶಿಶಿರ್ ಕುಮಾರ್ ಪಾತ್ರ ಅವರು, “ಸಿವಿಯರ್ ಫ್ಯಾಕ್ಟರ್ VII ಡಿಫಿಷಿಯೆನ್ಸಿ ಎಷ್ಟು ಅಪರೂಪ ಎಂದರೆ ಜಗತ್ತಿನಲ್ಲಿ ಸುಮಾರು 50 ಲಕ್ಷ ಜನರಲ್ಲಿ ಒಬ್ಬರಿಗೆ ಮಾತ್ರ ಬರುತ್ತದೆ. ಇಂತಹ ಪ್ರಕರಣ ನಿರ್ವಹಣೆ ಅತ್ಯಂತ ಸೂಕ್ಷ್ಮವಾಗಿದೆ. ಫ್ಯಾಕ್ಟರ್ VII ಕಡಿಮೆಯಾದರೆ ಅತಿಯಾದ ರಕ್ತಸ್ರಾವ ಉಂಟಾಗಬಹುದು, ಮತ್ತೂ ಕಡಿಮೆಯಾದರೆ ಅಪಾಯಕಾರಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗಬುದು. ನಾವು ನಿಮಿಷ ನಿಮಿಷಕ್ಕೂ ಅತ್ಯಂತ ಸಣ್ಣ ವಿಚಾರದಲ್ಲಿಯೂ ಸುರಕ್ಷತೆ ನೋಡಿಕೊಳ್ಳಬೇಕಿತ್ತು. ಈಗ ರೋಗಿ ಮತ್ತು ಅವರ ತಂದೆ ಇಬ್ಬರೂ ಚೆನ್ನಾಗಿರುವುದು ನೋಡಿ ತುಂಬಾ ಸಂತೋಷವಾಗುತ್ತಿದೆ” ಎಂದು ಹೇಳಿದರು.

ಶಸ್ತ್ರಚಿಕಿತ್ಸೆಯ ನಂತರವೂ ಬಹಳಷ್ಟು ಸವಾಲುಗಳಿದ್ದುವು. ರೋಗಿಗೆ ಸಣ್ಣ ರಕ್ತ ಹೆಪ್ಪುಗಟ್ಟುವಿಕೆಯಿಂದ ತಾತ್ಕಾಲಿಕ ಪಾರ್ಶ್ವವಾಯು ಬಂದಿತ್ತು. ಆದರೆ ನೆಫ್ರಾಲಜಿ, ನ್ಯೂರಾಲಜಿ ಮತ್ತು ಹೆಮಟಾಲಜಿ ತಂಡಗಳ ಸಂಯುಕ್ತ ಆರೈಕೆಯಲ್ಲಿ ರೋಗಿ ಪೂರ್ಣ ಚೇತರಿಕೆ ಕಂಡಿದ್ದಾರೆ. ಈಗ ಅವರ ಕ್ರಿಯೇಟಿನಿನ್ ಮಟ್ಟ ಸ್ಥಿರವಾಗಿದೆ ಮತ್ತು ಅವರು ಆರೋಗ್ಯಕರವಾಗಿ ಬದುಕುತ್ತಿದ್ದಾರೆ.
-ಡಾ. ಶಿಶಿರ್ ಕುಮಾರ್ ಪಾತ್ರ

ಈ ಸಂದರ್ಭದಲ್ಲಿ ತಮ್ಮ ತಂಡದ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ನಾರಾಯಣ ಹೆಲ್ತ್ ಈಸ್ಟ್ ನ ಕೋಲ್ಕತ್ತಾ ಮತ್ತು ಕಾರ್ಪೊರೇಟ್ ಗ್ರೋತ್ ಇನಿಶಿಯೇಟಿವ್ ನ ನಿರ್ದೇಶಕ ಮತ್ತು ಕ್ಲಸ್ಟರ್ ಹೆಡ್ ಶ್ರೀ ಅಭಿಜಿತ್ ಸಿ.ಪಿ. ಅವರು, “ನಮ್ಮ ವೈದ್ಯರು ಕೇವಲ ಅಪರೂಪದ ಶಸ್ತ್ರಚಿಕಿತ್ಸೆ ಮಾತ್ರವೇ ಮಾಡಿಲ್ಲ, ಅತ್ಯಂತ ಅಪರೂಪದ ಮತ್ತು ತೀವ್ರತರವಾದ ಪ್ರಕರಣವನ್ನು ಯಶಸ್ವಿಗೊಳಿಸಿದ್ದಾರೆ. ಒಬ್ಬ ಯುವಕನಿಗೆ ಹೊಸ ಜೀವ ದಾನ ಮಾಡುವ ಜೊತೆಗೆ ರೋಗಿಯ ತಂದೆಯೂ ಸುರಕ್ಷಿತವಾಗಿ ಇರುವಂತೆ ನೋಡಿಕೊಂಡಿದ್ದಾರೆ. ಇಂತಹ ಸಾಧನೆಗಳು ವಿಶ್ವದ ಅತ್ಯುನ್ನತ ವೈದ್ಯಕೀಯ ಸೇವೆ ಹೊಂದಿರುವ ಪ್ರದೇಶಗಳ ಪಟ್ಟಿಯಲ್ಲಿ ಪೂರ್ವ ಭಾರತವನ್ನು ನೆಲೆಗೊಳಿಸುತ್ತದೆ” ಎಂದು ಹೇಳಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ನಾರಾಯಣ ಹೆಲ್ತ್ ನ ಗ್ರೂಪ್ ಸಿಓಓ ಶ್ರೀ ಆರ್. ವೆಂಕಟೇಶ್ ಅವರು, “ಅತ್ಯುನ್ನತ ನೈತಿಕ ಮಾನದಂಡಗಳನ್ನು ಕಾಪಾಡಿಕೊಳ್ಳುತ್ತಾ ವೈದ್ಯಕೀಯ ಸಾಮರ್ಥ್ಯದ ಗಡಿಯನ್ನು ಮೀರುವುದರ ಮೇಲೆ ನಾರಾಯಣ ಹೆಲ್ತ್‌ ನಂಬಿಕೆ ಇಟ್ಟಿದೆ. ಈ ಯಶಸ್ವಿ ಕಸಿ ಶಸ್ತ್ರಚಿಕಿತ್ಸೆಯು ನಮ್ಮ ಬಹುವಿಭಾಗೀಯ ಸಹಯೋಗ, ಅಂತಾರಾಷ್ಟ್ರೀಯ ಮಟ್ಟದ ಅತ್ಯುನ್ನತ ಪದ್ಧತಿಗಳು ಮತ್ತು ಅದ್ಭುತವಾದ ಚಿಕಿತ್ಸಾ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ನಮ್ಮ ತಂಡದ ಬಗ್ಗೆ ನಮಗೆ ಹೆಮ್ಮೆ ಇದೆ ಮತ್ತು ನಮ್ಮ ಮೇಲೆ ನಂಬಿಕೆ ಇಟ್ಟ ಕುಟುಂಬಕ್ಕೆ ಕೃತಜ್ಞತೆ” ಎಂದು ಹೇಳಿದರು.

ಈ ಪ್ರಕರಣವು ಈಗಾಗಲೇ ಭಾರತ ಮತ್ತು ವಿದೇಶಗಳ ವೈದ್ಯಕೀಯ ತಜ್ಞರ ಗಮನ ಸೆಳೆದಿರುವುದು ವಿಶೇಷವಾಗಿದೆ. ನಾರಾಯಣ ಆರ್‌ಎನ್ ಟಾಗೋರ್ ಹಾಸ್ಪಿಟಲ್, ಮುಕುಂದಪುರ, ಕೋಲ್ಕತ್ತಾ ಕುರಿತು ಕೋಲ್ಕತ್ತಾದ ಪೂರ್ವ ಮೆಟ್ರೋಪಾಲಿಟನ್ ಬೈಪಾಸ್‌ನ ಮುಕುಂದಪುರದಲ್ಲಿರುವ 681 ಹಾಸಿಗೆಗಳ ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಜೆಸಿಐ ಮತ್ತು ಎನ್.ಎ.ಬಿ.ಎಚ್ ಮಾನ್ಯತೆ ಪಡೆದಿದೆ. ಹೃದಯ ವಿಜ್ಞಾನ (ಹೃದಯ ಕಸಿ ಸಹಿತ), ಮೂತ್ರಪಿಂಡ ವಿಜ್ಞಾನ (ಮೂತ್ರಪಿಂಡ ಕಸಿ ಸಹಿತ), ಜೀರ್ಣಾಂಗ ವಿಜ್ಞಾನ (ಯಕೃತ್ತು ಕಸಿ ಸಹಿತ), ನರವಿಜ್ಞಾನ, ಸಮಗ್ರ ಕ್ಯಾನ್ಸರ್ ಆರೈಕೆ, ಆರ್ಥೋಪೆಡಿಕ್ಸ್ ಮತ್ತು ಇತರ ವಿಶೇಷತೆಗಳಲ್ಲಿ ಪೂರ್ವ ಭಾರತದ ಅತ್ಯಂತ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2025/09/Vedic-Maths-New.mp4
http://kalpa.news/wp-content/uploads/2024/04/VID-20240426-WA0008.mp4

Tags: Health NewsKannada News WebsiteKidneyKolkataLatest News KannadaNarayana HealthSevere Factor VII Deficiencyಕೋಲ್ಕತ್ತಾನಾರಾಯಣ ಆರ್‌ಎನ್ ಟಾಗೋರ್ ಹಾಸ್ಪಿಟಲ್ನಾರಾಯಣ ಹೆಲ್ತ್ಮುಕುಂದಪುರಮೂತ್ರಪಿಂಡಮೂತ್ರಪಿಂಡ ಕಸಿಶಸ್ತ್ರಚಿಕಿತ್ಸೆಸಿವಿಯರ್ ಫ್ಯಾಕ್ಟರ್ VII ಡಿಫಿಷಿಯೆನ್ಸಿ
Previous Post

ಉಡುಪಿ | ಪ್ರಧಾನಿಯವರ ಕಾರ್ಯಕ್ರಮಕ್ಕೆ ಹೋಗ್ತೀರಾ? ಹಾಗಾದ್ರೆ ಜಿಲ್ಲಾಡಳಿತದ ಎಚ್ಚರಿಕೆ ಪಾಲಿಸಿ

Next Post

ಮೈಸೂರು-ಅಜ್ಮೀರ್, ಸಂತ್ರಾಗಾಚಿ-ಯಲಹಂಕ ಸ್ಪೆಷಲ್ ರೈಲು ಸೇವೆ ವಿಸ್ತರಣೆ | ಎಲ್ಲಿಯವರೆಗೂ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಮೈಸೂರು-ಅಜ್ಮೀರ್, ಸಂತ್ರಾಗಾಚಿ-ಯಲಹಂಕ ಸ್ಪೆಷಲ್ ರೈಲು ಸೇವೆ ವಿಸ್ತರಣೆ | ಎಲ್ಲಿಯವರೆಗೂ?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಉಡುಪಿ ಭೇಟಿಗೂ ಮುನ್ನಾ ದಿನ ಪ್ರಧಾನಿ ಮೋದಿ ಕನ್ನಡದಲ್ಲಿ ಎಕ್ಸ್’ನಲ್ಲಿ ಹೇಳಿದ್ದೇನು?

November 27, 2025

ಮೈಸೂರು-ಅಜ್ಮೀರ್, ಸಂತ್ರಾಗಾಚಿ-ಯಲಹಂಕ ಸ್ಪೆಷಲ್ ರೈಲು ಸೇವೆ ವಿಸ್ತರಣೆ | ಎಲ್ಲಿಯವರೆಗೂ?

November 27, 2025

ಇದು ವಿಶ್ವದಲ್ಲೇ ಪ್ರಥಮ | ನಾರಾಯಣ ಹೆಲ್ತ್’ನಿಂದ ಅತ್ಯಂತ ಕ್ಲಿಷ್ಟಕರ ಸರ್ಜರಿ ಯಶಸ್ವಿ

November 27, 2025
File Image

ಉಡುಪಿ | ಪ್ರಧಾನಿಯವರ ಕಾರ್ಯಕ್ರಮಕ್ಕೆ ಹೋಗ್ತೀರಾ? ಹಾಗಾದ್ರೆ ಜಿಲ್ಲಾಡಳಿತದ ಎಚ್ಚರಿಕೆ ಪಾಲಿಸಿ

November 27, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಉಡುಪಿ ಭೇಟಿಗೂ ಮುನ್ನಾ ದಿನ ಪ್ರಧಾನಿ ಮೋದಿ ಕನ್ನಡದಲ್ಲಿ ಎಕ್ಸ್’ನಲ್ಲಿ ಹೇಳಿದ್ದೇನು?

November 27, 2025

ಮೈಸೂರು-ಅಜ್ಮೀರ್, ಸಂತ್ರಾಗಾಚಿ-ಯಲಹಂಕ ಸ್ಪೆಷಲ್ ರೈಲು ಸೇವೆ ವಿಸ್ತರಣೆ | ಎಲ್ಲಿಯವರೆಗೂ?

November 27, 2025

ಇದು ವಿಶ್ವದಲ್ಲೇ ಪ್ರಥಮ | ನಾರಾಯಣ ಹೆಲ್ತ್’ನಿಂದ ಅತ್ಯಂತ ಕ್ಲಿಷ್ಟಕರ ಸರ್ಜರಿ ಯಶಸ್ವಿ

November 27, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!