ಅಹ್ಮದಾಬಾದ್: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ದೇಶದ ಮೂರನೆಯ ಹಂತದ ಮತದಾನ ನಡೆಯುತ್ತಿದ್ದು, ಗುಜರಾತ್’ನಲ್ಲಿ ಮತ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
Voted!
It feels great to be taking part in our democratic process. pic.twitter.com/b3g8CT7t7A
— Chowkidar Narendra Modi (@narendramodi) April 23, 2019
ಗಾಂಧಿನಗರದ ನಿವಾಸದಲ್ಲಿರುವ ತಮ್ಮ ತಾಯಿ ಹೀರಾಬೆನ್ ಮೋದಿ ಅವರನ್ನು ಭೇಟಿಯಾಗಿ ಆರ್ಶೀವಾದ ಪಡೆದ ಮೋದಿ, ರಾನಿಪ್’ಗೆ ಆಗಮಿಸಿದ ನಿಶಾನ್ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.
PM Narendra Modi casts his vote at a polling booth in Ranip,Ahmedabad #Gujarat #LokSabhaElections2019 pic.twitter.com/qOfJW7uRZC
— ANI (@ANI) April 23, 2019
ಭಾರೀ ಭದ್ರತೆಯೊಂದಿಗೆ ರಾನಿಪ್ ಮತಗಟ್ಟೆಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ನೋಡಲು ಸಾವಿರಾರು ಜನರ ಜಮಾಯಿಸಿದ್ದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮತಗಟ್ಟೆಯ ಬಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದರು. ಈ ವೇಳೆ ಅಮಿತ್ ಶಾ ಅವರ ಮೊಮ್ಮಗಳನ್ನು ಪ್ರಧಾನಿ ನರೇಂದ್ರ ಮೋದಿ ಮುದ್ದಾಡಿದರು.
Gujarat: Prime Minister Narendra Modi arrives to cast his vote at polling booth in Nishan Higher Secondary School in Ranip, Ahmedabad; BJP President Amit Shah also present pic.twitter.com/wu3Y5EopRF
— ANI (@ANI) April 23, 2019
ಸಾವಿರಾರು ಅಭಿಮಾನಿಗಳಿಂದ ಮೋದಿಮೋದಿ ಎಂಬ ಜೈಕಾರ ಮೊಳಗುತ್ತಿತ್ತು.
Sharing some more glimpses from Ahmedabad, where I voted. pic.twitter.com/AkBFKfiqHN
— Chowkidar Narendra Modi (@narendramodi) April 23, 2019
ಮತ ಚಲಾವಣೆಯ ನಂತರ ಮಾತನಾಡಿದ ಮೋದಿ, ಉಗ್ರರ ಅಸ್ತ್ರ ಐಇಡಿ, ಮೋಟರ್ ಐಡಿ ಪ್ರಜಾಪ್ರಜಾಪ್ರಭುತ್ವದ ಶಸ್ತ್ರವಾಗಿದೆ. ಐಇಡಿಯಿಂದ ಮತದಾನದ ಗುರುತಿನ ಚೀಟಿ ಪ್ರಬಲವಾದದ್ದು, ಆದ್ದರಿಂದ ವೋಟರ್ ಐಡಿಯ ಪ್ರಬಲತೆ ಬಗ್ಗೆ ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು.
#WATCH PM Narendra Modi after casting his vote in Ahmedabad says, " The weapon of terrorism is IED, the strength of democracy is voter ID." #LokSabhaElections2019 pic.twitter.com/X0LBPI5qcu
— ANI (@ANI) April 23, 2019
ನನ್ನ ತವರು ರಾಜ್ಯದಲ್ಲಿ ನನಗೂ ಮತದಾನ ಮಾಡುವ ಸೌಭಾಗ್ಯ ದೊರಕಿದೆ. ಮತದಾನ ಪ್ರಜಾಪ್ರಭುತ್ವದ ಪಾಲುದಾರರನಾಗಿದ್ದೇನೆ, ಪ್ರಜಾಪ್ರಭುತ್ವದ ಹಬ್ಬದಲ್ಲಿ ಉತ್ಸಾಹ, ಹೊಸ ಆಶಯದೊಂದಿಗೆ ಮತದಾನ ಮಾಡಿ ಎಂದು ಜನತೆಗೆ ಮೋದಿ ಕರೆ ನೀಡಿದರು.
ಕುಂಭ ಮೇಳದಲ್ಲಿ ಸ್ನಾನ ಮಾಡಿ ಪವಿತ್ರವಾಗುವ ಅನುಭವದಂತೆ, ಲೋಕತಂತ್ರದ ಪವಿತ್ರ ಕಾರ್ಯ ಮತದಾನ ಮಾಡಿದ ಬಳಿಕ ಆಗಿದೆ ಎಂದ ಅವರು, ಲೋಕತಂತ್ರದ ಮಹಾನ್ ಉತ್ಸವದಲ್ಲಿ ನನಗೆ ಭಾಗಿಯಾಗಲು ಅವಕಾಶ ದೊರಕಿದೆ. ಎಲ್ಲಾ ಮತದಾರರು ವಿವೇಕ ಹೊಂದಿದವರು. ಹಾಲನ್ನು ಹಾಲಾಗಿ, ನೀರನ್ನು ನೀರಾಗಿ ನೋಡುವ ವಿವೇಚನೆ ಉಳ್ಳವರು ಎಂದರು.
Discussion about this post