ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೈಸೂರು ಸಿಲ್ಕ್ ಕ್ರೇಪ್ ಸೀರೆ #Mysore Silk Crape Saree ಭಾರತೀಯ ಸಂಸ್ಕøತಿಯ ಪ್ರತೀಕವಾಗಿದ್ದು, ನಟಿ ಕಾರುಣ್ಯ #Actress Karunya ram ಅವರು ಬೃಹತ್ ಸೀರೆಹಬ್ಬ ಮಾಡುವುದರ ಮೂಲಕ ಹೆಣ್ಣು ಮಕ್ಕಳಿಗೆ ಸ್ವ-ಉದ್ಯೋಗ ಮಾಡಲು ಸ್ಫೂರ್ತಿಯಾಗಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ರಾಯಲ್ ಆರ್ಕೇಡ್ನಲ್ಲಿ ನಡೆಯುವ ಈ ಸೀರೆ ಹಬ್ಬದಲ್ಲಿ ಭಾಗವಹಿಸಿ, ಪ್ರೋತ್ಸಾಹಿಸುವಂತೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ #K S Eshwarappa ಹೇಳಿದ್ದಾರೆ.
ಅವರು ಇಂದು ನಗರದ ರಾಯಲ್ ಆರ್ಕೇಡ್ನಲ್ಲಿ ಸೆಂಟರ್ನಲ್ಲಿ ‘ಅವಿರಾ ಉಡುಪು’ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಮೂರು ದಿನಗಳ ಸೀರೆಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.
ಇವತ್ತಿನ ಈ ಸೀರೆಹಬ್ಬದಲ್ಲಿ ತುಂಬಾ ಕಲೆಕ್ಷನ್ಗಳಿದ್ದು ಮಹಿಳೆಯರಿಗೆ ಒಂದು ನಿಜವಾದ ಹಬ್ಬವಾಗಿದೆ. ಸೀರೆಗಳು ಹೆಣ್ಣು ಮಕ್ಕಳಿಗೆ ಸ್ಫೂರ್ತಿ ತುಂಬುತ್ತದೆ. ಭಾರತೀಯ ಸಂಸ್ಕøತಿಯ ಪ್ರತೀಕವೂ ಹೌದು. ಹೆಣ್ಣು ಮಕ್ಕಳಿಗೆ ಮಾತ್ರ ಅವರಿಗೆ ಬೇಕಾದ ಸೆಲೆಕ್ಷನ್ ಗೊತ್ತಾಗುತ್ತದೆ. ಅವರೇ ಖುದ್ದಾಗಿ ಬಂದು ಯುಗಾದಿ ಹಬ್ಬಕ್ಕೆ ತಮಗೆ ಬೇಕಾದ ಸೀರೆಯನ್ನು ಆಯ್ಕೆಮಾಡುವಂತೆ ಮತ್ತು ಈ ಸೀರೆಹಬ್ಬ ಯಶಸ್ವಿಯಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಟಿ ಕಾರುಣ್ಯ ರಾಮ್, ಸಮನ್ವಯ ಕಾಶಿ, ಮಮತಾ ಶಿವಣ್ಣ, ಉಮಾದೇವಿ, ಡಾ.ರಘುನಂದನ್, ಈ. ವಿಶ್ವಾಸ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















