Wednesday, June 25, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Small Bytes

ಮಲೆನಾಡ ಮಡಿಲಲ್ಲಿ ಮತದಾನದ ಕೊನೆಯ ಕ್ಷಣದ ಸಮೀಕ್ಷೆ ಹೇಗಿತ್ತು ಗೊತ್ತಾ?

May 3, 2019
in Small Bytes, Special Articles
0 0
0
Share on facebookShare on TwitterWhatsapp
Read - 3 minutes

ಈ ಬಾರಿಯ ಲೋಕಸಭಾ ಚುನಾವಣೆಗೂ ಮುನ್ನ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಸಮೀಕ್ಷೆ ನಡೆಸುವ ಮೂಲಕ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಜಿಲ್ಲೆಯ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದಿತ್ತು. ಸುಮಾರು 20 ದಿನಗಳ ಕಾಲ ಶಿವಮೊಗ್ಗ ಕ್ಷೇತ್ರದಾದ್ಯಂತ ಸಂಚಾರ ನಡೆಸಿ, ಜನರ ಮನದಾಳದ ಮಾತಿಗೆ ದನಿಯಾಗುವ ಪ್ರಯತ್ನವನ್ನು ಮಾಡಿತ್ತು.

ನಮ್ಮ ತಂಡದ ಸಮೀಕ್ಷೆ ನಡೆದಿದ್ದು, ಚುನಾವಣೆಯ ಹಿಂದಿನ ದಿನ. ಅಂದರೆ, ಎಪ್ರಿಲ್ 22ರಂದು. ಚುನಾವಣಾ ನೀತಿಸಂಹಿತೆ ಕಟ್ಟುನಿಟ್ಟಾಗಿದ್ದ ಹಿನ್ನೆಲೆಯಲ್ಲಿ ಜನರ ಅಭಿಪ್ರಾಯಗಳನ್ನು ಕೊನೆಯ ಗಳಿಗೆಯಲ್ಲಿ ಪ್ರಕಟಿಸಿದರೆ, ಮತದಾರರ ಮೇಲೆ ಪ್ರಭಾವ ಬೀರಬಹುದು ಎಂಬ ಉದ್ದೇಶದಿಂದ ಅಂದಿನ ವರದಿಯನ್ನು ಪ್ರಕಟಿಸಿರಲಿಲ್ಲ. ಈಗ, ನಮ್ಮ ಓದುಗರ ಮಾಹಿತಿಗಾಗಿ ಎಪ್ರಿಲ್ 22ರಂದು ನಡೆಸಿದ ಸಮೀಕ್ಷೆಯಲ್ಲಿ ಮಾತನಾಡಿಸಿದ ಕೆಲವು ಜನರ ಅಭಿಪ್ರಾಯವನ್ನು ಮಾತ್ರ ಪ್ರಕಟಿಸುತ್ತಿದ್ದೇವೆ.

ತಾ.22-4-2019: ಸೋಮವಾರ
ಲೋಕಸಭಾ ಚುನಾವಣೆ-2019: ಶಿವಮೊಗ್ಗ ಕ್ಷೇತ್ರ

ಕೊನೇ ಕ್ಷಣಗಳಲ್ಲಿ: ಸಾಗರದ ನಂದಿತಳೆ, ಕಲೇದೂರು, ಹೈತೂರು ಹೆಬ್ಬರಿಗೆ, ಕವಲಕೋಡು ಹೊನ್ನೆಸರ, ಭೀಮನಕೋಣೆ ಮತದಾರರ ಅನಿಸಿಕೆ ಸಂಗ್ರಹಿಸಲಾಯಿತು.  ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಬಿವೈಆರ್ ಅವರಿಗೇ ನಂದಿತಳೆ ಬೂತ್’ನಲ್ಲಿ ಲೀಡ್ ಕೊಡಲಾಗಿತ್ತು. ಮೇದರವಳ್ಳಿ ನಂದಿತಳೆ ಕಾಸ್ಪಾಡಿ ಕಾನ್ಮನೆ ಹೊರಬೈಲು ಮಳಲಿ ಗ್ರಾಮಗಳು ಉಳ್ಳೂರು ಗ್ರಾಮ ಪಂಚಾಯತ್’ಗೆ ಸೇರುತ್ತವೆ. ಸುಮಾರು ಎರಡು ಸಾವಿರ ಮತದಾರರಿದ್ದಾರೆ.

ನಮಗೆ ಮೋದಿ ಮತ್ತೆ ಪ್ರಧಾನಿಯಾಗಬೇಕು. ಅವರಿಂದ ದೇಶದ ಪ್ರಗತಿ, ರಕ್ಷಣೆ… ಅಲ್ಲದೇ ಅವರೇ ಬೆಸ್ಟ್‌ ಪಿಎಂ. ನಾನು ಬೆಂಗಳೂರಿನಲ್ಲಿ ನಾಲ್ಕು ವರ್ಷದಿಂದ ಇಂಜಿನಿಯರ್ ಆಗಿದ್ದೇನೆ. ಮತದಾನಕ್ಕೆ ತಪ್ಪಿಸಿಕೊಳ್ಳಬಾರದು ಅಂತ ಎರಡು ದಿನ ಮುಂಚಿತವಾಗಿಯೇ ನಮ್ಮೂರಿಗೆ ಬಂದಿರುವೆ. ನನ್ನಂತೆ ನನ್ನ ಮಿತ್ರರೂ ಬಂದಿದ್ದಾರೆ. ಮೋದಿ ಅವರು ಕೃಷಿಕರ ಬಗ್ಗೆ, ನಿರುದ್ಯೋಗಿಗಳ ಬಗ್ಗೆ ಕಾಳಜಿ ಹೊಂದಿದ್ದಾರೆ.
-ಮಧು, ಇಂಜಿನಿಯರ್, ನಂದಿತಳೆ

70 ವರ್ಷಗಳಿಂದ ಗರೀಬಿ ಹಟಾವೋ ಅಂತ ಕಾಂಗ್ರೆಸ್ ಹೇಳಿತಷ್ಟೇ. ಗರೀಬಿ ಹೋಗಲಿಲ್ಲ. ಈಗ ಮೋದಿ ಅವರಿಗೆ ಕೆಲಸ ಮಾಡಲು ಇನ್ನೊಂದು ಅವಧಿ ಬೇಕು. ನಮ್ಮ ನಂದಿತಳೆ ಬೂತ್ ನಲ್ಲಿ ಯುವಜನರ ಮತಗಳು ಅಧಿಕವಾಗಿವೆ.
-ನವೀನ್, ಮರಗೆಲಸ ವಿನ್ಯಾಸಕಾರ (ಉಡ್ ಡಿಸೈನರ್)

ನಮಗೆ ಮೋದಿ ಅವರೇ ಪ್ರಧಾನಿಯಾಗಬೇಕು. ಅವರಿಗೇ ಅಂದರೆ ಬಿಜೆಪಿಗೇ ನಮ್ಮ ಮತ.
-ಶ್ರೀಮತಿ ನೀಲಾ (ಮಧು, ನವೀನ್ ಅವರ ತಾಯಿ)

ಈಗಲೂ ಇಲ್ಲಿ ಮೋದಿ ಅಲೆಯಿದೆ. ನಮ್ಮ ಹಳ್ಳಿಗರಲ್ಲಿ ಮತನೀಡುವ ಉತ್ಸುಕತೆಯಿದೆ. ಶೇ.75 ಮತಚಲಾವಣೆಯಾಗುತ್ತದೆ. ಇಲ್ಲಿಗೆ ಬಿವೈಎಸ್ ಬರುತ್ತಿರುತ್ತಾರೆ. ಮಧು ಬಂದಿಲ್ಲ. ಸಿಎಂ ಆಗಿದ್ದ ಬಂಗಾರಪ್ಪನವರ ಹೆಸರಿನ ಬಲ ಬಿಟ್ಟರೆ ಅವರ ಬಗ್ಗೆ ನಮಗೆ ತಿಳಿದೇ ಇಲ್ಲ. ಮೋದೀಜಿ ವಿಶ್ವದಲ್ಲಿ ಭಾರತಕ್ಕೆ ಉನ್ನತ ಸ್ಥಾನ ತಂದುಕೊಟ್ಟರು. ಸೂಕ್ತ ನಾಯಕರಾಗಿದ್ದಾರೆ. ಸುಭದ್ರ ಭಾರತ ಸ್ಥಾಪಿಸುತ್ತಾರೆ.
-ಕೃಷ್ಣಮೂರ್ತಿ, ಕೃಷಿಕ, ನಂದಿತಳೆ

ಮೋದಿ ನಮಗೆ ಯಾಕಿಷ್ಟ ಅಂದರೆ…. ದೇಶಕ್ಕಾಗಿ ಶ್ರಮಿಸೋ ನಂಬಿಕಸ್ಥ ಮನುಷ್ಯ. ಮಹಿಳೆಯರ ಕರ್ತೃತ್ವ ಶಕ್ತಿ ಬಗ್ಗೆ ವಿಶ್ವಾಸವಿರುವ ಪ್ರಧಾನಿ. ತ್ರಿವಳಿ ತಲಾಖ್ ಗೆ ನಿಷೇಧ ತಂದಿದ್ದಾರೆ. ಮತ ನೀಡುವುದಕ್ಕೋಸ್ಕರ ಬೆಂಗಳೂರಿನಲ್ಲಿರುವ ಮಗ ಬರ್ತಾ ಇದ್ದಾನೆ.
-ಶ್ರೀ ಶೈಲಜಾ ಕೃಷ್ಣಮೂರ್ತಿ, ನಂದಿತಳೆ

ಕಳೆದ ಲೋಕ ಸಭಾ ಉಪಚುನಾವಣೆಯಲ್ಲಿ ಮಧುಗೆ ಲೀಡ್ ಕೊಟ್ಟಿದ್ವಿ. ಈ ಬಾರಿಯೂ ಮೈತ್ರಿ ಪಕ್ಷಕ್ಕೇ ಲೀಡ್ ಬರತ್ತೆ. ಹೆಗ್ಗೋಡು ಪಂಚಾಯತ್’ನ ಹೆಗ್ಗೋಡು, ಹೊನ್ನೇಸರ, ಚೆನ್ನಿಗನ ತೋಟ ಗ್ರಾಮಗಳಲ್ಲಿ ಜೆಡಿಎಸ್ ಪ್ರಬಲವಾಗಿದೆ. ಶೇ.70 ಬೆಂಬಲ ಮಧು ಅವರಿಗೆ ಇದೆ. ಅವರ ತಂದೆ ಬಂಗಾರಪ್ಪ ಸಿಎಂ ಆಗಿ ಜನಪ್ರಿಯ ಕೆಲಸ ಮಾಡಿದ್ದಾರೆ. ಕಾಗೋಡು ತಿಮ್ಮಪ್ಪ ಅವರೊಡನೆ ಬಗರ್ ಹುಕುಂ ಕೆಲಸವನ್ನು ಮಧು ಅವರು ಚೆನ್ನಾಗಿ ಮಾಡಿ ಹೆಸರು ಪಡೆದಿದ್ದಾರೆ. ಕಳೆದ ಬಾರಿ ಸಂಸದರಾಗಿದ್ದವರಿಂದ ಏನೂ ಕೆಲಸವಾಗಿಲ್ಲ. ಕಸ್ತೂರಿ ರಂಗನ್ ವರದಿ ಬಗ್ಗೆ ಬಿಎಸ್’ವೈ ಅವರು ಲೋಕಸಭೆಯಲ್ಲಿ ಮಾತಾಡಲೇ ಇಲ್ಲವಲ್ಲ!?

ಹಸಿರುಮಕ್ಕಿ ಸೇತುವೆ ಶುರುಮಾಡಿದ್ದು ಕಾಗೋಡು ಅವರ ಅವಧಿಯಲ್ಲಿ. ಗಡ್ಕರಿ ಅವರು ಸಿಗಂದೂರು ಸೇತುವೆ ಪೂಜೆ ಮಾಡಿದ್ರು ಅಷ್ಟೇ ವರ್ಕ್ ಆರ್ಡರ್ ಸಿಗ್ಲಿಲ್ಲ. ವಿದ್ಯುತ್ ಸರಬರಾಜು ಸರಿಯಿಲ್ಲ. ಸರ್ಕಾರದ ಸೌಲಭ್ಯ ದೊಡ್ಡವರಿಗೆ ಮಾತ್ರ ಸಿಗ್ತಾ ಇದೆ. ಹಳ್ಳಿ ಬಡವರಿಗೆ ಸಿಗ್ತಾ ಇಲ್ಲ. ಇಲ್ಲಿ ಮೋದಿ ಅಲೆ ಇಲ್ಲ. ಇಂದಿರಾಗಾಂಧೀ ಅವರು ಸಾಕಷ್ಟು ಅಭಿವೃದ್ಧಿ ತಂದ್ರು. ಮೋದಿ ಎಲ್ಲರ ಖಾತೆಗೆ ₹15 ಲಕ್ಷ ಹಾಕ್ತೀನಿ ಅಂದ್ರು. ಎಲ್ಲಿ ಬಂತು?
_ಮುದ್ರಾ ಯೋಜನೆ ಕೇವಲ ಕೆಲವೇ ಮಂದಿಗೆ ಸಿಗ್ತಾಇದೆ. ಅದ್ರಲ್ಲೂ ಗೋಲ್ ಮಾಲ್. ಐವತ್ತು ಜನ ಅರ್ಜಿ ಹಾಕಿದ್ರೆ ಐದು ಮಂದಿಗೆ ಮಾತ್ರ ಸಿಗತ್ತೆ. ಉದ್ಯೋಗ ಖಾತ್ರಿ ಇಲ್ಲ. ಜೆಡಿಎಸ್’ಗೇ ನಾವು ಮತ ಕೊಡ್ತೀವಿ.

– ಕೇಶವ,ಕಲೇದೂರು
ಈಶ್ವರ ಹೈತೂರು
ಪುಟ್ಟಪ್ಪ, ಹೆಬ್ಬರಿಗೆ
ಗಿರೀಶ್, ಆತೋಡಿ

ಹೊನ್ನೇಸರ ಬೂತ್’ನಲ್ಲಿ ಕಳೆದ ಲೋಕ ಉಪಚುನಾವಣೆಯಲ್ಲಿ ಶೇ.75 ಮತ ಚಲಾವಣೆಯಾಗಿತ್ತು. ಬಿಜೆಪಿಗೇ ಲೀಡ್ ಬಂದಿತ್ತು. ಈ ಸಲವೂ ಬಿವೈಆರ್ ಗೆಲ್ಲುತ್ತಾರೆ. ಕಳೆದ ಸಾರಿ ಉಪಚುನಾವಣೆಯಲ್ಲಿ ಮತದಾರರು ಸೀರಿಯಸ್ ಆಗಿರಲಿಲ್ಲ. ಹೀಗಾಗಿ ಮತ ಚಲಾವಣೆ ಪೂರ್ಣ ಪ್ರಮಾಣವಿರಲಿಲ್ಲ. ಪ್ರಸ್ತುತ ಸಿಎಂ ಅವರ ವರ್ತನೆ ಜನಕ್ಕೆ ಇಷ್ಟವಾಗ್ತಾ ಇಲ್ಲ. ಇದಕ್ಕೆ ಕಾರಣ ಮಾಜಿ ಸಿಎಂ ಸಿದ್ದರಾಮಯ್ಯನವರೇ.. ಎಚ್’ಡಿಕೆ ಇಮೇಜು ಕಳೆದುಕೊಂಡಿದ್ದಾರೆ. ಜೆಡಿಎಸ್ ಶೇ. 10 ಮತಗಳನ್ನು ಈ ಬಾರಿ ಕಳೆದುಕೊಳ್ಳಲಿದೆ. ನಮ್ಮಲ್ಲಿ ಕೆಲಸಮಾಡುವ ಕಾರ್ಮಿಕರು ಬಿಎಸ್’ವೈ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ. ರಾಘವೇಂದ್ರ ಅವರಿಗೆ ಅಪ್ಪನ ಇಮೇಜು ಪ್ರಭಾವ ಶಾಲಿಯಾಗಿ ಮತಗಳನ್ನ ತರುತ್ತದೆ. ಯಡ್ಯೂರಪ್ಪ ನವರು ಜನರೊಡನೆ ನೇರ ಸಂಪರ್ಕವಿಟ್ಟುಕೊಂಡಿದ್ದಾರೆ. ಎಂಪಿ ನಿಧಿಯಿಂದ ಆಗಬೇಕಾದ ಕೆಲಸಗಳು ಈ ಭಾಗದಲ್ಲಿ ಆಗಿವೆ. ತುಮರಿ ಸೇತುವೆ ಮಾತ್ರ ಒಂದು ಮೈನಸ್ ಪಾಯಿಂಟ್ ಆಗಬಹುದು. ಅದನ್ನು ಅವರು ಮಾಡಬೇಕು. ಅದನ್ನು ಮಾಡಿದ್ರೆ ಮತ್ತೆ ಗೆಲ್ತಾನೇ ಇರ್ತಾರೆ.
-ಗಣೇಶ್, ಕಾಕಲ್

Tags: Kalpa News Election SurveyKannada NewsLok Sabha election 2019Malnad NewsSagaraShivamoggaಲೋಕಸಭಾ ಚುನಾವಣೆ-2019
Previous Post

ಚುನಾವಣಾ ಫಲಿತಾಂಶದ ಮರುದಿನ ಮೋದಿ ಬಯೋಪಿಕ್ ರಿಲೀಸ್

Next Post

ತೆರೆಮರೆಯ ಸಾಧಕರಿದ್ದರೆ ಅಚೀವರ್ಸ್‌ ಬುಕ್ಸ್‌ ಆಫ್ ರೆಕಾರ್ಡ್ಸ್‌ಗೆ ತಿಳಿಸಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ತೆರೆಮರೆಯ ಸಾಧಕರಿದ್ದರೆ ಅಚೀವರ್ಸ್‌ ಬುಕ್ಸ್‌ ಆಫ್ ರೆಕಾರ್ಡ್ಸ್‌ಗೆ ತಿಳಿಸಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಮೆಡಿಕವರ್ ಆಸ್ಪತ್ರೆ | ಬೃಹತ್ ಉಚಿತ ಆರೋಗ್ಯ ಶಿಬಿರ ಯಶಸ್ವಿ

June 25, 2025

ಮರೆತುಹೋದ ಮನೆಮಾತು ಮರಳಿ ನೆನಪಿಸಲು ಸ್ವಭಾಷಾ ಚಾತುರ್ಮಾಸ್ಯ: ರಾಘವೇಶ್ವರ ಶ್ರೀ

June 25, 2025

ಸಿಗಂಧೂರು ಸೇತುವೆ | ಸಂಸದ ರಾಘವೇಂದ್ರ ಕೊಟ್ರು ಮಹತ್ವದ ಅಪ್ಡೇಟ್ | ಇಲ್ಲಿದೆ ಮಾಹಿತಿ

June 25, 2025

ಬಹುಮುಖ ಪ್ರತಿಭೆ ಲಕ್ಷ್ಮೀ ಭದ್ರಾವತಿ ಅವರಿಗೆ ರಂಗಭೂಮಿ ರತ್ನ ರಾಷ್ಟ್ರ ಪ್ರಶಸ್ತಿ

June 24, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಮೆಡಿಕವರ್ ಆಸ್ಪತ್ರೆ | ಬೃಹತ್ ಉಚಿತ ಆರೋಗ್ಯ ಶಿಬಿರ ಯಶಸ್ವಿ

June 25, 2025

ಮರೆತುಹೋದ ಮನೆಮಾತು ಮರಳಿ ನೆನಪಿಸಲು ಸ್ವಭಾಷಾ ಚಾತುರ್ಮಾಸ್ಯ: ರಾಘವೇಶ್ವರ ಶ್ರೀ

June 25, 2025

ಸಿಗಂಧೂರು ಸೇತುವೆ | ಸಂಸದ ರಾಘವೇಂದ್ರ ಕೊಟ್ರು ಮಹತ್ವದ ಅಪ್ಡೇಟ್ | ಇಲ್ಲಿದೆ ಮಾಹಿತಿ

June 25, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!