No Result
View All Result
IBM and Yotta Announce Plans to Deliver Agentic AI Platform for Indian Enterprises
English Articles

IBM and Yotta Announce Plans to Deliver Agentic AI Platform for Indian Enterprises

by ಕಲ್ಪ ನ್ಯೂಸ್
May 9, 2026
0

Kalpa Media House  |  Bengaluru | IBM (NYSE: IBM) and Yotta Data Services Private Limited ("Yotta") today announced plans to...

Read moreDetails
ಸಮವಸ್ತ್ರದೊಳಗಿನ ಅಪ್ಪಟ ಚಿನ್ನ | ಶ್ರೀ ಜಯಕರ ಐರೋಡಿ ಎಂಬ ಮಾನವೀಯತೆಯ ಮಹಾದನಿ

Pure Gold Within the Uniform: Jayakara Airody, The Great Voice of Humanity

May 9, 2026
Kotak Mahindra Bank Announces Results

Kotak Mahindra Bank Announces Results

May 4, 2026
Landmark Heart Surgery in Davanagere | SS Narayana hospital completes first modified Bentall procedure

Landmark Heart Surgery in Davanagere | SS Narayana hospital completes first modified Bentall procedure

May 2, 2026
KRCS Shikaripura Achieves 100% Result in CBSE Class X Board Exams

KRCS Shikaripura Achieves 100% Result in CBSE Class X Board Exams

April 16, 2026
  • Advertise With Us
  • Grievances
  • About Us
  • Contact Us
Sunday, May 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಮಲೆನಾಡ ಮಡಿಲಲ್ಲಿ ಮತದಾನದ ಕೊನೆಯ ಕ್ಷಣದ ಸಮೀಕ್ಷೆ ಹೇಗಿತ್ತು ಗೊತ್ತಾ?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
May 3, 2019
in Small Bytes, Special Articles
0
ಮಲೆನಾಡ ಮಡಿಲಲ್ಲಿ ಮತದಾನದ ಕೊನೆಯ ಕ್ಷಣದ ಸಮೀಕ್ಷೆ ಹೇಗಿತ್ತು ಗೊತ್ತಾ?
Share on FacebookShare on TwitterShare on WhatsApp

ಈ ಬಾರಿಯ ಲೋಕಸಭಾ ಚುನಾವಣೆಗೂ ಮುನ್ನ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಸಮೀಕ್ಷೆ ನಡೆಸುವ ಮೂಲಕ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಜಿಲ್ಲೆಯ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದಿತ್ತು. ಸುಮಾರು 20 ದಿನಗಳ ಕಾಲ ಶಿವಮೊಗ್ಗ ಕ್ಷೇತ್ರದಾದ್ಯಂತ ಸಂಚಾರ ನಡೆಸಿ, ಜನರ ಮನದಾಳದ ಮಾತಿಗೆ ದನಿಯಾಗುವ ಪ್ರಯತ್ನವನ್ನು ಮಾಡಿತ್ತು.

ನಮ್ಮ ತಂಡದ ಸಮೀಕ್ಷೆ ನಡೆದಿದ್ದು, ಚುನಾವಣೆಯ ಹಿಂದಿನ ದಿನ. ಅಂದರೆ, ಎಪ್ರಿಲ್ 22ರಂದು. ಚುನಾವಣಾ ನೀತಿಸಂಹಿತೆ ಕಟ್ಟುನಿಟ್ಟಾಗಿದ್ದ ಹಿನ್ನೆಲೆಯಲ್ಲಿ ಜನರ ಅಭಿಪ್ರಾಯಗಳನ್ನು ಕೊನೆಯ ಗಳಿಗೆಯಲ್ಲಿ ಪ್ರಕಟಿಸಿದರೆ, ಮತದಾರರ ಮೇಲೆ ಪ್ರಭಾವ ಬೀರಬಹುದು ಎಂಬ ಉದ್ದೇಶದಿಂದ ಅಂದಿನ ವರದಿಯನ್ನು ಪ್ರಕಟಿಸಿರಲಿಲ್ಲ. ಈಗ, ನಮ್ಮ ಓದುಗರ ಮಾಹಿತಿಗಾಗಿ ಎಪ್ರಿಲ್ 22ರಂದು ನಡೆಸಿದ ಸಮೀಕ್ಷೆಯಲ್ಲಿ ಮಾತನಾಡಿಸಿದ ಕೆಲವು ಜನರ ಅಭಿಪ್ರಾಯವನ್ನು ಮಾತ್ರ ಪ್ರಕಟಿಸುತ್ತಿದ್ದೇವೆ.

ತಾ.22-4-2019: ಸೋಮವಾರ
ಲೋಕಸಭಾ ಚುನಾವಣೆ-2019: ಶಿವಮೊಗ್ಗ ಕ್ಷೇತ್ರ

ಕೊನೇ ಕ್ಷಣಗಳಲ್ಲಿ: ಸಾಗರದ ನಂದಿತಳೆ, ಕಲೇದೂರು, ಹೈತೂರು ಹೆಬ್ಬರಿಗೆ, ಕವಲಕೋಡು ಹೊನ್ನೆಸರ, ಭೀಮನಕೋಣೆ ಮತದಾರರ ಅನಿಸಿಕೆ ಸಂಗ್ರಹಿಸಲಾಯಿತು.  ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಬಿವೈಆರ್ ಅವರಿಗೇ ನಂದಿತಳೆ ಬೂತ್’ನಲ್ಲಿ ಲೀಡ್ ಕೊಡಲಾಗಿತ್ತು. ಮೇದರವಳ್ಳಿ ನಂದಿತಳೆ ಕಾಸ್ಪಾಡಿ ಕಾನ್ಮನೆ ಹೊರಬೈಲು ಮಳಲಿ ಗ್ರಾಮಗಳು ಉಳ್ಳೂರು ಗ್ರಾಮ ಪಂಚಾಯತ್’ಗೆ ಸೇರುತ್ತವೆ. ಸುಮಾರು ಎರಡು ಸಾವಿರ ಮತದಾರರಿದ್ದಾರೆ.

ನಮಗೆ ಮೋದಿ ಮತ್ತೆ ಪ್ರಧಾನಿಯಾಗಬೇಕು. ಅವರಿಂದ ದೇಶದ ಪ್ರಗತಿ, ರಕ್ಷಣೆ… ಅಲ್ಲದೇ ಅವರೇ ಬೆಸ್ಟ್‌ ಪಿಎಂ. ನಾನು ಬೆಂಗಳೂರಿನಲ್ಲಿ ನಾಲ್ಕು ವರ್ಷದಿಂದ ಇಂಜಿನಿಯರ್ ಆಗಿದ್ದೇನೆ. ಮತದಾನಕ್ಕೆ ತಪ್ಪಿಸಿಕೊಳ್ಳಬಾರದು ಅಂತ ಎರಡು ದಿನ ಮುಂಚಿತವಾಗಿಯೇ ನಮ್ಮೂರಿಗೆ ಬಂದಿರುವೆ. ನನ್ನಂತೆ ನನ್ನ ಮಿತ್ರರೂ ಬಂದಿದ್ದಾರೆ. ಮೋದಿ ಅವರು ಕೃಷಿಕರ ಬಗ್ಗೆ, ನಿರುದ್ಯೋಗಿಗಳ ಬಗ್ಗೆ ಕಾಳಜಿ ಹೊಂದಿದ್ದಾರೆ.
-ಮಧು, ಇಂಜಿನಿಯರ್, ನಂದಿತಳೆ

70 ವರ್ಷಗಳಿಂದ ಗರೀಬಿ ಹಟಾವೋ ಅಂತ ಕಾಂಗ್ರೆಸ್ ಹೇಳಿತಷ್ಟೇ. ಗರೀಬಿ ಹೋಗಲಿಲ್ಲ. ಈಗ ಮೋದಿ ಅವರಿಗೆ ಕೆಲಸ ಮಾಡಲು ಇನ್ನೊಂದು ಅವಧಿ ಬೇಕು. ನಮ್ಮ ನಂದಿತಳೆ ಬೂತ್ ನಲ್ಲಿ ಯುವಜನರ ಮತಗಳು ಅಧಿಕವಾಗಿವೆ.
-ನವೀನ್, ಮರಗೆಲಸ ವಿನ್ಯಾಸಕಾರ (ಉಡ್ ಡಿಸೈನರ್)

ನಮಗೆ ಮೋದಿ ಅವರೇ ಪ್ರಧಾನಿಯಾಗಬೇಕು. ಅವರಿಗೇ ಅಂದರೆ ಬಿಜೆಪಿಗೇ ನಮ್ಮ ಮತ.
-ಶ್ರೀಮತಿ ನೀಲಾ (ಮಧು, ನವೀನ್ ಅವರ ತಾಯಿ)

ಈಗಲೂ ಇಲ್ಲಿ ಮೋದಿ ಅಲೆಯಿದೆ. ನಮ್ಮ ಹಳ್ಳಿಗರಲ್ಲಿ ಮತನೀಡುವ ಉತ್ಸುಕತೆಯಿದೆ. ಶೇ.75 ಮತಚಲಾವಣೆಯಾಗುತ್ತದೆ. ಇಲ್ಲಿಗೆ ಬಿವೈಎಸ್ ಬರುತ್ತಿರುತ್ತಾರೆ. ಮಧು ಬಂದಿಲ್ಲ. ಸಿಎಂ ಆಗಿದ್ದ ಬಂಗಾರಪ್ಪನವರ ಹೆಸರಿನ ಬಲ ಬಿಟ್ಟರೆ ಅವರ ಬಗ್ಗೆ ನಮಗೆ ತಿಳಿದೇ ಇಲ್ಲ. ಮೋದೀಜಿ ವಿಶ್ವದಲ್ಲಿ ಭಾರತಕ್ಕೆ ಉನ್ನತ ಸ್ಥಾನ ತಂದುಕೊಟ್ಟರು. ಸೂಕ್ತ ನಾಯಕರಾಗಿದ್ದಾರೆ. ಸುಭದ್ರ ಭಾರತ ಸ್ಥಾಪಿಸುತ್ತಾರೆ.
-ಕೃಷ್ಣಮೂರ್ತಿ, ಕೃಷಿಕ, ನಂದಿತಳೆ

ಮೋದಿ ನಮಗೆ ಯಾಕಿಷ್ಟ ಅಂದರೆ…. ದೇಶಕ್ಕಾಗಿ ಶ್ರಮಿಸೋ ನಂಬಿಕಸ್ಥ ಮನುಷ್ಯ. ಮಹಿಳೆಯರ ಕರ್ತೃತ್ವ ಶಕ್ತಿ ಬಗ್ಗೆ ವಿಶ್ವಾಸವಿರುವ ಪ್ರಧಾನಿ. ತ್ರಿವಳಿ ತಲಾಖ್ ಗೆ ನಿಷೇಧ ತಂದಿದ್ದಾರೆ. ಮತ ನೀಡುವುದಕ್ಕೋಸ್ಕರ ಬೆಂಗಳೂರಿನಲ್ಲಿರುವ ಮಗ ಬರ್ತಾ ಇದ್ದಾನೆ.
-ಶ್ರೀ ಶೈಲಜಾ ಕೃಷ್ಣಮೂರ್ತಿ, ನಂದಿತಳೆ

ಕಳೆದ ಲೋಕ ಸಭಾ ಉಪಚುನಾವಣೆಯಲ್ಲಿ ಮಧುಗೆ ಲೀಡ್ ಕೊಟ್ಟಿದ್ವಿ. ಈ ಬಾರಿಯೂ ಮೈತ್ರಿ ಪಕ್ಷಕ್ಕೇ ಲೀಡ್ ಬರತ್ತೆ. ಹೆಗ್ಗೋಡು ಪಂಚಾಯತ್’ನ ಹೆಗ್ಗೋಡು, ಹೊನ್ನೇಸರ, ಚೆನ್ನಿಗನ ತೋಟ ಗ್ರಾಮಗಳಲ್ಲಿ ಜೆಡಿಎಸ್ ಪ್ರಬಲವಾಗಿದೆ. ಶೇ.70 ಬೆಂಬಲ ಮಧು ಅವರಿಗೆ ಇದೆ. ಅವರ ತಂದೆ ಬಂಗಾರಪ್ಪ ಸಿಎಂ ಆಗಿ ಜನಪ್ರಿಯ ಕೆಲಸ ಮಾಡಿದ್ದಾರೆ. ಕಾಗೋಡು ತಿಮ್ಮಪ್ಪ ಅವರೊಡನೆ ಬಗರ್ ಹುಕುಂ ಕೆಲಸವನ್ನು ಮಧು ಅವರು ಚೆನ್ನಾಗಿ ಮಾಡಿ ಹೆಸರು ಪಡೆದಿದ್ದಾರೆ. ಕಳೆದ ಬಾರಿ ಸಂಸದರಾಗಿದ್ದವರಿಂದ ಏನೂ ಕೆಲಸವಾಗಿಲ್ಲ. ಕಸ್ತೂರಿ ರಂಗನ್ ವರದಿ ಬಗ್ಗೆ ಬಿಎಸ್’ವೈ ಅವರು ಲೋಕಸಭೆಯಲ್ಲಿ ಮಾತಾಡಲೇ ಇಲ್ಲವಲ್ಲ!?

ಹಸಿರುಮಕ್ಕಿ ಸೇತುವೆ ಶುರುಮಾಡಿದ್ದು ಕಾಗೋಡು ಅವರ ಅವಧಿಯಲ್ಲಿ. ಗಡ್ಕರಿ ಅವರು ಸಿಗಂದೂರು ಸೇತುವೆ ಪೂಜೆ ಮಾಡಿದ್ರು ಅಷ್ಟೇ ವರ್ಕ್ ಆರ್ಡರ್ ಸಿಗ್ಲಿಲ್ಲ. ವಿದ್ಯುತ್ ಸರಬರಾಜು ಸರಿಯಿಲ್ಲ. ಸರ್ಕಾರದ ಸೌಲಭ್ಯ ದೊಡ್ಡವರಿಗೆ ಮಾತ್ರ ಸಿಗ್ತಾ ಇದೆ. ಹಳ್ಳಿ ಬಡವರಿಗೆ ಸಿಗ್ತಾ ಇಲ್ಲ. ಇಲ್ಲಿ ಮೋದಿ ಅಲೆ ಇಲ್ಲ. ಇಂದಿರಾಗಾಂಧೀ ಅವರು ಸಾಕಷ್ಟು ಅಭಿವೃದ್ಧಿ ತಂದ್ರು. ಮೋದಿ ಎಲ್ಲರ ಖಾತೆಗೆ ₹15 ಲಕ್ಷ ಹಾಕ್ತೀನಿ ಅಂದ್ರು. ಎಲ್ಲಿ ಬಂತು?
_ಮುದ್ರಾ ಯೋಜನೆ ಕೇವಲ ಕೆಲವೇ ಮಂದಿಗೆ ಸಿಗ್ತಾಇದೆ. ಅದ್ರಲ್ಲೂ ಗೋಲ್ ಮಾಲ್. ಐವತ್ತು ಜನ ಅರ್ಜಿ ಹಾಕಿದ್ರೆ ಐದು ಮಂದಿಗೆ ಮಾತ್ರ ಸಿಗತ್ತೆ. ಉದ್ಯೋಗ ಖಾತ್ರಿ ಇಲ್ಲ. ಜೆಡಿಎಸ್’ಗೇ ನಾವು ಮತ ಕೊಡ್ತೀವಿ.

– ಕೇಶವ,ಕಲೇದೂರು
ಈಶ್ವರ ಹೈತೂರು
ಪುಟ್ಟಪ್ಪ, ಹೆಬ್ಬರಿಗೆ
ಗಿರೀಶ್, ಆತೋಡಿ

ಹೊನ್ನೇಸರ ಬೂತ್’ನಲ್ಲಿ ಕಳೆದ ಲೋಕ ಉಪಚುನಾವಣೆಯಲ್ಲಿ ಶೇ.75 ಮತ ಚಲಾವಣೆಯಾಗಿತ್ತು. ಬಿಜೆಪಿಗೇ ಲೀಡ್ ಬಂದಿತ್ತು. ಈ ಸಲವೂ ಬಿವೈಆರ್ ಗೆಲ್ಲುತ್ತಾರೆ. ಕಳೆದ ಸಾರಿ ಉಪಚುನಾವಣೆಯಲ್ಲಿ ಮತದಾರರು ಸೀರಿಯಸ್ ಆಗಿರಲಿಲ್ಲ. ಹೀಗಾಗಿ ಮತ ಚಲಾವಣೆ ಪೂರ್ಣ ಪ್ರಮಾಣವಿರಲಿಲ್ಲ. ಪ್ರಸ್ತುತ ಸಿಎಂ ಅವರ ವರ್ತನೆ ಜನಕ್ಕೆ ಇಷ್ಟವಾಗ್ತಾ ಇಲ್ಲ. ಇದಕ್ಕೆ ಕಾರಣ ಮಾಜಿ ಸಿಎಂ ಸಿದ್ದರಾಮಯ್ಯನವರೇ.. ಎಚ್’ಡಿಕೆ ಇಮೇಜು ಕಳೆದುಕೊಂಡಿದ್ದಾರೆ. ಜೆಡಿಎಸ್ ಶೇ. 10 ಮತಗಳನ್ನು ಈ ಬಾರಿ ಕಳೆದುಕೊಳ್ಳಲಿದೆ. ನಮ್ಮಲ್ಲಿ ಕೆಲಸಮಾಡುವ ಕಾರ್ಮಿಕರು ಬಿಎಸ್’ವೈ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ. ರಾಘವೇಂದ್ರ ಅವರಿಗೆ ಅಪ್ಪನ ಇಮೇಜು ಪ್ರಭಾವ ಶಾಲಿಯಾಗಿ ಮತಗಳನ್ನ ತರುತ್ತದೆ. ಯಡ್ಯೂರಪ್ಪ ನವರು ಜನರೊಡನೆ ನೇರ ಸಂಪರ್ಕವಿಟ್ಟುಕೊಂಡಿದ್ದಾರೆ. ಎಂಪಿ ನಿಧಿಯಿಂದ ಆಗಬೇಕಾದ ಕೆಲಸಗಳು ಈ ಭಾಗದಲ್ಲಿ ಆಗಿವೆ. ತುಮರಿ ಸೇತುವೆ ಮಾತ್ರ ಒಂದು ಮೈನಸ್ ಪಾಯಿಂಟ್ ಆಗಬಹುದು. ಅದನ್ನು ಅವರು ಮಾಡಬೇಕು. ಅದನ್ನು ಮಾಡಿದ್ರೆ ಮತ್ತೆ ಗೆಲ್ತಾನೇ ಇರ್ತಾರೆ.
-ಗಣೇಶ್, ಕಾಕಲ್

Tags: Kalpa News Election SurveyKannada NewsLok Sabha election 2019Malnad NewsSagaraShivamoggaಲೋಕಸಭಾ ಚುನಾವಣೆ-2019
Share196Tweet123Send
Previous Post

ಚುನಾವಣಾ ಫಲಿತಾಂಶದ ಮರುದಿನ ಮೋದಿ ಬಯೋಪಿಕ್ ರಿಲೀಸ್

Next Post

ತೆರೆಮರೆಯ ಸಾಧಕರಿದ್ದರೆ ಅಚೀವರ್ಸ್‌ ಬುಕ್ಸ್‌ ಆಫ್ ರೆಕಾರ್ಡ್ಸ್‌ಗೆ ತಿಳಿಸಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ತೆರೆಮರೆಯ ಸಾಧಕರಿದ್ದರೆ ಅಚೀವರ್ಸ್‌ ಬುಕ್ಸ್‌ ಆಫ್ ರೆಕಾರ್ಡ್ಸ್‌ಗೆ ತಿಳಿಸಿ

ತೆರೆಮರೆಯ ಸಾಧಕರಿದ್ದರೆ ಅಚೀವರ್ಸ್‌ ಬುಕ್ಸ್‌ ಆಫ್ ರೆಕಾರ್ಡ್ಸ್‌ಗೆ ತಿಳಿಸಿ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಿದ್ಧಾರ್ಥಗೆ ಉತ್ತಮ ಅಂಕ | ಮಾಜಿ ಡಿಸಿಎಂ ಈಶ್ವರಪ್ಪ ಅಭಿನಂದನೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಿದ್ಧಾರ್ಥಗೆ ಉತ್ತಮ ಅಂಕ | ಮಾಜಿ ಡಿಸಿಎಂ ಈಶ್ವರಪ್ಪ ಅಭಿನಂದನೆ

May 9, 2026
ನೈರುತ್ಯ ರೈಲ್ವೆ | ಮೂರು ಜೋಡಿ ಡೆಮು ವಿಶೇಷ ರೈಲುಗಳ ಸಂಚಾರ ಕಾಯಂ

ನೈರುತ್ಯ ರೈಲ್ವೆ | ಮೂರು ಜೋಡಿ ಡೆಮು ವಿಶೇಷ ರೈಲುಗಳ ಸಂಚಾರ ಕಾಯಂ

May 9, 2026
ತೆರೆ ಮೇಲೆ ರಾಜ್‌ಕುಮಾರ್‌, ಅಂತರಂಗದಲ್ಲಿ ಮುತ್ತುರಾಜ್‌ ಇದ್ದರು: ಮಂಜುನಾಥ್‌ ಚವಾಣ್‌

ತೆರೆ ಮೇಲೆ ರಾಜ್‌ಕುಮಾರ್‌, ಅಂತರಂಗದಲ್ಲಿ ಮುತ್ತುರಾಜ್‌ ಇದ್ದರು: ಮಂಜುನಾಥ್‌ ಚವಾಣ್‌

May 9, 2026
ಉಳವಿಯಲ್ಲಿ ಲಾರಿ-ಟಾಟಾ ಏಸ್ ಡಿಕ್ಕಿ : ಯುವಕನಿಗೆ ಗಂಭೀರ ಗಾಯ

ಉಳವಿಯಲ್ಲಿ ಲಾರಿ-ಟಾಟಾ ಏಸ್ ಡಿಕ್ಕಿ : ಯುವಕನಿಗೆ ಗಂಭೀರ ಗಾಯ

May 9, 2026
IBM and Yotta Announce Plans to Deliver Agentic AI Platform for Indian Enterprises

IBM and Yotta Announce Plans to Deliver Agentic AI Platform for Indian Enterprises

May 9, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL