ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದು ಹೋದ ಮೊಬೈಲ್ಗಳನ್ನು ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಯವರು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಿದ್ದು, ಡಿ.3ರಂದು ಸಂಜೆ ಸದರಿ ಮೊಬೈಲ್ ಫೋನ್ಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮವನ್ನು ಜಯನಗರ ಠಾಣೆಯ ಆವರಣದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮೊಬೈಲ್ ವಾರಸುದಾರರಿಗೆ ವಿತರಿಸಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ #SP Mithunkumar ಜಿಲ್ಲೆಯಾದ್ಯಂತ ಇದುವರೆಗೂ ಸುಮಾರು 6445 ಕಳೆದು ಹೋದ ಮೊಬೈಲ್ಗಳು ವರದಿಯಾಗಿದ್ದು, ಇವುಗಳಲ್ಲಿ ದೇಶದ ವಿವಿಧ ರಾಜ್ಯಗಳಾದ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕೇರಳ ಮತ್ತು ತೆಲಂಗಾಣ ಹಾಗೂ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪತ್ತೆ ಮಾಡಿ ಸುಮಾರು 1194ಕ್ಕೂ ಹೆಚ್ಚು ಮೊಬೈಲ್ಗಳನ್ನು ವಾರಸುದಾರರಿಗೆ ನೀಡಿದ್ದು, ನಂತರ ಇದೆ ರೀತಿ ಕಳೆದ 02 ತಿಂಗಳಲ್ಲಿ 110 ಮೊಬೈಲ್ ಫೋನ್ಗಳನ್ನು ಪತ್ತೆ ಮಾಡಿರುತ್ತಾರೆ.

ಸಹಜವಾಗಿ ನಿಮಗೆಲ್ಲ ಕಿವಿಮಾತು ಹೇಳುವುದಾದರೆ ನಿಮ್ಮ ಮೋಬೈಲ್ ಫೋನ್ ಕಳೆದು ಹೋದಾಗ ನೀವು ಜಾಗರೂಕರಾಗಿರದೇ ಹೋದಲ್ಲಿ, ಈ ರೀತಿ ಕಳೆದು ಹೋಗಿರುವ ಮೊಬೈಲ್ನ ಸಿಮ್ ಕಾರ್ಡ್ನ್ನು ಉಪಯೋಗಿಸಿಕೊಂಡು ಬೇರೆ ಬೇರೆ ರೀತಿಯ ಸೈಬರ್ ಅಪರಾದವನ್ನು ಮಾಡುವ ಸಾದ್ಯತೆ ಹೆಚ್ಚಾಗಿರುತ್ತದೆ. ಆದುದರಿಂದ ತಾವೆಲ್ಲರೂ ಕೂಡ ಜಾಗೂರಕರಾಗಿರಬೇಕು.
ನಿಮ್ಮ ಬೆಲೆ ಬಾಳುವ ವಸ್ತುಗಳಾದ ಚಿನ್ನಾಭರಣಗಳು ಯಾವ ರೀತಿ ಜೋಪಾನವಾಗಿ ಇಡುತ್ತೀರೋ, ಅದೇ ರೀತಿ ರೀತಿಯಲ್ಲಿ ಮೊಬೈಲ್ ಅನ್ನು ಜಾಗೂರಕತೆಯಿಂದ ಇಟ್ಟು ಕೊಳ್ಳಬೇಕು, ಕೆಲವೊಂದು ಸೇಪ್ಟಿ ಅಪ್ಲೀಕೇಷನ್ಗಳನ್ನು ಉಪಯೋಗಿಸಿಕೊಂಡಲ್ಲಿ, ಅದರ ಮುಖಾಂತರ ಮೊಬೈಲ್ ಅನ್ನು ಟ್ರೇಸ್ ಮಾಡಲು ಅನೂಕುಲವಾಗುತ್ತದೆ.
ಮೊಬೈಲ್ ಫೋನ್ ನಲ್ಲಿ ಲೋಕೆಷನ್ ಆನ್ ಮಾಡಿಕೊಂಡಿದ್ದಲ್ಲಿ ಮೊಬೈಲ್ ಕಳೆದು ಹೋದ ಸಂದರ್ಭದಲ್ಲಿ ಮೊಬೈಲ್ ಎಲ್ಲಿದೆ ಎಂದು ಗೊತ್ತಾಗುತ್ತದೆ. ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ತಕ್ಷಣವಾಗಿ ಮೊಬೈಲ್ ಅನ್ನು ಬ್ಲಾಕ್ ಮಾಡಿಸಿಬೇಕು ಇಲ್ಲ ಅಂದರೆ ನಿಮ್ಮ ನಂಬರ್ ಅನ್ನು ಉಪಯೋಗಿಸಿಕೊಂಡು ಸೈಬರ್ ಅಪರಾದವನ್ನು ಮಾಡಿದರೆ, ಅದು ನಿಮ್ಮ ಮೇಲೆ ಬರುವ ಸಾಧ್ಯತೆ ಇರುತ್ತದೆ ಎಂದರು.

ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಇದೇ ರೀತಿಯಾದ ಪ್ರಕರಣ ದಾಖಲಾಗಿರುತ್ತದೆ. ವ್ಯಕ್ತಿಯೊಬ್ಬರು ಯಾವುದೋ ಕಂಪನಿಯಲ್ಲಿ ಹೂಡಿಕೆ ಮಾಡುವ ಸಲುವಾಗಿ ಒಂದು ಅಪ್ಲೀಕೇಷನ್ ಅನ್ನು ಡೌನಲೋಡ್ ಮಾಡಿ ಇದರಲ್ಲಿ ಹೂಡಿಕೆ ಮಾಡಿ, ಇನ್ನು ಹೆಚ್ಚಿನ ಹಣವನ್ನು ನೀಡುತ್ತೇವೆ ಎಂದು ಹೇಳಿ ಒಂದು ಹೊಸ ಬ್ಯಾಂಕ ಖಾತೆಯನ್ನು ಮಾಡಿಸಿ ಅದರ ಎಲ್ಲಾ ಮಾಹಿತಿಯನ್ನು ನಮಗೆ ಕೊಡಿ ಎಂದು ಕೇಳಿ ಪಡೆದು ಕೊಂಡಿದ್ದು, ಸದರಿ ವ್ಯಕ್ತಿಯು ಈ ರೀತಿಯಾಗಿ ಎಲ್ಲಾ ಮಾಹಿತಿಯನ್ನು ನೀಡಿದಾಗ ಹಣವನ್ನು ಕಳೆದುಕೊಂಡಿರುತ್ತಾರೆ.
ಮೊಬೈಲ್ನಲ್ಲಿರುವ ನಿಮ್ಮ ಡೇಟಾ ಹಾಗೂ ನಿಮ್ಮ ಇ-ಮೇಲ್ ಪಾಸ್ ವರ್ಡ್ ಪಿನ್ ಒಟಿಪಿ ಬ್ಯಾಂಕ್ ಖಾತೆಯ ಮಾಹಿತಿಗಳನ್ನು ಯಾವುದೇ ರೀತಿಯಲ್ಲಿ ಕೂಡ ಯಾರಿಗೂ ಶೇರ್ ಮಾಡಬಾರದು.
ತೀರ್ಥಹಳ್ಳಿ ಯಲ್ಲಿಯೂ ಇದೇ ರೀತಿ ಬಿಟ್-ಕಾಯಿನ್ ನಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ನಿಮಗೆ ಲಾಭವನ್ನು ಕೋಡುತ್ತೇವೆ ಅಂತ ಆಸೆಗಳನ್ನು ಹುಟ್ಟಿಸಿರುತ್ತಾರೆ. ತುಂಬ ಜನ ಈಗಾಗಲೇ ಮೋಸ ಹೋಗಿರುತ್ತಾರೆ. ಈ ರೀತಿಯಾಗಿ ವಿವಿಧ ಫ್ರಾಡ್ ಸ್ಕೀಮ್ ಇರುತ್ತದೆ.
ಆರ್.ಬಿ.ಐ.-ಸರ್ಕಾರದಿಂದ ಯಾವುದು ಅಧೀಕೃತವಾಗಿರತ್ತದೆಯೋ ಅಥವಾ ಸರ್ಕಾರಿ ಬ್ಯಾಂಕ್ ಹಾಗೂ ಖಾಸಗಿ ಬ್ಯಾಂಕ್ ನಿಂದ ಇರುತ್ತದೆಯೂ ಅದರಲ್ಲಿ ಮಾತ್ರ ಹೂಡಿಕೆ ಮಾಡಬೇಕು. ಸ್ಟಾಕ್ನಲ್ಲಿ ಹೂಡಿಕೆ ಮಾಡುವಾಗ ಕೂಡ ಯಾವ ಪರಿಚಿತ ಅಪ್ಲಿಕೇಷನ್ ಇರುತ್ತವೆಯೋ ಅದರಲ್ಲಿ ಮಾತ್ರ ನೀವು ಹೂಡಿಕೆ ಮಾಡಬೇಕು.

ನೀವು ಪ್ರಾಥಮಿಕವಾಗಿ ನಿಮ್ಮ ಮೊಬೈಲ್ ಸುರಕ್ಷತೆ ಗಾಗಿ ನಿಮ್ಮ ಮೊಬೈಲ್ ಗೆ ಪಿನ್ ಇಟ್ಟುಕೊಳ್ಳಬೇಕು ಹಾಗೂ ಫಿಂಗರ್-ಬಯೋಮೆಟ್ರಿಕ್ ಅನ್ನು ಇಟ್ಟುಕೊಳ್ಳಬೇಕು ಹಾಗೂ ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಗಳನ್ನು ಯಾರಿಗೂ ಶೇರ್ ಮಾಡಬಾರದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎ.ಜಿ.ಕಾರಿಯಪ್ಪ ಹಾಗೂ ರಮೇಶ್ ಕುಮಾರ್, ಸೈಬರ್ ಕ್ರೈಂ ಡಿವೈಎಸ್ಪಿ ಕೃಷ್ಣ ಮೂರ್ತಿ ಹಾಗೂ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post