ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಾಟ್ಯೇಶ್ವರ ನೃತ್ಯ ಶಾಲೆಯ ಗುರುಗಳಾದ ಕಲಾಯೋಗಿ ಕೆ.ಪಿ. ಸತೀಶಬಾಬು ಹಾಗೂ ವಾಣಿ ಸತೀಶಬಾಬು ಅವರು ನಾಟ್ಯೇಶ್ವರ ನೃತ್ಯ-ಸಂಗೀತ ಉತ್ಸವ-2025 ಎಂಬ ಎರಡು ದಿನಗಳ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.
ಮಲ್ಲೇಶ್ವರದ ಲಿಂಕ್ ರಸ್ತೆಯಲ್ಲಿರುವ ಕೇಶವ ಕಲ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಈ ಎರಡು ದಿನಗಳ ಕಾರ್ಯಕ್ರಮ ಕಲಾರಸಿಕರ ಮನಸೂರೆಗೊಂಡಿತು.

ಎರಡನೆ ತಂಡ ರಾಗಿಣಿ ಸಂಗೀತ ನೃತ್ಯಾಲಯದ ಗುರು ವಿದುಷಿ ರಂಜಿನಿ ಉಮೇಶ್ ವಿದ್ಯಾರ್ಥಿ ವೃಂದದವರು ಭರತನಾಟ್ಯ ಕಾರ್ಯಕ್ರಮ ನೀಡಿದರು.
ಕೊನೆಯ ತಂಡ ಸಪ್ತಸ್ವರ ನೃತ್ಯಾಲಯ ಕಲ್ಚರಲ್ ಆರ್ಟ್ ಸೆಂಟರ್ ಗುರು ವಿದುಷಿ ಮಂಜುಳ ಜಗದೀಶ್ ವಿದ್ಯಾರ್ಥಿ ವೃಂದದವರು ಅದ್ಭುತ ಭರತನಾಟ್ಯ ಪ್ರಸ್ತುತ ಪಡಿಸಿದರು. ರೋಟರಿ ಸಂಸ್ಥೆಯ ಇಂದಿರಾನಗರ ವತಿಯಿಂದ ಸೌಮ್ಯ ಶ್ರೀಕಾಂತ್ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂತು.

ಕೊನೆಯ ತಂಡವಾಗಿ ನಾಟ್ಯೇಶ್ವರ ನೃತ್ಯ ಶಾಲೆಯ ಕಿರಿಯ ಹಾಗೂ ಹಿರಿಯ ವಿದ್ಯಾರ್ಥಿನಿಯರಿಂದ ಅದ್ಭುತ ಭರತನಾಟ್ಯ ಮೂಡಿಬಂದಿತು. ಅತಿಥಿಯಾಗಿ ಭಾವ ನೂಪುರ ಡ್ಯಾನ್ಸ್ ಅಕಾಡೆಮಿಯ ಕಲಾತ್ಮಕ ನಿರ್ದೇಶಕರಾದ ವಿದುಷಿ ಮೀನಾಕ್ಷಿ ಪ್ರಸಾದ್ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂದಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post