No Result
View All Result
Indian Railway Fine Hike
English Articles

Jan Vishwas Act 2026: Revised Railway Penalty Rules Likely from July 1

by ಕಲ್ಪ ನ್ಯೂಸ್
June 23, 2026
2

Kalpa Media House  | New Delhi | The Indian Railways is set to implement revised penalty provisions under the Jan...

Read moreDetails
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
MODEL DEMOCRACY AT KRCS

Model Democracy At KRCS | Student Council Election Concluded Successfully

June 22, 2026
Naija Hegde’s Inspiring Rise to Success

From Coast to Glory: Naija Hegde’s Inspiring Rise to Success

June 21, 2026
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‌ಟೇಲ್ 3’ ಜೂ.21ರಂದು ಜೀ ಕನ್ನಡದಲ್ಲಿ

Darling Krishna, Milana Nagaraj ’s Love Mocktail 3 Premieres This 21st on Zee Kannada

June 19, 2026
  • Advertise With Us
  • Grievances
  • About Us
  • Contact Us
Wednesday, June 24, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

India’s Emergency | ಮೌನಗೊಳಿಸಿದ ಧ್ವನಿಗಳ ಕರಾಳ ಇತಿಹಾಸ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 24, 2026
in Special Articles
0
India's Emergency The Era That Muted A Nation
Share on FacebookShare on TwitterShare on WhatsApp
ಭಾರತದ ರಾಜಕೀಯ ಇತಿಹಾಸದಲ್ಲಿ 1975 ರಿಂದ 1977 ರವರೆಗೆ ಜಾರಿಗೊಂಡ ತುರ್ತು ಪರಿಸ್ಥಿತಿ ಅತ್ಯಂತ ವಿವಾದಾತ್ಮಕ ಹಾಗೂ ಮಹತ್ವದ ಘಟ್ಟವಾಗಿದೆ. ಈ ಅವಧಿಯಲ್ಲಿ ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆ, ನಾಗರಿಕ ಹಕ್ಕುಗಳು ಮತ್ತು ಸಂವಿಧಾನಾತ್ಮಕ ರಕ್ಷಣೆಗೆ ದೊಡ್ಡ ಸವಾಲು ಎದುರಾಗಿತ್ತು ಎನ್ನುವುದು ವಾಸ್ತವ.

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ರಾಜಕೀಯ ನಿರ್ಧಾರವನ್ನು ಮೀರಿ ದೇಶದ ಸಂವಿಧಾನಾತ್ಮಕ ಮೌಲ್ಯಗಳಿಗೆ ಗಂಭೀರ ಸವಾಲಾಗಿ ಪರಿಣಮಿಸಿದ್ದ, ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ 1975ರಲ್ಲಿ ಜಾರಿಗೊಂಡ ತುರ್ತು ಪರಿಸ್ಥಿತಿ (India’s Emergency) ಒಂದು ಕಪ್ಪು ಚುಕ್ಕೆ ಎಂದೇ ಜನಮಾನಸದಲ್ಲಿ ದಾಖಲಾಗಿದೆ.

ಹೌದು… ತುರ್ತು ಪರಿಸ್ಥಿತಿ ಜಾರಿಗೊಂಡು 51 ವರ್ಷಗಳು ಕಳೆದಿವೆ. ಆದರೆ ಆ ದಿನಗಳ ನೆನಪು ಇನ್ನೂ ದೇಶದ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅದು ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳುವ ಅಗತ್ಯತೆಯನ್ನು ನಿರಂತರವಾಗಿ ನಮಗೆ ನೆನಪಿಸುತ್ತದೆ.

ತುರ್ತು ಪರಿಸ್ಥಿತಿಯ ಅವಧಿ ದೇಶದಲ್ಲಿ ಪ್ರಜಾಸತ್ತಾತ್ಮಕ ಹಕ್ಕಗಳು ಹಾಗೂ ನಾಗರಿಕ ಸ್ವಾತಂತ್ರಗಳನ್ನು ಕಸಿಕೊಂಡಿದ್ದ ಅವಧಿಯಾಗಿತ್ತು. ಅಲ್ಲದೇ ಪ್ರಮುಖವಾಗಿ ಭಾರತದ ಗಣತಂತ್ರದ ಮೌಲ್ಯಗಳು ಕುಸಿದು ಬಿದ್ದಿದ್ದ ಕರಾಳ ಅವಧಿಯಾಗಿತ್ತು. ಇಂತಹ ಸಂದರ್ಭದಲ್ಲಿನ ಪ್ರಮುಖ ಘಟನೆಗಳು ಹೇಗಿದ್ದವು? ಮುಂದೆ ಓದಿ…

1. ರಾಜಕೀಯ ಸಂಕಷ್ಟದ ಆರಂಭ

1971ರ ರಾಯಬರೇಲಿ ಲೋಕಸಭಾ ಚುನಾವಣೆಯಿಂದ ಪ್ರಧಾನಿ ಇಂದಿರಾಗಾಂಧಿ ಅವರ ರಾಜಕೀಯ ಸಂಕಷ್ಟ ಆರಂಭವಾಯಿತು. ಆ ಚುನಾವಣೆಯಲ್ಲಿ ಅವರ ಪ್ರತಿಸ್ಪರ್ಧಿಯಾಗಿದ್ದ ಸಮಾಜವಾದಿ ನಾಯಕ ರಾಜ್ ನಾರಾಯಣ್ ಅವರು ಸರ್ಕಾರದ ಆಡಳಿತ ಯಂತ್ರದ ದುರುಪಯೋಗ ಸೇರಿದಂತೆ ಚುನಾವಣಾ ಅಕ್ರಮಗಳನ್ನು ಆರೋಪಿಸಿ, ಇಂದಿರಾ ಗಾಂಧಿಯವರ (Indira Gandhi) ಜಯವನ್ನು ಪ್ರಶ್ನಿಸಿ ಚುನಾವಣಾ ಅರ್ಜಿ ಸಲ್ಲಿಸಿದರು.

2. ಅಲಹಾಬಾದ್ ಹೈಕೋರ್ಟ್ ತೀರ್ಪು

ಅರ್ಜಿಗೆ ಸಂಬಂಧಿಸಿದಂತೆ 1975ರ ಜೂನ್ 12ರಂದು ಐತಿಹಾಸಿಕ ತೀರ್ಪು ನೀಡಿದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಜಗಮೋಹನಲಾಲ್ ಸಿನ್ಹಾ ಅವರು, ಪ್ರಧಾನಿ ಇಂದಿರಾಗಾಂಧಿ ಅವರನ್ನು ಚುನಾವಣಾ ಅಕ್ರಮಗಳಿಗೆ ದೋಷಿ ಎಂದು ಘೋಷಿಸಿದರು. ಮಾತ್ರವಲ್ಲ, ಆರು ವರ್ಷಗಳ ಕಾಲ ಯಾವುದೇ ಚುನಾಯಿತ ಹುದ್ದೆ ವಹಿಸಲು ಅನರ್ಹರನ್ನಾಗಿ ಘೋಷಿಸಿದರು.

3. ರಾಜಕೀಯ ಒತ್ತಡ ಹೆಚ್ಚಿಸಿದ ಸುಪ್ರೀಂ ಆದೇಶ

ಅಲಹಬಾದ್ ನ್ಯಾಯಾಲದಯ ಆದೇಶ ಪ್ರಶ್ನಿಸಿ ಪ್ರಧಾನಿ ಇಂದಿರಾ ಗಾಂಧಿ ಅವರು ಸುಪ್ರೀಂ ಕೋರ್ಟ್’ಗೆ ಮೇಲ್ಮನವಿ ಸಲ್ಲಿಸಿದರು. 1975ರ ಜೂನ್ 24ರಂದು ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್ ಅವರು ಶರತ್ತುಬದ್ಧ ತಡೆ ಆದೇಶ ನೀಡಿದರು.

ಆದೇಶದಂತೆ, ಇಂದಿರಾ ಗಾಂಧಿ ಪ್ರಧಾನಿಯಾಗಿ ಮುಂದುವರೆಯಲು ಅವಕಾಶ ನೀಡಲಾಯಿತಾದರೂ, ಸಂಸತ್ತಿನಲ್ಲಿ ಮತ ಚಲಾಯಿಸಲು ಹಾಗೂ ಸಂಸದೆಯಾಗಿ ಸಂಬಳ ಮತ್ತು ಭತ್ಯೆ ಪಡೆಯಲು ಅವಕಾಶ ಇರಲಿಲ್ಲ. ಈ ತೀರ್ಪು ಸಂಕಷ್ಟವನ್ನು ಪರಿಹರಿಸುವ ಬದಲು ರಾಜಕೀಯ ಒತ್ತಡವನ್ನು ಹೆಚ್ಚಿಸಿ, ರಾಜೀನಾಮೆಗೆ ವಿರೋಧ ಪಕ್ಷಗಳ ಬೇಡಿಕೆಯನ್ನು ತೀವ್ರಗೊಳಿಸಿತು.PES Public School Shivamogga

4. ಅಶಾಂತಿ ನೆಪದಲ್ಲಿ ಆಂತರಿಕ ತುರ್ತು ಪರಿಸ್ಥಿತಿ

ನಂತರದಲ್ಲಿ ಅಂದರೆ 1975ರ ಜೂನ್ 25ರಂದು ಸಂವಿಧಾನದ ಕಲಂ 352ರ ಅಡಿಯಲ್ಲಿ ಆಂತರಿಕ ಅಶಾಂತಿ ನೆಪದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಇದು 1977ರ ಮಾರ್ಚ್ 21ರವರೆಗೆ, ಒಟ್ಟು 21 ತಿಂಗಳು ಜಾರಿಯಲ್ಲಿತ್ತು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಪ್ರಜಾಪ್ರಭುತ್ವ ಸ್ವಾತಂತ್ರ್ಯಗಳುಗಳು ಹಾಗೂ ನಾಗರಿಕ ಹಕ್ಕುಗಳು ದೀರ್ಘಾವಧಿಗೆ ಸ್ಥಗಿತಗೊಂಡ ಅತ್ಯಂತ ಉದ್ದ ಅವಧಿಯಾಗಿದೆ.

5. ಮೂಲಭೂತ ಹಕ್ಕುಗಳು ಅಮಾನತು

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಧಾನಿ ಇಂದಿರಾಗಾಂಧಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಸಂವಿಧಾನದ ಭಾಗ III ಅಡಿಯಲ್ಲಿ ಖಾತರಿಪಡಿಸಲಾದ ಅನೇಕ ಮೂಲಭೂತ ಹಕ್ಕುಗಳನ್ನು (Fundamental Rights) ಅಮಾನತುಗೊಳಿಸಿತು. ಇದರಿಂದ ನಾಗರಿಕರ ಸಂವಿಧಾನಾತ್ಮಕ ರಕ್ಷಣೆಗಳು ಗಂಭೀರವಾಗಿ ಸೀಮಿತಗೊಂಡು, ಕಾರ್ಯಾಂಗದ ಕ್ರಮಗಳ ವಿರುದ್ಧ ನ್ಯಾಯಾಂಗ ಪರಿಹಾರ ಪಡೆಯುವ ಅವರ ಸಾಮರ್ಥ್ಯವು ಬಹಳ ಮಟ್ಟಿಗೆ ಕಡಿತಗೊಂಡಿತು.

6. ಲಕ್ಷಾಂತರ ಮಂದಿಯ ಬಂಧನ

ತುರ್ತು ಪರಿಸ್ಥಿತಿಯ ಸಮಯದಲ್ಲಿ ಸುಮಾರು 1.1 ಲಕ್ಷಕ್ಕೂ ಹೆಚ್ಚು ರಾಜಕೀಯ ವಿರೋಧಿಗಳು, ಕಾರ್ಯಕರ್ತರು, ಪತ್ರಕರ್ತರು, ಕಾರ್ಮಿಕ ಸಂಘದ ನಾಯಕರು ಮತ್ತು ವಿದ್ಯಾರ್ಥಿ ನಾಯಕರನ್ನು ಬಂಧಿಸಲಾಯಿತು. ಇವರಲ್ಲಿ ಸುಮಾರು 35,000 ಮಂದಿಯನ್ನು Maintenance of Internal Security Act (MISA) ಅಡಿಯಲ್ಲಿ ವಿಚಾರಣೆ ಇಲ್ಲದೆ ಬಂಧಿಸಲಾಯಿತು.

7. The Maintenance of Internal Security Act (MISA) ಕಾಯ್ದೆಯ ದುರುಪಯೋಗ

ಪ್ರಮುಖವಾಗಿ, The Maintenance of Internal Security Act (MISA) ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಮುಖ ಮುನ್ನೆಚ್ಚರಿಕಾ ಬಂಧನ ಕಾಯ್ದೆಯಾಗಿ ಬಳಕೆಯಾಯಿತು. ಈ ಕಾಯ್ದೆಯಡಿ ಯಾವುದೇ ಅಧಿಕೃತ ಆರೋಪ, ವಿಚಾರಣೆ ಅಥವಾ ತಕ್ಷಣದ ನ್ಯಾಯಾಂಗ ಪರಿಶೀಲನೆ ಇಲ್ಲದೆ ವ್ಯಕ್ತಿಗಳನ್ನು ಬಂಧಿಸಲು ಅಧಿಕಾರಿಗಳಿಗೆ ಅವಕಾಶ ಇತ್ತು. ಹಲವಾರು ರಾಜಕೀಯ ಕೈದಿಗಳು ಹಿಂಸೆ ಮತ್ತು ಅಮಾನವೀಯ ವರ್ತನೆಗೆ ಒಳಗಾಗಿದ್ದು ದುರಂತದ ಇತಿಹಾಸಗಳಾಗಿವೆ.

8. India’s Emergency | ಹೇಬಿಯಸ್ ಕಾರ್ಪಸ್ ಹಕ್ಕು ನಿರಾಕರಣೆ

ನ್ಯಾಯಾಲಯದ ಮುಂದೆ ಅನ್ಯಾಯ ಬಂಧನವನ್ನು ಪ್ರಶ್ನಿಸಲು ನಾಗರಿಕರಿಗೆ ಅವಕಾಶ ನೀಡುವ ಸಂವಿಧಾನಾತ್ಮಕ ಪರಿಹಾರವಾದ ಹೇಬಿಯಸ್ ಕಾರ್ಪಸ್ ಹಕ್ಕು, ಮೂಲಭೂತ ಹಕ್ಕುಗಳನ್ನು ಸ್ಥಗಿತಗೊಳಿಸಿದ ನಂತರ ಅಮಾನತುಗೊಂಡಿತು. ಇದರ ಪರಿಣಾಮವಾಗಿ ಬಂಧಿತರು ತಮ್ಮ ಬಂಧನವನ್ನು ಪ್ರಶ್ನಿಸಿ ನ್ಯಾಯಾಂಗ ರಕ್ಷಣೆ ಪಡೆಯುವ ಅವಕಾಶದಿಂದ ಸಂಪೂರ್ಣವಾಗಿ ವಂಚಿತರಾದರು.

9. ಎಡಿಎಂ ಜಬಲ್ಪುರ್ v/s ಶಿವಕಾಂತ್ ಶುಕ್ಲಾ ಪ್ರಕರಣ

1976ರ ಪ್ರಸಿದ್ಧ ಎಡಿಎಂ ಜಬಲ್ಪುರ್ v/s ಶಿವಕಾಂತ್ ಶುಕ್ಲಾ ಪ್ರಕರಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ತುರ್ತು ಪರಿಸ್ಥಿತಿಯ ಅವಧಿಯಲ್ಲಿ ರಾಷ್ಟ್ರಪತಿ ಆದೇಶಗಳ ಮೂಲಕ ಮೂಲಭೂತ ಹಕ್ಕುಗಳನ್ನು ಸ್ಥಗಿತಗೊಳಿಸಿದ ನಂತರ, ನಾಗರಿಕರು ನ್ಯಾಯಾಲಯಗಳ ಮೂಲಕ ಆ ಹಕ್ಕುಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

10. ಮೂರು ಬಾರಿ ಸಂವಿಧಾನದ ತಿದ್ದುಪಡಿ

ಅ. 1975ರ 38ನೇ ಸಂವಿಧಾನ ತಿದ್ದುಪಡಿಯ ಮೂಲಕ ತುರ್ತು ಪರಿಸ್ಥಿತಿ ಘೋಷಣೆ ಹಾಗೂ ಸಂಬಂಧಿತ ಕಾರ್ಯನಿರ್ವಹಣಾ ಕ್ರಮಗಳನ್ನು ನ್ಯಾಯಾಂಗ ಪರಿಶೀಲನೆಯಿಂದ ಬಹುತೇಕ ಮುಕ್ತಗೊಳಿಸಲಾಯಿತು. ಇದರಿಂದ ಕಾರ್ಯನಿರ್ವಹಣಾ ವಿಭಾಗದ ಅಧಿಕಾರವು ಹೆಚ್ಚಾಯಿತು.
ಆ. 1975ರ 39ನೇ ಸಂವಿಧಾನ ತಿದ್ದುಪಡಿಯ ಮೂಲಕ ಪ್ರಧಾನಮಂತ್ರಿ, ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಲೋಕಸಭಾಧ್ಯಕ್ಷರ ಚುನಾವಣೆಗಳನ್ನು ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿಯಿಂದ ಹೊರಗಿಟ್ಟು, ನ್ಯಾಯಾಲಯಗಳ ಅಧಿಕಾರವನ್ನು ಸೀಮಿತಗೊಳಿಸಲಾಯಿತು.
ಇ. 1976ರ 42ನೇ ಸಂವಿಧಾನ ತಿದ್ದುಪಡಿಯ ಮೂಲಕ ಸಂಸತ್ತಿನ ಅಧಿಕಾರವನ್ನು ಗಣನೀಯವಾಗಿ ವಿಸ್ತರಿಸಿ, ನ್ಯಾಯಾಂಗ ಪರಿಶೀಲನೆಗೆ ಕಡಿವಾಣ ಹಾಕಿ, ಕೇಂದ್ರ ಸರ್ಕಾರದ ಅಧಿಕಾರವನ್ನು ಬಲಪಡಿಸಲಾಯಿತು. ಜೊತೆಗೆ ಸಂವಿಧಾನದ ಅನೇಕ ವಿಧಿಗಳನ್ನು ತಿದ್ದುಪಡಿ ಮಾಡಲಾಯಿತು.

11. ಮಾಧ್ಯಮಗಳ ಧ್ವನಿ ಅಡಗಿಸಿದ ಆಡಳಿತ

ತುರ್ತು ಪರಿಸ್ಥಿತಿ ಘೋಷಣೆಯಾದ ತಕ್ಷಣವೇ ಪತ್ರಿಕಾ ಸೆನ್ಸಾರ್ ಜಾರಿಗೊಂಡಿತು. ಪತ್ರಿಕೆಗಳು ಪ್ರಕಟಣೆಗಿಂತ ಮುಂಚೆ ತಮ್ಮ ವಿಷಯವನ್ನು ಸರ್ಕಾರದ ಪರಿಶೀಲನೆಗೆ ಸಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಒಂದು ದುರಂತ. ಇದರಿಂದ ಸರ್ಕಾರಕ್ಕೆ ಅಸಮಾಧಾನಕರ ವರದಿಗಳನ್ನು ತಡೆಯಲು ಸಾಧ್ಯವಾಯಿತು.

ನಂತರ, 1975ರ ಜೂನ್ 25ರ ರಾತ್ರಿ ದೆಹಲಿಯ ಹಲವಾರು ಪತ್ರಿಕಾ ಕಚೇರಿಗಳಿಗೆ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಲಾಯಿತು. ಇದರಿಂದ ತುರ್ತು ಪರಿಸ್ಥಿತಿ ಘೋಷಣೆಗೆ ಸಂಬಂಧಿಸಿದ ವರದಿಗಳನ್ನು ಪ್ರಕಟಿಸುವ ಪತ್ರಿಕೆಗಳ ಪ್ರಕಟಣೆ ವಿಳಂಬವಾಯಿತು.

ಅಲ್ಲದೇ ಪ್ರಮುಖವಾಗಿ, ಪ್ರೆಸ್ ಕೌನ್ಸಿಲ್ ಅನ್ನು ರದ್ದುಗೊಳಿಸಲಾಯಿತು. ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನ ಸರ್ಕಾರದ ನಿಯಂತ್ರಣದಲ್ಲಿದ್ದು, ಅಧಿಕೃತ ಮಾಹಿತಿಯನ್ನು ಮಾತ್ರ ಪ್ರಸಾರ ಮಾಡುತ್ತಿದ್ದವು. ಸರ್ಕಾರದ ನೇರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸಿ, ಅಧಿಕೃತವಾಗಿ ಅನುಮೋದಿತ ಮಾಹಿತಿಯ ಮುಖ್ಯ ಮೂಲಗಳಾಗಿ ಉಳಿದವು.

12. ಪ್ರತಿಪಕ್ಷಗಳ ಧಮನ

ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಜಯಪ್ರಕಾಶ್ ನಾರಾಯನ್, ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಹಲವಾರು ಸಂಸತ್ ಸದಸ್ಯರು ಮತ್ತು ಮಹಾರಾಣಿ ಗಾಯತ್ರಿ ದೇವಿಯವರಂತಹ ರಾಜ್ಯ ನಾಯಕರನ್ನು ತಡೆಗಟ್ಟುವ ಬಂಧನ ಕಾಯ್ದೆಗಳಡಿ ಬಂಧಿಸಲಾಯಿತು.

13. ನಟಿ ಸ್ನೇಹಲತಾ ರೆಡ್ಡಿಗೆ ಚಿತ್ರಹಿಂಸೆ

ಇನ್ನು ತುರ್ತು ಪರಿಸ್ಥಿತಿಯ ಸಮಯದಲ್ಲಿ, ಪತ್ರಕರ್ತರು, ಕಲಾವಿದರು ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಯನ್ನೂ ಗುರಿಯಾಗಿಸಲಾಗಿತ್ತು. ಹಿರಿಯ ಪತ್ರಕರ್ತೆ ಕುಲದೀಪ್ ನಾಯರ್ ಅವರನ್ನು ಮಿಸಾ ಅಡಿಯಲ್ಲಿ ಬಂಧಿಸಲಾಯಿತು.

ಅಲ್ಲದೇ ಪ್ರಮುಖವಾಗಿ, ನಟಿ-ಕಾರ್ಯಕರ್ತೆ ಸ್ನೇಹಲತಾ ರೆಡ್ಡಿ ಅವರನ್ನು ಜೈಲಿನಲ್ಲಿರಿಸಿ, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದು ಘೋರ ಇತಿಹಾಸ. ಅಷ್ಟು ಮಾತ್ರವಲ್ಲ 1977 ರಲ್ಲಿ ಬಿಡುಗಡೆಯಾದ ಸ್ವಲ್ಪ ಸಮಯದ ನಂತರ ಸಾಯುವ ಮೊದಲು ಸಾಕಷ್ಟು ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ್ದು ಘೋರಾತಿಘೋರ ಘಟನೆಯಾಗಿದೆ.

ಇನ್ನು, ವಿಡಂಬನಾತ್ಮಕ ಚಲನಚಿತ್ರ ಕಿಸ್ಸಾ ಕುರ್ಸಿ ಕಾ ದ ಎಲ್ಲಾ ಮುದ್ರಣಗಳನ್ನು ವಶಪಡಿಸಿಕೊಂಡು ಗುರಗಾಂವ್’ನಲ್ಲಿರುವ ಸಂಜಯ್ ಗಾಂಧಿಯವರ ಮಾರುತಿ ಕಾರ್ಖಾನೆಯಲ್ಲಿ ಸುಟ್ಟುಹಾಕಲಾಯಿತು. ರಾಜ್ಯ ಕ್ರಮದ ಮೂಲಕ ರಾಜಕೀಯ ಟೀಕೆಗಳನ್ನು ಪರಿಣಾಮಕಾರಿಯಾಗಿ ಸೆನ್ಸಾರ್ ಮಾಡಲಾಯಿತು.

14. ಸಾಂಸ್ಕೃತಿಕ ಚಟುವಟಿಕೆ ನಿರ್ಬಂಧ-ಕಪ್ಪುಪಟ್ಟಿಗೆ ಕಿಶೋರ್ ಕುಮಾರ್

ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನ ಎಂಬ ರಾಜ್ಯ-ನಿಯಂತ್ರಿತ ಪ್ರಸಾರ ಸಂಸ್ಥೆಗಳು ಸರ್ಕಾರದ ಕಟ್ಟುನಿಟ್ಟಿನ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಭಿನ್ನಾಭಿಪ್ರಾಯದ ಧ್ವನಿಗಳನ್ನು ಸಂಪೂರ್ಣವಾಗಿ ಹೊರತುಪಡಿಸಿ, ಸರ್ಕಾರ ಅನುಮೋದಿತ ವಿಷಯಗಳನ್ನು ಮಾತ್ರ ಪ್ರಸಾರ ಮಾಡಲಾಗುತ್ತಿತ್ತು.

ಸರ್ಕಾರದ ಪರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹಾಗೂ ಸಂಜಯ್ ಗಾಂಧಿ ಅವರ ಪ್ರಚಾರ ಮತ್ತು ಕಾಂಗ್ರೆಸ್ ಸರ್ಕಾರದ 20 ಅಂಶಗಳ ಕಾರ್ಯಕ್ರಮವನ್ನು ಬೆಂಬಲಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಪ್ರಸಿದ್ಧ ಹಿನ್ನೆಲೆ ಗಾಯಕ ಕಿಶೋರ್ ಕುಮಾರ್ ಅವರನ್ನು ಅನಧಿಕೃತವಾಗಿ ಕಪ್ಪುಪಟ್ಟಿಗೆ ಸೇರಿಸಲಾಯಿತು. ಇದರಿಂದಾಗಿ ಅವರ ಹಾಡುಗಳನ್ನು ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದಲ್ಲಿ ಪ್ರಸಾರ ಮಾಡುವುದನ್ನು ನಿಷೇಧಿಸಲಾಯಿತು.Kalahamsa Infotech private limited

15. ಆರ್’ಎಸ್’ಎಸ್ ನಿಷೇಧ

ತುರ್ತು ಪರಿಸ್ಥಿತಿ ಸಮಯದಲ್ಲಿ ದೇಶದ ರಾಜಕೀಯ ಹಾಗೂ ಸಾಮಾಜಿಕ ವಾತಾವರಣ ತೀವ್ರವಾಗಿ ಬದಲಾಗಿತ್ತು. ಈ ಅವಧಿಯಲ್ಲಿ ಪ್ರಧಾನಿ ಇಂದಿರಾಗಾಂಧಿ ನೇತೃತ್ವದಲ್ಲಿ ಸರ್ಕಾರವು ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದಂತೆ ತುರ್ತು ಪರಿಸ್ಥಿತಿಯನ್ನು ವಿರೋಧಿಸುತ್ತಿದ್ದ ಅನೇಕ ಸಂಘಟನೆಗಳನ್ನು ನಿಷೇಧಿಸಲಾಯಿತು. ಸರ್ಕಾರದ ವಿರೋಧ ಧ್ವನಿಯನ್ನು ಕಡಿಮೆ ಮಾಡುವ ಉದ್ದೇಶದಿಂದ, ದೇಶದಾದ್ಯಂತ ದಮನಾತ್ಮಕ ಕ್ರಮಗಳನ್ನು ಜಾರಿಗೊಳಿಸಲಾಯಿತು.

ಈ ಕ್ರಮಗಳ ಭಾಗವಾಗಿ:

  • ಸಾವಿರಾರು ಆರ್’ಎಸ್’ಎಸ್ ಪದಾಧಿಕಾರಿಗಳು ಮತ್ತು ಸ್ವಯಂಸೇವಕರ ಬಂಧನ
  • ಸಂಘದ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧ
  • ಸಾರ್ವಜನಿಕ ಸಭೆಗಳು, ಸಂಘಟನೆಗಳ ಕಾರ್ಯಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ

ಈ ಬಂಧನಗಳು ಮತ್ತು ನಿಷೇಧ ಕ್ರಮಗಳು ತುರ್ತು ಪರಿಸ್ಥಿತಿಯ ಸಮಯದಲ್ಲಿ ರಾಜಕೀಯ ವಿರೋಧವನ್ನು ಕುಂಠಿತಗೊಳಿಸುವ ಪ್ರಮುಖ ಕ್ರಮಗಳಾಗಿದ್ದವು. ಆರ್’ಎಸ್’ಎಸ್ ಮಾತ್ರವಲ್ಲದೆ, ಇತರ ವಿರೋಧ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳು ಹಾಗೂ ಸಾಮಾಜಿಕ ಚಳವಳಿಗಳ ನಾಯಕರನ್ನೂ ಸಹ ಇದೇ ರೀತಿಯಾಗಿ ಬಂಧಿಸಲಾಯಿತು.

16. ಲಕ್ಷಾಂತರ ಸಂತಾನಹರಣ ಶಸ್ತ್ರಚಿಕಿತ್ಸೆ

ತುರ್ತು ಪರಿಸ್ಥಿತಿಯು ವ್ಯಾಪಕವಾದ ಕುಟುಂಬ ಯೋಜನಾ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಈ ಅವಧಿಯಲ್ಲಿ ಭಾರತದಾದ್ಯಂತ 83 ಲಕ್ಷಕ್ಕೂ ಹೆಚ್ಚು ಸಂತಾನಹರಣ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಯಿತು. ಹಲವಾರು ಅಧಿಕೃತ ವಿಚಾರಣೆಗಳು ಮತ್ತು ಐತಿಹಾಸಿಕ ಅಧ್ಯಯನಗಳು ಕಾರ್ಯಕ್ರಮದ ಅನುಷ್ಠಾನದಲ್ಲಿ ಬಲವಂತ, ಆಡಳಿತಾತ್ಮಕ ಒತ್ತಡ ಮತ್ತು ದುರುಪಯೋಗದ ನಿದರ್ಶನಗಳನ್ನು ದಾಖಲಿಸಿವೆ. ಸರ್ಕಾರದ ದಾಖಲೆಗಳ ಪ್ರಕಾರ, ಈ ಶಸ್ತ್ರಚಿಕಿತ್ಸೆಗಳ ಪರಿಣಾಮವಾಗಿ ಕನಿಷ್ಠ 1,774 ಮಂದಿ ಸಾವನ್ನಪ್ಪಿದ್ದಾರೆ. ಹಲವಾರು ರಾಜ್ಯಗಳಲ್ಲಿ ಅಧಿಕಾರಿಗಳಿಗೆ ಗುರಿಗಳನ್ನು ನಿಗದಿಪಡಿಸಲಾಗಿತ್ತು.

17. ಟರ್ಕ್ಮನ್ ಗೇಟ್ ಘಟನೆ

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆದ ಟರ್ಕ್ಮನ್ ಗೇಟ್ ಧ್ವಂಸ ಕಾರ್ಯಾಚರಣೆಯಲ್ಲಿ ನಗರ ಸೌಂದರ್ಯೀಕರಣ ಅಭಿಯಾನಗಳ ಸಂದರ್ಭದಲ್ಲಿ ವಸತಿ ವಸಾಹತುಗಳನ್ನು ದೊಡ್ಡ ಪ್ರಮಾಣದಲ್ಲಿ ಕೆಡವಲಾಯಿತು. ಪ್ರತಿಭಟನೆಗಳ ಸಮಯದಲ್ಲಿ ಪೊಲೀಸ್ ಗುಂಡು ಹಾರಿಸಲಾಯಿತು. ನಾಗರಿಕರ ಸಾವು, ನಿವಾಸಿಗಳ ಸ್ಥಳಾಂತರ, ಮನೆಗಳು ಮತ್ತು ಜೀವನೋಪಾಯದ ವ್ಯಾಪಕ ನಷ್ಟ ಸಂಭವಿಸಿತು.

ಟರ್ಕ್ಮನ್ ಗೇಟ್ ಘಟನೆ ತುರ್ತು ಪರಿಸ್ಥಿತಿಯ ಸಮಯದಲ್ಲಿ ಸರ್ಕಾರದ ಕಠಿಣ ಮತ್ತು ಮಾನವೀಯ ಪರಿಣಾಮಗಳನ್ನು ಉಂಟುಮಾಡಿದ ನೀತಿಗಳ ಉದಾಹರಣೆಯಾಗಿ ಇಂದಿಗೂ ಚರ್ಚೆಯಾಗುತ್ತದೆ. ಇದು ನಾಗರಿಕ ಹಕ್ಕುಗಳು, ನಗರ ಅಭಿವೃದ್ಧಿ ನೀತಿಗಳು ಮತ್ತು ಆಡಳಿತದ ಹೊಣೆಗಾರಿಕೆ ಕುರಿತು ದೊಡ್ಡ ಪ್ರಶ್ನೆಗಳನ್ನು ಎಬ್ಬಿಸಿದ ಘಟನೆಯಾಗಿದೆ.

18. ಷಾ ಆಯೋಗದ ವರದಿ

1977ರಲ್ಲಿ ತುರ್ತು ಪರಿಸ್ಥಿತಿ ಅಂತ್ಯವಾದ ನಂತರ, ಹೊಸದಾಗಿ ಅಧಿಕಾರಕ್ಕೆ ಬಂದ ಜನತಾ ಸರ್ಕಾರವು ಸರ್ಕಾರದ ಅಧಿಕಾರದ ದುರುಪಯೋಗವನ್ನು ಪರಿಶೀಲಿಸಲು ಷಾ ತನಿಖಾ ಆಯೋಗವನ್ನು ಸ್ಥಾಪಿಸಿತು. ಈ ಆಯೋಗವು ತನ್ನ ವರದಿಯಲ್ಲಿ ತುರ್ತು ಪರಿಸ್ಥಿತಿ ಅವಧಿಯಲ್ಲಿ ನಡೆದ ಹಲವು ಗಂಭೀರ ಅಕ್ರಮಗಳನ್ನು ಬೆಳಕಿಗೆ ತಂದಿತು.

ಸಾವಿರಾರು ರಾಜಕೀಯ ವಿರೋಧಿಗಳು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಯಾವುದೇ ಸಮರ್ಪಕ ಕಾರಣವಿಲ್ಲದೆ ಬಂಧಿಸಲಾಗಿತ್ತು.ಆಡಳಿತ ವ್ಯವಸ್ಥೆಯಲ್ಲಿ ರಾಜಕೀಯ ನಾಯಕರು ನೇರ ಹಸ್ತಕ್ಷೇಪ ಮಾಡಿದ್ದು, ಅಧಿಕಾರಿಗಳ ಸ್ವತಂತ್ರತೆಯನ್ನು ಕುಂದಿಸಿತು.

The Maintenance of Internal Security Act (MISA) ಮುಂತಾದ ಕಾನೂನುಗಳನ್ನು ದುರುಪಯೋಗಪಡಿಸಿ ವ್ಯಕ್ತಿಗಳನ್ನು ನ್ಯಾಯಾಲಯದ ವಿಚಾರಣೆ ಇಲ್ಲದೆ ಬಂಧಿಸಲಾಗಿತ್ತು.

ಮಾಧ್ಯಮಗಳ ಮೇಲೆ ಕಟ್ಟುನಿಟ್ಟಿನ ಸೆನ್ಸಾರ್ ಹೇರಲಾಗಿದ್ದು, ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಕಟ್ಟಿ ಹಾಕಲಾಯಿತು. ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸಿ, ಜನರ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಹಿಂಸಿಸಲಾಯಿತು.

ಒಟ್ಟಾರೆ, ಷಾ ಆಯೋಗದ ವರದಿ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಸರ್ಕಾರದ ಅಧಿಕಾರವನ್ನು ಹೇಗೆ ದುರುಪಯೋಗಪಡಿಸಲಾಯಿತು ಎಂಬುದನ್ನು ಸ್ಪಷ್ಟವಾಗಿ ದಾಖಲಿಸಿ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆಯ ಸಂದೇಶ ನೀಡಿತು.

19. ತುರ್ತು ಪರಿಸ್ಥಿತಿ ಹಿಂತೆಗೆತ

ಸಾರ್ವತ್ರಿಕ ಚುನಾವಣೆಗಳ ಘೋಷಣೆಯ ನಂತರ, 1977ರ ಮಾರ್ಚ್ 21ರಂದು ತುರ್ತು ಪರಿಸ್ಥಿತಿಯನ್ನು ಅಧಿಕೃತವಾಗಿ ಹಿಂತೆಗೆದುಕೊಳ್ಳಲಾಯಿತು. ಇದು ಭಾರತದ ರಾಜಕೀಯ ಇತಿಹಾಸದಲ್ಲಿ ಮಹತ್ವದ ತಿರುವಾಗಿ ಪರಿಗಣಿಸಲಾಗುತ್ತದೆ. ತುರ್ತು ಪರಿಸ್ಥಿತಿಯ ಅವಧಿಯಲ್ಲಿ ನಡೆದ ನಾಗರಿಕ ಸ್ವಾತಂತ್ರ್ಯಗಳ ನಿರ್ಬಂಧ ಮತ್ತು ಸರ್ಕಾರದ ಕ್ರಮಗಳ ವಿರುದ್ಧ ಜನರಲ್ಲಿ ಅಸಮಾಧಾನ ಹೆಚ್ಚಾಗಿತ್ತು.

ಆ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಭಾರೀ ಸೋಲನುಭವಿಸಿತು. ಜನತೆ ತುರ್ತು ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ ಮತ ಚಲಾಯಿಸಿದ್ದು ಸ್ಪಷ್ಟವಾಗಿ ಗೋಚರಿಸಿತು.

ಈ ಚುನಾವಣೆಯ ಫಲಿತಾಂಶವಾಗಿ, ಜನತಾ ಪಕ್ಷ ಅಧಿಕಾರಕ್ಕೆ ಬಂದು, ಮೊರಾರ್ಜಿ ದೇಸಾಯಿ ಅವರ ನೇತೃತ್ವದಲ್ಲಿ ಕೇಂದ್ರ ಮಟ್ಟದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ರಚಿಸಲಾಯಿತು. ಇದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯಕ್ಕೆ ಚಾಲನೆ ನೀಡಿತು.

ಒಟ್ಟಿನಲ್ಲಿ, ಈ ಅವಧಿ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು ಪ್ರಮುಖ ಹಾಗೂ ವಿವಾದಾತ್ಮಕ ಅಧ್ಯಾಯವಾಗಿದ್ದು, ನಾಗರಿಕ ಹಕ್ಕುಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಗಂಭೀರ ಪರಿಣಾಮ ಬೀರಿತು.

ಆದರೆ ಈ ಕರಾಳ ಅವಧಿಯಲ್ಲಿಯೇ ಭಾರತದ ಜನತೆ ತಮ್ಮ ಪ್ರಜಾಪ್ರಭುತ್ವದ ಬಲವನ್ನು ತೋರಿಸಿದರು. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಪಕ್ಷಾತೀತವಾಗಿ ಒಗ್ಗೂಡಿ, ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಹೋರಾಡಿದರು. ಇದು ಭಾರತದ ಜನರ ಪ್ರಜಾಸತ್ತಾತ್ಮಕ ಮನೋಭಾವಕ್ಕೆ ಸಾಕ್ಷಿಯಾಗಿದೆ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   

Tags: Atal Bihari VajapayeeConstitution amendmentEmergency in IndiaIndia's EmergencyIndira GandhiKannada News WebsiteL K AdvaniLatest News KannadaMaintenance of Internal Security ActMISA Actಆಂತರಿಕ ತುರ್ತು ಪರಿಸ್ಥಿತಿಇಂದಿರಾಗಾಂಧಿಮೂಲಭೂತ ಹಕ್ಕುಗಳುಸಂವಿಧಾನ ತಿದ್ದುಪಡಿ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಅಡಿಕೆ ಲಾರಿ ತಡೆದು ಗುಣಮಟ್ಟ ಪರಿಶೀಲನೆ | ಅನಗತ್ಯ ಕ್ರಮ; ಆರಗ ಜ್ಞಾನೇಂದ್ರ ಆರೋಪ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Leave a Reply Cancel reply

Your email address will not be published. Required fields are marked *

No Result
View All Result
Indian Railway Fine Hike
English Articles

Jan Vishwas Act 2026: Revised Railway Penalty Rules Likely from July 1

by ಕಲ್ಪ ನ್ಯೂಸ್
June 23, 2026
2

Kalpa Media House  | New Delhi | The Indian Railways is set to implement revised penalty provisions under the Jan...

Read moreDetails
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
MODEL DEMOCRACY AT KRCS

Model Democracy At KRCS | Student Council Election Concluded Successfully

June 22, 2026
Naija Hegde’s Inspiring Rise to Success

From Coast to Glory: Naija Hegde’s Inspiring Rise to Success

June 21, 2026
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‌ಟೇಲ್ 3’ ಜೂ.21ರಂದು ಜೀ ಕನ್ನಡದಲ್ಲಿ

Darling Krishna, Milana Nagaraj ’s Love Mocktail 3 Premieres This 21st on Zee Kannada

June 19, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL