ನವದೆಹಲಿ: ಹೌದು… ಆ ಹೆಣ್ಣುಮಗಳನ್ನು ಹಿಡಿದುಕೊಂಡು ಮಾತನಾಡುತ್ತಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ದುಃಖ ತಡೆಯಲಾಗದೇ ಕಣ್ಣಿರು ಹಾಕಿದ್ದಾರೆ. ಅದು ಯಾಕೆ ಗೊತ್ತಾ? ಓರ್ವ ಯೋಧ ತ್ಯಾಗದಿಂದ ಕಂಗೆಟ್ಟಿರುವ ಕುಟುಂಬವನ್ನು ಕಂಡು.
ತಾಯಿ ಭಾರತಿಯ ಸಾವಿರಾರು ವೀರಪುತ್ರರಲ್ಲಿ ಓರ್ವ ಔರಂಗಜೇಬ್… ಆತ ದೇಶಕ್ಕಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟಿದ್ದ. ಅಂತೆಯೇ, ತಾಯಿ ಭಾರತಿಯ ಪಾದಗಳಿಗೆ ತನ್ನನ್ನು ಸಮರ್ಪಿಸಿಕೊಂಡು ವೀರಸ್ವರ್ಗ ಸೇರಿದ್ದಾನೆ.
When Raksha Mantri @nsitharaman met brave mother of India’s braveheart Aurangzeb who was martyred when coward Pakistani terrorists killed him after conspiring his abduction in South Kashmir. This will move anyone to tears. Heartbreaking. One can’t imagine what she has sacrificed! pic.twitter.com/Kuxr7pQSZA
— Aditya Raj Kaul (@AdityaRajKaul) June 20, 2018
ಹೌದು… ಪಾಕಿಸ್ಥಾನಿ ಉಗ್ರ ಕ್ರೂರತ್ವಕ್ಕೆ ಬಲಿಯಾಗಿ ವೀರಸ್ವರ್ಗ ಸೇರಿದ ವೀರಯೋಧ ಔರಂಗಜೇಬ್ ಅವರ ಕುಟುಂಬಸ್ಥರನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸ್ವತಃ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ಔರಂಗಜೇಬ್ ಅವರ ತಾಯಿಯವರನ್ನು ಮಾತನಾಡಿಸುವ ವೇಳೆ ಆ ತಾಯಿಯ ದುಃಖವನ್ನು ಕಂಡ ಸಚಿವರಿಗೆ ಸ್ವತಃ ದುಃಖ ಉಮ್ಮಳಿಸಿ ಬಂದಿತು.
ಈ ಯೋಧನ ತ್ಯಾಗವನ್ನು ನೆನೆದ ಸಚಿವೆ ಈ ತ್ಯಾಗಕ್ಕೆ ಸರಿಸಾಟಿಯಲ್ಲ. ನಿಮ್ಮ ಮಗನ ದೇಶಸೇವೆ ಹಾಗೂ ತ್ಯಾಗ ಎಂದಿಗೂ ಅಮರವಾಗಿರುತ್ತದೆ ಎಂದಿದ್ದಾರೆ.
Discussion about this post