ನವದೆಹಲಿ: ದೇಶದ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2019-20ನೆಯ ಸಾಲಿನ ಬಜೆಟ್’ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಐತಿಹಾಸಿಕ ಎನ್ನುವಂತೆ 3 ಲಕ್ಷ ಕೋಟಿ ರೂ. ಅನುದಾನವನ್ನು ಘೋಷಣೆ ಮಾಡಲಾಗಿದೆ.
ಬಜೆಟ್ ಮಂಡನೆ ಮಾಡಿ ಮಾತನಾಡಿದ ಹಂಗಾಮಿ ವಿತ್ತ ಸಚಿವ ಪೀಯೂಷ್ ಗೋಯಲ್, ಯೋಧರ ತ್ಯಾಗ ಬಲಿದಾನಗಳನ್ನು ಸ್ಮರಿಸಿ, ಯೋಧರೇ ನಮ್ಮ ಹೆಮ್ಮೆ, ಘನತೆ ಎಂದು ಬಣ್ಣಿಸಿದರು.
ಯೋಧರು ನಮ್ಮ ದೇಶವನ್ನು ರಕ್ಷಣೆ ಮಾಡುತ್ತಾರೆ. ಅವರು ನಮ್ಮ ಹೆಮ್ಮೆ, ರಕ್ಷಣಾ ಕ್ಷೇತ್ರಕ್ಕೆ 3 ಲಕ್ಷ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತಿದ್ದೇವೆ ಎಂದು ಪಿಯೂಷ್ ಗೋಯಲ್ ಘೋಷಿಸಿದ್ದಾರೆ. ಅಷ್ಟೇ ಅಲ್ಲದೇ ಅಗತ್ಯವಿದ್ದರೆ ಇನ್ನೂ ಹೆಚ್ಚಿನ ಅನುದಾನ ಘೋಷಿಸುವುದಾಗಿ ಗೋಯಲ್ ಹೇಳಿದ್ದಾರೆ.
ಇದೇ ವೇಳೆ 35,000 ಕೋಟಿ ರೂಪಾಯಿಯನ್ನು ಒನ್ ರ್ಯಾಂಕ್ ಒನ್ ಪೆನ್ಷನ್’ಗಾಗಿ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಓಆರ್’ಒಪಿಗಾಗಿ ಕೇವಲ 500 ಕೋಟಿ ಮೀಸಲಿಟ್ಟಿತ್ತು ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಓಆರ್’ಓಪಿಯನ್ನು ಮೂರು ಬಜೆಟ್’ನಿಂದಲೂ ಭರವಸೆಯನ್ನಾಗಿಯೇ ನೀಡುತ್ತಿತ್ತು. ಆದರೆ ನಾವು ಅದನ್ನು ಜಾರಿಗೊಳಿಸಿದ್ದೇವೆ ಎಂದು ಗೋಯಲ್ ಹೇಳಿದ್ದಾರೆ.
Discussion about this post