ಭದ್ರಾವತಿ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ನಿರ್ಮಾಣಗೊಂಡಿರುವ ಕೃಷಿಕ ಸಮಾಜದ ನೂತನ ಕಟ್ಟಡವನ್ನು ಶಾಸಕ ಬಿ.ಕೆ. ಸಂಗಮೇಶ್ವರ್ ಉದ್ಘಾಟಿಸಿದರು.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಬಿ. ಅಶೋಕ್ನಾಯ್ಕ್, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಮಂಡಳಿ ಅಧ್ಯಕ್ಷ ಬಸವನಗೌಡ ಮಾಲಿಪಾಟೀಲ್ ಮರಕಲ್, ಜಿ.ಪಂ. ಮಾಜಿ ಸದಸ್ಯ ಎಚ್.ಎಲ್. ಷಡಾಕ್ಷರಿ, ನಿವೃತ್ತಿ ಸಹಾಯಕ ಕೃಷಿ ನಿರ್ದೇಶಕ ಸಿ. ಬಸವರಾಜಪ್ಪ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕರಾದ ಕುಬೇಂದ್ರಪ್ಪ, ಡಾ. ಎನ್ಟಿಸಿ ನಾಗೇಶ್, ಕಾರ್ಯದರ್ಶಿ ಮಹೇಶ್, ಕೃಷಿಕ ಸಮಾಜದ ಜಿ.ಎಚ್. ನಂಜುಂಡಪ್ಪ, ದೇವರಾಜ್ ಸಿ. ಪಟೇಲ್, ಟಿ.ಎ. ಮೌನೇಶ್ವರ್, ಬಿ.ಜಿ. ರಾಮಲಿಂಗಯ್ಯ, ಆರ್. ಶ್ರೀನಿವಾಸ್, ಎಂ. ಶೇಖರಯ್ಯ, ರಾಮಕೃಷ್ಣ ಮೆಸ್ತ, ಎಚ್.ಆರ್. ವಾಗೀಶ್, ಶ್ರೀಧರ್ ನಾಯಕ್, ಪಾಲಾಕ್ಷಪ್ಪ, ರಾಮಲಿಂಗೇಗೌಡ, ಮೋಹನ್ಕುಮಾತ್ ಮತ್ತು ಟಿ.ವಿ. ಸುಜಾತ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಕೃಷಿಕ ಸಮಾಜದ ಅಧ್ಯಕ್ಷ ಎಚ್.ಎನ್. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)

















