ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಶ್ರೀ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜೆ ಸಿ ಐ ಶಿವಮೊಗ್ಗ ಚಿರಂತನ ಘಟಕದ ಐದನೇ ಪದಗ್ರಹಣ ಸಮಾರಂಭದಲ್ಲಿ 2026 ರ ಅಧ್ಯಕ್ಷರಾಗಿ ಪೃಥ್ವಿ ನಾಗರಾಜ್ ಹಾಗೂ ಕಾರ್ಯದರ್ಶಿಯಾಗಿ ಮಮತಾ ವಿ ಶಾನುಭೋಗ್ ಪ್ರಮಾಣವಚನ ಸ್ವೀಕರಿಸಿದರು.
ಘಟಕ ನಿರ್ವಹಣೆ ಉಪಾಧ್ಯಕ್ಷರಾಗಿ ಜೆಸಿ ತ್ರಿವೇಣಿ ಬೆಳವಣಿಗೆ ಹಾಗೂ ಅಭಿವೃದ್ಧಿ ಉಪಾಧ್ಯಕ್ಷರಾಗಿ ಜೆಸಿ ಡಾಕ್ಟರ್ ವಾಸುದೇವಪ್ರಸಾದ ಉಪಾಧ್ಯಕ್ಷರು ವ್ಯವಹಾರ ಜೆಸಿ ನಿಶಾಂತ್ ತರಬೇತಿ ಉಪಾಧ್ಯಕ್ಷರಾಗಿ ಜೆಸಿ ಚಂದನ್ ಎನ್ ಹೊಳ್ಳ ಸಮುದಾಯ ಅಭಿವೃದ್ಧಿ ಉಪಾಧ್ಯಕ್ಷರಾಗಿ ಜೆಸಿ ಸೌಮ್ಯ ಗುರುರಾಜ್ ಪಿಆರ್ ಮಾರ್ಕೆಟಿಂಗ್ ಉಪಾಧ್ಯಕ್ಷರಾಗಿ ಜೆಸಿ ವೈಷ್ಣವಿ ಚಂದನ್ ಸಹಕಾರ್ಯದರ್ಶಿಯಾಗಿ ಜೆಸಿ ಶೃತಿ ರುದ್ರೇಶ್ ತರಬೇತಿ ನಿರ್ದೇಶಕರಾಗಿ ಜೆ ಸಿ ಡಾ. ಮಾಧವ್ ನಿರ್ದೇಶಕರು ವ್ಯವಹಾರ ಜೆಸಿ ಮಂಜುನಾಥ್ ಬಿ ಆರ್ ನಿರ್ದೇಶಕರು ಸಮುದಾಯ ಅಭಿವೃದ್ಧಿ ಜೆಸಿ ನಯನ ವಿನೋದ್ ನಿರ್ದೇಶಕರು ಪಿ ಆರ್ ಮಾರ್ಕೆಟಿಂಗ್ ಜೆಸಿ ಶರಣ ನಿರ್ದೇಶಕರು ಬೆಳವಣಿಗೆ ಹಾಗು ಅಭಿವೃದ್ಧಿ ಜೆ ಸಿ ಭವಾನಿ ಪ್ರಶಾಂತ್ ಜೂನಿಯರ್ ಜೆಸಿ ಕನಿಷ್ಕ ವಿ ಶಾನುಭೋಗ ಸಲಹಾ ಮಂಡಳಿಯ ಸದಸ್ಯರಾಗಿ ಶಾಂತ ಶೆಟ್ಟಿ ಜೆಸಿ ಭಾಗ್ಯಲಕ್ಷ್ಮಿ ಜಿಸಿ ಡಾ. ನಾಗರಾಜ್ ಅಂಗಡಿ ಜೆ ಸಿ ಡಾಕ್ಟರ್ ಯತೀಶ್ ಬಿ ಎಲ್ ಜೆ ಸಿ ಹರ್ಷಕರಣೆ ಆಯ್ಕೆಯಾಗಿರುತ್ತಾರೆ.
ಸಮಾರಂಭದ ಅಧ್ಯಕ್ಷ ವಹಿಸಿದ್ದ ಜೆಸಿ ರುದ್ರೇಶ್ ಸಿ ಕೋರಿ ಮಾತನಾಡಿ 2025 ಜೆ ಸಿ ಐ ಚಿರಂತನದ ಕಾರ್ಯಗಳನ್ನು ಹಾಗೂ ಸಾಧನೆಗಳನ್ನು ತಿಳಿಸಿದರು. ಕಾರ್ಯಕ್ರಮದ ಉದ್ಘಾಟಕರಾಗಿ ಜೆ ಸಿ ಐ ವಲಯ ಅಧ್ಯಕ್ಷ ಜೆಎಫ್ಎಸ್ ಮಧುಸೂದನ್ ನಾವಡ, ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಶಿವಮೊಗ್ಗ ಶ್ರೀ ಕಲಗೋಡು ರತ್ನಾಕರ ಗೌರವಾನ್ವಿತ ಅತಿಥಿಗಳಾಗಿ ಜೆಎಫ್ಎಸ್ ಸಿಎ ಗೌರೀಶ್ ಭಾರ್ಗವ ಜೆಎಫ್ಎಂ ಪ್ರಮೋದ್ ಶಾಸ್ತ್ರಿ ಎಸ್ಎ ಹಾಗೂ ಜೆಸಿ ಕುಮಾರ್ ಬೆಣ್ಣೆ ಅವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















