ಶಿವಮೊಗ್ಗ: ನೆಹರೂ ಸ್ಟೇಡಿಯಂನ ಮುಖ್ಯದ್ವಾರದ ಎರಡೂ ದೊಡ್ಡ ಗೇಟ್’ಗಳಿಗೆ ಯಾವುದೇ ನಿಯಂತ್ರಣವಿಲ್ಲದ ಕಾರಣ, ಗಾಳಿಯ ರಭಸಕ್ಕೆ ಅತ್ತ ಇತ್ತ ಅಪ್ಪಳಿಸುತ್ತಿದ್ದು, ಇದು ಒಳ ಹೋಗುವಾಗ, ಬರುವಾಗ ಹಲವರಿಗೆ ಬಡಿದ ಘಟನೆ ನಡೆದಿದೆ.
ಈ ಕುರಿತಂತೆ ಬಳಕೆದಾರರ ವೇದಿಕೆಯ ಎಂ. ತುಳಸಿರಾಂ, ಅವರು ಮಾಹಿತಿ ನೀಡಿದ್ದು, ಗಾಳಿಯ ರಭಸಕ್ಕೆ ಗೇಟು ಆ ಕಡೆಯಿಂದ ಈ ಕಡೆಗೆ ಅಪ್ಪಳಿಸುತ್ತಿರುತ್ತದೆ. ವಾಹನಗಳು, ಕಾರು, ಮೋಟಾರ್ ಸೈಕಲ್’ಗಳು ಹೊರ ಒಳಗೆ ಹೋಗುವಾಗ ಬರುವಾಗ ಗೇಟ್ ಗಾಳಿಗೆ ಮುಚ್ಚಿ ಕೊಳ್ಳುತ್ತದೆ. ವಾಹನಗಳಿಗೆ ಹಾಗೂ ಪಾದಚಾರಿಗಳಿಗೆ ಅಚಾನಕ್ ಬಡಿಯುತ್ತದೆ ಎಂದಿದ್ದಾರೆ.
ಸ್ವತಃ ತುಳಸಿರಾಂ ಅವರೇ, ಕೆಲವು ದಿನಗಳ ಹಿಂದೆ ಇಲ್ಲಿ ವಾಹನದಲ್ಲಿ ತೆರಳುವಾಗ ಗಾಳಿಗೆ ಗೇಟ್ ಮುಚ್ಚಿಕೊಂಡಿದೆ. ವಾಹನದ ಬಲಭಾಗದ ಹಿಂದಿನ ಚಕ್ರದ ಪ್ಯಾನೆಲ್’ಗೆ ಬಡಿದಿದೆ. ಅದೃಷ್ಟವಶಾತ್ ಒಂದೆ ಕ್ಷಣ ಪಾರಾಗಿದ್ದಾರೆ. ವಾಹನಕ್ಕೆ ಡೆಂಟಾಗಿದ್ದು, 3 ಸಾವಿರ ರಿಪೇರಿಗೆ ಖರ್ಚಾಗಿದೆ. ವಾಹನ ಸರಿ ಮಾಡಿಕೊಳ್ಳಬಹುದು. ಆದರೆ ನನಗೆ ಗೇಟ್ ರಭಸದಿಂದ ಬಡಿದಿದ್ದಾರೆ ನಾನಿಲ್ಲವಾಗುತ್ತಿದ್ದೆ ಎನ್ನುತ್ತಾರೆ ಇವರು.
ಈ ವಿಷಯವನ್ನು ಯೂಥ್ ಸರ್ವಿಸಸ್ ಅಂಡ್ ಸ್ಪೋರ್ಟ್ಸ್ ಸಹಾಯಕ ನಿರ್ದೇಶಕ ರಮೇಶ್ ಅವರ ಗಮನಕ್ಕೆ ತರಲಾಗಿದ್ದು, ಆನಂತರ ಒಂದು ದಾರವನ್ನು ಕಟ್ಟಲಾಗಿದೆ. ಆದರೆ, ಅದೂ ಸಹ ನಿನ್ನೆ ಕಿತ್ತು ಹೋಗಿದ್ದು, ಸಮಸ್ಯೆ ಎಂದಿನಂತಿದೆ. ಹೀಗಾಗಿ, ಮುಂದೆ ಅನಾಹುತವಾಗುವ ಮುನ್ನ ಈ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಬೇಕು ಎನ್ನುವುದು ಎಲ್ಲರ ಒತ್ತಾಯವಾಗಿದೆ.
Discussion about this post