Tuesday, June 24, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Editorial

ನೆನಪಿಡಿ ಅಟಲ್ ಜೀ, ನಿಮ್ಮ ಋಣ ತೀರಿಸುವುದಕ್ಕಿದೆ, ಮತ್ತೆ ಇಲ್ಲಿ ಜನಿಸಿ ಬರಲೇಬೇಕು

August 17, 2018
in Editorial
0 0
0
Share on facebookShare on TwitterWhatsapp
Read - 2 minutes

ಹೌದು… ಈ ಮಾತನ್ನು ತೀವ್ರವಾಗಿ ಉಮ್ಮಳಿಸಿ ಬರುತ್ತಿರುವ ದುಃಖದಿಂದಲೇ ಬರೆಯುತ್ತಿದ್ದೇನೆ…

ನೆನಪಿನಲ್ಲಿಟ್ಟುಕೊಳ್ಳಿ ಅಟಲ್ ಜೀ… ನೀವು ಈ ಭೂಮಿಯ ಋಣ ತೀರಿಸಿಕೊಂಡು ಹೊರಟಿರಬಹುದು. ಆದರೆ, ನಾವು ನಿಮ್ಮ ಋಣ ತೀರಿಸುವುದಕ್ಕೆ ಬಾಕಿ ಇದೆ. ಇದಕ್ಕಾಗಿ ನೀವು ಮತ್ತೆ ಭಾರತಲ್ಲೇ ಹುಟ್ಟಿ ಬರಬೇಕು…

ಎಷ್ಟೆಲ್ಲಾ ಋಣವನ್ನು ನಮ್ಮ ಮೇಲೆ ಹೊರಿಸಿ, ಯಾರಿಗೂ ಹೇಳದ ಹಾಗೆ ನೀವು ಹೊರಟುಬಿಟ್ಟರೆ ಹೇಗೆ.. ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ, ಪ್ರತಿನಿತ್ಯ ನೀವು ಮತ್ತೆ ಭಾರತದಲ್ಲೇ ಹುಟ್ಟಿ ಬರಬೇಕು ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಲೇ ಇರುತ್ತೇವೆ. ಎಲ್ಲಿಯವರೆಗೆ? ಪ್ರಾರ್ಥನೆ ಭಗವಂತನಿಗೆ ತಲುಪಿ, ಅದು ನಿಮಗೆ ತಲುಪಿ, ನೀವು ಮತ್ತೆ ಹುಟ್ಟಿ ಬರುವವರೆಗೂ… ಭಾರದ ಮನಸ್ಸಿನಿಂದ ನಿಮ್ಮನ್ನು ಕಳುಹಿಸಿಕೊಡುತ್ತಿದ್ದೇವೆ ಮರೆಯದಿರಿ.

ಈ ಋಣವನ್ನು ನಾವು ತೀರಿಸಬೇಡವೇ?

ದೇಶಕ್ಕಾಗಿ, ನಮ್ಮಂತಹವರ ಶ್ರೇಯಸ್ಸಿಗಾಗಿ, ತಾಯಿ ಭಾರತಿಗಾಗಿ ನೀವು ವಿವಾಹವಾಗದೇ ಕೊನೆಯವರೆಗೂ ಬ್ರಹ್ಮಚಾರಿಯಾಗಿಯೇ ಇದ್ದು, ನಿಮ್ಮ ವೈಯಕ್ತಿಕ ಜೀವನ ತ್ಯಾಗ ಮಾಡಿದ್ದೀರಿ. ಇದಕ್ಕಾಗಿ ನೀವು ಎಂದಿಗೂ ಪರಿತಪಿಸಿಲ್ಲ ಎನ್ನುವುದು ನಮಗೆ ಗೊತ್ತು. ಆದರೆ, ನಿಮ್ಮ ಈ ತ್ಯಾಗದ ಋಣವನ್ನು ನಾವು ತೀರಿಸಬೇಡವೇ?

ಮೂರು ಬಾರಿ ಪ್ರಧಾನಿಯಾದರೂ ನಮ್ಮ ತೆರಿಗೆ ದುಡ್ಡನ್ನು ತಿನ್ನದೇ, ನಿಮಗಾಗಿ ಏನನ್ನೂ ಮಾಡಿಕೊಳ್ಳದೇ ನಮ್ಮ ಸೇವೆ ಮಾಡಿದ್ದೀರಿ. ಈ ಋಣವನ್ನು ನಾವು ತೀರಿಸಬೇಡವೇ?

ನಿಮ್ಮ ಅವಧಿಯಲ್ಲಿ ನಡೆದ ಅಣ್ವಸ್ತ್ರ ಪರೀಕ್ಷೆಯ ಯಶಸ್ಸಿನಿಂದ ಇಡಿಯ ವಿಶ್ವ ನಮ್ಮನ್ನು ನೋಡುವ ದೃಷ್ಠಿಕೋನವನ್ನೇ ಬದಲಿಸಿಕೊಂಡು, ನಮ್ಮೆಲ್ಲರ ಗೌರವ ಹೆಚ್ಚಾಗುವಂತೆ ಮಾಡಿದಿರಿ. ಈ ಋಣವನ್ನು ನಾವು ತೀರಿಸಬೇಡವೇ?

ಅಮೆರಿಕಾದ ಸಂಸತ್‌ನಲ್ಲಿ ನಮ್ಮ ದೇಶದ ಅಧಿಕೃತ ಭಾಷೆ ಹಿಂದಿಯಲ್ಲಿ ಮಾತನಾಡಿ, ವಿಶ್ವದ ದೊಡ್ಡಣ್ಣ ನಮ್ಮ ವಿಚಾರದಲ್ಲಿ ಮೃದುವಾಗುವಂತೆ ಮಾಡಿದ್ದೀರಿ. ಈ ಋಣವನ್ನು ನಾವು ತೀರಿಸಬೇಡವೇ?

ಕಾರ್ಗಿಲ್ ಯುದ್ಧವನ್ನು ಸಾರಿ, ಸೈನಿಕರಿಗೆ ಬಲ ತುಂಬಿ, ಪಾಪಿ ಪಾಕಿಸ್ಥಾನ ಕನಸಿನಲ್ಲೂ ಉಚ್ಚೆ ಮಾಡಿಕೊಳ್ಳುವಂತೆ ಬಡಿದು ಹಾಕುವಲ್ಲಿ ಸೇನೆಯ ಮೂಲಕ ನೀವು ಯಶಸ್ವಿಯಾಗಿದ್ದಿರಿ. ಇದನ್ನು ನಿಮಗಾಗಿ ಮಾಡಿಕೊಂಡಿರೇ? ಇಲ್ಲವಲ್ಲ ನಮಗಾಗಿ ಅಲ್ಲವೇ ಮಾಡಿದ್ದು. ಈ ಋಣವನ್ನು ನಾವು ತೀರಿಸಬೇಡವೇ?

ಇಂಡಿಯನ್ ಏರ್ ಲೈನ್‌ಸ್ ವಿಮಾನ ಹೈಜಾಕ್ ಆದಾಗ, ಉಗ್ರರನ್ನು ಬಿಟ್ಟು ಆನಂತರ ನೋಡಿಕೊಳ್ಳೋಣ. ಆದರೆ, ಈಗ ನಮ್ಮ ಕುಟುಂಬ(ದೇಶದ) ಸದಸ್ಯರು ಮುಖ್ಯ ಎಂದು ಉಗ್ರರನ್ನು ಬಿಡುಗಡೆ ಮಾಡಿ, ನಮ್ಮವರನ್ನು ಸುರಕ್ಷಿತವಾಗಿ ಬಿಡಿಸಿಕೊಂಡು ಬಂದಿರಲ್ಲ. ಆ ನಮ್ಮವರೆಲ್ಲಾ ನಿಮ್ಮ ಋಣ ತೀರಿಸಬೇಡವೇ?
ದೇಶದಲ್ಲಿ ಸುವರ್ಣ ಚತುಷ್ಪತ ಹೆದ್ದಾರಿ ನಿರ್ಮಾಣ ಮಾಡುವ ಮೂಲಕ ನಾವೆಲ್ಲಾ ನೆಮ್ಮದಿಯಿಂದ ಸುಖಕರ ಪ್ರಯಾಣ ಮಾಡಲು ಕಷ್ಟಪಟ್ಟಿರಲ್ಲ ನಮಗಾಗಿ.. ಆ ಋಣವನ್ನು ನಾವು ತೀರಿಸಬೇಡವೇ?

ಸರ್ವ ಶಿಕ್ಷಾ ಅಭಿಯಾನದ ಮೂಲಕ ದೇಶದ ಭವಿಷ್ಯಗಳಾದ ಮಕ್ಕಳನ್ನು ಶಿಕ್ಷಿತರಾಗಿ ರೂಪಿಸುವಂತೆ ಪರಮ ಪವಿತ್ರವಾದ ಕಾರ್ಯ ಮಾಡಿದ್ದಿರಲ್ಲಾ. ಆ ಋಣವನ್ನು ನಾವು ತೀರಿಸಬೇಡವೇ?

ನೀವು ಇಂದು ನಮ್ಮನ್ನು ಬಿಟ್ಟು ಹೋಗುತ್ತಿದ್ದೀರಿ. ಆದರೆ, ನಿಮ್ಮನ್ನು ಎಂದಿಗೂ ನೇರವಾಗಿ ಕಾಣದ ಕೋಟ್ಯಂತರ ಭಾರತೀಯರು ನಿಮಗಾಗಿ ಕಣ್ಣೀರಿಡುತ್ತಿದ್ದಾರೆ ಎಂದರೆ ಅದು ನೀವು ದೇಶವಾಸಿಗಳಲ್ಲಿ ಹುಟ್ಟು ಹಾಕಿದ ಅನುಬಂಧ ಹಾಗೂ ಭಾವನೆ. ಇಷ್ಟು ಆತ್ಮೀಯತೆಯನ್ನು ನಮ್ಮಲ್ಲಿ ಹುಟ್ಟು ಹಾಕಿದ ನಿಮ್ಮ ಆ ಋಣವನ್ನು ನಾವು ತೀರಿಸಬೇಡವೇ?

ನಿಮ್ಮನ್ನು ನೋಡಿ ನಾವೂ ಹೀಗೆ ಬದುಕಬೇಕು, ದೇಶಕ್ಕಾಗಿ ಏನಾದರೂ ಮಾಡಬೇಕು, ನಮ್ಮ ಮಕ್ಕಳನ್ನೂ ಸಹ ನಿಮ್ಮಂತೆಯೇ ರೂಪಿಸಬೇಕು ಎಂಬ ಕನಸು, ಛಲ ಹಾಗೂ ಆತ್ಮವಿಶ್ವಾಸವನ್ನು ನಮಗೆ ಕಲಿಸಿದ್ದೀರಿ. ಈ ಋಣವನ್ನು ನಾವು ತೀರಿಸಬೇಡವೇ?

ಎಲ್ಲಕ್ಕೂ ಮಿಗಿಲಾಗಿ, ನರೇಂದ್ರ ಮೋದಿ ಅವರಂತಹ ಮಹಾನ್ ಪ್ರಧಾನ ಸೇವಕನನ್ನು ಈ ದೇಶಕ್ಕೆ ಕೊಡುಗೆಯನ್ನಾಗಿ ನೀಡುವ ಮೂಲಕ ದೇಶಕ್ಕೆ ನೀವು ಎಂತಹ ಕೊಡುಗೆ ನೀಡಿದ್ದೀರಿ ಗೊತ್ತೇನು. ಹಿಂದೆ 100 ವರ್ಷ, ಮುಂದೆ 100 ವರ್ಷ ಇಂತಹ ಕೊಡುಗೆ ನೀಡಲು ಬಹುಶಃ ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಈ ಕೊಡುಗೆಯಿಂದ ನಾವೆಲ್ಲಾ ವಿಶ್ವದಲ್ಲಿ ಹೆಮ್ಮೆಯಿಂದ ಬೀಗುತ್ತಾ ಮನದುಂಬಿಕೊಳ್ಳುತ್ತಿದ್ದೇವೆ. ಆ ಋಣವನ್ನು ನಾವು ತೀರಿಸಬೇಡವೇ?

ನೀವು ಹೊರಿಸಿರುವ ಋಣದ ಪಟ್ಟಿಯನ್ನು ಅಷ್ಟು ಸುಲಭವಾಗಿ ಹೇಳಲು ಸಾಧ್ಯವಿಲ್ಲ.

ಎಷ್ಟೆಲ್ಲಾ ಋಣಗಳನ್ನು ನಮ್ಮ ಮೇಲೆ ಹೊರಿಸಿ, ಹೇಳದೇ ಕೇಳದೇ ಹೊರಟುಬಿಟ್ಟರೆ ನಾವೇನು ಮಾಡಬೇಕು? ನೀವು ಭೂಮಿಯ ಋಣ ತೀರಿಸಿಕೊಂಡು ತಾಯಿ ಭಾರತಿಯ ಪಾದಪದ್ಮಗಳಿಗೆ ಹೊರಟುಬಿಟ್ಟಿರಿ.

ನಿಜ… 2004ರಲ್ಲಿ ನಮ್ಮ ಜನ ತಪ್ಪು ನಿರ್ಧಾರ ಕೈಗೊಂಡು ನಿಮಗೆ ಇನ್ನಿಲ್ಲದಂತೆ ನೋವು ನೀಡಿದ್ದರು. ಆದರೆ, ಈಗ ಜನ ಬದಲಾಗಿದ್ದಾರೆ. ಇನ್ನು ಮುಂದೆ ಇಂತಹ ತಪ್ಪುಗಳನ್ನು ನಾವು ಮಾಡುವುದಿಲ್ಲ. ಹಿರಿಯರಾದ ನೀವು ಸಮಸ್ತ ಭಾರತೀಯರನ್ನೊಮ್ಮೆ ಕ್ಷಮಿಸಿ ಬಿಡಿ.

ನೀವು ಹೊರಿಸಿದ ಋಣವನ್ನು ನಾವು ತೀರಿಸುವುದು ಇನ್ನೂ ಬಾಕಿಯಿದೆ. ಇದಕ್ಕಾಗಿ ನೀವು ಮತ್ತೆ ಭಾರತದಲ್ಲೇ ಹುಟ್ಟಿ ಬರಬೇಕು ನೆನಪಿರಲಿ..

ನಿಮಗಾಗಿ ನಮ್ಮ ಪ್ರಾರ್ಥನೆ ಸದಾ ನಡೆಯುತ್ತಲೇ ಇರುತ್ತದೆ. ಎಲ್ಲಿಯವರೆಗೆ? ಪ್ರಾರ್ಥನೆ ಭಗವಂತನಿಗೆ ತಲುಪಿ, ಅದು ನಿಮಗೆ ತಲುಪಿ, ನೀವು ಮತ್ತೆ ಹುಟ್ಟಿ ಬರುವವರೆಗೂ… ಭಾರದ ಮನಸ್ಸಿನಿಂದ ನಿಮ್ಮನ್ನು ಕಳುಹಿಸಿಕೊಡುತ್ತಿದ್ದೇವೆ ಮರೆಯದಿರಿ.

ಹೋಗಿ ಬನ್ನಿ ಅಟಲ್ ಜೀ…

-ಎಸ್.ಆರ್. ಅನಿರುದ್ಧ ವಸಿಷ್ಠ

Tags: Ajathashatru Atal JiAtal Bihari VajpayeeAtal Bihari Vajpayee deathPM Narendra Modi
Previous Post

ಅಜಾತಶತ್ರುವಿನ ಅಂತಿಮ ಯಾತ್ರೆ ಆರಂಭ: ನೇರ ಪ್ರಸಾರ ನೋಡಿ

Next Post

ಅಟಲ್ ಯುಗಾಂತ್ಯ: ಪಂಚಭೂತಗಳಲ್ಲಿ ಅಜಾತಶತ್ರು ಲೀನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಅಟಲ್ ಯುಗಾಂತ್ಯ: ಪಂಚಭೂತಗಳಲ್ಲಿ ಅಜಾತಶತ್ರು ಲೀನ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಬಹುಮುಖ ಪ್ರತಿಭೆ ಲಕ್ಷ್ಮೀ ಭದ್ರಾವತಿ ಅವರಿಗೆ ರಂಗಭೂಮಿ ರತ್ನ ರಾಷ್ಟ್ರ ಪ್ರಶಸ್ತಿ

June 24, 2025

ಮಹತ್ವದ ನಿರ್ಧಾರ | ರೈಲು ಪ್ರಯಾಣ ದರ ಹೆಚ್ಚಳ | ಎಷ್ಟು ಏರಿಕೆ? ಎಲ್ಲ ಪ್ರಯಾಣಕ್ಕೂ ಅನ್ವಯವೇ?

June 24, 2025

HSVಯವರಿಗೆ ಭಾವ ನಮನ | ಸಾಹಿತ್ಯಾಸಕ್ತರ ಮನಗೆದ್ದ ಅದ್ಭುತ ಆಯೋಜನೆ

June 24, 2025

ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲು ಕುರಿತಾಗಿ ಮಹತ್ವದ ಮಾಹಿತಿ ಇಲ್ಲಿದೆ

June 24, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಬಹುಮುಖ ಪ್ರತಿಭೆ ಲಕ್ಷ್ಮೀ ಭದ್ರಾವತಿ ಅವರಿಗೆ ರಂಗಭೂಮಿ ರತ್ನ ರಾಷ್ಟ್ರ ಪ್ರಶಸ್ತಿ

June 24, 2025

ಮಹತ್ವದ ನಿರ್ಧಾರ | ರೈಲು ಪ್ರಯಾಣ ದರ ಹೆಚ್ಚಳ | ಎಷ್ಟು ಏರಿಕೆ? ಎಲ್ಲ ಪ್ರಯಾಣಕ್ಕೂ ಅನ್ವಯವೇ?

June 24, 2025

HSVಯವರಿಗೆ ಭಾವ ನಮನ | ಸಾಹಿತ್ಯಾಸಕ್ತರ ಮನಗೆದ್ದ ಅದ್ಭುತ ಆಯೋಜನೆ

June 24, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!