ಕಲ್ಪ ಮೀಡಿಯಾ ಹೌಸ್ | ಹರಿಹರ |
ತುರ್ತು ಸಂದರ್ಭ ಹಾಗೂ ವಿಪತ್ತು ನಿರ್ವಹಣೆ ಕುರಿತಾಗಿ ಹರಿಹರ #Harihara ರೈಲು ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ವಿಪತ್ತು ನಿರ್ವಹಣಾ ಮಾಕ್ ಡ್ರಿಲ್ ಯಶಸ್ವಿಯಾಗಿ ನಡೆಯಿತು.
ನೈಋತ್ಯ ರೈಲ್ವೆಯ #SWR ಮೈಸೂರು ವಿಭಾಗದ ವತಿಯಿಂದ ಹರಿಹರ ರೈಲು ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಪೂರ್ಣ ಪ್ರಮಾಣದ ವಾರ್ಷಿಕ ವಿಪತ್ತು ನಿರ್ವಹಣಾ ಅಣಕು ಅಭ್ಯಾಸವನ್ನು ಯಶಸ್ವಿಯಾಗಿ ನಡೆಸಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು.
ಈ ಅಭ್ಯಾಸವನ್ನು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ, ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ, ಜಿಲ್ಲಾಡಳಿತ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಇತರೆ ರಾಜ್ಯ ಸರ್ಕಾರದ ಇಲಾಖೆಗಳ ಸಹಯೋಗದಲ್ಲಿ ನಡೆಸಲಾಯಿತು.
Also Read>> ಹಿಜಾಬ್ಗೆ ಅವಕಾಶ, ಕೇಸರಿ ಶಾಲಿಗೆ ನಿರ್ಬಂಧ | ರಾಜ್ಯ ಸರ್ಕಾರದ ವಿರುದ್ಧ ಈಶ್ವರಪ್ಪ ವಾಗ್ದಾಳಿ
ಈ ಅಣಕು ಅಭ್ಯಾಸವನ್ನು ಭಾರತೀಯ ರೈಲ್ವೆಯ #IndianRailway ವಿಪತ್ತು ಸಿದ್ಧತಾ ಕಾರ್ಯಕ್ರಮಗಳ ಭಾಗವಾಗಿ ಯೋಜಿಸಲಾಗಿತ್ತು ಎಂದು ರೈಲ್ವೆ ಇಲಾಖೆ ತಿಳಿಸಿದೆ.
ರೈಲು ಅಪಘಾತದಂತಹ #TrainAccident ತುರ್ತು ಪರಿಸ್ಥಿತಿಗಳನ್ನು ಎದುರಿಸುವಲ್ಲಿ ವಿವಿಧ ಇಲಾಖೆಗಳ ನಡುವೆ ಸಮನ್ವಯ ಮತ್ತು ತುರ್ತು ಪ್ರತಿಕ್ರಿಯಾ ವ್ಯವಸ್ಥೆಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವ ಉದ್ದೇಶದಿಂದ ಈ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಹೀಗಿತ್ತು ಕಲ್ಪಿತ ಘಟನೆ
ರೈಲು ಸಂಖ್ಯೆ 06285 ಮೈಸೂರು-ಬೆಳಗಾವಿ ಬೇಸಿಗೆ ಸ್ಪೆಷಲ್ ಎಕ್ಸ್’ಪ್ರೆಸ್ ಹರಿಹರ ರೈಲು ನಿಲ್ದಾಣ ವ್ಯಾಪ್ತಿಯಲ್ಲಿ ನಡೆಸಲಾಯಿತು. ಮಾಹಿತಿ ಲಭ್ಯವಾದ ತಕ್ಷಣವೇ ರೈಲ್ವೆ ಅಧಿಕಾರಿಗಳು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ, ನಿಗದಿತ ವಿಪತ್ತು ನಿರ್ವಹಣಾ ಕ್ರಮಗಳಂತೆ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಪ್ರಾರಂಭಿಸಿದರು.
ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ, #NDRF ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ, ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತಂಡಗಳು ತಕ್ಷಣ ಸ್ಥಳಕ್ಕಾಗಮಿಸಿ ವಿಶೇಷ ಸಾಧನಗಳ ಸಹಾಯದಿಂದ ರಕ್ಷಣಾ ಕಾರ್ಯಗಳನ್ನು ಕೈಗೊಂಡವು.
ವೈದ್ಯರು, ನರ್ಸ್’ಗಳು ಮತ್ತು ಪ್ಯಾರಾಮೆಡಿಕಲ್ #ParaMedical ಸಿಬ್ಬಂದಿಗಳನ್ನು ಒಳಗೊಂಡ ವೈದ್ಯಕೀಯ ತಂಡಗಳು ತುರ್ತು ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಿ ಗಾಯಗೊಂಡವರಿಗಾಗಿ ಪ್ರಾಥಮಿಕ ಚಿಕಿತ್ಸೆ ಒದಗಿಸಿದರು.
Also Read>> ಭಾರತದ ಆರ್ಥಿಕತೆಗೆ ಎಐ ಬಲ | 2030ರ ವೇಳೆಗೆ ಎಐನಿಂದ 500 ಶತಕೋಟಿ ಡಾಲರ್ ಕೊಡುಗೆಯ ನಿರೀಕ್ಷೆ | ಅಧ್ಯಯನ ವರದಿಯಲ್ಲಿ ಘೋಷಣೆ
ಈ ಅಭ್ಯಾಸದಲ್ಲಿ ಒಂದು ಎಸಿ 3-ಟಿಯರ್ ಕೋಚ್, ಒಂದು ಸ್ಲೀಪರ್ ಕೋಚ್ ಮತ್ತು ಒಂದು ಸಾಮಾನ್ಯ ಕೋಚ್ ಒಳಗೊಂಡಂತೆ ಹಲವು ಬೋಗಿಗಳು ಪ್ರಭಾವಿತವಾಗಿದ್ದಂತೆ ತೋರಿಸಲಾಯಿತು. ಸುಮಾರು 10 ಜನರಿಗೆ ಸಣ್ಣ ಗಾಯಗಳು, 10 ಜನರಿಗೆ ಗಂಭೀರ ಗಾಯಗಳು ಮತ್ತು 5 ಜನರು ಮೃತಪಟ್ಟಂತೆ ತೋರಿಸಿ ನೈಜ ಪರಿಸ್ಥಿತಿಯನ್ನು ರೂಪಿಸಲಾಯಿತು. ಗಾಯಾಳುಗಳನ್ನು ಸುರಕ್ಷಿತವಾಗಿ ಹೊರತೆಗೆದು, ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು.
ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ಈ ಕಾರ್ಯಾಚರಣೆಯನ್ನು ಸಮಗ್ರವಾಗಿ ಮೇಲ್ವಿಚಾರಣೆ ಮಾಡಿದರು.

ದೇಶದಲ್ಲೇ ಮೊದಲು | ಸ್ಥಳೀಯ ತಂತ್ರಜ್ಞಾನ ಆಧಾರಿತ ಸೆಮಿ ಹೈಸ್ಪೀಡ್ ರೈಲ್ವೆ ಯೋಜನೆಗೆ ಕೇಂದ್ರ ಅಸ್ತು
ಮೈಸೂರು ವಿಭಾಗದ ವಿಭಾಗೀಯ ರೈಲು ವ್ಯವಸ್ಥಾಪಕರಾದ ಮುದಿತ್ ಮಿಟ್ಟಲ್, ನೈರುತ್ಯ ರೈಲ್ವೆಯ ಮುಖ್ಯ ಸುರಕ್ಷತಾ ಅಧಿಕಾರಿ ರಾಮಕೃಷ್ಣ, ಹಾಗೂ ಮುಖ್ಯ ಯಾಂತ್ರಿಕ ಇಂಜಿನಿಯರ್ ಪಿ. ಬಾಲಸುಂದರ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಮತ್ತು ನಾಗರಿಕ ಆಡಳಿತದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸುಮಾರು 120 ನಿಮಿಷಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಸಂವಹನ ವ್ಯವಸ್ಥೆ, ಇಲಾಖೆಗಳ ನಡುವಿನ ಸಮನ್ವಯ, ರಕ್ಷಣಾ ಕಾರ್ಯದ ವೇಗ, ವೈದ್ಯಕೀಯ ಸೇವೆಗಳ ಪರಿಣಾಮಕಾರಿತ್ವ, ಜನಸಂದಣಿ ನಿಯಂತ್ರಣ ಹಾಗೂ ಪುನಃಸ್ಥಾಪನೆ ಸಿದ್ಧತೆಗಳನ್ನು ಸಮಗ್ರವಾಗಿ ಪರಿಶೀಲಿಸಲಾಯಿತು.
Also Read>> ಭಾರತದ ಮೊಟ್ಟಮೊದಲ ಪ್ಯಾನ್ ಇಂಡಿಯಾ ರಿಯಾಲಿಟಿ ಶೋ ‘ಬಿಗ್ ಪಿಚ್ಚರ್’ ಚಾಲನೆ | ಶೀಘ್ರ ಆಡಿಷನ್
ಅಭ್ಯಾಸದ ಅಂತ್ಯದಲ್ಲಿ ವಿವರವಾದ ವಿಮರ್ಷಾ ಸಭೆ ನಡೆಯಿತು. ಮುಖ್ಯ ಸುರಕ್ಷತಾ ಅಧಿಕಾರಿ ಮತ್ತು ಸಿಎಮ್ಇ/ಡಿ ಡಿಎಂ ಅವರ ನೇತೃತ್ವದಲ್ಲಿ ವಿಪತ್ತು ನಿರ್ವಹಣಾ ಸಮಿತಿಯು ಎಲ್ಲಾ ಇಲಾಖೆಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿ, ಉತ್ತಮ ಅಂಶಗಳನ್ನು ಗುರುತಿಸಿ, ಸುಧಾರಣೆ ಅಗತ್ಯವಿರುವ ಕ್ಷೇತ್ರಗಳನ್ನು ಗುರುತಿಸಿತು.
ಇಂತಹ ಅಣಕು ಅಭ್ಯಾಸಗಳನ್ನು ರೈಲ್ವೆ ಸಚಿವಾಲಯದ ಮಾರ್ಗಸೂಚಿಗಳಂತೆ ನಿಯಮಿತವಾಗಿ ನಡೆಸಲಾಗುತ್ತಿದ್ದು, ವಿಪತ್ತು ಸಿದ್ಧತೆಯನ್ನು ಬಲಪಡಿಸುವುದರ ಜೊತೆಗೆ ತುರ್ತು ಸಂದರ್ಭಗಳಲ್ಲಿ ವೇಗವಾದ ಮತ್ತು ಸಮನ್ವಯಿತ ಪ್ರತಿಕ್ರಿಯೆಯನ್ನು ಖಚಿತಪಡಿಸುತ್ತದೆ. ಇವು ಮಾನವ ಜೀವಹಾನಿ ಮತ್ತು ಆಸ್ತಿ ನಷ್ಟವನ್ನು ಕಡಿಮೆಗೊಳಿಸಲು ಹಾಗೂ ಎಲ್ಲಾ ಸಂಬಂಧಿತ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮಹತ್ವದ ಪಾತ್ರ ವಹಿಸುತ್ತವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















