ಬೆಂಗಳೂರು: ನಿನ್ನೆ ನಿಧನರಾದ ಕೇಂದ್ರ ಸಚಿವ ಅನಂತಕುಮಾರ್ ಅವರ ಅಂತಿಮ ದರ್ಶನ ಪಡೆಯಲು ಆಗಮಿಸಿದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪಾರ್ಥಿವ ಶರೀರವನ್ನು ಕಂಡಾಕ್ಷಣ ತೀವ್ರ ಗದ್ಗದಿತರಾದರು.
ಇಂದು ಮುಂಜಾನೆ ನ್ಯಾಶನಲ್ ಕಾಲೇಜು ಮೈದಾನಕ್ಕೆ ಆಗಮಿಸಿದ ಉಪರಾಷ್ಟ್ರಪತಿಗಳು ತಮ್ಮ ಗೆಳೆಯನಿಗೆ ಅಂತಿಮ ನಮನ ಸಲ್ಲಿಸಿದರು. ಪದೇ ಪದೇ ಪಾರ್ಥಿವ ಶರೀರದ ಬಳಿ ತೆರಳಿ ನೋಡುತ್ತಿದ್ದುದನ್ನು ಗಮನಿಸಿದರೆ ಇಬ್ಬರ ನಡುವಿನ ಸ್ನೇಹ ಎಂತಹ ಗಾಢವಾಗಿತ್ತು ಎಂಬುದನ್ನು ತೋರುತ್ತಿತ್ತು.
VP @MVenkaiahNaidu pays tribute to Parliament Affairs Minister late #AnanthKumar at his residence in Bengaluru pic.twitter.com/KWWI3252Db
— Doordarshan News (@DDNewsLive) November 13, 2018
ಈ ವೇಳೆ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅವರೊಂದಿಗೆ ಮಾತನಾಡಿ ಸಾಂತ್ವನ ಹೇಳುವ ವೇಳೆ ತಮಗೆ ಇಳಿಯದಂತೆಯೇ ಅವರ ಕಣ್ಣಿನಲ್ಲಿ ನೀರು ಜಿನುಗುತ್ತಿತ್ತು. ಬಹಳ ಹೊತ್ತು ಶರೀರದ ಬಳಿಯೇ ಕುಳಿತಿದ್ದ ಉಪರಾಷ್ಟ್ರಪತಿಗಳು ಪದೇ ಪದೇ ಸ್ನೇಹಿತನ ಮುಖವನ್ನು ನೋಡುತ್ತಿದ್ದುದು ನೆರೆದವರ ದುಃಖವನ್ನು ಹೆಚ್ಚಿಸುತ್ತಿತ್ತು.
ಈ ವೇಳೆ ಟ್ವೀಟ್ ಮಾಡಿರುವ ವೆಂಕಯ್ಯ ನಾಯ್ಡು, ಅನಂತಕುಮಾರ್ ಅವರೊಬ್ಬ ಸಮರ್ಥ ಆಡಳಿತಗಾರರಾಗಿದ್ದರು. ಇಂತಹ ವ್ಯಕ್ತಿಯನ್ನು ಕಳೆದುಕೊಂಡಿರುವುದು ನನಗೆ ತೀವ್ರ ನೋವನ್ನು ಉಂಟು ಮಾಡಿದೆ. ಇವರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಹಾಗೂ ಅನಂತಕುಮಾರ್ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
Paying tributes to the departed leader Shri Ananth Kumar in Bangalore, today. He was an able administrator and a great son of our soil. I am in deep pain to have lost a longtime colleague. May his family get strength at this time of grief and pray for his soul rest in peace. pic.twitter.com/klev99zK9k
— VicePresidentOfIndia (@VPSecretariat) November 13, 2018
Discussion about this post