- 1984ರಲ್ಲಿ ಹತ್ತು ಲಕ್ಷ ರೂ. ವೆಚ್ಚದಲ್ಲಿ ಬದರಿಕ್ಷೇತ್ರದಲ್ಲಿ ಅನಂತ ಮಠದ ಸ್ಥಾಪನೆ
- 1986ರಲ್ಲಿ ಶ್ರೀ ಮಧ್ವಾಚಾರ್ಯರ 750ನೇ ವರ್ಧಂತಿಯನ್ನು ಪಾಜಕದಲ್ಲಿ ವೈಭವವಾಗಿ ನಡೆಸಿ, ನಂತರ ದೇಶದಾದ್ಯಂತ ಭಕ್ತಿರಥ ಯಾತ್ರ
- 1990ರಲ್ಲಿ ಮಧ್ವಾಚಾರ್ಯರ ಜನ್ಮಭೂಮಿ ಪಾಜಕದಲ್ಲಿ ವಾಸುದೇವ ಗುರುಕುಲ ಸ್ಥಾಪನೆ
- ತಿರುಪತಿಯಲ್ಲಿ ಉಡುಪಿ ಮಠ, ಹರಿದ್ವಾರದಲ್ಲಿ ಮಧ್ವಮಂದಿರ, ವಿದ್ಯಾಪೀಠದ ಕೃಷ್ಣಮಂದಿರ ಸ್ಥಾಪನೆ
- 1967ರಲ್ಲಿ ಬಿಹಾರದ ಬರಗಾಲದ ಸಂದರ್ಭದಲ್ಲಿ ನೊಂದ ಜನರ ಸಹಾಯಕ್ಕಾಗಿ ಪಾದಯಾತ್ರೆ ನಡೆಸಿ, ಗಯಾ ಜಿಲ್ಲೆಯ ಹಳ್ಳಿಗಳಲ್ಲಿ ಸಂತ್ರಸ್ತರಿಗೆ ಔಷಧೋಪಚಾರ
- 1978ರಲ್ಲಿ ಆಂಧ್ರದ ಹಂಸಲದಿವಿ ಗ್ರಾಮ ಸಮುದ್ರ ಪಾಲಾದಾಗ, ಒಂದು ಗ್ರಾವವನ್ನು ದತ್ತು ಪಡೆದು, 150 ಮನೆಗಳ ನಿರ್ಮಾಣ ಹಾಗೂ
- 1955ರಲ್ಲಿ ಗೋವಿಂದಪುರ ಗ್ರಾಮ ಭೂಕಂಪಕ್ಕೆ ತುತ್ತಾದಾಗ ಸಂತ್ರಸ್ತರಿಗೆ 60 ಮನೆಗಳ ನಿರ್ಮಾಣ
- 1966ರ ನವೆಂಬರ್ 19ರಂದು ಬೆಂಗಳೂರಿನ ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ ಗೋಹತ್ಯಾನಿಷೇಧಕ್ಕಾಗಿ ಎರಡು ದಿನ ನಿರ್ಜಲ ಉಪವಾಸ.
- 1994ರ ಸೆಪ್ಟಂಬರ್ 26ರಂದು ಆಂಧ್ರದ ರುದ್ರಾರಂ (ಹೈದರಾಬಾದ್) ಕಸಾಯಿ ಖಾನೆಯ ವಿರುದಟ ಪಶುರಕ್ಷಾಯಜ್ಞ ಚಳುವಳಿಗಾಗಿ ಉಪವಾಸವಿದ್ದು 12 ಕಿ.ಮೀ. ನಡಿಗೆ ಪೋಲೀಸರ ವಶಕ್ಕೆ.
- 1968ರ ಜೂನ್ 18ರಂದು ಉಡುಪಿಯಲ್ಲಿ ಶ್ರೀಕೃಷ್ಣ ಚಿಕಿತ್ಸಾಲಯ 1962ರಲ್ಲಿ ಬೆಂಗಳೂರಿನಲ್ಲಿ ಶ್ರೀಕೃಷ್ಣಸೇವಾಶ್ರಮ ಆಸ್ಪತ್ರೆ. ಈಗ ಇದು ಜಯನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಉಡುಪಿಯಲ್ಲಿ ಶ್ರೀಕೃಷ್ಣಸೇವಾಧಾಮ ಅನಾಥ ಮಕ್ಕಳ ಕೇಂದ್ರ.
- ವರದಾ ನದಿಯ ತೀರದಲ್ಲಿ ಕರ್ಜಿಗಿಯಲ್ಲಿ ವೃದ್ಧಾಶ್ರಮ
- ಬೆಂಗಳೂರಿನಲ್ಲಿ ಅರುಣಚೇತನ ಅಂಗವಿಕಲ ಮಕ್ಕಳ ಶಾಲೆ
ಪೂಜ್ಯರ ಕೆಲ ದಿಟ್ಟ ಹೆಜ್ಜೆಗಳು
1. 1970ರಲ್ಲೇ ಬೆಂಗಳೂರಿನ ಮಲ್ಲೇಶ್ವರಂ ಈಜುಕೊಳ ಬಡಾವಣೆಯ ಹಿಂದುಳಿದವರ ವಸತಿ ನಿವಾಸಕ್ಕೆ ಭೇಟಿ.
2. ಬಳ್ಳಾರಿ ಜಿಲ್ಲೆಯ ಸಂಗನಕಲ್ಲಿನಲ್ಲಿ ಸವರ್ಣೀಯರಿಂದ ದಲಿತರ ಮೇಲೆ ಧಾಳಿ ಯಾದಾಗ ನಿರಾಶ್ರಿತರಾದವರಿಗೆ ಆಶ್ರಯದಾನ.
3. ತುರ್ತುಪರಿಸ್ಥಿತಿಯಲ್ಲಿ ಪ್ರತಿಭಟನೆ. ಇಂದಿರಾಗಾಂಗೆ ಎರಡು ಪತ್ರಗಳು. ಮೊದಲ ಪತ್ರದಲ್ಲಿ ಯತಿಗಳಾಗಿ ಸ್ವಾತಂತ್ರ್ಯ ಭಿಕ್ಷೆ ನೀಡಿದರೆ, ಎರಡನೆಯದು ಕಟುವಾದ ಪತ್ರ. ಅದರ ಕೊನೆಯ ಸಾಲು- ಈ ಪತ್ರ ನಿಮ್ಮಲ್ಲಿ (ಇಂದಿರಾಗಾಂ) ಆಸೀಮ ಕ್ರೋಧವನ್ನು ಉಕ್ಕಿಸೀತೆಂಬ ಅರಿವು ನನಗಿದೆ.
4. 1981 ರಲ್ಲಿ ತಮಿಳುನಾಡಿನ ಮೀನಾಕ್ಷಿಪುರಂನಲ್ಲಿ ದಲಿತರು ಬಲಾತ್ಕಾರವಾಗಿ ಅಮಿಷಕ್ಕೊಳಗಾಗಿ ಮತಾಂತರಗೊಂಡಾಗ ಅಲ್ಲಿಗೆ ಭೇಟಿ ನೀಡಿ ಪರಿಹಾರೋಪಾಯ.
5. ಪಂಜಾಬಿನಲ್ಲಿ ಶಾಂತಿಯಾತ್ರೆ- ಲೂಯಾನ, ತರನ್ ಶರನ್, ಅಮೃತಸರ ಗಳಲ್ಲಿ ಅನೇಕ ಸಿಖ್ ನಾಯಕರೊಂದಿಗೆ ಮಾತುಕತೆ.
6. 1984ರಲ್ಲಿ ಶ್ರೀಕೃಷ್ಣಮಠದ ಸಭಾಭವನದಲ್ಲಿ ಈದ್ಮಿಲನ್ ಸೌಹಾರ್ದ ಕೂಟ- ಮುಸ್ಲಿಂ ಸಮ್ಮೇಳನ. ಮುಸ್ಲಿಂ ನಾಯಕರಾದ ಆಲಿಯಾನ್ ಮೌಲಾನಾ ಮಹಿದುದ್ದೀನ್ ಖಾನ್ ಮೊದಲಾದವರೊಂದಿಗೆ ಸೌಹಾರ್ದ ಸಮಾಲೋಚನೆ.
8. ಉತ್ತರ ಭಾರತದ ಪರಿಶಿಷ್ಟವರ್ಗಕ್ಕೆ ಸೇರಿದ ಉಮಾಭಾರತಿ ಅವರಿಗೆ ಸನ್ಯಾಸ ದೀಕ್ಷೆ.
Discussion about this post