ಶ್ರೀನಗರ: ಭಾರತ-ಪಾಕಿಸ್ಥಾನ ಗಡಿಯಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದೇಶವನ್ನು ಕಾಯುತ್ತಿರುವ ಭಾರತೀಯ ಯೋಧರಿಗೆ ಈ ಬಾರಿಯದ್ದು ಎಂದಿಗೂ ಮರೆಯದ ದೀಪಾವಳಿಯಾಗಿದೆ.
ಹೌದು… ಪ್ರಧಾನಿ ನರೇಂದ್ರ ಮೋದಿ ತಾವು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಕಾವಲು ಸೈನಿಕರೊಡನೆ ದೀಪಾವಳಿ ಆಚರಿಸಿದ್ದು, ಅಲ್ಲಿದ್ದ ಪ್ರತಿ ಯೋಧರಿಗೂ ಸ್ವತಃ ತಾವೇ ತಮ್ಮ ಕೈಯಾರೆ ಸಿಹಿ ತಿನ್ನಿಸಿದ್ದಾರೆ ಪ್ರಧಾನಿಯವರು.
ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ನಂತರ ಕಣಿವೆ ರಾಜ್ಯಕ್ಕೆ ಮೋದಿಯವರು ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದು, ಈ ಆಕಸ್ಮಿಕ ಭೇಟಿ ಹಾಗೂ ಅವರೇ ಸಿಹಿ ತಿನ್ನಿಸಿದ್ದು ಸೈನಿಕರನ್ನು ಸಂತಸದ ಕಡಲಿನಲ್ಲಿ ತೇಲಿಸಿದೆ.
ಈ ವೇಳೆ ಮಾತನಾಡಿದ ಪ್ರಧಾನಿಯವರು, ದೇಶದಾದ್ಯಂತ ಎಲ್ಲರೂ ಹಬ್ಬವನ್ನೂ ಆಚರಿಸುತ್ತಿರುವ ನಡುವೆಯೂ ದೇಶದ ಗಡಿಭಾಗದಲ್ಲಿ ಬಿಗಿ ಭದ್ರತೆಯಲ್ಲಿ ತೊಡಗಿರುವ ಯೋಧರ ಕಾರ್ಯದಕ್ಷತೆಯನ್ನು ಶ್ಲಾಘಿಸಿದರು. ದೀಪಾವಳಿ ಸಂದರ್ಭದಲ್ಲಿ ಜನರು ತಮ್ಮ ಕುಟುಂಬದ ಜತೆ ಬೆಳಕಿನ ಹಬ್ಬವನ್ನು ಆಚರಿಸುವುದು ಸಂಪ್ರದಾಯವಾಗಿದೆ. ಈ ಹಿನ್ನೆಲೆಯಲ್ಲಿ ನಾನೂ ಕೂಡಾ ನನ್ನ ಕುಟುಂಬ(ಯೋಧರ) ಜತೆ ದೀಪಾವಳಿ ಆಚರಿಸಲು ನಿರ್ಧರಿಸಿರುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
Celebrated #Diwali with the brave soldiers of the Indian Army in Rajouri, Jammu and Kashmir.
It is always a matter of great joy to be able to interact with these courageous personnel. pic.twitter.com/e9th01wwiy
— Narendra Modi (@narendramodi) October 27, 2019
ಎಲ್ಲ ಜನಸಾಮಾನ್ಯರು ತಮ್ಮ ಕುಟುಂಬವೇ ಮೊದಲು ಎಂದು ಆಲೋಚಿಸುತ್ತಾರೆ. ಆದರೆ ದೇಶದ ಸೈನಿಕರಿಗೆ ಭಾರತವೇ ತಾಯಿ ಎಂದು ಭಾವಿಸುತ್ತೀರಿ. ಅಲ್ಲದೇ ದೇಶದ 130 ಕೋಟಿ ಜನರಿಗೆ ರಕ್ಷಣೆಯನ್ನು ನೀಡುತ್ತಿದ್ದೀರಿ. ನಮ್ಮ ದೇಶ ಮತ್ತು ನಮ್ಮ ಕರ್ತವ್ಯ ಮೊದಲು ಎಂಬುದು ನಿಮ್ಮ ಆದ್ಯತೆಯಾಗಿದೆ. ಮಿಕ್ಕಿದ್ದೆಲ್ಲವೂ ನಂತರ ಸ್ಥಾನ ಪಡೆಯಲಿದೆ. ಆದರೆ ಈ ಹಬ್ಬದ ಸಂದರ್ಭದಲ್ಲಿ ಕುಟುಂಬದ ಸದಸ್ಯರು ದೀಪಾವಳಿಯನ್ನು ಒಟ್ಟಿಗೆ ಆಚರಿಸಬೇಕೆಂದು ಬಯಸುತ್ತಾರೆ. ಆದರೆ ನೀವು ಗಡಿಯಲ್ಲಿ ರಕ್ಷಣೆಯಲ್ಲಿ ತೊಡಗಿರುತ್ತೀರಿ. ನಿಮ್ಮ ತ್ಯಾಗಕ್ಕೆ ಬೆಲೆ ಕಟ್ಟಲಾಗದು ಎಂದರು.
ಇನ್ನು ಪ್ರಧಾನಿಯವರ ಭೇಟಿಯ ಕುರಿತಾಗಿ ರಾಷ್ಟ್ರೀಯ ಮಾಧ್ಯಮವೊಂದರ ಜೊತೆಯಲ್ಲಿ ಮನದಾಳದ ಸಂತಸವನ್ನು ಹಂಚಿಕೊಂಡಿರುವ ಯೋಧರೊಬ್ಬರು, ಮೋದಿಯವರ ಭೇಟಿ ದೊಡ್ಡ ಅಚ್ಚರಿಯಾಗಿದೆ. ಅವರನ್ನು ಭೇಟಿಯಾದ ನಂತರ ನಮಗೆ ಸಂತೋಷ ಮತ್ತು ಹೆಮ್ಮೆ ಎನಿಸುತ್ತಿದೆ ಎಂದಿದ್ದಾರೆ.
While interacting with our soldiers, I thanked them on behalf of the people of India for their monumental service. Their vigilance and valour keeps our nation safe!
I also spoke about the major steps our Government is taking for the welfare of soldiers. pic.twitter.com/wG4yPn43Tg
— Narendra Modi (@narendramodi) October 27, 2019
ಇನ್ನೊಬ್ಬ ಯೋಧ ಮಾತನಾಡಿದ, ಪ್ರಧಾನಿಯವರೊಂದಿಗೆ ದೇಶದ ಗಡಿಗಳನ್ನು ಭದ್ರಪಡಿಸಲು ದಿನದ ಎಲ್ಲಾ ಸಮಯ ಕೆಲಸ ಮಾಡುತ್ತಿರುವ ನಮ್ಮಂತಹ ಸೈನಿಕರಿಗೆ ಮನೋಸ್ಥೈರ್ಯ ತುಂಬುವಂತಹ ಸೂಚಕ ಈ ಭೇಟಿಯಾಗಿದೆ ಎಂದಿದ್ದಾರೆ.
Anecdotes about the courage of our soldiers are widely shared but do you also know about the stupendous efforts of our armed forces during natural disasters? Their swift action saves many lives and prevents public property from being destroyed. pic.twitter.com/yKRm6dMUwI
— Narendra Modi (@narendramodi) October 27, 2019
Discussion about this post