No Result
View All Result
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್
English Articles

LinkedIn shares Bengaluru’s Top Companies for career growth in 2026

by ಕಲ್ಪ ನ್ಯೂಸ್
May 20, 2026
0

Kalpa Media House  |  India | LinkedIn, the world's largest professional network, today unveiled its 2026 Top Companies list for...

Read moreDetails
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
Marriott Bonvoy Expands ICC Partnership to Include Women’s T20 World Cup 2026

Marriott Bonvoy Expands ICC Partnership to Include Women’s T20 World Cup 2026

May 19, 2026
Indriya Launches Customer-Owned Gold Exchange Programme to Promote Responsible Gold Consumption

Indriya Launches Customer-Owned Gold Exchange Programme to Promote Responsible Gold Consumption

May 19, 2026
Ashwini Vaishnaw Flags Off Bengaluru–Mumbai Express; Announces Vande Bharat Sleeper Soon

Ashwini Vaishnaw Flags Off Bengaluru–Mumbai Express; Announces Vande Bharat Sleeper Soon

May 18, 2026
  • Advertise With Us
  • Grievances
  • About Us
  • Contact Us
Thursday, May 21, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಇದು ನೀವು ಈವರೆಗೂ ನೋಡಿರದ ಚಾರಣಪ್ರಿಯರ ಮಲೆನಾಡ ಸ್ವರ್ಗ! ಆಗುಂಬೆಯಲ್ಲಿ ಏನೆಲ್ಲಾ ನೋಡಬಹುದು?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 4, 2019
in Special Articles
0
ಇದು ನೀವು ಈವರೆಗೂ ನೋಡಿರದ ಚಾರಣಪ್ರಿಯರ ಮಲೆನಾಡ ಸ್ವರ್ಗ! ಆಗುಂಬೆಯಲ್ಲಿ ಏನೆಲ್ಲಾ ನೋಡಬಹುದು?
Share on FacebookShare on TwitterShare on WhatsApp

ಆಗುಂಬೆ ಎಂದಾಕ್ಷಣ ನಮಗೆ ಜಿಟಿಜಿಟಿ ಮಳೆ. ಸುಂದರ ಸೂರ್ಯಾಸ್ತ, ಹಾವಿನ ಮೈನಂತೆ ಬಳುಕಿ ಬಳುಕಿ ಸಾಗಿರುವ ಘಾಟಿ ರಸ್ತೆ. ಸುತ್ತಲ ಹಸಿರ ವನರಾಜಿ.. ಕುಳಿರ್ಗಾಳಿ… ಹೀಗೆ ನಿಸರ್ಗವೇ ನಮ್ಮ ಮೈಮನ ಹೊಕ್ಕಂತಾಗುತ್ತದೆ.

ಆಗುಂಬೆ ಕರ್ನಾಟಕದ ಚಿರಾಪುಂಜಿ. ಅಲ್ಲಿನ ವನಸಿರಿಯಲ್ಲಿ ಭೋರ್ಗರೆವ ಜಲಧಾರೆಗಳಂತೂ ಮಳೆಗಾಲದಲ್ಲಿ ಮನಮೋಹಕ.

ಈಗ ಆಗುಂಬೆಯ ಪರಿಸರ, ಕೇವಲ ಸೂರ್ಯಾಸ್ತ ಒಂದೇ ಅಲ್ಲ ಇನ್ನಷ್ಟೂ ನಿಸರ್ಗ ಪ್ರಿಯರನ್ನು ಸೆಳೆಯುವ ಮುಖ್ಯ ಪ್ರವಾಸೀತಾಣವಾಗಿ ತನ್ನ ಚಹರೆ ಬದಲಾಯಿಸಿಕೊಳ್ಳುವ ಪ್ರಯತ್ನದಲ್ಲಿದೆ. ಆರೋಗ್ಯ ರಕ್ಷಣೆಯಲ್ಲಿ ಗಿಡಮೂಲಿಕೆಗಳ ಪ್ರಾಮುಖ್ಯತೆ ಬಗ್ಗೆ ಈಗೀಗ ಎಲ್ಲಿಲ್ಗದ ಜನಜಾಗೃತಿ ಮೂಡುತ್ತಿದೆ. ಇದಕ್ಕೆ ಪೂರಕವಾಗಿ ಆಗುಂಬೆಯ ಪಂಚಾಯತ್ ದಾಪುಗಾಲಿಕ್ಕಿದೆ.

ಪಂಚಾಯತ್ ಅಧ್ಯಕ್ಷ ಶ್ರೀನಂದನ್ ಹಸಿರುಮನೆ ಈ ಚಟುವಟಿಕೆಯ ಸೂತ್ರಧಾರರು. ಸುಮಾರು 2017 ರಿಂದ ಅವರ ಗಿಡಮೂಲಿಕಾ ವನ ಅಭಿವೃದ್ಧಿ ಕೆಲಸ ಶುರುವಾಗಿದೆ.

ನಾಲ್ಕು ಲಕ್ಷ ರೂ.ನಿಂದ ಆರಂಭಿಸಿ, ಪಂಚಾಯತ್ ವ್ಯಾಪ್ತಿಯ ನಾಲ್ಕು ಎಕರೆ ಪ್ರದೇಶದಲ್ಲಿ ವಿವಿಧ ಔಷಧೀಯ ಸಸ್ಯಗಳ ಸಮೂಹವನ್ನೇ ಬೆಳೆಸುವ ಸಾಹಸ ಮಾಡಿದ್ದಾರೆ. ಇದೆಲ್ಲವೂ ತಮ್ಮೊಬ್ಬರ ಪ್ರಯತ್ನವಲ್ಲ ಇಡೀ ಆಗುಂಬೆ ಪಂಚಾಯತ್’ನ ಎಲ್ಲ ಸದಸ್ಯರೂ, ಗ್ರಾಮಸ್ಥರೂ ಈ ವನಸಿರಿ ಬೆಳೆಸುವಲ್ಲಿ ಅವಿರತ ಶ್ರಮ ವಿನಿಯೋಗಿಸಿದ್ದಾರೆಂದು ನಂದನ್ ಅಭಿಮಾನ ವ್ಯಕ್ತಪಡಿಸುತ್ತಾರೆ. ನಂದನ್ ಅವರ ಉತ್ಸಾಹ ಕಂಡು ಜನ ಅವರನ್ನು ಮೂರನೆಯ ಬಾರಿಗೆ ಮತ್ತೆ ಪಂಚಾಯತ್ ಅಧ್ಯಕ್ಷರನ್ನಾಗಿ ಸತತ ಚುನಾಯಿಸಿದ್ದಾರೆ.

ಪಂಚಾಯತ್ ಅಧ್ಯಕ್ಷ ಶ್ರೀನಂದನ್ ಹಸಿರುಮನೆ

ವನೌಷಧೀಯ ಸಸ್ಯ ಬೆಳೆಸುವಲ್ಲಿ ಪಾರಂಪರಿಕವಾದ ನಕ್ಷತ್ರವನ, ರಾಶಿವನಗಳನ್ನು ವಿಫುಲವಾಗಿ ಪೋಷಿಸಿ ಬೆಳೆಸಿರುವ ಆಗುಂಬೆಯ ಮಂದಿಗೆ ನಿಸರ್ಗಪ್ರಿಯರು ಧನ್ಯವಾದ ಅರ್ಪಿಸಲೇಬೇಕು.

ಶ್ರೀನಂದನ್ ಅವರದ್ದು ದೂರದೃಷ್ಟಿ. ಪ್ರಸ್ತುತ ಈ ಸ್ಥಳವು ಆಗುಂಬೆ ಘಾಟಿಗಿಂತ ಎಂಟು ಕಿಮೀ ಮುಂಚೆಯೇ ನಮಗೆ ಕಾಣ ಸಿಗುತ್ತದೆ. ಅಲ್ಲಿ ರಸ್ತೆಯ ಪಕ್ಕದಲ್ಲೇ ಕಿರು ಮಾರಾಟ ಮಳಿಗೆಗೆ ಅಡಿಪಾಯವನ್ನೂ ಹಾಕಿಸಿದ್ದಾರೆ.

ಅಲ್ಲಿ ಈ ವನ ಬಲಗೊಂಡ ನಂತರ ರಸ್ತೆಯಲ್ಲಿ ಹಾದುಹೋಗುವವರಿಗೆ ಔಷಧೀಯ ಸಸ್ಯಗಳ ರಸಪಾನೀಯ, ಗಿಡಮೂಲಿಕೆಗಳ ಮಳಿಗೆ, ತಾಜಾ ತರಕಾರಿ ಮಾರಾಟ, ಪೂಜಾರ್ಹ ಸಮಿತ್ತುಗಳು, ದೊರೆಯುವಂತೆ ಮಾಡುವುದು ಹೀಗೆ ಅವರ ಯೋಜನೆ ಅನನ್ಯವಾಗಿದೆ.

ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಮೂಲಕ ಅವರಿಗೆ ಮಾಹಿತಿ ನೆರವು ನೀಡುವ ಪ್ರಯತ್ನವಾಗಿ ವೇದಿಕೆಯ ವತಿಯಿಂದ ಅಲ್ಲಿಗೆ ಭೇಟಿ ನೀಡಲಾಯಿತು.

ವೇದಿಕೆ ಅಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಕಾರ್ಯದರ್ಶಿ ಕೆ.ಎನ್. ಗೋಪಿನಾಥ್ ಮತ್ತು ನಿರ್ದೇಶಕರಾದ ಡಾ.ಸುಧೀಂದ್ರ, ಕೆ.ಜಿ. ಮಂಜುನಾಥ ಶರ್ಮಾ ಅವರನ್ನೊಳಗೊಂಡ ತಂಡಕ್ಕೆ ಪರಿಸರಪ್ರಿಯ ನಂದನ್ ಹರ್ಷೋಲ್ಲಾಸದಿಂದ ಬರಮಾಡಿಕೊಂಡರು. ಗಿಡಮೂಲಿಕಾ ವನದಲ್ಲಿ ಒಂದು ಸುತ್ತು ಹೋಗಿ ಬಂದೆವು.

ಆಗುಂಬೆಯನ್ನು ಕೇಂದ್ರವಾಗಿರಿಸಿ ಸೋಮೇಶ್ವರ, ಕುಂದಾದ್ರಿ, ಕೊಡಚಾದ್ರಿ, ನಗರ, ತೀರ್ಥಹಳ್ಳಿ ಕವಲೆದುರ್ಗ ಕೋಟೆ, ಸಾಗರ, ಕೆಳದಿ ಮುಂತಾಗಿ ಒಂದು ಪ್ರವಾಸೀ ವೃತ್ತ. ಹಾಗೆಯೇ ಸಾಹಸಪ್ರಿಯರಿಗೆ ಜಲಸಾಹಸ, ಶಿಲಾರೋಹಣ, ಚಾರಣ ಇತ್ಯಾದಿ ಚಟುವಟಿಕೆಗಳಿಗೆ ಚಾರಣಮಾರ್ಗ ಸೂಚನೆಗಳು. ಅಲ್ಲದೇ ಚಾರಣಿಗರಿಗೆ ಕಾಡಿನ ಆಯ್ದ ಸ್ಥಳಗಳಲ್ಲಿ ತಂಗಲು ಅನುಕೂಲ ಮಾಡಿಕೊಡುವ ಟೆಂಟ್’ಗಳಿಗೆ ಎತ್ತರದ ಕಟ್ಟೆಗಳ ನಿರ್ಮಾಣ, ಪಕ್ಷಿವೀಕ್ಷಣಾ ಗೋಪುರಗಳ ನಿರ್ಮಾಣ ಇವೆಲ್ಲವೂ ಆಗುಂಬೆ ಗ್ರಾಮ ಪಂಚಾಯತ್’ನಿಂದ ಮಾಡುವ ಯೋಜನೆಗಳಾಗಬೇಕಿದೆ. ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ನೆರವು ಮತ್ತು ಮಾರ್ಗದರ್ಶನಕ್ಕೆ ಸದ್ಯ ನಂದನ್ ಅವರು ನಿರೀಕ್ಷಿಸುತ್ತಿದ್ದಾರೆ.

ಈ ಎಲ್ಲ ಯೋಜನೆಗಳನ್ನು ಪ್ರವಾಸೋದ್ಯಮ ಇಲಾಖೆ ಮುಂದೆ ಪ್ರಸ್ತುತ ಪಡಿಸುವ ನಿರ್ಧಾರವನ್ನೂ ನಂದನ್ ನಮಗೆ ತಿಳಿಸಿದರು ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಸಹಕಾರವನ್ನೂ ಕೋರಿದರು. ಅಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಮತ್ತು ಕಾರ್ಯದರ್ಶಿ ಗೋಪಿನಾಥ್ ಅವರು ತಮ್ಮ ಸಲಹೆ ಸೂಚನೆಗಳನ್ನು ನಂದನ್ ಅವರೊಂದಿಗೆ ಹಂಚಿಕೊಂಡರು.

ಇನ್ನೊಂದು ವಿಶೇಷ:
ಅದು ಚಾರಣಪ್ರಿಯರಿಗೆ ಕೈಬೀಸಿ ಕರೆಯುವ ತಾಣ ನಮಗೆ ಪರಿಚಯಿಸಿದರು. ಅದೇ ಅವರೆಮನೆ. ಇದು ಸಂಪೂರ್ಣ ಹಸಿರೊಳಗೇ ಮುಳುಗಿದೆ. ಎತ್ತರದ ಬೆಟ್ಟದಿಂದಾವೃತ. ಚಾರಣ, ಸಾಹಸಿಗರಿಗೆ ಸವಾಲಾಗಿ ಕರೆಯುತ್ತದೆ.

ಅಲ್ಲಿ ಕಾಳಿಂಗ ಸರ್ಪ ಅಧ್ಯಯನ ಕೇಂದ್ರವಿದೆ. ಉರಗ ಪ್ರಿಯರಿಗೂ ಇದು ಸಂಶೋಧನೆಯ ತಾಣ. ಸ್ವಲ್ಪ..ಇನ್ನು ಕೆಲವೇ ವರ್ಷಗಳು… ನಾವ್ಯಾರಾದರೂ ಆಗುಂಬೆಗೆ ಪ್ರವಾಸ ಹೊರಟರೆ ಅಲ್ಲಿ ಕೇವಲ ಸೂರ್ಯಸ್ತ ಮಾತ್ರವಲ್ಲ… ವನೌಷಧಿ, ಸಸ್ಯ ರಸಪಾನೀಯ, ಗಿಡಮೂಲಿಕಾ ವನದಲ್ಲೊಂದು ಸುತ್ತು, ಸನಿಹದ ಅವರೆಮನೆ ಗುಡ್ಡ, ಕಾಳಿಂಗ ಸರ್ಪ ಅಧ್ಯಯನ ಕೇಂದ್ರ ಹೀಗೆ ಕಣ್ದಣಿಯೆ ನೋಡುವ, ಮನಮುದ ಹೊಂದುವ ತಾಣವಾಗಿ ಈ ಸ್ಥಳ ಭೇಟಿಗೆ ರಮ್ಯವೆನಿಸುತ್ತದೆ.

ಅಲ್ಲಿಗೆ ಭೇಟಿ ನೀಡುವವರು ಅಗತ್ಯವಾಗಿ ನಂದನ್ ಅವರಿಗೆ ಫೋನ್ ಮಾಡಲೇಬೇಕು. (ನಂದನ್ ಅವರ ಫೋನ್ ನಂ.9448238580)

ಲೇಖನ: ಡಾ.ಸುಧೀಂದ್ರ,
ಸಲಹಾ ಸಂಪಾದಕರು,
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

Tags: AgumbeDepartment of TourismHerbalKing CobraKodachadriMalnad NewsTrekkingಆಗುಂಬೆಕರ್ನಾಟಕದ ಚಿರಾಪುಂಜಿಕವಲೆದುರ್ಗ ಕೋಟೆಕಾಳಿಂಗ ಸರ್ಪಗಿಡಮೂಲಿಕೆಚಾರಣಪ್ರವಾಸೋದ್ಯಮ ಇಲಾಖೆಮಲೆನಾಡುವನೌಷಧೀಯ ಸಸ್ಯ
Share196Tweet123Send
Previous Post

ಏನಾಗಿದೆ ನಮಗೆ? ಕೆರೆಗಳ ಸಮಾಧಿಯ ಮೇಲೆ ಸೌಧ ನಿರ್ಮಾಣವೇ? ಈಗಲಾದರೂ ಎಚ್ಚೆತ್ತುಕೊಳ್ಳೋಣ

Next Post

ಮಂಗಳವಾರದ ನಂತರ ಏನಾಗಲಿದೆ ಕಾಶ್ಮೀರದ ಪರಿಸ್ಥಿತಿ? ರಾಜ್ಯಪಾಲರ ಮಾರ್ಮಿಕ ನುಡಿಗೆ ಅರ್ಥವೇನು?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಮಂಗಳವಾರದ ನಂತರ ಏನಾಗಲಿದೆ ಕಾಶ್ಮೀರದ ಪರಿಸ್ಥಿತಿ? ರಾಜ್ಯಪಾಲರ ಮಾರ್ಮಿಕ ನುಡಿಗೆ ಅರ್ಥವೇನು?

ಮಂಗಳವಾರದ ನಂತರ ಏನಾಗಲಿದೆ ಕಾಶ್ಮೀರದ ಪರಿಸ್ಥಿತಿ? ರಾಜ್ಯಪಾಲರ ಮಾರ್ಮಿಕ ನುಡಿಗೆ ಅರ್ಥವೇನು?

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026

ಜೂನ್ 1 | ಶಿವಮೊಗ್ಗದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಯೋಜನೆಗೆ ಚಾಲನೆ | ಎಲ್ಲಿಯವರೆಗೂ ಶಿಕ್ಷಣ ಸಿಗಲಿದೆ?

May 21, 2026
ಶಿವಮೊಗ್ಗ | 5,000 ಬಿಪಿಎಲ್ ಕಾರ್ಡ್ ರದ್ದು | ಆಹಾರ ಸಚಿವರಿಗೆ ಕಾಂಗ್ರೆಸ್ ಮುಖಂಡ ಚೇತನ್ ಮನವಿಗಳೇನು?

ಶಿವಮೊಗ್ಗ | 5,000 ಬಿಪಿಎಲ್ ಕಾರ್ಡ್ ರದ್ದು | ಆಹಾರ ಸಚಿವರಿಗೆ ಕಾಂಗ್ರೆಸ್ ಮುಖಂಡ ಚೇತನ್ ಮನವಿಗಳೇನು?

May 21, 2026
ಅಬ್ಬಬ್ಬಾ! ಒಂದು ದೇಶ-ಒಂದು ಚುನಾವಣೆ ನಡೆದರೆ ಉಳಿತಾಯವಾಗುವ ಹಣವೆಷ್ಟು ಗೊತ್ತಾ?

ಅಬ್ಬಬ್ಬಾ! ಒಂದು ದೇಶ-ಒಂದು ಚುನಾವಣೆ ನಡೆದರೆ ಉಳಿತಾಯವಾಗುವ ಹಣವೆಷ್ಟು ಗೊತ್ತಾ?

May 21, 2026
ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಶಿವಮೊಗ್ಗ ವಕೀಲರ ನಿಯೋಗ ಸಿಎಂಗೆ ಮನವಿ, ಪತ್ರದಲ್ಲೇನಿದೆ?

ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಶಿವಮೊಗ್ಗ ವಕೀಲರ ನಿಯೋಗ ಸಿಎಂಗೆ ಮನವಿ, ಪತ್ರದಲ್ಲೇನಿದೆ?

May 21, 2026
MLC ಡಾ.ಧನಂಜಯ ಸರ್ಜಿ ಅವರಿಂದ ಜಯನಗರ ಪೊಲೀಸ್ ಠಾಣೆಗೆ ನೂತನ ಜೀಪ್ ಹಸ್ತಾಂತರ

MLC ಡಾ.ಧನಂಜಯ ಸರ್ಜಿ ಅವರಿಂದ ಜಯನಗರ ಪೊಲೀಸ್ ಠಾಣೆಗೆ ನೂತನ ಜೀಪ್ ಹಸ್ತಾಂತರ

May 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL