Sunday, July 6, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಶಿವಮೊಗ್ಗ ಭದ್ರಾವತಿ

ಭದ್ರಾವತಿ-ಪರಿಸರ ಪೂರಕ ಕುಂಬಾರಿಕೆಗೆ ಆತಂಕದ ಸ್ಥಿತಿ: ನಷ್ಟದಿಂದ ವೃತ್ತಿ ತೊರೆಯುತ್ತಿರುವ ಕುಂಬಾರರು

May 25, 2019
in ಭದ್ರಾವತಿ
0 0
0
Share on facebookShare on TwitterWhatsapp
Read - 2 minutes

ಭದ್ರಾವತಿ: ಪ್ಲಾಸ್ಟಿಕ್ ಸಮಸ್ಯೆ ದೇಶದಲ್ಲಿಂದು ಕಂಟಕವಾಗಿ ಪರಿಣಿಮಿಸಿದೆ. ಸರಕಾರಗಳು ಅದರ ನಿವಾರಣೆಗಾಗಿ ನಾನಾ ಕಸರತ್ತು ಮಾಡುತ್ತಿದ್ದರು ಪ್ರಯೋಜನವಾಗದಿರುವುದು ವಿಷಾಧನೀಯ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ನೈರ್ಮಲ್ಯ ತಡೆಗೆ ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತಿರುವ ಸರಕಾರ ಮಣ್ಣಿನ ಪರಿಕರಗಳ ಚಿಂತನೆಗೆ ಮುಂದಾಗಬಹುದೆ ಎಂಬುದು ಯಕ್ಷಪ್ರಶ್ನೆಯಾಗಿದೆ.

ಪರಿಸರ ಕಾಳಜಿಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬೃಹತ್ ಬ್ಯಾನರ್, ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳ ಮೂಲಕ ಹೆಚ್ಚಿನ ಪ್ರಚಾರ ನೀಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ. ಇದರಿಂದ ಸ್ವಚ್ಛ ಭಾರತ್ ಆಂದೋಲನ ಆರಂಭಗೊಂಡ ನಂತರ ದೇಶದಲ್ಲಿನ ಯುವಜನತೆಯಿಂದ ಸ್ವಚ್ಛತೆಗೆ ಬಹಳಷ್ಟು ಜಾಗೃತಿ ಮೂಡುತ್ತಿದೆ. ದುರಂತವೆಂದರೆ ಕೇವಲ ಪ್ಲಾಸ್ಟಿಕ್ ಕೈಚೀಲಗಳ ಬಳಕೆಯ ಮಾತ್ರ ನಿಷೇಧಕ್ಕೆ ಒತ್ತು ನೀಡುತ್ತಿರುವುದರಿಂದ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧತರಲು ಸಾಧ್ಯವಾಗುತ್ತಿಲ್ಲ. ನಗರ ಪ್ರದೇಶಗಳಲ್ಲಿ ಉಪಯೋಗಿಸುತ್ತಿರುವ ಡ್ರಮ್, ಸಿಂಟೆಕ್ಸ್‌ ಟ್ಯಾಂಕ್‌ಗಳು ಸೇರಿದಂತೆ ಅನೇಕ ವಸ್ತುಗಳ ನಿಷೇಧಕ್ಕೆ ಚಿಂತನೆ ನಡೆಯಬೇಕಿದೆ.

ಆಧುನಿಕ ಜೀವನ ಶೈಲಿಯಲ್ಲಿ ಪ್ಲಾಸ್ಟಿಕ್ ಬಳಕೆ ಬದುಕಿನ ಒಂದು ಭಾಗದಂತಾಗಿದೆಯಾದರೂ, ಇದರಿಂದ ಆರೋಗ್ಯ ಸಮಸ್ಯೆ ಹಾಗೂ ಪರಿಸರಕ್ಕೆ ಮಾರಕವಾಗಿದೆ. ಪ್ರತಿನಿತ್ಯ ಸಂಚರಿಸುವ ಟ್ರೆನ್, ಬಸ್ ನಿಲ್ದಾಣಗಳಲ್ಲಿ ಎತ್ಯೇಚ್ಚವಾಗಿ ಮಾರಾಟವಾಗುತ್ತಿರುವ ಪ್ಲಾಸ್ಟಿಕ್ ಬಾಟಲ್ ನೀರು, ಮನೆಗಳಲ್ಲಿ ಉಪಯೋಗಿಸುತ್ತಿರುವ ಕ್ಯಾನ್’ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಮಣ್ಣಿನ ಉಪಕರಣಗಳ ಬಳಕೆ ಹೆಚ್ಚಾಗಬೇಕಾದ ಅವಶ್ಯಕತೆ ಇದೆ. ನೆರೆ ರಾಜ್ಯಗಳಲ್ಲಿ ರೈಲು ಗಾಡಿಗಳಲ್ಲಿ ಮಣ್ಣಿನ ಉಪಕರಣಗಳ ಮೂಲಕ ಕುಡಿಯಲು ನೀರು, ಮಜ್ಜಿಗೆ ಒದಗಿಸುತ್ತಿದ್ದಾರೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಜಾರಿತರುವಂತಾಗಬೇಕಿದೆ. ಇದರಿಂದ ಪರಿಸರಕ್ಕೆ ಪೂರಕವಾಗಲಿದೆ.

ಪ್ಲಾಸ್ಟಿಕ್ ಬಳಕೆಯಿಂದ ಅಸ್ವಚ್ಛತೆಗೆ ಕಾರಣವಾಗಿರುವ ಜೊತೆಯಲ್ಲಿ ಕುಂಬಾರರ ಬದುಕು ಹಸನಾಗಲಿದೆ. ಜೊತೆಗೆ ಕುಂಬಾರಿಕೆಯನ್ನೇ ನಂಬಿಕೊಂಡ ಕುಟುಂಬಗಳಿಗೂ ಸಹ ನೆರವಾಗಲಿದೆ. ಇದರಿಂದ ಅತಂತ್ರ ಸ್ಥಿತಿಗೆ ಸಿಲುಕಿರುವ ಪರಿಸ್ಥಿತಿ ಕಂಡುಬರುತ್ತಿದೆ. ಇದೀಗ ಕುಂಬಾರಿಕೆಯನ್ನು ನಂಬಿಕೊಂಡ ಕುಟುಂಬಗಳು ನಷ್ಟದ ಹಾದಿಯಲ್ಲಿದ್ದು, ಬಹಳಷ್ಟು ಕುಟುಂಬಗಳು ಈ ವೃತ್ತಿಯನ್ನೇ ತೊರೆಯುತ್ತಿರುವ ಸ್ಥಿತಿ ಕಂಡುಬರುತ್ತಿದೆ. ಆದ್ದರಿಂದ ಮಣ್ಣಿನ ಉಪಕರಣಗಳ ಬಳಕೆ ಹೆಚ್ಚಾಗದಿದ್ದರೆ, ಮುಂದಿನ ದಿನಗಳಲ್ಲಿ ಬೇಕೆಂದರೂ ಸಿಗಲಾರದ ಸ್ಥಿತಿ ಎದುರಾಗಲಿದೆ. ಇದನ್ನು ತಡೆಗಟ್ಟಲು ಮಣ್ಣಿನ ಉಪಕರಣಗಳ ಬಳಕೆಗೆ ಆದ್ಯತೆ ನೀಡಬೇಕಿದೆ.

ಭದ್ರಾವತಿ: ಮಾರಾಟಕ್ಕಾಗಿ ಸಿದ್ದಗೊಂಡಿರುವ ಮಣ್ಣಿನ ಪರಿಕರಗಳಿಗೆ ಬಣ್ಣ ಲೇಪನ ಮಾಡುತ್ತಿರುವ ವ್ಯಾಪಾರಿ ಪಿ.ಬಸವರಾಜ್

ಹಿಂದಿನ ಕಾಲದಲ್ಲಿ ಅಡುಗೆ ಮನೆಯಲ್ಲಿ ಬಹಳಷ್ಟು ಮಣ್ಣಿನ ಉಪಕರಣಗಳನ್ನೇ ಬಳಸುತ್ತಿದ್ದರು. ಇದರಿಂದ ಬಹಳಷ್ಟು ರುಚಿ ಸಿಗುವುದರ ಜೊತೆಗೆ, ಉತ್ತಮ ಆರೋಗ್ಯಕ್ಕೂ ಪೂರಕವಾಗಿದ್ದವು. ಮಣ್ಣಿನ ಉಪಕರಣಗಳ ತಯಾರಿಸುವ ಕಂಬಾರರ ಕುಟುಂಬಗಳಿಗೂ ಇದು ಬದುಕು ಕಟ್ಟಿಕೊಳ್ಳಲು ವೃತ್ತಿ ಸಹಾಯಕವಾಗಿ ಮಡಿಕೆಗಳ ಬಳಕೆ ಸಹಕಾರಿಯಾಗಿದ್ದವು. ಇಂದು ತಣ್ಣನೆ ನೀರಿಗಾಗಿ ಪ್ರೀಡ್ಜ್‌ ಹಾಗೂ ಪ್ರೀಜರನ್ನೇ ಅವಲಂಭಿಸಬೇಕಿದೆ.

ಆದರೆ ಇದೀಗ ಬಹುತೇಕ ಪ್ಲಾಸ್ಟಿಕ್ ಬಳಕೆಯ ವಸ್ತುಗಳ ಬಳಕೆ ಕಂಡುಬರುತ್ತಿದ್ದು, ಇದರಿಂದ ಹಲವಾರು ರೀತಿಯ ಅವಾಂತರಗಳು ಸೃಷ್ಟಿಯಾಗುತ್ತಿವೆ. ಆದ್ದರಿಂದ ಇನ್ನಾದರೂ ಜನರು ಮಣ್ಣಿನ ಉಪಕರಣಗಳ ಬಳಕೆಗೆ ಆದ್ಯತೆ ನೀಡಬೇಕಾದ ಅವಶ್ಯಕತೆ ಇದೆ.

ಮಣ್ಣಿನ ಪರಿಕರಗಳ ಉಪಯೋಗ ಕುಂಠಿತ:
ಕೇವಲ 2 ರೂ. ದೀಪದಿಂದ ಹಿಡಿದು 500 ರೂ. ಬೆಲೆ ಬಾಳುವ ನವೀನ ಮಾದರಿಯ ನಲ್ಲಿಯ ಮಡಕೆಗಳನ್ನು ತಯಾರು ಮಾಡಿ ಮಾರಾಟ ಮಾಡಲಾಗುತ್ತಿದೆ. ಒಂದೊಂದೆಡೆ ಜನರಿಂದ ಬಳಕೆ ಕಡಿಮೆಯಾಗುತ್ತಿದ್ದರೆ, ಮತ್ತೊಂದೆಡೆ ಮಣ್ಣು ಸಿಗುವುದು ಸಹ ಕಷ್ಟವಾಗುತ್ತಿದೆ. ಜೀವನ ಸಾಗಿಸಲು ಕುಂಬಾರಿಕೆ ಲಾಭದಾಯಕವಾಗಿಲ್ಲದ ಕಾರಣ ಬಹಳಷ್ಟು ಜನರು ವೃತ್ತಿಯನ್ನು ತೊರೆದಿದ್ದಾರೆ.

ಇಂದು ಮದುವೆ-ಮುಂಜಿ ಸೇರಿದಂತೆ ಕೆಲವು ಶುಭ ಸಮಾರಂಭಗಳಿಗೆ ಅಗತ್ಯವಿರುವ ಚಿತ್ರಲೇಪಿತ ಮಡಿಕೆಗಳಿಗಷ್ಟೇ ಬೇಡಿಕೆ ಕಂಡುಬರುತ್ತಿದೆ. ಬಹಳಷ್ಟು ಜನ ವೃತ್ತಿ ತೊರೆಯಬಾರದು ಎಂಬ ಕಾರಣಕ್ಕಷ್ಟೇ ಕಸುಬು ಬಿಡದೆ, ಮುಂದುವರೆಸಿದ್ದಾರೆ. ಇದನ್ನೇ ನಂಬಿಕೊಂಡ ಕುಟುಂಬಗಳ ಸ್ಥಿತಿ ಹದಗೆಟ್ಟಿದೆ. ಮಣ್ಣಿನ ಉಪಕರಣಗಳು ಬಹಳಷ್ಟು ಉಪಯೋಗಕಾರಿಯಾಗಿದ್ದರೂ, ಜನರು ಅದೇಕೆ ನಿರುತ್ಸಾಹ ತೋರುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಕುಂಬಾರ ಬೀದಿಯ ವಾಸಿ ಹಾಗೂ ಮಣ್ಣಿನ ಪರಿಕರಗಳ ವ್ಯಾಪಾರಿ ಪಿ. ಬಸವರಾಜ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)

Tags: BhadravathiClay toolKannada ArticleKannada NewsMalnad NewsPlastic usagePotterಕುಂಬಾರಪ್ಲಾಸ್ಟಿಕ್ ಬಳಕೆಭದ್ರಾವತಿಮಡಿಕೆಮಣ್ಣಿನ ಪರಿಕರ
Previous Post

ಮೈತ್ರಿ ಸರ್ಕಾರ ಬೀಳಿಸಲು ಬಿಎಸ್’ವೈ ಯತ್ನಿಸಿದರೆ ಸಮಸ್ಯೆ ತಂದುಕೊಳ್ಳುವುದು ನಿಶ್ಚಿತ: ಅಮ್ಮಣ್ಣಾಯ

Next Post

ದೇಶದ 15ನೆಯ ಪ್ರಧಾನಿಯಾಗಿ ಮೋದಿ ನೇಮಕ, ಸಂಪುಟ ಸದಸ್ಯರ ಆಯ್ಕೆಗೆ ರಾಷ್ಟ್ರಪತಿ ಸೂಚನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ದೇಶದ 15ನೆಯ ಪ್ರಧಾನಿಯಾಗಿ ಮೋದಿ ನೇಮಕ, ಸಂಪುಟ ಸದಸ್ಯರ ಆಯ್ಕೆಗೆ ರಾಷ್ಟ್ರಪತಿ ಸೂಚನೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಶಿವಮೊಗ್ಗ | ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಎಎಸ್’ಐ ವಿಧಿವಶ

July 6, 2025

ಶಿವಮೊಗ್ಗ | ಬಂಗಾರಪ್ಪ ಬಡಾವಣೆಯಲ್ಲಿ ಹಿಂದೂ ದೇವರ ವಿಗ್ರಹ ಧ್ವಂಸ ಪ್ರಕರಣ | ಆರೋಪಿ ಅರೆಸ್ಟ್!

July 6, 2025

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

July 5, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಶಿವಮೊಗ್ಗ | ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಎಎಸ್’ಐ ವಿಧಿವಶ

July 6, 2025

ಶಿವಮೊಗ್ಗ | ಬಂಗಾರಪ್ಪ ಬಡಾವಣೆಯಲ್ಲಿ ಹಿಂದೂ ದೇವರ ವಿಗ್ರಹ ಧ್ವಂಸ ಪ್ರಕರಣ | ಆರೋಪಿ ಅರೆಸ್ಟ್!

July 6, 2025

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!