ಶ್ರೀನಗರ: ಇಂದು ಬೆಳ್ಳಂಬೆಳಗ್ಗೆ ಭಾರತೀಯ ಸೇನಾ ಯೋಧರು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹೊಡೆದುಹಾಕಿರುವ ಬೆಳವಣಿಗೆ ನಡೆದಿದೆ.
ಬದ್ಗಮ್ ಜಿಲ್ಲೆಯ ಸುತ್ಸು ಗ್ರಾಮದಲ್ಲಿ ಇಂದು ಮುಂಜಾನೆ ಎನ್’ಕೌಂಟರ್ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಸೇನೆ ಬಲಿ ಹಾಕಿದ್ದು, ನಾಲ್ವರು ಯೋಧರಿಗೆ ಗುಂಡು ತಗುಲಿ ಗಾಯಗಳಾಗಿವೆ.
ಈ ಭಾಗದಲ್ಲಿ ಇನ್ನಷ್ಟು ಉಗ್ರರು ಅವಿತಿದ್ದಾರೆ ಎಂಬ ಮಾಹಿತಿ ಆಧರಿಸಿ, ಭದ್ರತಾ ಪಡೆಗಳು ಕೋರ್ಡಾನ್ ಕಾರ್ಯಾಚರಣೆಯನ್ನು ಆರಂಭಿಸಿದೆ.
ಸೇನೆ ಎನ್’ಕೌಂಟರ್’ಗೆ ಬಲಿಯಾದ ಇಬ್ಬರು ಉಗ್ರರು ಜೈಷ್ ಸಂಘಟನೆಗೆ ಸೇರಿದವರು ಎನ್ನಲಾಗಿದೆ.
Discussion about this post