ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಊರಿಗೆ ಊರೇ ಹಸೆಗೆ ನಿಂತರೇ ಆರತಿ ಎತ್ತಲು ಜನವೆಲ್ಲೀ?
ಎಲ್ಲವೂ ಹಾಡು ಬಾಯೇ ಆದರೇ, ಚಪ್ಪಳಿಕ್ಕಲು ಇನ್ನೆಲ್ಲಿ!
ಈ ನುಡಿಗಳ ಪ್ರಸಿದ್ಧ ಕವಿಯೋರ್ವರಿದ್ದು, ನಿಜ! ಇದರಲ್ಲಿ ಎಂತಹ ಸತ್ಯ ಹುದುಗಿ ಕುಳಿತಿದೆ. ಎಲ್ಲರೂ ಹಸೆ ಏರಿದರೇ ಯಾರು ಆರತಿ ಮಾಡಬೇಕು? ಸಕಲರೂ ಹಾಡಲಾರಂಭಿಸಿದರೇ ಕೇಳುವವರೊಬ್ಬರು ಬೇಕಲ್ಲವೇ.
ಹಾಗೆಯೇ ಯತಿವರ್ಯರು ಬೇಕಾದಷ್ಟು ಕಾಣ ಸಿಗುತ್ತಾರೆ. ಆದರೆ ಅವರೆಲ್ಲಾ ಪೇಜಾವರರಂತೂ ಖಂಡಿತಾ ಅಲ್ಲವೇ ಅಲ್ಲ. ಇವರು ಕೇವಲ ತಮ್ಮ ಭವಂತು ಎನ್ನುವ ಅಪರೂಪ ಯತಿ ವರ್ಯರೆನ್ನಿಸಿದರು. ರಾಜಕಾರಣದಿಂದ ಹಿಡಿದು ಪ್ರತಿಯೊಂದು ವಿಷಯದಲ್ಲೂ ಅವರು ಆ ಬಗ್ಗೆ ಯೋಚಿಸುತ್ತಾರೆ ಅದುವೇ ಶ್ರೀಗಳ ವಿಶೇಷ.
ನಮ್ಮ ದೇಶ ಪುಣ್ಯಕ್ಷೇತ್ರಗಳ ನೆಲೆವೀಡು. ವಿಶ್ವದಲ್ಲೆಲ್ಲೂ ಇಷ್ಟೊಂದು ಪುಣ್ಯ ಸಾಧಕಗಳು ಖಂಡಿತಾ ಕಂಡು ಬರುವುದೇ ಇಲ್ಲ. ದಕ್ಷಿಣದಲ್ಲಿ ಶ್ರೀಕ್ಷೇತ್ರ ಉಡುಪಿಗೆ ತನ್ನದೇ ಮಾನ್ಯತೆ ಇದೆ. ದಿನನಿತ್ಯವೂ ಇಲ್ಲಿ ಉತ್ಸವ. ಶ್ರೀಕೃಷ್ಣನಿಗೆ ಪೂಜೆ, ಶ್ರೀಮದಾನಂದತೀರ್ಥರು ಇದರ ಪುನರ್ಜೀವಗೊಳಿಸಿದ ದ್ವೈತ ಮತ ಸ್ಥಾಪಕರು. ಅವರು ಶ್ರೀಕೃಷ್ಣನನ್ನು ಇಲ್ಲಿ ಸ್ಥಾಪಿಸಿ ಅವನ ಪೂಜೆಗೆಂದೇ ಅಷ್ಠಮಠಗಳ ಯತಿವರ್ಯರನ್ನು ನೇಮಿಸಿದ್ದರು.
ನಂತರ ಭಾವೀ ಸಮೀರ ಶ್ರೀವಾದಿರಾಜರು ಇದರಲ್ಲಿ ಬದಲಾವಣೆ ಮಾಡಿ 2 ವರುಷಗಳಿಗೊಮ್ಮೆ ಅಷ್ಠಮಠಗಳ ಯತಿಗಳು ಶ್ರೀಕೃಷ್ಣನ ಪೂಜೆ ಮಾಡಲು ಅವಕಾಶಮಾಡಿಕೊಟ್ಟ ಯತಿವರೇಣ್ಯರು. ಆದರೂ ಯತಿಗಳು ಮೂರು ನಾಲ್ಕು ಬಾರಿ ಪರ್ಯಾಯ ಪೂರೈಸಲು ಸಹ ಕೆಲವು ವೇಳೆ ಅಸಾಧ್ಯವಾಗಿ ಬಿಡುತ್ತದೆ. ಒಂದು ಮಠಕ್ಕೆ ಎರಡು ವರ್ಷವೆಂಬಂತೆ 16 ವರುಷ. ಅದರಲ್ಲಿ ಪ್ರತಿ ಯತಿಗಳೂ 14 ವರುಷ ತಮ್ಮ ಸರದಿಗಾಗಿ ಎದುರು ನೋಡುತ್ತಾ ಇರಬೇಕು.
ವಾದಿರಾಜರು 5 ಬಾರಿ ಪರ್ಯಾಯ ಮುಗಿಸಿದ್ದರು. ಇದಾಗಿ ಸುಮಾರು ಮುನ್ನೂರು ವರ್ಷಗಳ ನಂತರ ಈಗ ಪೇಜಾವರ ಶ್ರೀಗಳು ಂತಹ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ. ಅದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದಿದ್ದಾಗ ಸಕಲ ಗಣ್ಯರು, ಯತಿಗಳು ಇವರನ್ನು ಬಲವಂತ ಮಾಡಿ ಆ ಪೀಠವನ್ನೇರಲು ಸಮ್ಮತಿಸಿದರು. ಅವರುಬಾಲ ಯತಿಯರ್ವರು. ಉಡುಪಿ ಮಠದ ಸಂಪ್ರದಾಯವೇ ಅದೇ ರೀತಿ ನಡೆದುಬಂದಿದೆ. ಸಮಾಜದ ಹಿತಕ್ಕಾಗಿ ಯಾವಾಗಲು ಚಿಂತಿಸುತ್ತ ಅವರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಲೇ ಇರುವ ಏಕೈಕ ಯತಿಗಳಿವರು.
ಕೇವಲ ತಾವಾಯಿತು ತಮ್ಮ ಪೂಜೆ ಆಯಿತು. ಇಹಪರಕ್ಕೆ ಸಾಧನ ಇಷ್ಟೇ ಎಂದೂ ಅವರು ನಡೆಸಿಕೊಂಡು ಬರಲಿಲ್ಲ. ನನ್ನ ಮುಂದೆ ಒಂದು ಸಮಾಜ ಇದೆ. ಅದರ ಒಳ್ಳಿತೇ ನನ್ನ ಬದುಕಿನ ಹೆಗ್ಗುರಿ ಎಂದು ಭಾವಿಸಿದರು. ಅವರ ಪಾದ ಪದ್ಮಗಳಿಗೆ ಅನಂತ ಕೋಟಿ ಶ್ರದ್ಧಾ ನಮನಗಳು.
ಕೆ.ಎಂ. ಫಲ್ಗು
(ವಿಶ್ರಾಂತ ಶಿಕ್ಷಕಿ)
Get in Touch With Us info@kalpa.news Whatsapp: 9481252093
Discussion about this post