ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರೌಡಿ ಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣಕ್ಕೆ #Rowdi sheeter Biklu Shiva Murder Case ಸಂಬಂಧಿಸಿದಂತೆ ಬಿಜೆಪಿ ಶಾಸಕ ಭೈರತಿ ಬಸವರಾಜ್ #MLA Byrathi Basavaraj ಅವರ ಜಾಮೀನು ಅರ್ಜಿ ಸುಪ್ರೀಂ ಕೋರ್ಟ್’ನಲ್ಲೂ #Supreme Court ಸಹ ವಜಾಗೊಂಡಿದ್ದು, ಅವರಿಗೆ ಇನ್ನಷ್ಟು ಸಂಕಷ್ಟ ಎದುರಾಗಿದೆ.
ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಭೈರತಿ ಬಸವರಾಜ್, ಹೈಕೋರ್ಟ್ #Highcourt ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಅದನ್ನು ವಜಾಗೊಳಿಸಲಾಗಿದೆ. ಬಂಧನ ಭೀತಿಯಿಂದ ತಲೆ ಮರೆಸಿಕೊಂಡಿದ್ದು, ಸಿಐಡಿ ತಂಡ ಬಂಧನಕ್ಕೆ ಬಲೆ ಬೀಸಿದೆ.
ಕರ್ನಾಟಕದಿಂದ ತಲೆ ತಪ್ಪಿಸಿಕೊಂಡಿರುವ ಭೈರತಿ ಬಸವರಾಜ್, ಮಹಾರಾಷ್ಟçದ ಸ್ಟಾರ್ ಹೋಟೆಲ್ ವೊಂದರಲ್ಲಿ ವಾಸ್ತವ್ಯ ಹೂಡಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಸಿಐಡಿ ತಂಡ ಅಲ್ಲಿಗೆ ತೆರಳಲಿದೆ ಎನ್ನಲಾಗಿದೆ.
ಇನ್ನು ವಿದೇಶಕ್ಕೆ ಹೋಗದಂತೆ ಈಗಾಗಲೇ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಶಾಸಕರ ಪರವಾಗಿ ಮುಕುಲ್ ರೊಹಟಗಿ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದರು. ಇದೊಂದು ಸಿವಿಲ್ ಮ್ಯಾಟರ್, ಅನಾವಶ್ಯಕವಾಗಿ ಇದರಲ್ಲಿ ಎಳೆದು ತರಲಾಗುತ್ತಿದೆ ಎಂದು ವಾದಿಸಿದರು.
ಆದರೆ, ಅಂತಿಮವಾಗಿ ಸುಪ್ರೀಂ ಕೋರ್ಟ್’ನಲ್ಲೂ ಸಹ ಜಾಮೀನು ಅರ್ಜಿ ವಜಾಗೊಂಡಿರುವ ಹಿನ್ನೆಲೆಯಲ್ಲಿ ಭೈರತಿ ಬಸವರಾಜ್ ಅವರ ಬಂಧನವಾಗುವುದು ಖಚಿತಗೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















