No Result
View All Result
IBM and Yotta Announce Plans to Deliver Agentic AI Platform for Indian Enterprises
English Articles

IBM and Yotta Announce Plans to Deliver Agentic AI Platform for Indian Enterprises

by ಕಲ್ಪ ನ್ಯೂಸ್
May 9, 2026
0

Kalpa Media House  |  Bengaluru | IBM (NYSE: IBM) and Yotta Data Services Private Limited ("Yotta") today announced plans to...

Read moreDetails
ಸಮವಸ್ತ್ರದೊಳಗಿನ ಅಪ್ಪಟ ಚಿನ್ನ | ಶ್ರೀ ಜಯಕರ ಐರೋಡಿ ಎಂಬ ಮಾನವೀಯತೆಯ ಮಹಾದನಿ

Pure Gold Within the Uniform: Jayakara Airody, The Great Voice of Humanity

May 9, 2026
Kotak Mahindra Bank Announces Results

Kotak Mahindra Bank Announces Results

May 4, 2026
Landmark Heart Surgery in Davanagere | SS Narayana hospital completes first modified Bentall procedure

Landmark Heart Surgery in Davanagere | SS Narayana hospital completes first modified Bentall procedure

May 2, 2026
KRCS Shikaripura Achieves 100% Result in CBSE Class X Board Exams

KRCS Shikaripura Achieves 100% Result in CBSE Class X Board Exams

April 16, 2026
  • Advertise With Us
  • Grievances
  • About Us
  • Contact Us
Saturday, May 9, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಚಿರು ಸರ್ಜಾ ಸಾವಿನ ವೇಳೆ ನಟಿ ತಾರಾ ತಮ್ಮ ಹೃದಯದಲ್ಲಿ ಮುಚ್ಚಿಟ್ಟುಕೊಂಡ ಆ ನೋವೇನು ಗೊತ್ತಾ?

ಸಾವಿನ ಮನೆಯ ಸಂಕಟಕ್ಕೆ ಹಿರಿಯ ಅಣ್ಣನಂತೆ ಅಕ್ಷರಶಃ ಸ್ಪಂದಿಸಿದ ಗೃಹ ಸಚಿವ ಬೊಮ್ಮಾಯಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 8, 2020
in Special Articles
0
ಚಿರು ಸರ್ಜಾ ಸಾವಿನ ವೇಳೆ ನಟಿ ತಾರಾ ತಮ್ಮ ಹೃದಯದಲ್ಲಿ ಮುಚ್ಚಿಟ್ಟುಕೊಂಡ ಆ ನೋವೇನು ಗೊತ್ತಾ?
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಬೆಂಗಳೂರು: ನಿನ್ನೆ ಇಡೀ ರಾಜ್ಯಕ್ಕೆ ಬರಸಿಡಿಲಿನಂತೆ ಬಂದೆರಗಿದ್ದು ಖ್ಯಾತ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ ಎಂಬ ಸುದ್ದಿ!

ಈ ವಿಷಯ ಕಿವಿಗೆ ಬಿದ್ದಿದ್ದೇ ತಡ ಕನ್ನಡ ಚಿತ್ರರಂಗದ ಕುಟುಂಬ ಕಣ್ಣೀರಾಗಿತ್ತು. ಆಸ್ಪತ್ರೆಗೆ ಬಳಿಗೆ ಹಲವು ಕಲಾವಿದರು ಬಂದರೆ, ಇತ್ತ ಚಿರು ಮನೆ ಬಂಧುಗಳು, ಸ್ನೇಹಿತರು, ನಟನಟಿಯರ ಆಕ್ರಂದನಕ್ಕೆ ಸಾಕ್ಷಿಯಾಗಿತ್ತು.

ಈ ಹೊತ್ತಿಗೆ ಉಮ್ಮಳಿಸಿ ಬರುತ್ತಿದ್ದ ದುಃಖ ಒತ್ತಿ ಹಿಡಿಯಲು ಪ್ರಯತ್ನಿಸಿಯೂ ಸಾಧ್ಯವಾಗದೇ ಬಿಕ್ಕಳಿಸುತ್ತಾ ಆಸ್ಪತ್ರೆಗೆ ಬಂದದ್ದು ಹಿರಿಯ ನಟಿ ತಾರಾ. ಅಲ್ಲಿದ್ದವರೆಲ್ಲರೂ ಕಣ್ಣೀರಿನ ಮಡುವಿನಲ್ಲೇ ಇದ್ದದ್ದನ್ನು ಕಂಡ ಈ ತಾಯಿ ಅದೆಲ್ಲಿಂದ ಧೈರ್ಯ ಬಂತೋ ಗೊತ್ತಿಲ್ಲ. ಕಣ್ಣೀರನ್ನು ಕೈಯಲ್ಲಿ ಒರೆಸಿಕೊಳ್ಳುತ್ತಲೇ ನೇರ ವೈದ್ಯರ ಬಳಿ ಹೋದರು. ಈ ಹೊತ್ತಿಗಾಗಲೇ ಮಾಧ್ಯಮಗಳಲ್ಲಿ ಹೀಗಾಗಿರಬಹುದು, ಹಾಗಾಗಿರಬಹುದೆಂಬ ತರಹೇವಾರಿ ಊಹಾಪೋಹ ಹರಿದಾಡಲಾರಂಭಿಸಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಕೊರೋನಾದಿಂದ ಸತ್ತರೇ? ಎಂಬ ಪ್ರಶ್ನಾರ್ಥಕ ಚಿಹ್ನೆಗಳು ಎಳತೊಡಗಿದ್ದವು.

ನೇರ ವೈದ್ಯರ ಬಳಿಯಿಂದಲೇ ಏನೇನಾಯಿತು ಎಂದು ತಿಳಿದ ತಾರಾ, ಕೊರೋನಾದ ಪರೀಕ್ಷೆ ಮಾಡಲೇಬೇಕಾದ ಅನಿವಾರ್ಯತೆಯ ಬಗ್ಗೆಯೂ ಅರಿತರು. ಇನ್ನೊಂದೆಡೆ ಆಸ್ಪತ್ರೆಯತ್ತ ಧಾವಿಸಿ ಬರುತ್ತಿದ್ದ ಗಣ್ಯರು, ಅಭಿಮಾನಿಗಳು, ದುಃಖದ ಮಡುವಿನಲ್ಲಿದ್ದ ಚಿರು ಸರ್ಜಾ ತಂದೆ, ಧ್ರುವ ಸರ್ಜಾ!

ಈ ಹೊತ್ತಿಗಾಗಲೇ ಆ ಹೊತ್ತಿನ ಅಗತ್ಯ ಜವಾಬ್ದಾರಿಯ ಹೆಗಲ ಮೇಲೆ ಹೊರಲು ಸಿದ್ದರಾಗಿದ್ದ ತಾರಾ ನೇರ ಫೋನ್ ಮಾಡಿದ್ದು ಈ ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರಿಗೆ. ತಾರ ಫೋನ್ ಮಾಡಿದ್ದೇ ಗೃಹ ಸಚಿವ ಬೊಮ್ಮಾಯಿ ಅಕ್ಷರಶಃ ಅಣ್ಣನಂತೆ ಸ್ಪಂದಿಸಿ ಮಾತನಾಡಿದರು. ನನ್ನಿಂದ ಏನೇನಾಗಬೇಕು ಹೇಳಿ, ಅಂದರು.

ತಾರ ಮನವಿಯಂತೆ ತತಕ್ಷಣ ಸ್ಥಳಕ್ಕೆ ಸ್ಥಳೀಯ ಡಿಸಿಪಿ ರೋಹಿಣಿ ಕಟೋಚ್ ಅವರನ್ನು ಕಳುಹಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಪಡೆದರು. ಮನೆಯ ಬಳಿಯೂ ಬ್ಯಾರಿಕೇಡ್’ಗಳ ಹಾಕಿಸಿ ಟ್ರಾಫಿಕ್ ಪೊಲೀಸರ ಕಳುಹಿಸಿ ಅಗತ್ಯ ವ್ಯವಸ್ಥೆ ಮಾಡಿದರು. ತಾರಾ ಅವರಿಗೇ ಧೈರ್ಯ ತುಂಬಿದ ಗೃಹ ಸಚಿವ ಬೊಮ್ಮಾಯಿಯವರು, ಯಾರಿಗೂ ತಿಳಿಯದ, ಚಿರು ಸರ್ಜಾ ಕುಟುಂಬಕ್ಕೂ ಹೇಳದ ಒಂದು ವಿಷಯ ತಾರಾ ಅವರಿಗೆ ಹೇಳಿದ್ರು!!

ಅದೇನೆಂದರೆ ಒಂದು ವೇಳೆ ಚಿರು ಸರ್ಜಾ ಕೋವಿಡ್ 19 ಪರೀಕ್ಷಾ ವರದಿ ಪಾಸಿಟಿವ್ ಅಥವಾ ಡೌಟ್ ಫುಲ್ ಅಂತ ಬಂದರೂ ಸಹ ಮೂರು ದಿನ ಪಾರ್ಥಿವ ಶರೀರವನ್ನು ವೈದ್ಯರು ಆಸ್ಪತ್ರೆಯಿಂದ ಕಳುಹಿಸಲ್ಲ ಅಂದು ಬಿಟ್ಟರು! ಬರಸಿಡಿಲಿನಂತೆ ಬಂದ ಈ ವಿಚಾರವನ್ನು ಆಕ್ರಂದನದ ಮಡುವಿನಲ್ಲಿದ್ದ ಚಿರು ಸರ್ಜಾ ಫ್ಯಾಮಿಲಿಗೆ ಸಹಿಸುವ ಶಕ್ತಿ ಇಲ್ಲ ಎಂದು ಅರಿತ ತಾರಾ ಈ ವಿಷಯವನ್ನು ತಮ್ಮ ಎದೆಯೊಳಗೇ ಮುಚ್ಚಿಟ್ಟುಕೊಂಡರು.

ಚಿರಂಜೀವಿ ಸರ್ಜಾ ಕುಟುಂಬಕ್ಕಷ್ಟೇ ಅಲ್ಲ, ಯಾರಿಗೂ ಈ ವಿಷಯ ಹೇಳದೇ ಮುಂದೆ ಮಾಡಬೇಕಾದ್ದೇನು ಎಂಬುದರತ್ತ ಆ ನೋವಿನ ನಡುವೆಯೂ ಚಿತ್ತ ಹರಿಸಿದರು. ಗೃಹ ಸಚಿವ ಬೊಮ್ಮಾಯಿ ಹಾಗೂ ರಾಜ್ಯ ಸರ್ಕಾರದ ಜೊತೆ ಸತತ ಸಂಪರ್ಕದಲ್ಲಿದ್ದ ತಾರಾ ಬೊಮ್ಮಾಯಿಯವರ ಬಳಿ ಆದಷ್ಟು ಬೇಗ ವರದಿ ಬರುವಂತೆ ಮಾಡಿ ಅಂತ ಮನವಿ ಮಾಡಿದರು. ದೇವರನ್ನು ಮನಸ್ಸಲ್ಲೇ ಪ್ರಾರ್ಥಿಸುತ್ತಾ ಚಿರು ಸರ್ಜಾ ಮನೆಗೆ ತೆರಳಿ ಅಲ್ಲಿ ಮೇಘನಾರಾಜ್’ಗೆ ಧೈರ್ಯ ತುಂಬುವ ಜೊತೆಗೆ ಅಲ್ಲಿಗೆ ಬಂದಿದ್ದ ಗಣ್ಯರ ನಿರ್ವಹಣೆ ಮಾಡಿದರು.

ಕೆಲವು ಹೊತ್ತಲ್ಲಿ ಬರುವ ಕೋವಿಡ್ 19 ಕುರಿತ ವರದಿ ಯಾವುದೇ ಆಘಾತ ನೀಡದಿರಲಿ ಎಂದು ಪ್ರಾರ್ಥಿಸುತ್ತಲೇ ಎಂತಹ ಗಣ್ಯರೇ ಆದರೂ ಬ್ಯಾರಿಕೇಡ್’ನಿಂದ ಆಚೆಯೇ ನಿಲ್ಲುವಂತೆ ಕಾಳಜಿ ವಹಿಸಿದರು. ಈ ನಡುವೆ ರಾಜ್ಯ ಸರ್ಕಾರದ ಜತೆ ನಿರಂತರವಾಗಿ ಸಂವಹನ ನಡೆಸಿ ಸಾಧ್ಯವಾದಷ್ಟು ಬೇಗ ಚಿರಂಜೀವಿ ಸರ್ಜಾ ಗಂಟಲು ದ್ರವದ ಕೋವಿಡ್ 19 ಪರೀಕ್ಷಾ ವರದಿ ತರಿಸಿದರು. ಕೆಲ ಹೊತ್ತಲ್ಲಿ ಬಂದ ಚಿರು ಸರ್ಜಾ ಕೋವಿಡ್ 19 ರಿಪೋರ್ಟ್ ನಲ್ಲಿ ಕೋವಿಡ್ 19 ನೆಗೆಟಿವ್ ಅಂತ ಬರೆದಿದ್ದನ್ನು ಓದಿದಾಗಲೇ ತಾರಾ ನಿಟ್ಟುಸಿರು ಬಿಟ್ಟಿದ್ದು.

ಈ ನಡುವಿನ ಅವಧಿಯಲ್ಲಿ ತಾರ ಬಳಿ ಸಂಪರ್ಕದಲ್ಲಿದ್ದು ತಾರಾ ಅವರಿಗೆ ಧೈರ್ಯ ತುಂಬಿದ್ದು ಅಣ್ಣನಂತೆ ಬೆನ್ನಿಗೆ ನಿಂತವರು ಗೃಹ ಸಚಿವ ಬಸವರಾಜ ಬೊಮ್ಮಾಯಿ. ಅಧಿಕಾರದಲ್ಲಿದ್ದವರು ಹೃದಯದಿಂದ ಸ್ಪಂದಿಸುವ ಗುಣ ಇದ್ದಾಗ ಮಾತ್ರ ಇಂತಹ ಕಠಿಣ ಸಮಯವನ್ನು ಎದುರಿಸುವ ಶಕ್ತಿ ಬರಲು ಸಾಧ್ಯ ಅಲ್ಲವೇ!

-ಡಿ.ಎಲ್. ಹರೀಶ್

Get In Touch With Us info@kalpa.news Whatsapp: 9481252093

Tags: Basavaraj bommaiChiranjeevi SarjaHome MinisterKannada MoviesKannadaNewsWebsiteLatestNewsKannadaSandalwood Newsಕೊರೋನಾ ವೈರಸ್ಗೃಹ ಸಚಿವ ಬೊಮ್ಮಾಯಿಚಿರಂಜೀವಿ ಸರ್ಜಾನಟಿ ತಾರಾ
Share212Tweet123Send
Previous Post

ಮೆಗ್ಗಾನ್’ನಲ್ಲಿ ಇನ್ನು ಎಲ್ಲ ಚಿಕಿತ್ಸೆ ಆರಂಭ, ಯಾರಿಗೂ ಖಾಸಗಿ ಆಸ್ಪತ್ರೆಗೆ ಕಳುಹಿಸುವುದಿಲ್ಲ: ಸಚಿವ ಈಶ್ವರಪ್ಪ

Next Post

ಬೈಕ್’ಗಳ ನಡುವೆ ಭೀಕರ ಅಪಘಾತ: ತಂದೆ ಮಗಳು ಸಾವು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಬೈಕ್’ಗಳ ನಡುವೆ ಭೀಕರ ಅಪಘಾತ: ತಂದೆ ಮಗಳು ಸಾವು

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಿದ್ಧಾರ್ಥಗೆ ಉತ್ತಮ ಅಂಕ | ಮಾಜಿ ಡಿಸಿಎಂ ಈಶ್ವರಪ್ಪ ಅಭಿನಂದನೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಿದ್ಧಾರ್ಥಗೆ ಉತ್ತಮ ಅಂಕ | ಮಾಜಿ ಡಿಸಿಎಂ ಈಶ್ವರಪ್ಪ ಅಭಿನಂದನೆ

May 9, 2026
ನೈರುತ್ಯ ರೈಲ್ವೆ | ಮೂರು ಜೋಡಿ ಡೆಮು ವಿಶೇಷ ರೈಲುಗಳ ಸಂಚಾರ ಕಾಯಂ

ನೈರುತ್ಯ ರೈಲ್ವೆ | ಮೂರು ಜೋಡಿ ಡೆಮು ವಿಶೇಷ ರೈಲುಗಳ ಸಂಚಾರ ಕಾಯಂ

May 9, 2026
ತೆರೆ ಮೇಲೆ ರಾಜ್‌ಕುಮಾರ್‌, ಅಂತರಂಗದಲ್ಲಿ ಮುತ್ತುರಾಜ್‌ ಇದ್ದರು: ಮಂಜುನಾಥ್‌ ಚವಾಣ್‌

ತೆರೆ ಮೇಲೆ ರಾಜ್‌ಕುಮಾರ್‌, ಅಂತರಂಗದಲ್ಲಿ ಮುತ್ತುರಾಜ್‌ ಇದ್ದರು: ಮಂಜುನಾಥ್‌ ಚವಾಣ್‌

May 9, 2026
ಉಳವಿಯಲ್ಲಿ ಲಾರಿ-ಟಾಟಾ ಏಸ್ ಡಿಕ್ಕಿ : ಯುವಕನಿಗೆ ಗಂಭೀರ ಗಾಯ

ಉಳವಿಯಲ್ಲಿ ಲಾರಿ-ಟಾಟಾ ಏಸ್ ಡಿಕ್ಕಿ : ಯುವಕನಿಗೆ ಗಂಭೀರ ಗಾಯ

May 9, 2026
IBM and Yotta Announce Plans to Deliver Agentic AI Platform for Indian Enterprises

IBM and Yotta Announce Plans to Deliver Agentic AI Platform for Indian Enterprises

May 9, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL