Wednesday, July 30, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ದಕ್ಷ

ಬುಲೆಟ್ ಸವಾರಿ-21: ಮರೆಯಲಾಗದ ಸರ್ಕಸ್ ದುರಂತ-2

March 24, 2018
in ದಕ್ಷ
0 0
0
Share on facebookShare on TwitterWhatsapp
Read - 2 minutes

ನಿಯಮ ಪ್ರಕಾರ ಆ ಮೈದಾನದಲ್ಲಿ ಸರ್ಕಸ್ ಪ್ರದರ್ಶನಕ್ಕೆ ಅವಕಾಶ ನೀಡಲು ಸಾಧ್ಯವೇ ಇರಲಿಲ್ಲ. ಏಕೆಂದರೆ ಮೈದಾನ ಸಾಕಷ್ಟು ವಿಶಾಲವಾಗಿರಲಿಲ್ಲ. ಮೇಲೆ ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿತ್ತು. ಸುರಕ್ಷತೆಗೆ ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ. ಇಂಥ ಅಪಾಯಕಾರಿ ಸ್ಥಳದಲ್ಲಿ, ಸಾವಿರಾರು ಜನ ಸೇರುವ ಸರ್ಕಸ್‌ನಂಥ ಕಾರ್ಯಕ್ರಮಕ್ಕೆ ಪರ್ಮಿಶನ್ ನೀಡಿದ ಬೆಂಗಳೂರು ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳ ಕರ್ತವ್ಯಲೋಪ ಸ್ಪಷ್ಟವಾಗಿತ್ತು.

ಅಧಿಕಾರಿಗಳ ಲಂಚಕೋರತನದಿಂದಾಗಿ ಅಮಾಯಕ ಜನ ಬೆಂಕಿಯಲ್ಲಿ ಬೆಂದು ಹೋಗಬೇಕಾಯಿತು. ಹೈಟೆಕ್ಷನ್ ತಂತಿಯಿಂದಾಗಿ ಬೆಂಕಿ ಹರಡಿತು ಎಂದು ಕೆಲವರು ವಾದಿಸಿದರು. ಸರ್ಕಸ್ ಶೋನ ಕೊನೆಯಲ್ಲಿ ದೇವರಿಗೆ ಆರತಿ ಮಾಡುವಾಗ ಡೇರೆಗೆ ಬೆಂಕಿ ತಗುಲಿತು ಎಂದು ಶಂಕೆ ವ್ಯಕ್ತಪಡಿಸಲಾಯಿತು. ಡೇರೆಯ ಒಳಗೆ ಯಾರೋ ಸಿಗರೇಟ್ ಸೇದಿ ಎಸೆದಿದ್ದೇ ಈ ಅನಾಹುತಕ್ಕೆ ಮೂಲ ಎಂಬ ವಾದವೂ ಕೇಳಿ ಬಂತು. ಈ ದುರ್ಘಟನೆ ಕುರಿತು ಸಮಗ್ರ ತನಿಖೆಗೆ ಸರಕಾರ ಆದೇಶಿಸಿತು. ಆದರೆ ಬೆಂಕಿ ಬೀಳಲು ಮೂಲ ಏನು ಎನ್ನುವುದು ಕೊನೆಗೂ ನಿಗೂಢವಾಗಿಯೇ ಉಳಿಯಿತು. ಈ ಘಟನೆಯಲ್ಲಿ ತಪ್ಪಿತಸ್ಥರಾದ ಯಾರೊಬ್ಬರಿಗೂ ಶಿಕ್ಷೆಯಾಗಲಿಲ್ಲ. ಯಾವ ಅಧಿಕಾರಿಯೂ ಕೆಲಸ ಕಳೆದುಕೊಳ್ಳಲಿಲ್ಲ!

ಈ ಕಹಿ ಘಟನೆ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಆದೇ ವರ್ಷ (1981) ಇದಕ್ಕಿಂತ ಭೀಕರವಾದ ಮತ್ತೊಂದು ದುರಂತ ನಡೆದು ಹೋಯಿತು. ಅದು ಕಳ್ಳಬಟ್ಟಿ ದುರಂತ. ಅಕ್ರಮ ಸರಾಯಿ ಕುಡಿದು ಸುಮಾರು 300 ಜನ ನೊಣಗಳಂತೆ ಹೀನಾಯವಾಗಿ ಸತ್ತುಹೋದರು. ಬೆಂಗಳೂರಿನ ಲಿಂಗರಾಜಪುರ, ಸಗಾಯ್‌ಪುರ, ಮುನಿರೆಡ್ಡಿಪಾಳ್ಯ, ಟ್ಯಾನರಿ ರಸ್ತೆಯ ಸುತ್ತಮುತ್ತಲಿನ ಕೊಳಗೇರಿ ಪ್ರದೇಶಗಳ ಮನೆಮನೆಗಳಲ್ಲಿ ಅಂದು ಸೂತಕದ ಛಾಯೆ ಆವರಿಸಿತ್ತು. ಲಾರಿಗಳಲ್ಲಿ ಹೆಣಗಳನ್ನು ಮರಳಿನಂತೆ ತುಂಬಿ, ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿ ಚಿಂದಿಯ ಮೂಟೆಗಳಂತೆ ಇಳಿಸಲಾಯಿತು.

ಅಲ್ಲಿಯ ವೈದ್ಯರಂತೂ ಪೋಸ್‌ಟ್ಮಾರ್ಟ್‌ಂ ಮಾಡಿ ಮಾಡಿ ಸುಸ್ತಾಗಿ ಕೊನೆಗೆ ಹೆಣ ಕೊಯ್ಯದೆ ಸುಮ್ಮನೆ ಶವಗಳ ಹಣೆಗೊಂದು ಪ್ಲಾಸ್ಟರ್ ಅಂಚಿಸಿ ಯುಡಿಆರ್ ಕೇಸ್ ನಂಬರ್ ಬರೆದು ಕೈತೊಳೆದುಕೊಳ್ಳ ತೊಡಗಿದರು! ಆ ಶವಗಳನ್ನು ವಾರಸುದಾರರಿಗೆ ಒಪ್ಪಿಸುವಾಗಿನ ದೃಶ್ಯನೆನಪಾದರೆ ಇಂದಿಗೂ ನಾನು ದುಃಖಿತನಾಗುತ್ತೇನೆ. ಕೆಲವು ಮನೆಗಳಲ್ಲಿ ಅಪ್ಪ-ಅಮ್ಮ ಇಬ್ಬರೂ ಕಳ್ಳಬಟ್ಟಿ ಕುಡಿದು ಸತ್ತಿದ್ದರು. ಅವರ ಪುಟ್ಟ ಮಕ್ಕಳು ಶವಾಗಾರದ ಬಳಿ ಮುಗ್ಧವಾಗಿ ಕೈಕೈ ಹಿಡಿದುಕೊಂಡು ನಿಂತಿರುತ್ತಿದ್ದರು. ಶವವನ್ನು ಸಂಬಂಧಿಕರಿಗೆ ಒಪ್ಪಿಸುತ್ತಿದ್ದಂತೆ ಆ ಮಕ್ಕಳು ಮೌನವಾಗಿ ರೋದಿಸುತ್ತ ಅವರನ್ನು ಹಿಂಬಾಲಿಸುತ್ತಿದ್ದರು.

ಆ ದಿನಗಳಲ್ಲಿ ಕಳ್ಳಬಟ್ಟಿ ದಂಧೆ ಜೋರಾಗಿತ್ತು. ಇದರಲ್ಲಿ ಕೆಲವು ರಾಜಕಾರಣಿಗಳು ಮತ್ತು ಪೊಲೀಸರೂ ಶಾಮೀಲಾಗಿದ್ದರು. ಇಂಡಸ್ಟ್ರಿಯಲ್ ಸ್ಪರಿಟ್, ಪೇಂಟ್ ಮತ್ತು ವಾರ್ನಿಶ್‌ಅನ್ನು ಸರಾಯಿಯಲ್ಲಿ ಸೇರಿಸುತ್ತಿದ್ದರು. ರಾಸಾಯನಿಕ ಗೊಬ್ಬರವನ್ನೂ ಬೆರೆಸುತ್ತಿದ್ದರು. ಇವೆಲ್ಲವುಗಳ ಮಿಶ್ರಣದಿಂದಾಗಿ ಸರಾಯಿ ಹೆಚ್ಚು ಕಿಕ್ ಕೊಡುತ್ತಿತ್ತು. ಆದರೆ ಮಿಶ್ರಣ ಸ್ವಲ್ಪ ಹದ ತಪ್ಪಿದರೂ ಕುಡುಕರಿಗೆ ಮಾರಣಾಂತಿಕವಾಗುತ್ತಿತ್ತು. ಅಂದು ಆಗಿದ್ದೂ ಇದೇ. ಒಬ್ಬ ಮಹಿಳೆ ಈ ದಂಧೆಯಲ್ಲಿ ಮುಂಚೂಣಿಯಲ್ಲಿದ್ದಳು ಅಮೀರ್ ಸುಲ್ತಾನ್ ಎಂಬಾತ ಕಳ್ಳಬಟ್ಟಿ ಸರಬರಾಜು ಮಾಡುವಲ್ಲಿ ಎಕ್‌ಸ್ಪರ್ಟ್ ಆಗಿದ್ದ. ಆತ ಮುಂದೆ ನನ್ನ ಕೊಲೆಗೆ ಯತ್ನಿಸಿ ಜೈಲು ಸೇರಿದ್ದ. ಆತನ ಇಡೀ ಕುಟುಂಬ ಅಪಘಾತದಲ್ಲಿ ಸತ್ತಿದ್ದು, ಬಳಿಕ ಆತ ಮುಲ್ಲಾ ಆಗಿ ಸಮಾಜ ಸೇವೆಯಲ್ಲಿ ತೊಡಗಿದ್ದನ್ನು ಹಿಂದಿನ ಭಾಗದಲ್ಲಿ ನಾನು ಬರೆದಿದ್ದೆ. ಈ ಪ್ರಕರಣದಲ್ಲಿ ಒಟ್ಟು 63 ಮಂದಿಯನ್ನು ಬಂಧಿಸಲಾಗಿತ್ತು. ಅಕ್ರಮ ಸರಾಯಿ ದಂಧೆ ವಿರುದ್ಧ ಭಾರೀ ಪ್ರತಿಭಟನೆ ನಡೆದವು. ಆಡಳಿತ ಪಕ್ಷದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದವು.

ಹಲವು ವರ್ಷಗಳ ಕಾಲ ಈ ಪ್ರಕರಣದ ವಿಚಾರಣೆ ನಡೆಯಿತಾದರೂ, ಒಬ್ಬನೇ ಒಬ್ಬ ಆರೋಪಿಗೂ ಶಿಕ್ಷೆಯಾಗಲಿಲ್ಲ! ನೂರಾರು ಜನರ ಸಾವಿಗೆ ಕಾರಣರಾದವರು ಕಾನೂನಿನ ಬಲೆಯಿಂದ ತಪ್ಪಿಸಿಕೊಂಡು ರಾಜಾರೋಷವಾಗಿ ಓಡಾಡಿದರು. ಸತ್ತವರಿಗೆ ಸರಕಾರ ಕೊಟ್ಟಿದ್ದು ಕೇವಲ 1 ಸಾವಿರ ರೂ. ಪರಿಹಾರ! ಆ ದುರಂತದಲ್ಲಿ ಮುಖ್ಯ ಆರೋಪಿಯಾಗಿದ್ದ ಮಹಿಳೆಯೊಬ್ಬಳು ಮುಂದೆ ಕಾರ್ಪೊರೇಟರ್ ಕೂಡ ಆದಳು. ಪ್ರಮುಖ ಪಕ್ಷವೊಂದನ್ನು ಸೇರಿ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದಳು. ಆಕೆ ಮಹಾನ್ ಸಮಾಜೋದ್ಧಾರಕಳಂತೆ ಭಾಷಣ ಮಾಡುತ್ತಿರುವುದು ಕೇಳಿ ಮೈ ಉರಿದುಹೋಗುತ್ತಿತ್ತು. ಆ ಸಂದರ್ಭದಲ್ಲಿ ಎಸಿಪಿಯಾಗಿದ್ದ ನಾನೇ ಆಕೆಯ ಪ್ರಚಾರ ಸಭೆಯ ಬಂದೋಬಸ್‌ತ್ಗೆ ನಿಲ್ಲಬೇಕಾಯಿತು! ಹೇಗಿದೆ ನಮ್ಮ ವ್ಯವಸ್ಥೆ?

ಸರ್ಕಸ್ ಅಗ್ನಿ ಅನಾಹುತ, ಕಳ್ಳಬಟ್ಟಿ ದುರಂತ, ಗಂಗಾರಾಮ್ ಕಟ್ಟಡ ಕುಸಿತ… 1981ರಿಂದ 83ರ ಅವಧಿಯಲ್ಲಿ ನಡೆದಿದ್ದ ಈ ಅವಘಡಗಳು ಬೆಂಗಳೂರನ್ನು ನಡುಗಿಸಿದ್ದವು. ಈ ಮೂರು ದುರ್ಘಟನೆಯ ವೇಳೆ ಪರಿಹಾರ ಕಾರ್ಯಾಚರಣೆಯಲ್ಲಿ ನಾನು ಭಾಗಿಯಾಗಿದ್ದೆ. ಆ ಕರಾಳ ಘಟನೆಗಳು ನೆನಪಾದರೆ ಇಂದಿಗೂ ದುಃಖವಾಗುತ್ತದೆ. ಬೇಸರದ ಸಂಗತಿಯೆಂದರೆ, ಈ ಪ್ರಕರಣಗಳಲ್ಲಿ ಯಾರೊಬ್ಬರಿಗೂ ಶಿಕ್ಷೆಯಾಗಲಿಲ್ಲ.

Tags: Bangalore PoliceBullet SavariCircus Company Fire AccidentDakshaKalpa NewsTiger BB Ashok Kumar
Previous Post

ಇದೊಂದು ಜಗತ್ತು: ಡೆಡ್ ಸೀ

Next Post

ಬುಲೆಟ್ ಸವಾರಿ-22: ಗಂಗಾರಾಮ್ ಕಟ್ಟಡ ಕುಸಿದಾಗ…

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಬುಲೆಟ್ ಸವಾರಿ-22: ಗಂಗಾರಾಮ್ ಕಟ್ಟಡ ಕುಸಿದಾಗ...

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಜೀ಼ ಕನ್ನಡದಲ್ಲಿ ಹೊಚ್ಚಹೊಸ ಶೋ ನ ದರ್ಬಾರು | ನಿಮ್ಮನ್ನು ಮನರಂಜಿಸಲು ಬರ್ತಿದೆ ಸಂಬಂಧಗಳ ನಡುವಿನ ಪ್ರೀತಿ ಸಾರುವ ‘ನಾವು ನಮ್ಮವರು’!

July 30, 2025

ನಿಮಗೆ ಕಾಶಿ ಯಾತ್ರೆ, ದಕ್ಷಿಣ ಯಾತ್ರೆ ಹೋಗುವ ಆಸೆ ಇದಿಯಾ? ಐಆರ್’ಸಿಟಿಸಿ ಕೊಟ್ಟಿದೆ ಬಿಗ್ ಗುಡ್ ನ್ಯೂಸ್

July 30, 2025

ಆ.2 | ಸರ್ಕಾರಿ ಶಾಲೆಗಳಲ್ಲಿ ಉಚಿತ ದಂತ ತಪಾಸಣೆ – ಮಾಹಿತಿ ಶಿಬಿರ

July 30, 2025

ಲಾರಿಗೆ ಬಸ್ ಡಿಕ್ಕಿ | ಇಬ್ಬರು ಸ್ಥಳದಲ್ಲೇ ಸಾವು

July 30, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಜೀ಼ ಕನ್ನಡದಲ್ಲಿ ಹೊಚ್ಚಹೊಸ ಶೋ ನ ದರ್ಬಾರು | ನಿಮ್ಮನ್ನು ಮನರಂಜಿಸಲು ಬರ್ತಿದೆ ಸಂಬಂಧಗಳ ನಡುವಿನ ಪ್ರೀತಿ ಸಾರುವ ‘ನಾವು ನಮ್ಮವರು’!

July 30, 2025

ನಿಮಗೆ ಕಾಶಿ ಯಾತ್ರೆ, ದಕ್ಷಿಣ ಯಾತ್ರೆ ಹೋಗುವ ಆಸೆ ಇದಿಯಾ? ಐಆರ್’ಸಿಟಿಸಿ ಕೊಟ್ಟಿದೆ ಬಿಗ್ ಗುಡ್ ನ್ಯೂಸ್

July 30, 2025

ಆ.2 | ಸರ್ಕಾರಿ ಶಾಲೆಗಳಲ್ಲಿ ಉಚಿತ ದಂತ ತಪಾಸಣೆ – ಮಾಹಿತಿ ಶಿಬಿರ

July 30, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!