ಶಿವಮೊಗ್ಗ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಅವರನ್ನು ವರ್ಗ ಮಾಡಿ ಒಂದು ದಿನದ ಒಳಗೇ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯವರನ್ನೂ ಸಹ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ಈ ಕುರಿತಂತೆ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ಎಎಸ್’ಪಿ ಮುತ್ತುರಾಜ್ ಅವರನ್ನು ಮೈಸೂರು ಪೊಲೀಸ್ ಉಪಆಯುಕ್ತರನ್ನಾಗಿ ನೇಮಿಸಲಾಗಿದ್ದು, ಇವರ ಸ್ಥಾನಕ್ಕೆ ಮೈಸೂರು ದಕ್ಷಿಣ ವಲಯದ ಭ್ರಷ್ಟಾಚಾರ ನಿಗ್ರಹದಳದ ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶೇಖರ್ ಹನುಂತಪ್ಪ ಟಿಕ್ಕನ್ನವರ್ ಅವರನ್ನ ನಿಯೋಜಿಸಲಾಗಿದೆ.
ಇನ್ನು, ಡಿಎಅರ್ (ಜಿಲ್ಲಾ ಶಸ್ತ್ರಾಸ್ತ್ರಪಡೆ) ಮತ್ತು ಸಿಎಆರ್(ನಗರ ಶಸ್ತ್ರಾಸ್ತ್ರ ಪಡೆ ವರ್ಗಾವಣೆನಲ್ಲಿ ಸಹ ವರ್ಗಾವಣೆ ಮಾಡಲಾಗಿದ್ದು, ರಾಜ್ಯದಲ್ಲಿ 22 ಡಿಎಆರ್ ಮತ್ತು ಸಿಎಆರ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಶಿವಮೊಗ್ಗದಲ್ಲಿ ಡಿಎಆರ್ ಸೇವೆ ಸಲ್ಲಿಸುತ್ತಿರುವಶ್ರೀನಿವಾಸ್ ಮೈಸೂರು ನಗರ ಶಸ್ತ್ರಾಸ್ತ್ರಪಡೆಗೆ ವರ್ಗಾವಣೆಯಾಗಿದೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಒಬ್ಬರ ಹಿಂದೆ ಒಬ್ಬರನ್ನು ವರ್ಗಾವಣೆ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Discussion about this post