No Result
View All Result
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ
English Articles

Shivamogga SIR | District Achieves 81% e-Form Distribution

by kalpa News
July 8, 2026
0

Kalpa Media House  | Shivamogga | As part of the Election Commission of India’s statewide Special Summary Revision of the...

Read moreDetails
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
  • Advertise With Us
  • Grievances
  • About Us
  • Contact Us
Friday, July 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Editorial

ನೆನಪಿಡಿ ಅಟಲ್ ಜೀ, ನಿಮ್ಮ ಋಣ ತೀರಿಸುವುದಕ್ಕಿದೆ, ಮತ್ತೆ ಇಲ್ಲಿ ಜನಿಸಿ ಬರಲೇಬೇಕು

kalpa News by kalpa News
August 17, 2018
in Editorial
0
Share on FacebookShare on TwitterShare on WhatsApp

ಹೌದು… ಈ ಮಾತನ್ನು ತೀವ್ರವಾಗಿ ಉಮ್ಮಳಿಸಿ ಬರುತ್ತಿರುವ ದುಃಖದಿಂದಲೇ ಬರೆಯುತ್ತಿದ್ದೇನೆ…

ನೆನಪಿನಲ್ಲಿಟ್ಟುಕೊಳ್ಳಿ ಅಟಲ್ ಜೀ… ನೀವು ಈ ಭೂಮಿಯ ಋಣ ತೀರಿಸಿಕೊಂಡು ಹೊರಟಿರಬಹುದು. ಆದರೆ, ನಾವು ನಿಮ್ಮ ಋಣ ತೀರಿಸುವುದಕ್ಕೆ ಬಾಕಿ ಇದೆ. ಇದಕ್ಕಾಗಿ ನೀವು ಮತ್ತೆ ಭಾರತಲ್ಲೇ ಹುಟ್ಟಿ ಬರಬೇಕು…

ಎಷ್ಟೆಲ್ಲಾ ಋಣವನ್ನು ನಮ್ಮ ಮೇಲೆ ಹೊರಿಸಿ, ಯಾರಿಗೂ ಹೇಳದ ಹಾಗೆ ನೀವು ಹೊರಟುಬಿಟ್ಟರೆ ಹೇಗೆ.. ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ, ಪ್ರತಿನಿತ್ಯ ನೀವು ಮತ್ತೆ ಭಾರತದಲ್ಲೇ ಹುಟ್ಟಿ ಬರಬೇಕು ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಲೇ ಇರುತ್ತೇವೆ. ಎಲ್ಲಿಯವರೆಗೆ? ಪ್ರಾರ್ಥನೆ ಭಗವಂತನಿಗೆ ತಲುಪಿ, ಅದು ನಿಮಗೆ ತಲುಪಿ, ನೀವು ಮತ್ತೆ ಹುಟ್ಟಿ ಬರುವವರೆಗೂ… ಭಾರದ ಮನಸ್ಸಿನಿಂದ ನಿಮ್ಮನ್ನು ಕಳುಹಿಸಿಕೊಡುತ್ತಿದ್ದೇವೆ ಮರೆಯದಿರಿ.

ಈ ಋಣವನ್ನು ನಾವು ತೀರಿಸಬೇಡವೇ?

ದೇಶಕ್ಕಾಗಿ, ನಮ್ಮಂತಹವರ ಶ್ರೇಯಸ್ಸಿಗಾಗಿ, ತಾಯಿ ಭಾರತಿಗಾಗಿ ನೀವು ವಿವಾಹವಾಗದೇ ಕೊನೆಯವರೆಗೂ ಬ್ರಹ್ಮಚಾರಿಯಾಗಿಯೇ ಇದ್ದು, ನಿಮ್ಮ ವೈಯಕ್ತಿಕ ಜೀವನ ತ್ಯಾಗ ಮಾಡಿದ್ದೀರಿ. ಇದಕ್ಕಾಗಿ ನೀವು ಎಂದಿಗೂ ಪರಿತಪಿಸಿಲ್ಲ ಎನ್ನುವುದು ನಮಗೆ ಗೊತ್ತು. ಆದರೆ, ನಿಮ್ಮ ಈ ತ್ಯಾಗದ ಋಣವನ್ನು ನಾವು ತೀರಿಸಬೇಡವೇ?

ಮೂರು ಬಾರಿ ಪ್ರಧಾನಿಯಾದರೂ ನಮ್ಮ ತೆರಿಗೆ ದುಡ್ಡನ್ನು ತಿನ್ನದೇ, ನಿಮಗಾಗಿ ಏನನ್ನೂ ಮಾಡಿಕೊಳ್ಳದೇ ನಮ್ಮ ಸೇವೆ ಮಾಡಿದ್ದೀರಿ. ಈ ಋಣವನ್ನು ನಾವು ತೀರಿಸಬೇಡವೇ?

ನಿಮ್ಮ ಅವಧಿಯಲ್ಲಿ ನಡೆದ ಅಣ್ವಸ್ತ್ರ ಪರೀಕ್ಷೆಯ ಯಶಸ್ಸಿನಿಂದ ಇಡಿಯ ವಿಶ್ವ ನಮ್ಮನ್ನು ನೋಡುವ ದೃಷ್ಠಿಕೋನವನ್ನೇ ಬದಲಿಸಿಕೊಂಡು, ನಮ್ಮೆಲ್ಲರ ಗೌರವ ಹೆಚ್ಚಾಗುವಂತೆ ಮಾಡಿದಿರಿ. ಈ ಋಣವನ್ನು ನಾವು ತೀರಿಸಬೇಡವೇ?

ಅಮೆರಿಕಾದ ಸಂಸತ್‌ನಲ್ಲಿ ನಮ್ಮ ದೇಶದ ಅಧಿಕೃತ ಭಾಷೆ ಹಿಂದಿಯಲ್ಲಿ ಮಾತನಾಡಿ, ವಿಶ್ವದ ದೊಡ್ಡಣ್ಣ ನಮ್ಮ ವಿಚಾರದಲ್ಲಿ ಮೃದುವಾಗುವಂತೆ ಮಾಡಿದ್ದೀರಿ. ಈ ಋಣವನ್ನು ನಾವು ತೀರಿಸಬೇಡವೇ?

ಕಾರ್ಗಿಲ್ ಯುದ್ಧವನ್ನು ಸಾರಿ, ಸೈನಿಕರಿಗೆ ಬಲ ತುಂಬಿ, ಪಾಪಿ ಪಾಕಿಸ್ಥಾನ ಕನಸಿನಲ್ಲೂ ಉಚ್ಚೆ ಮಾಡಿಕೊಳ್ಳುವಂತೆ ಬಡಿದು ಹಾಕುವಲ್ಲಿ ಸೇನೆಯ ಮೂಲಕ ನೀವು ಯಶಸ್ವಿಯಾಗಿದ್ದಿರಿ. ಇದನ್ನು ನಿಮಗಾಗಿ ಮಾಡಿಕೊಂಡಿರೇ? ಇಲ್ಲವಲ್ಲ ನಮಗಾಗಿ ಅಲ್ಲವೇ ಮಾಡಿದ್ದು. ಈ ಋಣವನ್ನು ನಾವು ತೀರಿಸಬೇಡವೇ?

ಇಂಡಿಯನ್ ಏರ್ ಲೈನ್‌ಸ್ ವಿಮಾನ ಹೈಜಾಕ್ ಆದಾಗ, ಉಗ್ರರನ್ನು ಬಿಟ್ಟು ಆನಂತರ ನೋಡಿಕೊಳ್ಳೋಣ. ಆದರೆ, ಈಗ ನಮ್ಮ ಕುಟುಂಬ(ದೇಶದ) ಸದಸ್ಯರು ಮುಖ್ಯ ಎಂದು ಉಗ್ರರನ್ನು ಬಿಡುಗಡೆ ಮಾಡಿ, ನಮ್ಮವರನ್ನು ಸುರಕ್ಷಿತವಾಗಿ ಬಿಡಿಸಿಕೊಂಡು ಬಂದಿರಲ್ಲ. ಆ ನಮ್ಮವರೆಲ್ಲಾ ನಿಮ್ಮ ಋಣ ತೀರಿಸಬೇಡವೇ?
ದೇಶದಲ್ಲಿ ಸುವರ್ಣ ಚತುಷ್ಪತ ಹೆದ್ದಾರಿ ನಿರ್ಮಾಣ ಮಾಡುವ ಮೂಲಕ ನಾವೆಲ್ಲಾ ನೆಮ್ಮದಿಯಿಂದ ಸುಖಕರ ಪ್ರಯಾಣ ಮಾಡಲು ಕಷ್ಟಪಟ್ಟಿರಲ್ಲ ನಮಗಾಗಿ.. ಆ ಋಣವನ್ನು ನಾವು ತೀರಿಸಬೇಡವೇ?

ಸರ್ವ ಶಿಕ್ಷಾ ಅಭಿಯಾನದ ಮೂಲಕ ದೇಶದ ಭವಿಷ್ಯಗಳಾದ ಮಕ್ಕಳನ್ನು ಶಿಕ್ಷಿತರಾಗಿ ರೂಪಿಸುವಂತೆ ಪರಮ ಪವಿತ್ರವಾದ ಕಾರ್ಯ ಮಾಡಿದ್ದಿರಲ್ಲಾ. ಆ ಋಣವನ್ನು ನಾವು ತೀರಿಸಬೇಡವೇ?

ನೀವು ಇಂದು ನಮ್ಮನ್ನು ಬಿಟ್ಟು ಹೋಗುತ್ತಿದ್ದೀರಿ. ಆದರೆ, ನಿಮ್ಮನ್ನು ಎಂದಿಗೂ ನೇರವಾಗಿ ಕಾಣದ ಕೋಟ್ಯಂತರ ಭಾರತೀಯರು ನಿಮಗಾಗಿ ಕಣ್ಣೀರಿಡುತ್ತಿದ್ದಾರೆ ಎಂದರೆ ಅದು ನೀವು ದೇಶವಾಸಿಗಳಲ್ಲಿ ಹುಟ್ಟು ಹಾಕಿದ ಅನುಬಂಧ ಹಾಗೂ ಭಾವನೆ. ಇಷ್ಟು ಆತ್ಮೀಯತೆಯನ್ನು ನಮ್ಮಲ್ಲಿ ಹುಟ್ಟು ಹಾಕಿದ ನಿಮ್ಮ ಆ ಋಣವನ್ನು ನಾವು ತೀರಿಸಬೇಡವೇ?

ನಿಮ್ಮನ್ನು ನೋಡಿ ನಾವೂ ಹೀಗೆ ಬದುಕಬೇಕು, ದೇಶಕ್ಕಾಗಿ ಏನಾದರೂ ಮಾಡಬೇಕು, ನಮ್ಮ ಮಕ್ಕಳನ್ನೂ ಸಹ ನಿಮ್ಮಂತೆಯೇ ರೂಪಿಸಬೇಕು ಎಂಬ ಕನಸು, ಛಲ ಹಾಗೂ ಆತ್ಮವಿಶ್ವಾಸವನ್ನು ನಮಗೆ ಕಲಿಸಿದ್ದೀರಿ. ಈ ಋಣವನ್ನು ನಾವು ತೀರಿಸಬೇಡವೇ?

ಎಲ್ಲಕ್ಕೂ ಮಿಗಿಲಾಗಿ, ನರೇಂದ್ರ ಮೋದಿ ಅವರಂತಹ ಮಹಾನ್ ಪ್ರಧಾನ ಸೇವಕನನ್ನು ಈ ದೇಶಕ್ಕೆ ಕೊಡುಗೆಯನ್ನಾಗಿ ನೀಡುವ ಮೂಲಕ ದೇಶಕ್ಕೆ ನೀವು ಎಂತಹ ಕೊಡುಗೆ ನೀಡಿದ್ದೀರಿ ಗೊತ್ತೇನು. ಹಿಂದೆ 100 ವರ್ಷ, ಮುಂದೆ 100 ವರ್ಷ ಇಂತಹ ಕೊಡುಗೆ ನೀಡಲು ಬಹುಶಃ ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಈ ಕೊಡುಗೆಯಿಂದ ನಾವೆಲ್ಲಾ ವಿಶ್ವದಲ್ಲಿ ಹೆಮ್ಮೆಯಿಂದ ಬೀಗುತ್ತಾ ಮನದುಂಬಿಕೊಳ್ಳುತ್ತಿದ್ದೇವೆ. ಆ ಋಣವನ್ನು ನಾವು ತೀರಿಸಬೇಡವೇ?

ನೀವು ಹೊರಿಸಿರುವ ಋಣದ ಪಟ್ಟಿಯನ್ನು ಅಷ್ಟು ಸುಲಭವಾಗಿ ಹೇಳಲು ಸಾಧ್ಯವಿಲ್ಲ.

ಎಷ್ಟೆಲ್ಲಾ ಋಣಗಳನ್ನು ನಮ್ಮ ಮೇಲೆ ಹೊರಿಸಿ, ಹೇಳದೇ ಕೇಳದೇ ಹೊರಟುಬಿಟ್ಟರೆ ನಾವೇನು ಮಾಡಬೇಕು? ನೀವು ಭೂಮಿಯ ಋಣ ತೀರಿಸಿಕೊಂಡು ತಾಯಿ ಭಾರತಿಯ ಪಾದಪದ್ಮಗಳಿಗೆ ಹೊರಟುಬಿಟ್ಟಿರಿ.

ನಿಜ… 2004ರಲ್ಲಿ ನಮ್ಮ ಜನ ತಪ್ಪು ನಿರ್ಧಾರ ಕೈಗೊಂಡು ನಿಮಗೆ ಇನ್ನಿಲ್ಲದಂತೆ ನೋವು ನೀಡಿದ್ದರು. ಆದರೆ, ಈಗ ಜನ ಬದಲಾಗಿದ್ದಾರೆ. ಇನ್ನು ಮುಂದೆ ಇಂತಹ ತಪ್ಪುಗಳನ್ನು ನಾವು ಮಾಡುವುದಿಲ್ಲ. ಹಿರಿಯರಾದ ನೀವು ಸಮಸ್ತ ಭಾರತೀಯರನ್ನೊಮ್ಮೆ ಕ್ಷಮಿಸಿ ಬಿಡಿ.

ನೀವು ಹೊರಿಸಿದ ಋಣವನ್ನು ನಾವು ತೀರಿಸುವುದು ಇನ್ನೂ ಬಾಕಿಯಿದೆ. ಇದಕ್ಕಾಗಿ ನೀವು ಮತ್ತೆ ಭಾರತದಲ್ಲೇ ಹುಟ್ಟಿ ಬರಬೇಕು ನೆನಪಿರಲಿ..

ನಿಮಗಾಗಿ ನಮ್ಮ ಪ್ರಾರ್ಥನೆ ಸದಾ ನಡೆಯುತ್ತಲೇ ಇರುತ್ತದೆ. ಎಲ್ಲಿಯವರೆಗೆ? ಪ್ರಾರ್ಥನೆ ಭಗವಂತನಿಗೆ ತಲುಪಿ, ಅದು ನಿಮಗೆ ತಲುಪಿ, ನೀವು ಮತ್ತೆ ಹುಟ್ಟಿ ಬರುವವರೆಗೂ… ಭಾರದ ಮನಸ್ಸಿನಿಂದ ನಿಮ್ಮನ್ನು ಕಳುಹಿಸಿಕೊಡುತ್ತಿದ್ದೇವೆ ಮರೆಯದಿರಿ.

ಹೋಗಿ ಬನ್ನಿ ಅಟಲ್ ಜೀ…

-ಎಸ್.ಆರ್. ಅನಿರುದ್ಧ ವಸಿಷ್ಠ

Tags: Ajathashatru Atal JiAtal Bihari VajpayeeAtal Bihari Vajpayee deathPM Narendra Modi
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಅಜಾತಶತ್ರುವಿನ ಅಂತಿಮ ಯಾತ್ರೆ ಆರಂಭ: ನೇರ ಪ್ರಸಾರ ನೋಡಿ

Next Post

ಅಟಲ್ ಯುಗಾಂತ್ಯ: ಪಂಚಭೂತಗಳಲ್ಲಿ ಅಜಾತಶತ್ರು ಲೀನ

kalpa News

kalpa News

Next Post

ಅಟಲ್ ಯುಗಾಂತ್ಯ: ಪಂಚಭೂತಗಳಲ್ಲಿ ಅಜಾತಶತ್ರು ಲೀನ

Leave a Reply Cancel reply

Your email address will not be published. Required fields are marked *

No Result
View All Result
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ
English Articles

Shivamogga SIR | District Achieves 81% e-Form Distribution

by kalpa News
July 8, 2026
0

Kalpa Media House  | Shivamogga | As part of the Election Commission of India’s statewide Special Summary Revision of the...

Read moreDetails
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL